ಮಂಗಳೂರು ಮಹಾನಗರದ ‘ಕೆಸರಿನಲ್ಲಿ ಒಂದು ದಿನ’ ಕಾರ್ಯಕ್ರಮ-ಶಾಸಕಿ ಭಾಗೀರತಿ ಕುಮಾರಿ ಮುರುಳ್ಯ, ಡಾ. ಸುರೇಶ್ ಕೂಡೂರು ಭಾಗಿ
ಮಾಯಿಲ್ಗ ಗದ್ದೆ, ಆಲಂಕಾರು, ಕಡಬ, ದಕ್ಷಿಣ ಕನ್ನಡ ಇಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಮಂಗಳೂರು ಮಹಾನಗರದ ‘ಕೆಸರಿನ ಗದ್ದೆಯಲ್ಲಿ ಒಂದು ದಿನ’ ಕಾರ್ಯಕ್ರಮವನ್ನು ದಿನಾಂಕ 20ನೇ ಜುಲೈ 2025ರ ಭಾನುವಾರದಂದು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಪೂರ್ವದಲ್ಲಿ ಬೆಳಗ್ಗೆ ಅಗ್ನಿಹೋತ್ರವನ್ನು ಸೇರಿದ ಯೋಗ ಬಂಧುಗಳು ಎಲ್ಲರೂ ನೆರವೇರಿಸಿದರು
ಸಮಾರಂಭದ ಉದ್ಘಾಟಕರನ್ನು ಹಾಗೂ ಅತಿಥಿಗಳನ್ನು ಸಾಂಪ್ರದಾಯಿಕವಾಗಿ ಚೆಂಡೆ ವಾದನ ಹಾಗೂ ಕಂಬಳದ ಕೋಣಗಳ ಸ್ವಾಗತದ ಜೊತೆಗೆ ವೇದಿಕೆಗೆ ಕರೆತರಲಾಯಿತು. 8.30ಯ ವೇಳೆಗೆ ಆರಂಭವಾದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀಯುತ ಆನಂದ ಕುಂಟಿನಿ, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಮಂಗಳೂರು ಮಹಾನಗರ ಸಂಚಾಲಕರು ವಹಿಸಿದರು. ಕುಮಾರಿ ಭಾಗೀರಥಿ ಮುರುಳ್ಯ, ಶಾಸಕರು ಸುಳ್ಯ ವಿಧಾನಸಭಾ ಕ್ಷೇತ್ರ, ಕೆಸರು ಗದ್ದೆಗೆ ಹಾಲು ಎರೆದು ಕ್ರೀಡಾಕೂಟವನ್ನು ಸಾಂಪ್ರದಾಯಿಕವಾಗಿ ಉದ್ಘಾಟಿಸಿ ಕೃಷಿಯ ಸದ್ಯದ ಪರಿಸ್ಥಿತಿ ಹಾಗೂ ಅದರಲ್ಲಿ ಯುವಜನತೆಯ ಪಾತ್ರದ ಬಗ್ಗೆ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಡಾ| ಸುರೇಶ್ ಕೂಡೂರು, ಅಧ್ಯಕ್ಷರು ಶ್ರೀ ಭಾರತಿ ವಿದ್ಯಾಸಂಸ್ಥೆಗಳು, ಆಲಂಕಾರು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಕೋರಿದರು. ಶ್ರೀಮತಿ ಸುಶೀಲ, ಅಧ್ಯಕ್ಷರು ಗ್ರಾಮ ಪಂಚಾಯತ್, ಆಲಂಕಾರು ಹಾಗೂ ಶ್ರೀಮತಿ ಸಂಧ್ಯಾ ಕೆದ್ದೋಟೆ, ಅಧ್ಯಕ್ಷರು ಗ್ರಾಮ ಪಂಚಾಯತ್, ಪೆರಾಬೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಶ್ರೀಯುತ ರವೀಶ್ ಕುಮಾರ್, ಸಮಿತಿಯ ಪ್ರಾಂತ ಸಂಚಾಲಕರು, ಸೇವಾ ವಿಭಾಗ ಇವರು ಪ್ರಾಸ್ತಾವಿಕ ನುಡಿಗಳಾಡಿದರು. ಶ್ರೀ ಮನೋಹರ್, ಮಾಯಿಲ್ಗ ಗದ್ದೆಯ ಮಾಲೀಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉದ್ಘಾಟನಾ ಕಾರ್ಯಕ್ರಮದ ಪ್ರಾರ್ಥನೆಯನ್ನು ಸಮಿತಿಯ ಶ್ರೀ ಭಾರತಿ ಶಾಖೆಯ ಯೋಗಬಂಧು ಶ್ರೀ ಮುತ್ತಪ್ಪ ನಡೆಸಿದರೆ, ಶ್ರೀಯುತ ಸಂತೋಷ್ ಕುಮಾರ್, ಸಮಿತಿಯ ಉಪ್ಪಿನಂಗಡಿ ನಗರ ಸಂಚಾಲಕರು ಸ್ವಾಗತಿಸಿದರು ಹಾಗೂ ಶ್ರೀಯುತ ಮುರಳಿ ಮೋಹನ್, ಉಪ್ಪಿನಂಗಡಿ ನಗರ ವರದಿ ಪ್ರಮುಖರು ವಂದಿಸಿದರು. ಶ್ರೀಯುತ ಚೇತನ್ ಕುಮಾರ್ ಆನೆಗುಂಡಿ ನಿರೂಪಣೆ ಮಾಡಿದರು.
ಯೋಗ ಬಂಧುಗಳು ಹಾಗೂ ಅವರ ಕುಟುಂಬಿಕರಿಗೆ ವಯೋಮಿತಿಗೆ ಅನುಗುಣವಾಗಿ ವಿವಿಧ ಆಟೋಟಗಳನ್ನು ವೈಯಕ್ತಿಕ ಹಾಗೂ ತಂಡ ವಿಭಾಗದಲ್ಲಿ ಮನರಂಜನೆ ಸಹಿತ ನಡೆಸಲಾಯಿತು.
1.15ಕ್ಕೆ ಸಮಾರೋಪ ಸಮಾರಂಭ ಆರಂಭ ನಡೆಸಲಾಯಿತು. ಅಧ್ಯಕ್ಷರಾಗಿ ಶ್ರೀಮತಿ ಮಲ್ಲಿಕಾ ಯೋಗ ಶಿಕ್ಷಕರು, ಸಮಿತಿಯ ಶ್ರೀ ಭಾರತಿ ಶಾಖೆ, ಆಲಂಕಾರು ವಹಿಸಿದರೆ, ಶ್ರೀಯುತ ಗೋಕುಲನಾಥ್, ಸಮಿತಿಯ ನಿಕಟಪೂರ್ವ ಸಂಚಾಲಕರು, ನೇತ್ರಾವತಿ ವಲಯ ಅವರು ಸಮಾರೋಪ ನುಡಿಗಳನ್ನು ಆಡಿದರರು. ಶ್ರೀಯುತ ಕೇಶವ ಅಮೈ, ಉದ್ಯಮಿಗಳು ಇವರು ಸಮಾರಂಭದ ಮುಖ್ಯ ಅತಿಥಿಗಳಾಗಿ ಕೃಷಿಯೊಂದಿಗೆ ಕಳೆದ ತಮ್ಮ ಬಾಲ್ಯವನ್ನು ನೆನೆಯುತ್ತ ಶುಭಾಶಯಗಳನ್ನು ಕೋರಿದರು. ಶ್ರೀಯುತ ಪ್ರದೀಪ್, ಶಿಕ್ಷಣ ಪ್ರಮುಖರು, ಸಮಿತಿಯ ಉಪ್ಪಿನಂಗಡಿ ನಗರ, ಶ್ರೀಯುತ ರವೀಶ್ ಕುಮಾರ್, ಸಮಿತಿಯ ಪ್ರಾಂತ ಸಂಚಾಲಕರು-ಸೇವಾ ವಿಭಾಗ, ಶ್ರೀಯುತ ಪ್ರಕಾಶ್, ಸಂಚಾಲಕರು ಮಂಗಳೂರು ನಗರ, ಸಹಸಂಚಾಲಕರುಗಳಾದ ಶ್ರೀಯುತ ದಾಮೋದರ್ ಹಾಗೂ ಶ್ರೀಮತಿ ಗೀತಾ ಹಾಗೂ ಶ್ರೀಯುತ ಉಮೇಶ್, ಸ್ಥಳದ ಯಜಮಾನರು ಉಪಸ್ಥಿತರಿದ್ದರು. ಸಮಾರೋಪದ ಸ್ವಾಗತವನ್ನು ಶ್ರೀಯುತ ಕೃಷ್ಣಪ್ಪ, ಸಮಿತಿಯ ಉಪ್ಪಿನಂಗಡಿ ನಗರ ಶಿಕ್ಷಣ ಸಹಪ್ರಮುಖರು ನಡೆಸಿದರೆ, ಶ್ರೀಯುತ ನಾರಾಯಣ ನೆಕ್ಕರೆ, ಕಾರ್ಯಕ್ರಮದ ಸಂಚಾಲಕರು ವಂದಿಸಿದರು. ಶ್ರೀ ಭಾರತಿ ಯೋಗ ಶಾಖೆಯ ಶಿಕ್ಷಕರಾದ ಗುರುಕಿರಣ್ ನಿರೂಪಿಸಿದರು. ಭಕ್ತಿ ಭಾವದ ಭಜನೆ, ಧ್ಯಾನ ಹಾಗೂ ಲೋಕ ಕಲ್ಯಾಣ ಮಂತ್ರಾದೊಂದಿಗೆಗ ಕೊನೆಗೊಂಡ ಕಾರ್ಯಕ್ರಮದಲ್ಲಿ ಮಂಗಳೂರು ಹಾಗೂ ಉಪ್ಪಿನಂಗಡಿಯ 450ಕ್ಕೂ ಅಧಿಕ ಯೋಗ ಹಾಗೂ ಯೋಗೇತರ ಬಂಧುಗಳು ಭಾಗವಹಿಸಿದ್ದರು.
ಈ ಕಾರ್ಯಕ್ರಮವನ್ನು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಮಂಗಳೂರು ಮಹಾನಗರದ ಸಂಚಾಲಕರಾದ, ಶ್ರೀಯುತ ಆನಂದ ಕುಂಟಿನಿ, ಉಪ್ಪಿನಂಗಡಿ ನಗರ ಸಂಚಾಲಕರಾದ ಶ್ರೀಯುತ ಸಂತೋಷ್ ಕುಮಾರ್, ಶಿಕ್ಷಣ ಪ್ರಮುಖರಾದ ಶ್ರೀಯುತ ಪ್ರದೀಪ್ ಹಾಗೂ ಶಿಕ್ಷಣ ಸಹಪ್ರಮುಖರಾದ ಶ್ರೀಯುತ ಕೃಷ್ಣಪ್ಪ ಇವರ ಮಾರ್ಗದರ್ಶನದಲ್ಲಿ ಶ್ರೀ ಭಾರತಿ ಶಾಖೆ, ಆಲಂಕಾರು ಇವರ ಆತಿಥ್ಯದಲ್ಲಿ ಏರ್ಪಡಿಸಲಾಗಿತ್ತು.