ಪುತ್ತೂರು: ಕರಾವಳಿ ಮೂಲದ ಕರಾಡ ಬ್ರಾಹ್ಮಣ ಸಮಾಜದ ಸಮುದಾಯದ ಜನಾಂಗದವರು ಬೆಂಗಳೂರು ನಗರದಲ್ಲಿ ಸುಮಾರು 4 ಲಕ್ಷಕ್ಕೂ ಅಧಿಕವಾಗಿ ನಮ್ಮ ಸಮಾಜದವರು ನೆಲೆಸಿರುತ್ತಾರೆ. ಶೃಂಗೇರಿ ಜಗದ್ಗುರುಗಳು ಹಾಗೂ ಶೃಂಗೇರಿ ಮಠದ ಮಾರ್ಗದರ್ಶನದಲ್ಲಿ ಬೆಂಗಳೂರಿನಲ್ಲಿ ಕರಾಡ ಬ್ರಾಹ್ಮಣ ಸಮುದಾಯದವರು ಅನೇಕ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.
ಈ ಸಮುದಾಯದವರು ಯಾವುದೇ ಸಭೆ-ಸಮಾರಂಭಗಳನ್ನು ನಡೆಸಬೇಕೆಂದಲ್ಲಿ ಖಾಸಗಿ ರವರ ಮೊರೆ ಹೋಗುವಂತಹ ಸಂದರ್ಭ ನಿರ್ಮಾಣವಾಗಿರುತ್ತದೆ. ಈ ಸಮಾಜದವರು ತಮ್ಮ ಧಾರ್ಮಿಕ, ಸಾಮಾಜಿಕ ಹಾಗೂ ಇನ್ನಿತರೆ ಗೌರವ ಕಾರ್ಯಕ್ರಮಗಳನ್ನು ನಡೆಸಲು ಅನುಕೂಲವಾಗುವಂತೆ ಬೆಂಗಳೂರು ನಗರದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕ್ರಸಂ.32 ನಾಡಪ್ರಭು ಕೆಂಪೇಗೌಡ ಬಡಾವಣೆ ಬ್ಲಾಕ್-7 ಕೊಮ್ಮಘಟ್ಟ ನಿವೇಶನ ಸಂ. 02 ಅನ್ನು ಸದರಿ ಸಮಾಜದ ಅನುಕೂಲಕ್ಕೆ ನೀಡುವಂತೆ ದಿನಾಂಕ: 02-05-2025 ರಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದು, ನೋಂದಣಿ ಶುಲ್ಕವನ್ನು ಪಾವತಿಸಿರುತ್ತಾರೆ.
ಆದುದರಿಂದ, ಕರಾಡ ಬ್ರಾಹ್ಮಣ ಸಮಾಜದವರ ಅನುಕೂಲಕ್ಕಾಗಿ ಕೊಮ್ಮಘಟ್ಟ ಗ್ರಾಮದಲ್ಲಿ ನಿವೇಶನವನ್ನು ಆದ್ಯತೆಯ ಮೇರೆಗೆ ಹಂಚಿಕೆ ಮಾಡಿಕೊಡುವಂತೆ ಮನವಿಯಲ್ಲಿ ತಿಳಿಸಿದ್ದಾರೆ.ಮನವಿಯನ್ನು ಉಪಮುಖ್ಯಮಂತ್ರಿಡಿಕೆ ಶಿವಕುಮಾರ್,ಬೆಂಗಳೂರುಅಭಿವೃದ್ದಿಪ್ರಾಧಿಕಾರದ ಅಧ್ಯಕ್ಷಎನ್ಎ ಹ್ಯಾರಿಸ್ ರವರಿಗೂ ಸಲ್ಲಿಸಲಾಗಿದೆ.
{ಕರಾಡ ಬ್ರಾಹ್ಮಣಸಮಾಜದವರು ನನ್ನನ್ನು ಭೇಟಿಯಾಗಿ ಸಮಾಜಕ್ಕೆ ಬೆಂಗಳೂರಿನಲ್ಲಿನಿವೇಶನ ಒದಗಿಸುವ ಬಗ್ಗೆ ಮಾತುಕತೆ ನಡೆಸಿದ್ದರು.ಇವರಮನವಿಯನ್ನು ಮುಖ್ಯಮಂತ್ರಿಗಳಿಗೆ ,ಉಪಮುಖ್ಯಮಂತ್ರಿಗಳಿಗೆ, ಪ್ರಾಧಿಕಾರದ ಅಧ್ಯಕ್ಷರಿಗೆ ಸಲ್ಲಿಸಲಾಗಿದೆ ಕ್ರಮ ವಹಿಸುವಂತೆ ಸಿ ಎಂ ಅವರು ಸೂಚನೆಯನ್ನು ನೀಡಿದ್ದು ವಾರದೊಳಗೆ ನಿವೇಶನ ಮಂಜೂರಾತಿ ಆದೇಶ ಬರಬಹುದು}
ಅಶೋಕ್ ರೈ ಶಾಸಕರು ಪುತ್ತೂರು



























