• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
ತುಳುನಾಡಿನ ವಿಶಿಷ್ಟ ಸಂಪ್ರದಾಯ ಆಟಿ ತಿಂಗಳು. ಊರಿನ ಮಾರಿ ಕಳೆಯಲು ಬರುವವನೇ ಆಟಿ ಕಳಂಜ.

ತುಳುನಾಡಿನ ವಿಶಿಷ್ಟ ಸಂಪ್ರದಾಯ ಆಟಿ ತಿಂಗಳು. ಊರಿನ ಮಾರಿ ಕಳೆಯಲು ಬರುವವನೇ ಆಟಿ ಕಳಂಜ.

July 18, 2024
ಸುಲ್ಕೇರಿ ಮೊಗ್ರು  ಮಲೆಕುಡಿಯ ಆದಿವಾಸಿ ಕುಟುಂಬಗಳಿಗೆ  ವಿದ್ಯುತ್ ಭಾಗ್ಯ. ರಕ್ಷಿತ್ ಶಿವರಾಂ  ರವರಿಗೆ  ಅಭಿನಂದನೆ ಸಲ್ಲಿಕೆ

ಸುಲ್ಕೇರಿ ಮೊಗ್ರು ಮಲೆಕುಡಿಯ ಆದಿವಾಸಿ ಕುಟುಂಬಗಳಿಗೆ ವಿದ್ಯುತ್ ಭಾಗ್ಯ. ರಕ್ಷಿತ್ ಶಿವರಾಂ ರವರಿಗೆ ಅಭಿನಂದನೆ ಸಲ್ಲಿಕೆ

December 25, 2025
ಯೋಜನೆಗಳ ಹೆಸರು ಬದಲಾವಣೆಯೇ ಮೋದಿ ಸರ್ಕಾರದ ಸಾಧನೆ: ರಕ್ಷಿತ್ ಶಿವರಾಂ

ಅಲ್ಪಸಂಖ್ಯಾತ ಇಲಾಖೆಯಿಂದ ಬೆಳ್ತಂಗಡಿ ತಾಲೂಕಿನ 4 ಮಸೀದಿ, ಮದರಸಗಳ ದುರಸ್ತಿ ಕಾಮಗಾರಿಗೆ 70 ಲಕ್ಷ ಅನುದಾನ ಮಂಜೂರು.

December 25, 2025
ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವಿಶೇಷ ಹೋಮ–ಹವನ ಮತ್ತು ವಿಘ್ನಗಳ ನಿವಾರಣೆಗೆ ವಿಘ್ನೇಶ್ವರನ ಪೂಜೆ

ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವಿಶೇಷ ಹೋಮ–ಹವನ ಮತ್ತು ವಿಘ್ನಗಳ ನಿವಾರಣೆಗೆ ವಿಘ್ನೇಶ್ವರನ ಪೂಜೆ

December 25, 2025
ನವ ವಿವಾಹಿತೆ ಮದುವೆಯಾಗಿ ತಿಂಗಳು ಕಳೆಯುವ ಒಳಗೆ ನಿಗೂಢವಾಗಿ ಸಾವು

ನವ ವಿವಾಹಿತೆ ಮದುವೆಯಾಗಿ ತಿಂಗಳು ಕಳೆಯುವ ಒಳಗೆ ನಿಗೂಢವಾಗಿ ಸಾವು

December 25, 2025
ಚರ್ಚ್​ನಲ್ಲಿ ಕ್ರಿಸ್ಮಸ್ ಪ್ರಾರ್ಥನೆಯಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ

ಚರ್ಚ್​ನಲ್ಲಿ ಕ್ರಿಸ್ಮಸ್ ಪ್ರಾರ್ಥನೆಯಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ

December 25, 2025
ಪುತ್ತೂರು: ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದ ವಿಜ್ಞಾಪನಾ ಪತ್ರ ಬಿಡುಗಡೆ

ಪುತ್ತೂರು: ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದ ವಿಜ್ಞಾಪನಾ ಪತ್ರ ಬಿಡುಗಡೆ

December 25, 2025
ಬಂಟ್ವಾಳ: ಡಿಸೆಂಬರ್ 27ಕ್ಕೆ ಮೂರ್ಜೆಯಲ್ಲಿ 21ನೇ  ವರ್ಷದ ಸಾಮೂಹಿಕ ಶನೈಶ್ಚರ ಪೂಜೆ

ಬಂಟ್ವಾಳ: ಡಿಸೆಂಬರ್ 27ಕ್ಕೆ ಮೂರ್ಜೆಯಲ್ಲಿ 21ನೇ ವರ್ಷದ ಸಾಮೂಹಿಕ ಶನೈಶ್ಚರ ಪೂಜೆ

December 25, 2025
ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ಮೇಲಿನ ದೌರ್ಜನ್ಯ ತೀವ್ರವಾಗಿ ಖಂಡಿಸಿದ ತಸ್ಲಿಮಾ ನಸ್ರೀನ್

ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ಮೇಲಿನ ದೌರ್ಜನ್ಯ ತೀವ್ರವಾಗಿ ಖಂಡಿಸಿದ ತಸ್ಲಿಮಾ ನಸ್ರೀನ್

December 24, 2025
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಬಿಳಿನೆಲೆ ಐತ್ತೂರು ವಲಯದ ಒಕ್ಕೂಟದ ಅಧ್ಶಕ್ಷರುಗಳಿಗೆ 2026ನೇ ಹೊಸ ವರ್ಷದ ಡೈರಿ ವಿತರಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಬಿಳಿನೆಲೆ ಐತ್ತೂರು ವಲಯದ ಒಕ್ಕೂಟದ ಅಧ್ಶಕ್ಷರುಗಳಿಗೆ 2026ನೇ ಹೊಸ ವರ್ಷದ ಡೈರಿ ವಿತರಣೆ

December 24, 2025
ಸೂರಂಬೈಲು ಅಗ್ನಿ ಅವಘಡದಿಂದ ಮನೆ ಸಂಪೂರ್ಣ ನಾಶ – ಪುತ್ತಿಲ ಪರಿವಾರ ಟ್ರಸ್ಟ್‌ನಿಂದ ನೆರವು

ಸೂರಂಬೈಲು ಅಗ್ನಿ ಅವಘಡದಿಂದ ಮನೆ ಸಂಪೂರ್ಣ ನಾಶ – ಪುತ್ತಿಲ ಪರಿವಾರ ಟ್ರಸ್ಟ್‌ನಿಂದ ನೆರವು

December 24, 2025
ಡಿ.23ರಂದು ಯು.ಆರ್. ಪ್ರಾಪರ್ಟೀಸ್ ಪುತ್ತೂರು ಬೆದ್ರಾಳ ಶ್ರೀಮಾ ಥೀಂ ಪಾರ್ಕ್ ಲೋಕಾರ್ಪಣೆ ಮತ್ತು ದೈವಗಳ ನೇಮೋತ್ಸವ

ಡಿ.23ರಂದು ಯು.ಆರ್. ಪ್ರಾಪರ್ಟೀಸ್ ಪುತ್ತೂರು ಬೆದ್ರಾಳ ಶ್ರೀಮಾ ಥೀಂ ಪಾರ್ಕ್ ಲೋಕಾರ್ಪಣೆ ಮತ್ತು ದೈವಗಳ ನೇಮೋತ್ಸವ

December 22, 2025
ಧರ್ಮಸ್ಥಳದಲ್ಲಿ ಉಚಿತ ಟೈಲರಿಂಗ್‌ ತರಬೇತಿ ಶಿಬಿರ ಉದ್ಘಾಟನೆ

ಧರ್ಮಸ್ಥಳದಲ್ಲಿ ಉಚಿತ ಟೈಲರಿಂಗ್‌ ತರಬೇತಿ ಶಿಬಿರ ಉದ್ಘಾಟನೆ

December 22, 2025
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Friday, December 26, 2025
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    ಸುಲ್ಕೇರಿ ಮೊಗ್ರು  ಮಲೆಕುಡಿಯ ಆದಿವಾಸಿ ಕುಟುಂಬಗಳಿಗೆ  ವಿದ್ಯುತ್ ಭಾಗ್ಯ. ರಕ್ಷಿತ್ ಶಿವರಾಂ  ರವರಿಗೆ  ಅಭಿನಂದನೆ ಸಲ್ಲಿಕೆ

    ಸುಲ್ಕೇರಿ ಮೊಗ್ರು ಮಲೆಕುಡಿಯ ಆದಿವಾಸಿ ಕುಟುಂಬಗಳಿಗೆ ವಿದ್ಯುತ್ ಭಾಗ್ಯ. ರಕ್ಷಿತ್ ಶಿವರಾಂ ರವರಿಗೆ ಅಭಿನಂದನೆ ಸಲ್ಲಿಕೆ

    ಯೋಜನೆಗಳ ಹೆಸರು ಬದಲಾವಣೆಯೇ ಮೋದಿ ಸರ್ಕಾರದ ಸಾಧನೆ: ರಕ್ಷಿತ್ ಶಿವರಾಂ

    ಅಲ್ಪಸಂಖ್ಯಾತ ಇಲಾಖೆಯಿಂದ ಬೆಳ್ತಂಗಡಿ ತಾಲೂಕಿನ 4 ಮಸೀದಿ, ಮದರಸಗಳ ದುರಸ್ತಿ ಕಾಮಗಾರಿಗೆ 70 ಲಕ್ಷ ಅನುದಾನ ಮಂಜೂರು.

    ಪುತ್ತೂರು: ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದ ವಿಜ್ಞಾಪನಾ ಪತ್ರ ಬಿಡುಗಡೆ

    ಪುತ್ತೂರು: ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದ ವಿಜ್ಞಾಪನಾ ಪತ್ರ ಬಿಡುಗಡೆ

    ಬಂಟ್ವಾಳ: ಡಿಸೆಂಬರ್ 27ಕ್ಕೆ ಮೂರ್ಜೆಯಲ್ಲಿ 21ನೇ  ವರ್ಷದ ಸಾಮೂಹಿಕ ಶನೈಶ್ಚರ ಪೂಜೆ

    ಬಂಟ್ವಾಳ: ಡಿಸೆಂಬರ್ 27ಕ್ಕೆ ಮೂರ್ಜೆಯಲ್ಲಿ 21ನೇ ವರ್ಷದ ಸಾಮೂಹಿಕ ಶನೈಶ್ಚರ ಪೂಜೆ

    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಬಿಳಿನೆಲೆ ಐತ್ತೂರು ವಲಯದ ಒಕ್ಕೂಟದ ಅಧ್ಶಕ್ಷರುಗಳಿಗೆ 2026ನೇ ಹೊಸ ವರ್ಷದ ಡೈರಿ ವಿತರಣೆ

    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಬಿಳಿನೆಲೆ ಐತ್ತೂರು ವಲಯದ ಒಕ್ಕೂಟದ ಅಧ್ಶಕ್ಷರುಗಳಿಗೆ 2026ನೇ ಹೊಸ ವರ್ಷದ ಡೈರಿ ವಿತರಣೆ

    ಸೂರಂಬೈಲು ಅಗ್ನಿ ಅವಘಡದಿಂದ ಮನೆ ಸಂಪೂರ್ಣ ನಾಶ – ಪುತ್ತಿಲ ಪರಿವಾರ ಟ್ರಸ್ಟ್‌ನಿಂದ ನೆರವು

    ಸೂರಂಬೈಲು ಅಗ್ನಿ ಅವಘಡದಿಂದ ಮನೆ ಸಂಪೂರ್ಣ ನಾಶ – ಪುತ್ತಿಲ ಪರಿವಾರ ಟ್ರಸ್ಟ್‌ನಿಂದ ನೆರವು

    ಡಿ.23ರಂದು ಯು.ಆರ್. ಪ್ರಾಪರ್ಟೀಸ್ ಪುತ್ತೂರು ಬೆದ್ರಾಳ ಶ್ರೀಮಾ ಥೀಂ ಪಾರ್ಕ್ ಲೋಕಾರ್ಪಣೆ ಮತ್ತು ದೈವಗಳ ನೇಮೋತ್ಸವ

    ಡಿ.23ರಂದು ಯು.ಆರ್. ಪ್ರಾಪರ್ಟೀಸ್ ಪುತ್ತೂರು ಬೆದ್ರಾಳ ಶ್ರೀಮಾ ಥೀಂ ಪಾರ್ಕ್ ಲೋಕಾರ್ಪಣೆ ಮತ್ತು ದೈವಗಳ ನೇಮೋತ್ಸವ

    ಧರ್ಮಸ್ಥಳದಲ್ಲಿ ಉಚಿತ ಟೈಲರಿಂಗ್‌ ತರಬೇತಿ ಶಿಬಿರ ಉದ್ಘಾಟನೆ

    ಧರ್ಮಸ್ಥಳದಲ್ಲಿ ಉಚಿತ ಟೈಲರಿಂಗ್‌ ತರಬೇತಿ ಶಿಬಿರ ಉದ್ಘಾಟನೆ

    ಬೆಳ್ತಂಗಡಿ ಆರಂಬೋಡಿ ಗ್ರಾಮದ ಕುದುಂಬುಡ -ಕೊಮ್ಮಡ ರಸ್ತೆ  ತಡೆಗೋಡೆ ನಿರ್ಮಾಣಕ್ಕೆ ರೂ.1.00 ಕೋಟಿ ಅನುದಾನ ನೀಡಿದ ತಾಲೂಕಿನ ಜನಪ್ರಿಯ ಶಾಸಕರಾದ ಶ್ರೀ ಹರೀಶ್ ಪೂಂಜರಿಗೆ ಗ್ರಾಮಸ್ಥರಿಂದ ಅಭಿನಂದನೆ

    ಬೆಳ್ತಂಗಡಿ ಆರಂಬೋಡಿ ಗ್ರಾಮದ ಕುದುಂಬುಡ -ಕೊಮ್ಮಡ ರಸ್ತೆ ತಡೆಗೋಡೆ ನಿರ್ಮಾಣಕ್ಕೆ ರೂ.1.00 ಕೋಟಿ ಅನುದಾನ ನೀಡಿದ ತಾಲೂಕಿನ ಜನಪ್ರಿಯ ಶಾಸಕರಾದ ಶ್ರೀ ಹರೀಶ್ ಪೂಂಜರಿಗೆ ಗ್ರಾಮಸ್ಥರಿಂದ ಅಭಿನಂದನೆ

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ಉಡುಪಿ

ತುಳುನಾಡಿನ ವಿಶಿಷ್ಟ ಸಂಪ್ರದಾಯ ಆಟಿ ತಿಂಗಳು. ಊರಿನ ಮಾರಿ ಕಳೆಯಲು ಬರುವವನೇ ಆಟಿ ಕಳಂಜ.

by ಪ್ರಜಾಧ್ವನಿ ನ್ಯೂಸ್
July 18, 2024
in ಉಡುಪಿ, ದಕ್ಷಿಣ ಕನ್ನಡ, ಪುತ್ತೂರು, ಪ್ರಾದೇಶಿಕ, ಸಾಂಸ್ಕೃತಿಕ
0
ತುಳುನಾಡಿನ ವಿಶಿಷ್ಟ ಸಂಪ್ರದಾಯ ಆಟಿ ತಿಂಗಳು. ಊರಿನ ಮಾರಿ ಕಳೆಯಲು ಬರುವವನೇ ಆಟಿ ಕಳಂಜ.

Oplus_131072

63
SHARES
181
VIEWS
ShareShareShare

ತುಳುವಿನಲ್ಲಿ ಆಟಿ ತಿಂಗಳು ಅಂದರೆ ಆಷಾಢ ಮಾಸ. ಜೋರು ಮಳೆ ಬರುವ ಈ ಹೊತ್ತಲ್ಲಿ ಕೃಷಿ ಕೆಲಸಗಳು, ಹಬ್ಬವಾಗಲೀ ಶುಭ ಕಾರ್ಯವಾಗಲೀ ನಡೆಯುವುದಿಲ್ಲ, ಮಳೆಯಿಂದಾಗಿ ರೋಗ ರುಜಿನಗಳೂ ಬರುವ ಕಾಲ. ಹೀಗೆ ಊರಿಗೇ ಊರೇ ತಾಪತ್ರಯ ಎದುರಿಸುವಾಗ ಊರಿನ ಮಾರಿ ಕಳೆಯಲು ಮನೆಗೆ ಮನೆಗೆ ಬರುತ್ತಾನೆ ಆಟಿ ಕಳಂಜ. ಆಟಿ ಅಂದರೆ ಆಷಾಢ, ಕಳಂಜ/ಕಳೆಂಜ ಅಂದರೆ ಕಳೆಯುವವನು ಎಂದರ್ಥ. ಆಷಾಢ ಮಾಸದ ಕಷ್ಟಗಳನ್ನು ಕಳೆಯಲು ಬರುವ ಆಟಿ ಕಳಂಜ ಈಗೀಗ ಅಪರೂಪ. ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕೇರಳದ ಕಾಸರಗೋಡಿನ ತುಳುವರು  ಹೆಚ್ಚಾಗಿ ವಾಸಿಸುವ ಪ್ರದೇಶದಲ್ಲಿ ಈಗಲೂ ಆಟಿ ತಿಂಗಳಲ್ಲಿ ಆಟಿ ಕಳಂಜ ಬರುತ್ತಾನೆ. ಆಟಿ ಕಳಂಜೆ ಬತ್ತುಂಡ್ ಎಂದು ಆಟಿ ಕಳಂಜನಿಗೆ ಬೇಕಾದ ವಸ್ತುಗಳನ್ನು ಮನೆಮಂದಿ ದಾನ ಮಾಡುವುದನ್ನು ಗ್ರಾಮೀಣ ಪ್ರದೇಶದಲ್ಲಿ ಈಗಲೂ ಕಾಣಬಹುದು.

ಆಷಾಢ ತಿಂಗಳು ಅಂದರೆ ಜೋರು ಮಳೆಗಾಲ ಬೇರೆ ಹೀಗಾಗಿ ಊರಿನಲ್ಲಿ ಮನುಷ್ಯರಿಗೆ ಪ್ರಾಣಿಗಳಿಗೆ ಕಾಯಿಲೆ ಹರಡುವುದು ಸರ್ವೇ ಸಾಮಾನ್ಯ. ಇಂಥಾ ಸಾಂಕ್ರಾಮಿಕ ಸೋಂಕುಗಳನ್ನು ಜನರು ಊರಿಗೆ ಮಾರಿ ಬಂತು ಎಂದೇ ಭಾವಿಸುತ್ತಾರೆ. ಈ ಮಾರಿಯನ್ನು ಕಳೆಯಲು ಬರುವವನೇ ಆಟಿ ಕಳಂಜ. ತುಳುನಾಡಿನಲ್ಲಿ ಭೂತಕಟ್ಟುವ ಸಮುದಾಯ (ನಲಿಕೆಯವರು) ಆಟಿ ಕಳಂಜ ವೇಷ ಹಾಕಿ ಮನೆ ಮನೆಗೆ ಬರುತ್ತಾರೆ. ಬೆಳ್ತಂಗಡಿ ಭಾಗದಲ್ಲಿ ಮೇರ ಜನಾಂಗದವರು ಈ ವೇಷ ತೊಡುತ್ತಾರೆ. ಕಾಸರಗೋಡು ಕಡೆ ಕೋಪಾಳರು ಕಳಂಜ ವೇಷಧಾರಿಗಳಾದರೆ , ಮಲವ ಜನಾಂಗದವರು ಬೇಡ ಕುಣಿತವನ್ನೂ, ವಣ್ಣನ್ ಜನಾಂಗದವರು ಮರ್ದ ವೇಷಧಾರಿಗಳಾಗಿ ಇದೇ ರೀತಿ ಮನೆಮನೆಗೆ ಭೇಟಿ ನೀಡುತ್ತಾರೆ.

ಕಳಂಜೆ ಕಳೆಂಜನೋ ಕಳಂಜೆ ಏರ್ನ ಮಗೆನೂ ಕಳಂಜೆ ಎಂಬ ಪಾಡ್ಡನದೊಂದಿಗೆ ತೆಂಬೆರೆ (ಚರ್ಮದ ವಾದ್ಯ) ನುಡಿಸುವವರ ಜತೆಗೆ ಕುಣಿಯುತ್ತಾ ಬರುತ್ತಾನೆ ಆಟಿ ಕಳಂಜ. ಆಟಿದ ದೊಂಬು ಆನೆತ ಬೆರಿ ಪುಡಪು ಎಂದು ತುಳಿವಿನಲ್ಲಿ ಗಾದೆ ಇದೆ. ಇದರ ಅರ್ಥ ಅದೆಷ್ಟು ಬಿಸಿಲು ಅಂದರೆ ಆ ಬಿಸಿಲಿನ ಝಳಕ್ಕೆ ಆನೆಯ ಬೆನ್ನೂ ಒಡೆದು ಹೋಗುತ್ತದೆ. ಇದನ್ನು ಬಿಡಿಸಿ ಹೇಳುವುದಾದರೆ ಆಷಾಢ ಎಂದರೆ ಮಳೆಗಾಲ. ಈ ಹೊತ್ತಲ್ಲಿ ಸರಿಯಾದ ಮಳೆ ಬರದಿದ್ದರೆ ನೀರಿನ ಅಭಾವವೂ ಇರುತ್ತದೆ. ಇನ್ನು ಮಳೆ ಬಂದಾಗ ಶೀತ, ನೆಗಡಿ, ಇನ್ನಿತರ ರೋಗಗಳು ಬರುವುದು ಸಾಮಾನ್ಯ. ಈ ಹೊತ್ತಲ್ಲಿ ಆಟಿಕಳೆಂಜ ಬಂದು ರೋಗ ರುಜಿನಗಳನ್ನು ನಿವಾರಣೆ ಮಾಡುತ್ತಾನೆ ಎನ್ನುವ ನಂಬಿಕೆ ತುಳುನಾಡಿನ ಜನರದ್ದು.

ಆಟಿ ಕಳಂಜ ವೇಷಧಾರಿ ಹದಿಹರೆಯದ ಹುಡುಗನೇ ಆಗಿರುತ್ತಾನೆ. ಕಾಲಿಗೆ ಗಗ್ಗರ(ಗೆಜ್ಜೆ), ಸೊಂಟಕ್ಕೆ ತೆಂಗಿನ ಗರಿ , ಕೆಂಪು ನಿಲುವಂಗಿ, ಮುಖಕ್ಕೆ ಕೆಂಪು ಬಳಿದು ಅದರಲ್ಲಿ ಕಪ್ಪು ಬಿಳಿ ಚುಕ್ಕಿ, ಮುಖದಲ್ಲಿ ಮೀಸೆ ಬರೆದು ಕೈಯಲ್ಲಿ ತಾಳೆಗರಿಯಿಂದ ಮಾಡಿದ ಕೊಡೆ, ಕೇಪುಳ ಹೂವಿನಿಂದ ಸಿಂಗರಿಸಿದ ಮುಟ್ಟಳೆ (ಹಾಳೆಯಿಂದ ಮಾಡಿದ ಟೋಪಿ)ಧರಿಸಿ ಕುಣಿಯುತ್ತಾ ಆಟಿ ಕಳಂಜ ಕುಣಿಯುತ್ತಾ ಬರುತ್ತಾನೆ. ಜತೆಗೆ ಇಬ್ಬರು ಸಹಾಯಕರು ಇರುತ್ತಾರೆ. ಇವರಲ್ಲಿ ಒಬ್ಬ ಸಹಾಯಕ ಕಳಂಜನ ಬಗ್ಗೆ ವಿವರಿಸುವ ಪಾಡ್ದನಗಳನ್ನು ಹೇಳುತ್ತಾ ತೆಂಬರೆ ಬಾರಿಸುತ್ತಾ ಬರುತ್ತಾನೆ. ಇನ್ನೊಬ್ಬ ಸಹಾಯಕ ಊರಿನವರು ಕಳಂಜನಿಗಾಗಿ ಕೊಟ್ಟ ವಸ್ತುಗಳನ್ನು ಚೀಲದಲ್ಲಿ ಹಾಕಿ ಹೊರಲು ಜತೆಯಾಗಿರುತ್ತಾನೆ.

camera center ad

ಜಾಹೀರಾತು

ಆಟಿ ಕಳೆಂಜ ಊರಿನ ರೋಗ ರುಜಿನಗಳನ್ನು ಹೋಗಲಾಡಿಸುವ ಮಾಂತ್ರಿಕ. ಆತ ಮನೆಗೆ ಬಂದನೆಂದರೆ ಮನೆಯವರು ಆತನನ್ನು ಸತ್ಕರಿಸಬೇಕು. ಹಿಂದಿನ ಕಾಲದಲ್ಲಿ ಆಟಿ ಕಳಂಜ ಆಹಾರ ವಸ್ತುಗಳನಷ್ಟೇ ಸ್ವೀಕರಿಸುತ್ತಿದ್ದ, ಆದರೆ ಕಾಲ ಬದಲಾಗದಂತೆ ಜನರು ಹಣ ನೀಡಲು ಶುರು ಮಾಡಿದರು. ಸಂಪ್ರದಾಯಗಳನ್ನು ನೋಡುವುದಾದರೆ ಆಟಿ ಕಳಂಜ ಮನೆ ಬಾಗಿಲಿಗೆ ಬಂದನೆಂದರೆ ಮನೆಯೊಡತಿ ಮೊರದಲ್ಲಿ ಭತ್ತ, ಅಕ್ಕಿ, ಮೆಣಸು, ಉಪ್ಪು, ಹುಳಿ, ಇದ್ದಿಲು ಮುಂತಾದವುಗಳನ್ನು ಇಟ್ಟು ಕೊಡುತ್ತಾರೆ. ಆಷಾಢದಲ್ಲಿ ಬಡತನ ಇದ್ದೇ ಇರುತ್ತದೆ, ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಮನೆ ಮಂದಿ ಅಕ್ಕಿಯೋ, ತೆಂಗಿನಕಾಯಿಯೋ ಕೊಟ್ಟು ಕಳೆಂಜನನ್ನು ಕಳುಹಿಸಿಕೊಡುತ್ತಾರೆ. ಇನ್ನು ಮನೆಯಲ್ಲಿ ಮಾಡುವ ಆಹಾರ ತಿನಿಸುಗಳಾದ ಉಪ್ಪಡ್‌ ಪಚ್ಚಿರ್, (ಹಲಸಿನ ಹಣ್ಣಿನ ತೊಳೆ ಉಪ್ಪು ನೀರಲ್ಲಿ ಹಾಕಿರುವುದು) ಸಾಂತಾಣಿ (ಹಲಸಿನ ಹಣ್ಣಿನ ಬೀಜ ಒಣಗಿಸಿರುವುದು) ಮೊದಲಾದವುಗಳನ್ನು ಕೊಟ್ಟು ಕಳಿಸುತ್ತಾರೆ. ಆಟಿ ಕಳಂಜ ಮನೆ ಅಂಗಳದಿಂದ ಇಳಿದು ಹೋಗುವಾಗ ಕುರ್ದಿ ನೀರು (ಅರಶಿನ ಹಾಗೂ ಸುಣ್ಣ ಬೆರೆಸಿದಾಗ ಆಗುವ ಕೆಂಪು ನೀರು)ನ್ನು ಸಿಂಪಡಿಸುತ್ತಾರೆ. ಹೀಗೆ ಮಾಡಿದರೆ ಮನೆಯ ಅಶುಭ, ಮಾರಿ ಕಳೆದು ಹೋಗುತ್ತದೆ ಎಂಬುದು ತುಳುನಾಡಿನ ಜನಪದ ನಂಬಿಕೆ.

ಇನ್ನೊಂದು ವಿಶೇಷ ಎಂದರೆ ಈ ಕಳಂಜ ಯಾವುದೇ ತೋಟದಿಂದ ಬಾಳೆಗೊನೆ, ತೆಂಗಿನಕಾಯಿಯನ್ನು ಹೇಳದೆ ಕೇಳದೆ ಕಿತ್ತುಕೊಂಡು ಹೋಗಬಹುದು. ಅದನ್ನು ಯಾರೂ ಪ್ರಶ್ನಿಸುವುದಿಲ್ಲ.  ಕಳಂಜ ಕದ್ದೊಯ್ದ ಅಂದರೆ ಬೆಳೆಗಳಿಗೆ ತಟ್ಟಿದ ರೋಗ ಮಾಯವಾಗುತ್ತದೆ ಎಂಬ ನಂಬಿಕೆಯೇ ಇದಕ್ಕೆ ಕಾರಣ. ಮಕ್ಕಳು ಇಲ್ಲದೆ ಹೆಂಗಸರಿಗೆ ಹರಸಿದರೆ, ಕರು ಹಾಕದ ಹಸುಗಳ ತಲೆ ಸವರಿದರೆ ಎಲ್ಲವೂ ಮಂಗಳಕರವಾಗುತ್ತದೆ ಎಂಬ ನಂಬಿಕೆಯೂ ಇಲ್ಲಿದೆ. ಹಾಗಾಗಿ ಕಳೆಂಜನನ್ನು ಸಂತಾನ ದೇವತೆ ಎಂದೂ ಕರೆಯುವುದುಂಟು.

ಕರಾವಳಿಯಲ್ಲಿ ದೈವರಾಧನೆಗೆ ಮಹತ್ತರವಾದ ಸ್ಥಾನವಿದೆ. ಆಷಾಢ ಮಾಸದಲ್ಲಿ ಇಲ್ಲಿನ ದೈವಗಳು ಘಟ್ಟ ಹತ್ತುತ್ತವೆ ಎಂಬ ನಂಬಿಕೆಯಿದೆ. ಆದ್ದರಿಂದ ಆಟಿಯ ಒಂದು ತಿಂಗಳ ಕಾಲ ಇಲ್ಲಿ ದೈವ ಸ್ಥಾನಗಳು ಬಾಗಿಲು ಮುಚ್ಚಿರುತ್ತವೆ. ದೈವದ ಬಾಗಿಲು ಮುಚ್ಚಿದ ಹೊತ್ತಲ್ಲಿ ಬರುವವನೇ ಆಟಿ ಕಳಂಜ. ಆಟಿಡ್ ಬತ್ತೆನೋ ಕಳೆಂಜೆ ಮಾರಿ ಕಳೆಪ್ಪೇನೋ(ಆಷಾಢದಲ್ಲಿ‌ ಬಂದಾನೋ‌ ಕಳೆಂಜ ಮಾರಿ ಕಳೆತಾನೆ) ಎಂಬ ಪಾಡ್ದನದಲ್ಲಿ  ಇರುವಂತೆ ಆಟಿ ಕಳೆಂಜ ಆಚರಣೆಯ ಉದ್ದೇಶವೇ ಮಾರಿ ಕಳೆಯುವುದು ಆಗಿರುತ್ತದೆ. ಈ ಕಳಂಜ ಆಟಿ ತಿಂಗಳಲ್ಲಿ ಮಾತ್ರಬರುತ್ತಾನೆ.  ಆತನನ್ನು ಗುಡಿಕಟ್ಟಿ ಆರಾಧಿಸುವುದಿಲ್ಲ. ಆಷಾಢ ಮಾಸದಲ್ಲಿ ಯಾವುದೇ ಭೂತಕೋಲಗಳಾಗಲೀ, ದೈವಾರಾಧನೆ ಹಬ್ಬಗಳಾಗಲೀ ನಡೆಯುವುದಿಲ್ಲ. ಹೀಗಾಗಿ ಭೂತಕಟ್ಟುವ ಸಮುದಾಯ ಕಳಂಜನ ವೇಷಧಾರಿಗಳಾಗಿ ಊರೂರು ಸುತ್ತಿ ಆಹಾರ ಧಾನ್ಯಗಳನ್ನು ಸಂಗ್ರಹಿಸುತ್ತಾರೆ. ಉಳ್ಳವರು ಇಲ್ಲದವರಿಗೆ ದಾನವಾಗಿ ಕೊಟ್ಟು ಹಂಚಿ ಉಣ್ಣುವ ರೀತಿಯೇ ಇದರ ಹಿಂದಿನ ಮರ್ಮ ಎಂದು ಹೇಳಬಹುದು.

ಜುಲೈ- ಅಗಸ್ಟ್ ತಿಂಗಳು ಆಷಾಢ ಅಥವಾ ಆಟಿ. ಈ ತಿಂಗಳಲ್ಲಿ ಆಟಿ ಅಮಾವಾಸ್ಯೆ ಬರುತ್ತದೆ. ತುಳುವರಿಗೆ ಆಟಿ ಅಮವಾಸ್ಯೆ ವಿಶೇಷವಾಗಿರುತ್ತದೆ. ಆಟಿ ಅಮವಾಸ್ಯೆಯಂದು ಹಾಲೆ ಕಷಾಯ ಕುಡಿಯುವ ಪದ್ಧತಿ ಇಲ್ಲಿ ಹಲವು ವರ್ಷಗಳಿಂದ ನಡೆದು ಬಂದಿದೆ. ಹಾಲೆ ಮರ (ಸಂಸ್ಕೃತದಲ್ಲಿ ಸಪ್ತಪರ್ಣಿ ಮರ) ಎಂದು ಕರೆಯುವ ಈ ಮರದ ತೊಗಟೆಯಿಂದ ಮಾಡುವ ಕಷಾಯ ಸರ್ವರೋಗಗಳಿಗೆ ರಾಮಭಾಣ ಎಂದು ಹೇಳಲಾಗುತ್ತದೆ. ಆಟಿ ತಿಂಗಳಿಗೆ ಈ ಮರದಲ್ಲಿ ಎಲ್ಲಾ ಬಗೆಯ ದಿವ್ಯ ಔಷಧಗಳು ಸೇರಿಕೊಂಡಿರುತ್ತದೆ. ಹೀಗಾಗಿ ಆಟಿ ಅಮಾವಾಸ್ಯೆ ದಿನ ಹಾಲೆ ಮರದ ಕಷಾಯವನ್ನು ಇಲ್ಲಿನ ಜನರು ಸೇವಿಸುತ್ತಾರೆ. ಹಾಲೆ ಮರದ ಕಷಾಯ ತೆಗೆದುಕೊಂಡು ಬರುವವರು ಮನೆಯ ಹಿರಿಯರೇ ಆಗಿರುತ್ತಾರೆ. ಯಾಕೆಂದರೆ ಕಾಡಿನಲ್ಲಿ ಇರುವ ಮರಗಳ ಗುರುತು ಇರುವುದು ಅವರಿಗೆ ತಾನೇ?.ಅಮಾವಾಸ್ಯೆ ದಿನ ಸೂರ್ಯೋದಯಕ್ಕೂ ಮುನ್ನ ಹಾಲೆ ಮರದಿಂದ ಹಾಲು ಸಂಗ್ರಹಿಸಲು ತೊಗಟೆ ಕೆತ್ತಬೇಕು. ಹೀಗೆ ತೊಗಟೆಯನ್ನು ಬರೀ ಕಲ್ಲಿನಿಂದಲೇ ಕೆತ್ತ ಬೇಕು. ಹೀಗೆ ಕೆತ್ತಿ ತಂದ ತೊಗಟೆಯ ಮೇಲ್ಭಾಗದ ಕಪ್ಪು ಸಿಪ್ಪೆಯನ್ನು ಸ್ವಚ್ಛಗೊಳಿಸಿ, ಕಲ್ಲಿನಿಂದಲೇ ಜಜ್ಜಿ ರಸ ತೆಗೆದುಕೊಳ್ಳಬೇಕು. ಇದಕ್ಕೆ ಕಾಳುಮೆಣಸು, ಓಮ ಕಾಳು ಮತ್ತು ಬೆಳ್ಳುಳ್ಳಿಯನ್ನು ಕೂಡಾ ಜಜ್ಜಿ ಹಾಕಿ ಎಲ್ಲವನ್ನೂ ಹಿಂಡಿ ರಸ ತೆಗೆಯಬೇಕು. ಈ ರಸಕ್ಕೆ ಬಿಳಿ ಕಲ್ಲು(ತುಳುವಿನಲ್ಲಿ ಬೊಲ್ಲು ಕಲ್ಲ್)ನ್ನು ಕೆಂಡದಲ್ಲಿ ಕಾಯಿಸಿ ಹಾಕಬೇಕು. ಇದನ್ನು ಬೆಳಗ್ಗೆ ಖಾಲಿ ಹೊಟ್ಟೆಗೆ ಕುಡಿಯಬೇಕು. ಕಷಾಯ ತುಂಬಾ ಕಹಿ ಇರುತ್ತದೆ. ಇದು ದೇಹಕ್ಕೆ ಉಷ್ಣ. ಹಾಗಾಗಿ ದೇಹ ಮತ್ತಷ್ಟು ಉಷ್ಣ ಆಗದಂತೆ ತಂಪು ಮಾಡಲು ಮೆಂತ್ಯ ಗಂಜಿ ಸೇವಿಸುತ್ತಾರೆ. ಆಟಿ ತಿಂಗಳಲ್ಲಿ ಕೆಸುವಿನ ಎಲೆಯಿಂದ ಮಾಡಿದ ಪತ್ರೋಡೆ, ಹಲಸಿನ ಹಣ್ಣಿನಿಂದ ಮಾಡಿದ ವಿವಿಧ ತಿಂಡಿ ತಿನಿಸುಗಳನ್ನು ಜನರು ಸೇವಿಸುತ್ತಿದ್ದು, ಇದು ಆರೋಗ್ಯ ದೃಷ್ಟಿಯಿಂದಲೂ ಒಳ್ಳೆಯದು ಎಂದು ಹೇಳಲಾಗುತ್ತದೆ.

SendShare25Share
Previous Post

ಉಪ್ಪಿನಂಗಡಿ: ಲಾರಿ ಡಿಕ್ಕಿಯಾಗಿ ಎರಡು ಕಾರುಗಳಲ್ಲಿದ್ದ ನಾಲ್ವರಿಗೆ ಗಂಭೀರ ಗಾಯ

Next Post

ದೆಹಲಿ: “ಮಾತೆರೆಗ್ಲ ಸೊಲ್ಮೆಲು” ಕೇಸರಿ ಶಲ್ಯದೊಂದಿಗೆ ತುಳುನಾಡಿನ ದೈವ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಕ್ಯಾ.ಬ್ರಿಜೇಶ್ ಚೌಟ

ಪ್ರಜಾಧ್ವನಿ ನ್ಯೂಸ್

ಪ್ರಜಾಧ್ವನಿ ನ್ಯೂಸ್

Next Post
ದೆಹಲಿ: “ಮಾತೆರೆಗ್ಲ ಸೊಲ್ಮೆಲು” ಕೇಸರಿ ಶಲ್ಯದೊಂದಿಗೆ ತುಳುನಾಡಿನ ದೈವ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಕ್ಯಾ.ಬ್ರಿಜೇಶ್ ಚೌಟ

ದೆಹಲಿ: "ಮಾತೆರೆಗ್ಲ ಸೊಲ್ಮೆಲು" ಕೇಸರಿ ಶಲ್ಯದೊಂದಿಗೆ ತುಳುನಾಡಿನ ದೈವ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಕ್ಯಾ.ಬ್ರಿಜೇಶ್ ಚೌಟ

Leave a Reply Cancel reply

Your email address will not be published. Required fields are marked *

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂದರ್ಭಿಕ ಚಿತ್ರ
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

No Result
View All Result
  • ಮುಖಪುಟ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಉದ್ಯೋಗ – ಶಿಕ್ಷಣ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಿನಿಮಾ
  • ಲೈಫ್ ಸ್ಟೈಲ್

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..