ಪುತ್ತೂರ: ಪಶು ವೈದ್ಯಕೀಯ ಇಲಾಖೆಯಲ್ಲಿ ಪಶು ಸಖಿಯರಾಗಿ ಸೇವೆಸಲ್ಲಿಸುತ್ತಿರುವ ನಮಗೆ ಗೌರವಧನ ನೀಡುವಂತೆ ಶಾಸಕ ಅಶೋಕ್ ರೈ ಗೆ ಮನವಿ ಸಲ್ಲಿಸಿದ್ದಾರೆ.
ಮನವಿಯ ಒಕ್ಕರಣೆ: ಸಂಬಂಧಿಸಿದಂತೆ ನಾವು ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಸಿಬ್ಬಂದಿಗಳಾಗಿ 2022-23 ನೇ ಸಾಲಿನಿಂದ ಎನ್.ಆರ್.ಎಲ್. ಎಮ್ ಹಾಗೂ ಒಗ್ಗೂಡಿಸುವಿಕೆ ಕಾರ್ಯಕ್ರಮಗಳನ್ನು ನಿರ್ವಹಿಸುತ್ತಿದ್ದು ಇದರೊಂದಿಗೆ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಕಾರ್ಯ ಚಟುವಟಿಕೆಗಳಾದ ಲಸಿಕಾ ಕಾರ್ಯಕ್ರಮ ಪಶುಧನ ಅಪ್ನಲ್ಲಿ ಜಾನುವಾರುಗಳ ಟ್ಯಾಗ್ ಎಂಟ್ರಿ,ಕರುಗಳ ನೋಂದಣಿ ರೇಬೀಸ್ ಲಸಿಕಾ ಕಾರ್ಯಕ್ರಮ,ಜಾನುವಾರು ಗಣತಿ ರೈತರಿಗೆ ಇಲಾಖೆಯ ಮಾಹಿತಿಗಳು ಹಾಗೂ ಇತರ ಇಲಾಖಾ ಕಾರ್ಯಕ್ರಮಗಳಲ್ಲಿ ನಿರಂತರವಾಗಿ ನಮಗೆ ಸಂಬಂಧಪಟ್ಟ ಗ್ರಾವತಾ ಪಂಚಾಯತ್ ವ್ಯಾಪ್ತಿಯ ರೈತರ ಮತ್ತು ಇಲಾಖೆಯ ನಡುವೆ ಕೊಂಡಿಯಾಗಿ ಕಾರ್ಯನಿರ್ವಹಿಸತ್ತಿದ್ದೇವೆ.
ಪ್ರಸ್ತುತ ನಾವು ಎನ್.ಆರ್.ಎಲ್.ಎಮ್. ಯೋಜನೆಯಡಿ ಸಂಜೀವಿನಿ ಒಕ್ಕೂಟಗಳ ಮುಖಾಂತರ ಮಾಸಿಕ ಗೌರವಧನವನ್ನು ಮಾತ್ರ ಪಡೆಯುತ್ತಿದ್ದು. ಪಶುಪಾಲನಾ ಇಲಾಖೆಯಿಂದ ಯಾವುದೇ ಗೌರವಧನವನ್ನಾಗಗಲೀ ಪ್ರಯಾಣ ಭತ್ಯೆಯನ್ನಾಗಲಿ ಹಾಗೂ ಮೊಬೈಲ್ ಇಂಟರ್ನೆಟ್ ಭತ್ಯೆಯನ್ನಾಗಲೀ ಪಡೆಯುತ್ತಿಲ್ಲ ಆದ್ದರಿಂದ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ನಮ್ಮ ಈ ಮನವಿಯನ್ನು ತಿಳಿಸಿ. ಪಶುಪಾಲನಾ ಇಲಾಖೆಯಿಂದ ಗೌರವಧನ ಪ್ರಯಾಣ ಭತ್ಯೆ ಹಾಗೂ ಮೊಬೈಲ್ ಇಂಟರ್ನೆಟ್ ಭತ್ಯೆಯ ಸೌಲಭ್ಯವನ್ನು ಒದಗಿಸಿಕೊಡಬೇಕಾಗಿ ಮನವಿಯಲ್ಲಿ ತಿಳಿಸಲಾಗಿದೆ.



























