ಮಂಗಳೂರು: ಕೂಳೂರಿನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಖಾಸಗಿ ಆಸ್ಪತ್ರೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಾಧವಿ ಎಂಬ ಮಹಿಳೆ ದುರ್ಮರಣಕ್ಕೀಡಾಗಿದ್ದಾರೆ.
ಅವರು ಚಲಾಯಿಸುತ್ತಿದ್ದ ಸ್ಕೂಟರ್ ನಿಯಂತ್ರಣ ತಪ್ಪಿ ದೊಡ್ಡ ರಸ್ತೆಯ ಗುಂಡಿಗೆ ಬಿದ್ದಿದ್ದರು. ಅದೇ ವೇಳೆ ಹಿಂದಿನಿಂದ ಬಂದ ಮೀನು ತುಂಬಿದ ಟ್ರಕ್ ಅವರ ಮೇಲೆ ಹರಿದ ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವಿಗೀಡಾದರು.
ಈ ದಾರುಣ ಘಟನೆ ಸ್ಥಳೀಯರಲ್ಲಿ ಆಕ್ರೋಶವನ್ನುಂಟುಮಾಡಿದ್ದು, ಅವರು ಮೂಲ್ಕಿಯಿಂದ ಪಂಪ್ವೆಲ್ಗೆ ಸಾಗುವ ಹೆದ್ದಾರಿಯ ದುಸ್ಥಿತಿಯ ಬಗ್ಗೆ ಗಂಭೀರವಾಗಿ ಬೇಸರ ವ್ಯಕ್ತಪಡಿಸಿದ್ದಾರೆ. ಈ ಮಾರ್ಗದಲ್ಲಿ ಹಲವಾರು ದೊಡ್ಡ ಗುಂಡಿಗಳು ಇರುವುದರಿಂದ ದಿನಕ್ಕೊಂದು ಅಪಘಾತ ಸಂಭವಿಸುವಂತಹ ಪರಿಸ್ಥಿತಿಯಿದೆ ಎಂದು ಸ್ಥಳೀಯರು ದೂರಿದ್ದಾರೆ.
ಜನಪ್ರತಿನಿದಿಗಳ ಅಸಡ್ಡೆ ಚುನಾವಣೆ ಬಂದಾಗ ಮಾತ್ರ ಜನಸಾಮಾನ್ಯರು ನೆನಪು ಗೆದ್ದ ನಂತರ ಕೆಲವು ಭ್ರಷ್ಟ ಅಧಿಕಾರಿಗಳ ಜೊತೆ ಸೆಟ್ಟಿಂಗ್ ಮಾಡಿ ಸಮಾಜ ಕೊಳ್ಳೆ ಹೊಡೆಯೋದು ಮಾತ್ರವಾಗಿರುತ್ತೆ ಮೂಲಭೂತ ಯಾವಸ್ಥೆ ಯನ್ನು ಸರಿ ಮಾಡಲು ಇವರಲ್ಲಿ ಟೈಮ್ ಕೂಡ ಇಲ್ಲ ಕೇವಲ ಧರ್ಮ ಧರ್ಮಗಳ ಬಗ್ಗೆ ಎತ್ತಿ ಕಟ್ಟುದೆ ಕಾಯಕವಾಗಿದೆ.
ಅಭಿವೃದ್ಧಿ ಯೇಚನೆಯೇ ಇಲ್ಲವಾಗಿದೆ ಯಾವುದೇ ಪ್ರದೇಶದ ಪ್ರಗತಿಯನ್ನು ಅಳೆಯುವ ಪ್ರಮುಖ ಮಾನದಂಡವೆಂದರೆ ಅಲ್ಲಿ ಇರುವ ರಸ್ತೆ ಮತ್ತು ಮೂಲಸೌಕರ್ಯಗಳ ಗುಣಮಟ್ಟ. ಆದರೆ ದುರದೃಷ್ಟವಶಾತ್, ನಮ್ಮ ರಾಜ್ಯ ಹಾಗೂ ದೇಶದ ಹಲವೆಡೆ ರಸ್ತೆಗಳ ಸ್ಥಿತಿ ಅತ್ಯಂತ ಕಳಪೆಯಾಗಿದ್ದು, ಇದಕ್ಕೆ ಪ್ರಮುಖ ಕಾರಣವೆಂದರೆ ರಾಜಕೀಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ.
ಜನರು ಕಟ್ಟುವ ತೆರಿಗೆ ಹಣವನ್ನು ಸರಿಯಾದ ರೀತಿಯಲ್ಲಿ ಬಳಸದೇ, ಅಸಮರ್ಪಕ ಗುತ್ತಿಗೆಗಳು, ಕಡಿಮೆ ಗುಣಮಟ್ಟದ ಸಾಮಗ್ರಿಗಳು ಹಾಗೂ ಲಂಚದ ಆಧಾರದ ಮೇಲೆ ಕಾಮಗಾರಿ ನಡೆಯುವುದರಿಂದ ರಸ್ತೆಗಳು ಶೀಘ್ರದಲ್ಲೇ ಹಾಳಾಗುತ್ತವೆ. ಇದರಿಂದ ಸಾಮಾನ್ಯ ಪ್ರಯಾಣಿಕರು ದಿನನಿತ್ಯವೂ ಅಪಾರ ಕಷ್ಟಗಳನ್ನು ಅನುಭವಿಸುತ್ತಿದ್ದಾರೆ.
























