ಶಿಬಾಜೆ :ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ವತಿಯಿಂದ ಪಕ್ಷ ಸಂಘಟನಾ ದೃಷ್ಟಿಯಿಂದ ಆ 09 ರಂದು ನಡೆದ ಶಿಬಾಜೆ ಶಕ್ತಿ ಕೇಂದ್ರ ಪಂಚಾಯತ್ ಮಟ್ಟದ ಸಭೆ ಲೋಕಯ್ಯ ಗೌಡರ ಮನೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಹಿರಿಯ ಕಾರ್ಯಕರ್ತರಾದ ಈಶ್ವರ ಶೆಟ್ಟಿಗಾರ್ ರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಚೆನ್ನಕೇಶವರು ಹಾಗೂ ರಾಜೇಶ್ ಪೆರ್ಮುಡ ರವರು ಪಾಲ್ಗೊಂಡು ಕಾರ್ಯಕರ್ತರೊಂದಿಗೆ ಪಕ್ಷ ಸಂಘಟನೆ ಮತ್ತು ಕಾರ್ಯಚಟುವಟಿಕೆಯ ಕುರಿತು ವಿಸ್ತ್ರುತವಾಗಿ ಸಮಾಲೋಚನೆ ನಡೆಸಿದರು.
ಈ ಸಂದರ್ಭದಲ್ಲಿ ಸದಾನಂದ ಪೂಜಾರಿ ಉಂಗಿನಬೈಲ್, ಸುಧಾಕರ್ ಲಾಯಿಲ ಬೈಠಕ್ ನೀಡಿದರು, ಧರ್ಮಸ್ಥಳ ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ಹರೀಶ್ ಕೆ. ಬಿ. ಕೊಯಿಲ, ಸದಾನಂದ ಪೂಜಾರಿ, ಶಿಬಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಯಮುನಾ, ಶಕ್ತಿ ಕೇಂದ್ರ ಪ್ರಮುಖ್ ವಿನಯಚಂದ್ರ, ಜನಪ್ರತಿನಿದಿನಗಳು ಹಾಗೂ ಶಕ್ತಿ ಕೇಂದ್ರ ಪ್ರಮುಖ್, ಅನ್ಯನ್ಯ ಜವಾಬ್ದಾರಿ ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.