ಸಂಘದ ಭದ್ರಕೋಟೆ ಎಂದೇ ಹೆಸರುವಾಸಿಯಾಗಿರುವ ಪುತ್ತೂರಿನಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅರುಣ್ ಪುತ್ತಿಲ ಬಂಡಾಯದಿಂದ ಕಾಂಗ್ರೆಸ್ ಆರಾಮವಾಗಿ ಗೆದ್ದು ಬೀಗಿದರೆ. ಬಿಜೆಪಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ನಂತರದ ಬೆಳವಣಿಗೆಯಲ್ಲಿ ಪುತ್ತಿಲ ಪರಿವಾರ ಘೋಷಣೆ ಮಾಡಿ ಗ್ರಾಮ ಪಂಚಾಯತ್, ನಗರಸಭೆಯ ಉಪ ಚುನಾವಣೆಯಲ್ಲಿ ಬಂಡಾಯವಾಗಿ ಅರುಣ್ ಪುತ್ತಿಲ ತಂಡದಿಂದ ಅಭ್ಯರ್ಥಿಗಳು ಸ್ಪರ್ಧಿಸಿದ್ದರು ಗ್ರಾಮ ಪಂಚಾಯತ್ ಉಪ ಚುನಾವಣೆಯಲ್ಲಿ ಆರ್ಯಾಪು ನಲ್ಲಿ ಗೆದ್ದು ಬೀಗಿದರೆ,ನಿಡ್ಳಲ್ಲಿ ಪಂಚಾಯತ್ ಸೋತು ಕಾಂಗ್ರೆಸ್ ಗೆದ್ದರೆ, ನಗರ ಸಭೆಯ ಎರಡು ಸ್ಥಾನಕ್ಕೆ ಸ್ಪರ್ಧಿಸಿದರು ಒಂದು ಬಿಜೆಪಿ ಒಂದು ಕಾಂಗ್ರೆಸ್ ಗೆದ್ದರೆ ಪುತ್ತಿಲ ತಂಡಕ್ಕೆ ಸೋಲಾಯಿತು.
ನಂತರದ ಬೆಳವಣಿಗೆಯಲ್ಲಿ ಸಾಮಾಜಿಕ ಕೆಲಸದಲ್ಲಿ ಕೆಲಸ ಮಾಡಿಕೊಂಡು ಸಹಾಯಹಸ್ತ ನೀಡುವಲ್ಲಿ ಪುತ್ತಿಲ ಪರಿವಾರ ಮುಂದುವರೆದರೆ ಕೊನೆಯದಾಗಿ ಲೋಕಸಭಾ ಚುನಾವಣೆಯಲ್ಲಿ ನಳೀನ್ ಕುಮಾರ್ ಸ್ಪರ್ಧಿಸಿದರೆ ಪುತ್ತಿಲ ಸ್ಪರ್ಧೆ ಅಂತಿಮ ಎಂಬುದಾಗಿ ಪುತ್ತಿಲ ಪರಿವಾರ ಅಧ್ಯಕ್ಷ ಪ್ರಸನ್ನ ಮಾರ್ತ ಘೋಷಣೆ ಮಾಡಿದ್ದರು ಕೊನೆಯದಾಗಿ ದಕ್ಷಿಣ ಕನ್ನಡಕ್ಕೆ ಅಭ್ಯರ್ಥಿಯಾಗಿ ಹೊಸ ಮುಖ, ದೇಶ ಸೇವೆ ಮಾಡಿದ ಶಿಸ್ತಿನ ಸಿಪಾಯಿ ಸಾಮಾನ್ಯ ಕಾರ್ಯಕರ್ತ ಕ್ಯಾಪ್ಟನ್ ಬ್ರಿಜೇಶ್ ಚೌಟ ಘೋಷಣೆ ಮಾಡಿದಾಗ ಬಿಜೆಪಿ ಜೊತೆ ಸೇರಿ ಯಾವುದೇ ಜವಾಬ್ದಾರಿಯಾಗಲಿ ಹುದ್ದೆಯ ಫಲಾಪೇಕ್ಷೆ ಇಲ್ಲ ಎಂದು ತಾವೇ ಘೋಷಣೆ ಮಾಡಿ ಅರುಣ್ ಪುತ್ತಿಲ ತಂಡ ಸೇರಿದರು.
ಹಿಂದುತ್ವದ ಭದ್ರಕೋಟೆಯಲ್ಲಿ ಹೊಸ ಮುಖ ಕ್ಯಾಪ್ಟನ್ ಸ್ವಂತ ವರ್ಚಸ್ಸು ಮತ್ತು ಮೋದಿಯವರ ನಾಯಕತ್ವಕ್ಕೆ ಬಿಜೆಪಿ ಗೆದ್ದು ಬೀಗಿದರು. ಎಲ್ಲಾ ಮಂಡಲಗಳ ಅಧ್ಯಕ್ಷ ಪದಾಧಿಕಾರಿಗಳ ಘೋಷಣೆಯಾಗಿತ್ತದಾರು, ಕೆಲವೊಂದು ಕಡೆ ಗೊಂದಲವಾಗಿದ್ದ ಮಂಡಲ ಸಮಿತಿ ಮತ್ತೆ ಸರಿಯಾಗಿ ನಡೆಯಿತು.
ಆದರೆ ಪುತ್ತೂರು ಮಂಡಲ ಬಾಕಿ ಉಳಿದಿತ್ತಾದರು ಒಂದು ಬಾರಿ ಮಾತುಕತೆಯ ಸಭೆಯನ್ನು ಕರೆದು ತಿಂಗಳದರು ಘೋಷಣೆಯಾಗಿರಲಿಲ್ಲ. ಆದರೆ ಕೊನೆಯದಾಗಿ ಇಂದು ನೂತನ ಜವಾಬ್ದಾರಿಯಲ್ಲಿ ನಗರ ಮಂಡಲಕ್ಕೆ ಅಧ್ಯಕ್ಷರಾಗಿ ಶಿವಕುಮಾರ್ ಕಲ್ಲಿಮಾರ್,ಪ್ರಧಾನ ಕಾರ್ಯದರ್ಶಿಗಳಾಗಿ ನಾಗೇಶ್ ಪ್ರಭು,ಅನಿಲ್ ತೆಂಕಿಲ.

ಗ್ರಾಮಾಂತರ ಮಂಡಲದ ಅಧ್ಯಕ್ಷರಾಗಿ ದಯಾನಂದ ಶೆಟ್ಟಿ ಉಜಿರೆಮಾರ್, ಪ್ರಧಾನ ಕಾರ್ಯದರ್ಶಿಗಳಾಗಿ ಉಮೇಶ್ ಗೌಡ,ಪ್ರಶಾಂತ ನೆಕ್ಕಿಲಾಡಿ ನಿಯುಕ್ತಿಗೊಳಿಸಿ ಸತೀಶ್ ಕುಂಪಲ ಆದೇಶ ಹೊರಡಿಸಿದ್ದಾರೆ.
ಬಹುದೊಡ್ಡ ಜವಾಬ್ದಾರಿ ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷರನ್ನಾಗಿ ಪುತ್ತಿಲ ಪರಿವಾರ ಅಧ್ಯಕ್ಷರಾದ ಶ್ರೀ ಪ್ರಸನ್ನ ಕುಮಾರ್ ಮಾರ್ತ ಅವರಿಗೆ ನೀಡಿಲಾಗಿದ್ದು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡು ಪಕ್ಷ ಬಲವರ್ಧನೆಯಾಗಲಿದೆ ಎಂದು ತಿಳಿಸಿದ್ದಾರೆ. ನಿಯುಕ್ತಿಗೊಳಿಸಿ ಸತೀಶ್ ಕುಂಪಲ ಆದೇಶ ಹೊರಡಿಸಿದ್ದಾರೆ.