ಈಶ್ವರಮಂಗಲ ಗೋಕಳ್ಳರಿಗೆ ಗುಂಡೇಟು ನಡೆದ ಸ್ಥಳಕ್ಕೆ ಅರುಣ್ ಕುಮಾರ್ ಪುತ್ತಿಲ ಭೇಟಿ. ಅಕ್ರಮ ಗೋಕಳ್ಳಸಾಗಟ ನಡೆಸುತ್ತಿದ್ದ ಗೋಹಂತಕರಿಗೆ ಗೋಪೂಜೆಯಂದೇ ಪುತ್ತೂರು ಪೊಲೀಸರು ಗುಂಡೇಟು ನೀಡಿದ್ದು, ಇಲಾಖೆಯ ಅಧಿಕಾರಿಗಳಿಗೆ ಅಭಿನಂದನೆಗಳು ಎಂದು ಅರುಣ್ ಪುತ್ತಿಲ ತಿಳಿಸಿದರು.
ಗುಂಡೇಟು ನಡೆದ ಈಶ್ವರಮಂಗಲದ ಬೆಳ್ಳಿಚಡವು ಸ್ಥಳಕ್ಕೆ ಭೇಟಿ ನೀಡಿದ ಅರುಣ್ ಪುತ್ತಿಲ ಲಾರಿಯಲ್ಲಿದ್ದ ಗೋವುಗಳನ್ನು ವೀಕ್ಷಿಸಿ ಗೋಕಳ್ಳಸಾಗಟಗಾರರಿಗೆ ಗುಂಡೇಟು ನೀಡಿದ ದಕ್ಷಿಣ ಕನ್ನಡ ಎಸ್ಪಿ , ಡಿವೈಎಸ್ಪಿ, ಠಾಣಾಧಿಕಾರಿ ಜಂಬುರಾಜ್ ಅವರಿಗೆ ಅಭಿನಂದನೆ ಸಲ್ಲಿಸಿದರು.
ಲಾರಿಯಲ್ಲಿ ಉಸಿರುಗಟ್ಟುವ ಸ್ಥಿತಿಯಲ್ಲಿದ್ದ ಗೋವುಗಳನ್ನು ಪೊಲೀಸರಿಗೆ ಮನವರಿಕೆ ಮಾಡಿ ಗೋವುಗಳನ್ನು ಹೊರ ತೆಗೆದು ಜೀವ ರಕ್ಷಿಸಲಾಯಿತು.
ಹಲವು ವರ್ಷಗಳಿಂದ ಗೋಕಳ್ಳರ ತಂಡ ಗಡಿಭಾಗದಲ್ಲಿ ಕೇರಳಕ್ಕೆ ಅಕ್ರಮ ಗೋಕಳ್ಳಸಾಗಾಟ ನಡೆಸುತ್ತಿದ್ದು, ಇದನ್ನು ಖಂಡಿಸಿ ಹಿಂದೂ ಸಂಘಟನೆಗಳು ಹಲವು ಪ್ರತಿಭಟನೆಗಳು ನಡೆದಿದ್ದವು. ಹಿಂದೂಸಂಘಟನೆಗಳ ಹೋರಾಟಕ್ಕೆ ಇಂದು ದೊಡ್ಡ ಜಯ ಸಿಕ್ಕಂತಾಗಿದೆ. ಗೋಕಳ್ಳಸಾಗಟದ ವಿರುದ್ಧ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಬೇಕೆಂದು ಅರುಣ್ ಪುತ್ತಿಲ ಹೇಳಿದರು.