ಪುತ್ತೂರು: ಶಾಸಕ ಅಶೋಕ್ ರೈ ಅವರ ಕನಸಿನ ಕೂಸು ಪುತ್ತೂರು-ಮಂಗಳೂರು ನಾನ್ ಸ್ಟಾಪ್ ಎಕ್ಸ್ ಪ್ರೆಸ್ ಸಂಚಾರ ಪ್ರಾರಂಭಗೊಂಡಿದೆ.
ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಿಂದ ಹೊರಡುವ ಬಸ್ ಎಲ್ಲೂ ನಿಲುಗಡೆಯಿಲ್ಲದೆ ನೇರವಾಗಿ ಸ್ಟೇಟ್ ಬ್ಯಾಂಕ್ ಬಸ್ ನಿಲ್ದಾಣಕ್ಕೆ ತಲುಪಲಿದೆ. ಪ್ರತೀ ಒಂದು ಗಂಟೆಗೊಂದು ಬಸ್ ಹೊರಡಲಿದೆ. ಮಹಿಳೆಯರಿಗೆ ಈ ಬಸ್ ನಲ್ಲಿ ಶಕ್ತಿ ಯೋಜನೆಯನುಸಾರ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಇಂದು ಬೆಳಿಗ್ಗೆ ನೂತನ ಬಸ್ ವ್ಯವಸ್ಥೆಗೆ ಶಾಸಕರು ಚಾಲನೆ ನೀಡಿದ್ದಾರೆ.
ಪುತ್ತೂರಿನಿಂದ 5, ಸುಳ್ಯದಿಂದ 2 ಬಸ್ಗಳು ಪುತ್ತೂರು ಎಕ್ಸ್ಪ್ರೆಸ್ ಆಗಿ ಸೇವೆ ನೀಡ ಲಿದೆ. ಸುಳ್ಯದಿಂದ ಬೆಳಗ್ಗೆ ಬರುವ 2 ಬಸ್ ಪುತ್ತೂರಿನಿಂದ ಎಕ್ಸ್ಪ್ರೆಸ್ ಆಗಿ ಸಂಚರಿಸಲಿದೆ. ಪುತ್ತೂರಿನಿಂದ 29, ಸ್ಟೇಟ್ ಬ್ಯಾಂಕ್ನಿಂದ 29 ಟ್ರಿಪ್ ಸಂಚರಿಸಲಿದೆ. ಈ ಮಾರ್ಗದ ನಡುವೆ ಎಲ್ಲಿಯೂ ನಿಲ್ಲದೆ ನೇರ ಸಂಚಾರ ಇರಲಿದೆ. ಇದರಿಂದ ಕ್ಲಪ್ತ ಸಮಯದಲ್ಲಿ ಪುತ್ತೂರಿನಿಂದ ಮಂಗಳೂರು, ಮಂಗಳೂರಿನಿಂದ ಪುತ್ತೂರಿಗೆ ತಲುಪಬಹುದು. ಈ ಎಕ್ಸ್ಪ್ರೆಸ್ನಲ್ಲಿ ಪ್ರಯಾಣಿ ಸುವವರಿಗೆ (ಮಹಿಳಾ ಪ್ರಯಾಣಿಕರಿಗೆ ಉಚಿತ) ವೇಗದೂತ ಪ್ರಯಾಣ ದರ ಇರಲಿದೆ.
ಪುತ್ತೂರಿನಿಂದ ಮಂಗಳೂರಿಗೆ ಹೊರಡುವ ಸಮಯ: ಬೆಳಗ್ಗೆ 7, 7.20., 7.40., 8., 8.20., 8.40., 9., 9.40., 10., 10.20., 10.40., 11, 11.20., ಮಧ್ಯಾಹ್ನ 12.10., 1.20., 1.30., 1.40., 1.50., 2., 3., 3.30., 4.10., 4.20., 4.30., 4.40.,4.50., 6.15., 6.30., 6.40., 7.10., 7.30. ಸ್ಟೇಟ್ಬ್ಯಾಂಕ್ನಿಂದ ಪುತ್ತೂರಿಗೆ ಹೊರಡುವ ಸಮಯ: ಬೆಳಗ್ಗೆ 5.50., 6., 6.20., 8.20., 8.40.,9., 9.20., 9.40., 10., 10.40., 11., 11.20. 11.40., 12., ಮಧ್ಯಾಹ್ನ – 12.20., 1., 1.50., 2.50., 3., 3.10., 3.20., 3.30., 5., 5.20., 5.30., 5.50., 6., 6.10., 6.20.
ಸುಮಾರು ಒಂದು ಗಂಟೆ ಅವಧಿಯಲ್ಲಿ ಬಸ್ ಪುತ್ತೂರಿನಿಂದ ಮಂಗಳೂರು ತಲುಪಲಿದೆ. ಸ್ವಂತ ವಾಹನ ಇದ್ದವರೂ ಈ ಬಸ್ಸಲ್ಲಿ ತೆರಳಬಹುದಾಗಿದೆ. ಯಾಕೆಂದರೆ ಅತಿ ವೇಗದಲ್ಲಿ ಈ ಬಸ್ಸು ಸಂಚರಿಸಲಿರುವ ಕಾರಣ ಸ್ವಂತ ವಾಹನದಷ್ಟೇ ಸಮಯದಲ್ಲಿ ಮಂಗಳೂರು ತಲುಪುತ್ತದೆ. ಹೊಸ ವ್ಯವಸ್ಥೆಯಲ್ಲಿ ಎಲ್ಲರೂ ಪ್ರಯಾಣಿಸುವ ಮೂಲಕ ಸಹಕಾರ ನೀಡಿ,ಸರಕಾರಿ ವ್ಯವಸ್ಥೆಗೆ ಬೆಂಬಲ ನೀಡಬೇಕು – ಅಶೋಕ್ ರೈ ಶಾಸಕರು ಪುತ್ತೂರು