ಪುತ್ತೂರು: ಕೇರಳ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಷನ್ ಹಾಗೂ ಮಾಸ್ಟರ್ಸ್ ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ (MAFI) ವತಿಯಿಂದ
ಜನವರಿ 28ರಿಂದ ಫೆಬ್ರವರಿ 01ರ ವರೆಗೆ ತಿರುವನಂತಪುರದ ಚಂದ್ರಶೇಖರನ್ ನಾಯರ್ ಸ್ಟೇಡಿಯಂನಲ್ಲಿ ನಡೆದ 46ನೇ ಅಖಿಲ ಭಾರತ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ನಲ್ಲಿ ಕುಂತೂರಿನ ಕೋಡ್ಲ ರವಿ ಪೂಜಾರಿ ಇವರು 45+ ವಯೋಮಾನದ ಪುರುಷರ 200ಮೀ ಓಟದಲ್ಲಿ 6ನೇ, 400ಮೀ ಓಟದಲ್ಲಿ 5ನೇ, 100ಮೀ ಓಟದಲ್ಲಿ 4ನೇ ಸ್ಥಾನ ಗಳಿಸಿರುತ್ತಾರೆ.
ಕ್ರೀಡಾಕೂಟದಲ್ಲಿ ದೇಶದ ಸುಮಾರು 18 ರಾಜ್ಯಗಳ ಸುಮಾರು 2500ಕ್ಕೂ ಅಧಿಕ ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಇವರು ಬೆಳ್ಳಿಪ್ಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಶಾಂತಿನಗರ ಪ್ರೌಢಶಾಲೆ, ಕೊಂಬೆಟ್ಟು ಜೂನಿಯರ್ ಕಾಲೇಜು ಮತ್ತು ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿದ್ದು, ಪ್ರಸ್ತುತ ಉಪ್ಪಿನಂಗಡಿಯ ಅಮೃತ್ ಸ್ಟುಡಿಯೋದಲ್ಲಿ ವೀಡಿಯೋಗ್ರಾಫರ್ ಮತ್ತು ಎಡಿಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ, ಪುತ್ತೂರು ಫೋಟೋಗ್ರಾಫರ್ಸ್ ಸಂಘದ ಕ್ರೀಡಾ ಕಾರ್ಯದರ್ಶಿ ಯಾಗಿರುತ್ತಾರೆ. ಇವರು ಜುಲೈ ತಿಂಗಳಲ್ಲಿ ದಕ್ಷಿಣ ಕೊರಿಯಾದ ದೇಗು (DAEGU) ನಲ್ಲಿ ನಡೆಯಲಿರುವ ವರ್ಲ್ಡ್ ಮಾಸ್ಟ ಚಾಪಿಯನ್ ಶಿಪ್ 2026 ಆಡಲು ಅರ್ಹತೆ ಪಡೆದಿದ್ದಾರೆ.


























