ಸೀರಿಯಲ್ ರೇಪಿಸ್ಟ್, ಕೊಲೆಗಡುಕ ಅಂತ ಕುಖ್ಯಾತಿ ಪಡೆದಿರೋ ಉಮೇಶ್ ರೆಡ್ಡಿಗೆ ಜೈಲು ಅಕ್ಷರಶಃ ಸ್ವರ್ಗ ಆಗಿದೆ. ಅವನ ಕೈಯಲ್ಲಿ ಒಂದು, ಎರಡಲ್ಲ… ಬರೋಬ್ಬರಿ ಎರಡು ಆಂಡ್ರಾಯ್ಡ್ ಮೊಬೈಲ್ ಫೋನ್ಗಳು ಇವೆಯಂತೆ. ಆರಾಮವಾಗಿ ಸೆಲ್ನಲ್ಲಿ ಕೂತು ಮೊಬೈಲ್ನಲ್ಲಿ ಮಾತಾಡೋ ವೀಡಿಯೊಗಳೇ ಈಗ ವೈರಲ್ ಆಗಿವೆ.
ಅಷ್ಟೇ ಅಲ್ಲ, ಮನರಂಜನೆಗೆ ಅಂತಾ ಅವನ ಕೊಠಡಿಯಲ್ಲಿ ಟಿವಿ ಸೌಲಭ್ಯನೂ ಇದೆಯಂತೆ. ಇಷ್ಟಕ್ಕೇ ನಿಂತಿಲ್ಲ ಈ ರಾಜಾತಿಥ್ಯ, ತನಗೆ ಬೇಕಾದ ಅಡುಗೆಯನ್ನು ತಾನೇ ಮಾಡ್ಕೊಂಡು ತಿನ್ನುವಷ್ಟು ಸ್ವಾತಂತ್ರ್ಯ ಆತನಿಗೆ ಸಿಕ್ಕಿದೆ. ಇದನ್ನ ನೋಡಿದ್ರೆ, ಇದು ಶಿಕ್ಷೆನಾ ಅಥವಾ ಸುಖವಾಸನಾ ಅನ್ನೋ ಪ್ರಶ್ನೆ ಮೂಡುತ್ತೆ.
ಈ ಉಮೇಶ್ ರೆಡ್ಡಿಗೆ ಇಷ್ಟೆಲ್ಲಾ ಸೌಲಭ್ಯಗಳು ಸಿಗ್ತಿರೋದು ಹೇಗೆ? ಹೊರಗಿನಿಂದ ಯಾರೋ ಬಿಸಾಕಿ ಹೋಗಿದ್ದಾ? ಖಂಡಿತಾ ಇಲ್ಲ. ಜೈಲಿನ ಹಿರಿಯ ಅಧಿಕಾರಿಗಳೇ (Jail Officials) ಈ ‘ರಾಜಾತಿಥ್ಯ’ದ ವ್ಯವಸ್ಥೆ ಮಾಡಿದ್ದಾರೆ ಅನ್ನೋ ಆರೋಪ ಬಲವಾಗಿ ಕೇಳಿಬಂದಿದೆ. ಕಾನೂನಿನ ಕಣ್ಣಿಗೆ ಮಣ್ಣೆರಚಿ, ದುಡ್ಡಿನ ಆಸೆಗೆ ಈ ರೀತಿ ಮಾಡ್ತಿದ್ದಾರಾ? ಒಬ್ಬ ವಿಕೃತ ಅಪರಾಧಿಗೆ ಇಷ್ಟೊಂದು ‘ಕೇರ್’ ಕೊಡುವ ಅಧಿಕಾರಿಗಳು, ನಿಜವಾಗಿಯೂ ಜೈಲಿನ ಸುಧಾರಣೆ ಮಾಡ್ತಿದ್ದಾರಾ ಅಥವಾ ಭ್ರಷ್ಟಾಚಾರದ ಕೂಪ ಆಗಿಸಿದ್ದಾರಾ?
ಈ ಕಥೆಯಲ್ಲೇ ಒಂದು ದೊಡ್ಡ ಟ್ವಿಸ್ಟ್ ಇದೆ. ಒಂದ್ಕಡೆ ಉಮೇಶ್ ರೆಡ್ಡಿ ಬಿಂದಾಸ್ ಲೈಫ್ ಲೀಡ್ ಮಾಡ್ತಿದ್ರೆ, ಇನ್ನೊಂದ್ಕಡೆ ಇತ್ತೀಚೆಗೆ ಕೊಲೆ ಆರೋಪದಲ್ಲಿ ಬಂಧನವಾಗಿರೋ ನಟ ದರ್ಶನ್ಗೆ ಮಾತ್ರ ಕನಿಷ್ಠ ಸೌಲಭ್ಯಗಳೂ ಸಿಕ್ತಿಲ್ಲವಂತೆ. ಒಂದು ದಿಂಬು, ಮಲಗಲು ಒಂದು ಹಾಸಿಗೆ ಸಿಗದೆ ದರ್ಶನ್ ಪರದಾಡುತ್ತಿದ್ದಾರೆ ಅನ್ನೋ ಸುದ್ದಿ ಹೊರಬಿದ್ದಿದೆ. ದೊಡ್ಡ ಸೆಲೆಬ್ರಿಟಿ ಆಗಿದ್ದರೂ, ದರ್ಶನ್ಗೆ ಈ ಸ್ಥಿತಿ. ಆದರೆ, ಕುಖ್ಯಾತ ಅಪರಾಧಿ ಉಮೇಶ್ ರೆಡ್ಡಿಗೆ ಮಾತ್ರ ರಾಜನಂತೆ ನೋಡಿಕೊಳ್ಳಲಾಗುತ್ತಿದೆ.
ಪರಪ್ಪನ ಅಗ್ರಹಾರ ಜೈಲಿನ ಈ ಕಥೆ ಕೇಳಿದರೆ, ಇಲ್ಲಿ ಕಾನೂನು ಅಂದ್ರೆ ಏನು ಅನ್ನೋ ಅನುಮಾನ ಬರುತ್ತದೆ. ಇಲ್ಲಿ ಎಲ್ಲರಿಗೂ ಒಂದೇ ನಿಯಮ ಇಲ್ಲವಾ? ಹಣ, ಪ್ರಭಾವ ಇರುವವರಿಗೆ ಒಂದು ರೀತಿಯ, ಇಲ್ಲದವರಿಗೆ ಇನ್ನೊಂದು ರೀತಿಯನಾ? ಉಮೇಶ್ ರೆಡ್ಡಿಗೆ ಸಿಗುವ ಸೌಲಭ್ಯ, ದರ್ಶನ್ಗೆ ಯಾಕಿಲ್ಲ? ದರ್ಶನ್ಗೆ ಸಿಗದೇ ಇರೋದು ಸರಿ, ಆದರೆ ಉಮೇಶ್ ರೆಡ್ಡಿಗೆ ಅದೆಲ್ಲ ಸಿಗ್ತಿರೋದು ಹೇಗೆ? ಈ ‘ರಾಜಾತಿಥ್ಯ’ದ ಕರ್ಮಕಾಂಡಕ್ಕೆ ಕೊನೆ ಎಂದಾಗ? ಸದ್ಯಕ್ಕಂತೂ ಉತ್ತರ ಸಿಗೋದು ಕಷ್ಟ.























