ಒಡಿಯೂರು,ಮಾಣಿಲ ಮಠಕ್ಕೆ ತಲಾ ಒಂದು ಕೋಟಿ ಅನುದಾನ: ಸಿ ಎಂ ಗೆ ಅಶೋಕ್ ರೈ ಮನವಿ
ಪುತ್ತೂರು: ದ ಕ ಜಿಲ್ಲೆಯ ಪ್ರಸಿದ್ದ ಮಠಗಳ ಪೈಕಿ ಹಲವು ಮಠಗಳಿಗೆ ಇದುವರೆಗೂ ಯಾವುದೇ ಸರಕಾರ ಸಹಾಯ ಹಸ್ತ ನೀಡದೇ ಇದ್ದು, ಒಡೊಯೂರು ಗುರುದೇವ ಸಂಸ್ಥಾನಂ ಮಠ ಹಾಗೂ ಮಾಣಿಲ ಶ್ರೀಧಾಮ ಮಠಕ್ಕೆ ತಲಾ ಒಂದು ಕೋಟಿ ಅನುದಾನ ನೀಡುವಂತೆ ಶಾಸಕ ಅಶೋಕ್ ರೈ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಮಾಡಿದರು.
ಇಂದು ಬೆಂಗಳೂರಿನಲ್ಲಿ ಸಿ ಎಂ ಅವರನ್ನು ಭೇಟಿಯಾದ ಶಾಸಕರು ಈ ಎರಡು ಮಠಗಳು ಸೇರಿದಂತೆ ಇನ್ನಿತರ ಪ್ರಮುಖ ಮಠಗಳಿಗೂ ಅನುದಾನ ನೀಡುವಂತೆ ಮನವಿ ಮಾಡಿದ್ದಾರೆ. ಇದುವರೆಗೂ ಯಾವುದೇ ಸರಕಾರಗಳು ಮಠಗಳಿಗೆ ಇಷ್ಟೊಂದು ಮೊತ್ತದ ನೆರವು ನೀಡಿರಲಿಲ್ಲ. ಶಾಸಕರ ಮನವಿಗೆ ಸಿ ಎಂ ತಾತ್ವಿಕ ಒಪ್ಪಿಗೆಯನ್ನು ಸೂಚಿಸಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ.



























