ಪುತ್ತೂರು: ಗಂಭೀರ ಖಾಯಿಲೆಯಿಂದ ಬಳಲುತ್ತಿರುವ ಕೆಯ್ಯೂರು ನಿವಾಸಿ ಕೃಷ್ಣ ನಾಯ್ಕ ಎಂಬವರಿಗೆ “ಅರುಣ ಸಾರಥಿ” ಸಂಘಟನೆಯ ವತಿಯಿಂದ ‘ಹಿಂದವಿ” ಕಛೇರಿಯಲ್ಲಿ 10,000 ರೂಪಾಯಿ ಧನಸಹಾಯವನ್ನು ಅವರ ಮನೆಯವರಿಗೆ ನೀಡಲಾಯಿತು.ಕಳೆದ ಹತ್ತು ತಿಂಗಳಿನಿಂದ ಹತ್ತು ಸಾವಿರ ರೂಪಾಯಿಯಂತೆ ಅನಾರೋಗ್ಯದಲ್ಲಿರುವವರಿಗೆ ಒಟ್ಟು ಒಂದು ಲಕ್ಷ ರೂಪಾಯಿ ಧನಸಹಾಯವನ್ನು ಈ ಸಂಘಟನೆಯ ಮುಖಾಂತರ ನೀಡಲಾಗಿದೆ.