ಪುತ್ತೂರು: ಸಚಿವ ಸಂಪುಟ ಪುನರ್ರಚನೆ ಮಾಡಿ ನಮ್ಮಲ್ಲಿಯೂ ಕೆಲವರಿಗೆ ಅವಕಾಶ ನೀಡಬೇಕು ಎಂದು ಈಗಾಗಲೇ ಪಕ್ಷದ ಹೈಕಮಾಂಡ್ಗೆ ಪತ್ರ ಬರೆದಿರುವ, ರಾಜ್ಯದಲ್ಲಿ ಪ್ರಥಮ ಬಾರಿಗೆ ಚುನಾಯಿತರಾಗಿರುವ ಆಡಳಿತಾರೂಢ ಕಾಂಗ್ರೆಸ್ನ 31 ಶಾಸಕರು-ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂದು ತಮ್ಮೊಳಗೆ ಚರ್ಚೆ ನಡೆಸಿದ್ದು ಪುತ್ತೂರು ಶಾಸಕ ಅಶೋಕ ಕುಮಾರ್ ರೈ ಅವರಿಗೆ ಸಚಿವ ಸ್ಥಾನ ಗ್ಯಾರಂಟಿ! ಐವರು ಶಾಸಕರ ಹೆಸರನ್ನು ಅಂತಿಮಗೊಳಿಸಿ ಹೈಕಮಾಂಡ್ಗೆ ನೀಡಲು ನಿರ್ಧರಿಸಿದ್ದಾರೆ.
ಪ್ರಥಮ ಬಾರಿಗೆ ಚುನಾಯಿತರಾಗಿರುವ ಕಾಂಗ್ರೆಸ್ ಶಾಸಕರ ಪೈಕಿ ಕನಿಷ್ಟ ಐವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಹೈಕಮಾಂಡ್ಗೆ ಪತ್ರ ಬರೆದಿರುವ 31 ಶಾಸಕರು, ಮುಂದಿನ ಬೆಳವಣಿಗೆಯಾಗಿ ‘ಯಾರಿಗೆ ಸಚಿವ ಸ್ಥಾನ ನೀಡಬೇಕು’ ಎಂದು ಹೈಕಮಾಂಡ್ ಕೇಳಿದರೆ ನೀಡಲೆಂದು ಪರಸ್ಪರ ಚರ್ಚಿಸಿಕೊಂಡು ಐವರು ಶಾಸಕರ ಹೆಸರನ್ನು ಒಮ್ಮತದಿಂದ ಅಂತಿಮಗೊಳಿಸಿದ್ದಾರೆ.ಈ ಪೈಕಿ ಮೊದಲ ಹೆಸರೇ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರದ್ದು ಎಂದು ಮೂಲಗಳಿಂದ ತಿಳಿದು ಬಂದಿದೆ.ಉಳಿದಂತೆ ಶಾಸಕರಾದ ಎ.ಎಸ್.ಪೊನ್ನಣ್ಣ,ಪ್ರದೀಪ್ ಈಶ್ವರ್,ನಯನಾ ಮೋಟಮ್ಮ ಮತ್ತು ರವಿ ಕುಮಾರ್ ಗಣಿಗ ಅವರ ಹೆಸರುಗಳನ್ನು ಹೈಕಮಾಂಡ್ಗೆ ನೀಡಲು ತೀರ್ಮಾನಿಸಿರುವ ಶಾಸಕರು, ಇಂದು ಸಭೆ ಸೇರಿ ಈ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.
ರಾಜ್ಯದಲ್ಲಿ ಕೂಡಲೇ ಸಚಿವ ಸಂಪುಟ ಪುನರ್ರಚನೆ ಮಾಡಿ ನಮ್ಮಲ್ಲಿಯೂ ಕೆಲವರಿಗೂ ಅವಕಾಶ ನೀಡಬೇಕು ಎಂದು ಆಗ್ರಹಿಸಿ, ಪ್ರಥಮ ಬಾರಿಗೆ ಚುನಾಯಿತರಾದ ಆಡಳಿತಾರೂಢ ಕಾಂಗ್ರೆಸ್ನ 31 ಶಾಸಕರು ಸಹಿ ಮಾಡಿ ಪಕ್ಷದ ಹೈಕಮಾಂಡ್ಗೆ ಈಗಾಗಲೇ ಪತ್ರವೊಂದನ್ನು ಬರೆದಿದ್ದಾರೆ.ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರೂ ಈ ಪತ್ರಕ್ಕೆ ಸಹಿ ಮಾಡಿದ್ದಾರೆ.ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಽ, ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ರಾಜ್ಯದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ,ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಶಾಸಕರು ಪತ್ರ ಬರೆದಿದ್ದಾರೆ.
ಅಶೋಕ್ ಕುಮಾರ್ ರೈ ಅವರಲ್ಲದೆ, ಶಿವಗಂಗಾ ಬಸವರಾಜ್, ಪ್ರದೀಪ್ಈಶ್ವರ್, ವಿಶ್ವಾಸ್ ವೈದ್ಯ, ಇಕ್ಬಾಲ್ ಹುಸೇನ್,ಎನ್.ಟಿ.ಶ್ರೀನಿವಾಸ್, ದರ್ಶನ್ ಧ್ರುವನಾರಾಯಣ್, ರವಿ ಕುಮಾರ್ ಗಣಿಗ, ಬಿ.ಬಿ.ಚಿಮ್ಮನಕಟ್ಟಿ, ಎ.ಎಸ್.ಪೊನ್ನಣ್ಣ, ಬಾಬಾ ಸಾಹೇಬ್ ಪಾಟೀಲ್, ನಾರಾ ಭರತ್ ರೆಡ್ಡಿ, ಎ.ಸಿ.ಶ್ರೀನಿವಾಸ್, ಮಹೇಂದ್ರ ತಮ್ಮಣ್ಣನವರ್, ಮಂಥರ್ ಗೌಡ, ದೇವೇಂದ್ರಪ್ಪ, ಎನ್.ಶ್ರೀನಿವಾಸ್, ಆಸಿಫ್ ಸೇಠ್,ರಾಜಾ ವೇಣುಗೋಪಾಲ್ ನಾಯಕ್, ಉದಯ್ ಕುಮಾರ್ ಕಡಲೂರು, ಎಚ್.ವಿ.ವೆಂಕಟೇಶ್, ಪ್ರಕಾಶ್ ಕೋಳಿವಾಡ, ಕೆ.ಎಸ್.ಆನಂದ್, ಕೆ.ಎಸ್.ಬಸವಂತಪ್ಪ, ಡಿ.ರವಿಶಂಕರ್, ಎಚ್.ಎಂ.ಗಣೇಶ್ ಪ್ರಸಾದ್, ಅಶೋಕ್ ಮನಗೂಳಿ, ನಯನಾ ಮೋಟಮ್ಮ, ಚನ್ನಾರೆಡ್ಡಿ ಪಾಟೀಲ್ ಸಹಿ ಹಾಕಿದ ಪ್ರಮುಖ ಶಾಸಕರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಿಂದ ಪ್ರಸ್ತುತ ಇರುವ ಚುನಾಯಿತ ಇಬ್ಬರು ಕಾಂಗ್ರೆಸ್ ಶಾಸಕರ ಪೈಕಿ ಯು.ಟಿ.ಖಾದರ್ ಅವರು ಈಗಾಗಲೇ ವಿಧಾನಸಭಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಉಳಿದಿರುವ ಏಕೈಕ ಕಾಂಗ್ರೆಸ್ ಶಾಸಕ ಅಶೋಕ್ ಕುಮಾರ್ ರೈ ಅವರು ಮೊದಲ ಬಾರಿ ಆಯ್ಕೆಯಾದವರಾದರೂ ಈಗಾಗಲೇ ತನ್ನ ಕಾರ್ಯವೈಖರಿ ಮೂಲಕ ಇಡೀ ರಾಜ್ಯದಲ್ಲಿಯೇ ಗುರುತಿಸಿಕೊಂಡಿದ್ದಾರೆ.ಅವರ ಕಾರ್ಯವೈಖರಿ ಮತ್ತು ಅಭಿವೃದ್ಧಿ ಕೆಲಸಗಳನ್ನು ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೆವಾಲ ಅವರೇ ಕೊಂಡಾಡಿ ಶಹಬ್ಬಾಸ್ಗಿರಿ ಕೊಟ್ಟಿದ್ದಾರೆ.ಅವಿಭಜಿತ ದ.ಕ.ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳೊಂದಿಗೆ ಪಕ್ಷವನ್ನೂ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಅಶೋಕ್ ಕುಮಾರ್ ರೈಯವರಿಗೆ ಪಕ್ಷ ಸಚಿವ ಸ್ಥಾನ ನೀಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.ಬಂದರು,ಮೀನುಗಾರಿಕೆ ಇಲ್ಲವೇ ಕನ್ನಡ-ಸಂಸ್ಕೃತಿ ಇಲಾಖೆಯಂತಹ ಖಾತೆಯನ್ನು ನೀಡಿ ಜಿಲ್ಲಾ ಉಸ್ತುವಾರಿ ಜವಾಬ್ದಾರಿಯನ್ನು ನೀಡುವ ಸಾಧ್ಯತೆ ಇದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.ನನಗೆ ಸಚಿವ ಸ್ಥಾನದ ಅಪೇಕ್ಷೆ ಇಲ್ಲ.ನನ್ನ ಕ್ಷೇತ್ರದ ಅಭಿವೃದ್ಧಿ ನನಗೆ ಮುಖ್ಯ,ಕ್ಷೇತ್ರಕ್ಕೆ ಹೆಚ್ಚು ಹೆಚ್ಚು ಅನುದಾನ ಬರಬೇಕು.ಮೆಡಿಕಲ್ ಕಾಲೇಜು ಬರಬೇಕು ಎನ್ನುವುದೇ ನನ್ನ ಅಪೇಕ್ಷೆ ಹೊರತು ಸಚಿವ ಸ್ಥಾನದ ಬೇಡಿಕೆ ನನ್ನದಲ್ಲ ಎಂದು ಅಶೋಕ್ ಕುಮಾರ್ ರೈಯವರು ಈಗಾಗಲೇ ಪ್ರತಿಕ್ರಿಯೆ ನೀಡಿದ್ದಾರೆ.
ಸಚಿವ ಸಂಪುಟ ಪುನರ್ರಚನೆ ಸಂದರ್ಭ ಅವಕಾಶ ನೀಡುವ ನಿಟ್ಟಿನಲ್ಲಿ ಎಐಸಿಸಿ ವತಿಯಿಂದ ರಹಸ್ಯವಾಗಿ ಸಮೀಕ್ಷೆಯೊಂದನ್ನು ಮಾಡಲಾಗಿದ್ದು ಈ ಸಮೀಕ್ಷೆಯಲ್ಲಿಯೂ ಶಾಸಕ ಅಶೋಕ್ ಕುಮಾರ್ ರೈಯವರ ಹೆಸರು ಮುನ್ನಲೆಗೆ ಬಂದಿದೆ.ಇದೀಗ ಹೈಕಮಾಂಡ್ಗೆ ಪತ್ರ ಬರೆದಿರುವ, ಪ್ರಥಮ ಬಾರಿಗೆ ಆಯ್ಕೆಯಾಗಿರುವ ಶಾಸಕರೂ ಸಚಿವ ಸ್ಥಾನಕ್ಕಾಗಿ ಅಶೋಕ್ ಕುಮಾರ್ ರೈಯವರ ಹೆಸರನ್ನು ನೀಡಲು ನಿರ್ಧರಿಸಿರುವುದು ಮತ್ತು ಹೈಕಮಾಂಡ್ ಒಂದೊಮ್ಮೆ ಇದಕ್ಕೆ ಮನ್ನಣೆ ನೀಡಿದ್ದೇ ಆದರೆ ಅಶೋಕ್ ಕುಮಾರ್ ರೈ ಅವರಿಗೆ ಸಚಿವ ಸ್ಥಾನ ಒಲಿಯುವುದು ಬಹುತೇಕ ಖಚಿತ ಎನ್ನುವ ನಿರೀಕ್ಷೆಯಲ್ಲಿ ಅವರ ಅಭಿಮಾನಿ,ಹಿತೈಷಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.



























