• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ರಾತ್ರೋರಾತ್ರಿ ದಿಢೀರ್‌ ಶ್ರೀಮಂತರಾಗುವ ಕನಸು ನನಸು ಮಾಡಿಕೊಳ್ಳುವ ಮುನ್ನ ಇರಲಿ ಎಚ್ಚರ..!

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ರಾತ್ರೋರಾತ್ರಿ ದಿಢೀರ್‌ ಶ್ರೀಮಂತರಾಗುವ ಕನಸು ನನಸು ಮಾಡಿಕೊಳ್ಳುವ ಮುನ್ನ ಇರಲಿ ಎಚ್ಚರ..!

November 3, 2024
ಬಂದಾರು :ಮಾ.11 ಬಂದಾರು ಗ್ರಾಮ ಮೈರೋಳ್ತಡ್ಕ ಸರಕಾರಿ ಉನ್ನತೀಕರಿಸಿದ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಗೆ  ಅಂಡೆಕೇರಿ ಬದ್ರಿಯಾ ಜುಮಾ ಮಸೀದಿ ಯವರಿಂದ  ಶುದ್ಧ ನೀರಿನ ಘಟಕದ ಕೊಡುಗೆ

ಬಂದಾರು :ಮಾ.11 ಬಂದಾರು ಗ್ರಾಮ ಮೈರೋಳ್ತಡ್ಕ ಸರಕಾರಿ ಉನ್ನತೀಕರಿಸಿದ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಗೆ ಅಂಡೆಕೇರಿ ಬದ್ರಿಯಾ ಜುಮಾ ಮಸೀದಿ ಯವರಿಂದ ಶುದ್ಧ ನೀರಿನ ಘಟಕದ ಕೊಡುಗೆ

March 12, 2026
ದೇವಸ್ಥಾನಗಳ ಅನ್ನಪ್ರಸಾದಕ್ಕೂ ಗ್ಯಾಸ್ ಕೊರತೆ- ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಟ್ಟಿಗೆ ಬಳಸಿ ಒಲೆಯಲ್ಲಿ ಅಡುಗೆ

ದೇವಸ್ಥಾನಗಳ ಅನ್ನಪ್ರಸಾದಕ್ಕೂ ಗ್ಯಾಸ್ ಕೊರತೆ- ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಟ್ಟಿಗೆ ಬಳಸಿ ಒಲೆಯಲ್ಲಿ ಅಡುಗೆ

March 12, 2026
LPG ಸಂಕಷ್ಟದಿಂದಲ್ಲ-ಅದಾನಿ ಮತ್ತು ಎಪ್‌ಸ್ಟೀನ್ ಪ್ರಕರಣಗಳಿಂದ ಪ್ರಧಾನಿ ಮೋದಿ ‘ಪ್ಯಾನಿಕ್’ ಆಗಿದ್ದಾರೆ : ರಾಹುಲ್ ಗಾಂಧಿ

LPG ಸಂಕಷ್ಟದಿಂದಲ್ಲ-ಅದಾನಿ ಮತ್ತು ಎಪ್‌ಸ್ಟೀನ್ ಪ್ರಕರಣಗಳಿಂದ ಪ್ರಧಾನಿ ಮೋದಿ ‘ಪ್ಯಾನಿಕ್’ ಆಗಿದ್ದಾರೆ : ರಾಹುಲ್ ಗಾಂಧಿ

March 12, 2026
ಮಧ್ಯಪ್ರಾಚ್ಯ ರಾಷ್ಟ್ರಗಳ ನಡುವಿನ ಯುದ್ಧದಿಂದಾಗಿ ದೇಶೀಯ ಮಾರುಕಟ್ಟೆಯಲ್ಲಿ ಮೊಟ್ಟೆ ದರ ದಿಢೀರ್‌ ಕುಸಿತ

ಮಧ್ಯಪ್ರಾಚ್ಯ ರಾಷ್ಟ್ರಗಳ ನಡುವಿನ ಯುದ್ಧದಿಂದಾಗಿ ದೇಶೀಯ ಮಾರುಕಟ್ಟೆಯಲ್ಲಿ ಮೊಟ್ಟೆ ದರ ದಿಢೀರ್‌ ಕುಸಿತ

March 12, 2026
300 ಹಾಸಿಗೆಗಳ ಸರಕಾರಿ ಆಸ್ಪತ್ರೆಯನ್ನು ಸೇಡಿಯಾಪಿನಲ್ಲೇ ಆರಂಭಿಸಲು ಸರಕಾರ ದಿಟ್ಟ ಹೆಜ್ಜೆ : ಪತ್ರಿಕಾಗೋಷ್ಟಿಯಲ್ಲಿ  ಜಯಪ್ರಕಾಶ್ ಬದಿನಾರು

300 ಹಾಸಿಗೆಗಳ ಸರಕಾರಿ ಆಸ್ಪತ್ರೆಯನ್ನು ಸೇಡಿಯಾಪಿನಲ್ಲೇ ಆರಂಭಿಸಲು ಸರಕಾರ ದಿಟ್ಟ ಹೆಜ್ಜೆ : ಪತ್ರಿಕಾಗೋಷ್ಟಿಯಲ್ಲಿ ಜಯಪ್ರಕಾಶ್ ಬದಿನಾರು

March 12, 2026
ಏಪ್ರಿಲ್ 10ರಿಂದ 20ರವರೆಗೆ ಇತಿಹಾಸ ಪ್ರಸಿದ್ದ ಹತ್ತೂರ ಒಡೆಯ ಪುತ್ತೂರ ಮಹಾಲಿಂಗೇಶ್ವರ ವಿಜೃಂಭಣೆಯ ದೇವರ ಜಾತ್ರೆಯ ಸಂಭ್ರಮ

ಏಪ್ರಿಲ್ 10ರಿಂದ 20ರವರೆಗೆ ಇತಿಹಾಸ ಪ್ರಸಿದ್ದ ಹತ್ತೂರ ಒಡೆಯ ಪುತ್ತೂರ ಮಹಾಲಿಂಗೇಶ್ವರ ವಿಜೃಂಭಣೆಯ ದೇವರ ಜಾತ್ರೆಯ ಸಂಭ್ರಮ

March 11, 2026
ಅನಾರೋಗ್ಯದಿಂದ ಬಳಲುತ್ತಿರುವ ಇಬ್ಬರು ವ್ಯಕ್ತಿಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 5 ಲಕ್ಷ ಮಂಜೂರು – ಬೆಂಕಿ ಅಕಸ್ಮಿಕದಿಂದ ಅಂಗಡಿ ನಾಶ 5 ಲಕ್ಷ ರೂ ಪರಿಹಾರ ಬಿಡುಗಡೆ

ಅನಾರೋಗ್ಯದಿಂದ ಬಳಲುತ್ತಿರುವ ಇಬ್ಬರು ವ್ಯಕ್ತಿಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 5 ಲಕ್ಷ ಮಂಜೂರು – ಬೆಂಕಿ ಅಕಸ್ಮಿಕದಿಂದ ಅಂಗಡಿ ನಾಶ 5 ಲಕ್ಷ ರೂ ಪರಿಹಾರ ಬಿಡುಗಡೆ

March 11, 2026
ಪುತ್ತೂರು: ನಿಂದನೆ, ಜೀವ ಬೆದರಿಕೆ ಆರೋಪ – ಎರಡು ಪ್ರತ್ಯೇಕ ಪ್ರಕರಣ ದಾಖಲು

ಪುತ್ತೂರು: ನಿಂದನೆ, ಜೀವ ಬೆದರಿಕೆ ಆರೋಪ – ಎರಡು ಪ್ರತ್ಯೇಕ ಪ್ರಕರಣ ದಾಖಲು

March 11, 2026
ಹೊಸ ಪಕ್ಷ ಕಟ್ತನಿ, ಮುಂದಿನ ಬಾರಿ ನಾನೇ ಸಿಎಂ -ಯತ್ನಾಳ್

ಹೊಸ ಪಕ್ಷ ಕಟ್ತನಿ, ಮುಂದಿನ ಬಾರಿ ನಾನೇ ಸಿಎಂ -ಯತ್ನಾಳ್

March 9, 2026
ಪುತ್ತೂರಿನ ಹೃದಯ ಭಾಗದಲ್ಲಿರುವ ಸರಕಾರಿ ಆಸ್ಪತ್ರೆ ಸೇಡಿಯಾಪಿಗೆ ಸ್ಥಳಾಂತರ ಬೇಡ!! ಆರೋಗ್ಯ ರಕ್ಷಾ ಸಮಿತಿಯ ನಿಕಟಪೂರ್ವ ಸದಸ್ಯರಿಂದ ಪತ್ರಿಕಾಗೋಷ್ಠಿ

ಪುತ್ತೂರಿನ ಹೃದಯ ಭಾಗದಲ್ಲಿರುವ ಸರಕಾರಿ ಆಸ್ಪತ್ರೆ ಸೇಡಿಯಾಪಿಗೆ ಸ್ಥಳಾಂತರ ಬೇಡ!! ಆರೋಗ್ಯ ರಕ್ಷಾ ಸಮಿತಿಯ ನಿಕಟಪೂರ್ವ ಸದಸ್ಯರಿಂದ ಪತ್ರಿಕಾಗೋಷ್ಠಿ

March 11, 2026
ಉಪ್ಪಿನಂಗಡಿ ಸೇತುವೆ ಬಳಿ ರಿಕ್ಷಾ ಮತ್ತು ಕಾರ್ ಅಪಘಾತ ಮಗು ಗಂಭೀರ

ಉಪ್ಪಿನಂಗಡಿ ಸೇತುವೆ ಬಳಿ ರಿಕ್ಷಾ ಮತ್ತು ಕಾರ್ ಅಪಘಾತ ಮಗು ಗಂಭೀರ

March 11, 2026
ಮಂತ್ರಾಳಯಮ್ ಪರಿಮಳ ಪ್ರಶಸ್ತಿ 2026ಕ್ಕೆ ಭಾಜನರಾದ ಶಾಸಕರಾದ ಶ್ರೀ ಹರೀಶ್ ಪೂಂಜವರನ್ನು ಭಾಜಪಾ ಬೆಳ್ತಂಗಡಿ ಮಂಡಲದ ವತಿಯಿಂದ ಗೌರವಿಸಲಾಯಿತು

ಮಂತ್ರಾಳಯಮ್ ಪರಿಮಳ ಪ್ರಶಸ್ತಿ 2026ಕ್ಕೆ ಭಾಜನರಾದ ಶಾಸಕರಾದ ಶ್ರೀ ಹರೀಶ್ ಪೂಂಜವರನ್ನು ಭಾಜಪಾ ಬೆಳ್ತಂಗಡಿ ಮಂಡಲದ ವತಿಯಿಂದ ಗೌರವಿಸಲಾಯಿತು

March 9, 2026
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Thursday, March 12, 2026
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    ಬಂದಾರು :ಮಾ.11 ಬಂದಾರು ಗ್ರಾಮ ಮೈರೋಳ್ತಡ್ಕ ಸರಕಾರಿ ಉನ್ನತೀಕರಿಸಿದ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಗೆ  ಅಂಡೆಕೇರಿ ಬದ್ರಿಯಾ ಜುಮಾ ಮಸೀದಿ ಯವರಿಂದ  ಶುದ್ಧ ನೀರಿನ ಘಟಕದ ಕೊಡುಗೆ

    ಬಂದಾರು :ಮಾ.11 ಬಂದಾರು ಗ್ರಾಮ ಮೈರೋಳ್ತಡ್ಕ ಸರಕಾರಿ ಉನ್ನತೀಕರಿಸಿದ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಗೆ ಅಂಡೆಕೇರಿ ಬದ್ರಿಯಾ ಜುಮಾ ಮಸೀದಿ ಯವರಿಂದ ಶುದ್ಧ ನೀರಿನ ಘಟಕದ ಕೊಡುಗೆ

    ದೇವಸ್ಥಾನಗಳ ಅನ್ನಪ್ರಸಾದಕ್ಕೂ ಗ್ಯಾಸ್ ಕೊರತೆ- ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಟ್ಟಿಗೆ ಬಳಸಿ ಒಲೆಯಲ್ಲಿ ಅಡುಗೆ

    ದೇವಸ್ಥಾನಗಳ ಅನ್ನಪ್ರಸಾದಕ್ಕೂ ಗ್ಯಾಸ್ ಕೊರತೆ- ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಟ್ಟಿಗೆ ಬಳಸಿ ಒಲೆಯಲ್ಲಿ ಅಡುಗೆ

    ಮಧ್ಯಪ್ರಾಚ್ಯ ರಾಷ್ಟ್ರಗಳ ನಡುವಿನ ಯುದ್ಧದಿಂದಾಗಿ ದೇಶೀಯ ಮಾರುಕಟ್ಟೆಯಲ್ಲಿ ಮೊಟ್ಟೆ ದರ ದಿಢೀರ್‌ ಕುಸಿತ

    ಮಧ್ಯಪ್ರಾಚ್ಯ ರಾಷ್ಟ್ರಗಳ ನಡುವಿನ ಯುದ್ಧದಿಂದಾಗಿ ದೇಶೀಯ ಮಾರುಕಟ್ಟೆಯಲ್ಲಿ ಮೊಟ್ಟೆ ದರ ದಿಢೀರ್‌ ಕುಸಿತ

    300 ಹಾಸಿಗೆಗಳ ಸರಕಾರಿ ಆಸ್ಪತ್ರೆಯನ್ನು ಸೇಡಿಯಾಪಿನಲ್ಲೇ ಆರಂಭಿಸಲು ಸರಕಾರ ದಿಟ್ಟ ಹೆಜ್ಜೆ : ಪತ್ರಿಕಾಗೋಷ್ಟಿಯಲ್ಲಿ  ಜಯಪ್ರಕಾಶ್ ಬದಿನಾರು

    300 ಹಾಸಿಗೆಗಳ ಸರಕಾರಿ ಆಸ್ಪತ್ರೆಯನ್ನು ಸೇಡಿಯಾಪಿನಲ್ಲೇ ಆರಂಭಿಸಲು ಸರಕಾರ ದಿಟ್ಟ ಹೆಜ್ಜೆ : ಪತ್ರಿಕಾಗೋಷ್ಟಿಯಲ್ಲಿ ಜಯಪ್ರಕಾಶ್ ಬದಿನಾರು

    ಏಪ್ರಿಲ್ 10ರಿಂದ 20ರವರೆಗೆ ಇತಿಹಾಸ ಪ್ರಸಿದ್ದ ಹತ್ತೂರ ಒಡೆಯ ಪುತ್ತೂರ ಮಹಾಲಿಂಗೇಶ್ವರ ವಿಜೃಂಭಣೆಯ ದೇವರ ಜಾತ್ರೆಯ ಸಂಭ್ರಮ

    ಏಪ್ರಿಲ್ 10ರಿಂದ 20ರವರೆಗೆ ಇತಿಹಾಸ ಪ್ರಸಿದ್ದ ಹತ್ತೂರ ಒಡೆಯ ಪುತ್ತೂರ ಮಹಾಲಿಂಗೇಶ್ವರ ವಿಜೃಂಭಣೆಯ ದೇವರ ಜಾತ್ರೆಯ ಸಂಭ್ರಮ

    ಅನಾರೋಗ್ಯದಿಂದ ಬಳಲುತ್ತಿರುವ ಇಬ್ಬರು ವ್ಯಕ್ತಿಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 5 ಲಕ್ಷ ಮಂಜೂರು – ಬೆಂಕಿ ಅಕಸ್ಮಿಕದಿಂದ ಅಂಗಡಿ ನಾಶ 5 ಲಕ್ಷ ರೂ ಪರಿಹಾರ ಬಿಡುಗಡೆ

    ಅನಾರೋಗ್ಯದಿಂದ ಬಳಲುತ್ತಿರುವ ಇಬ್ಬರು ವ್ಯಕ್ತಿಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 5 ಲಕ್ಷ ಮಂಜೂರು – ಬೆಂಕಿ ಅಕಸ್ಮಿಕದಿಂದ ಅಂಗಡಿ ನಾಶ 5 ಲಕ್ಷ ರೂ ಪರಿಹಾರ ಬಿಡುಗಡೆ

    ಪುತ್ತೂರು: ನಿಂದನೆ, ಜೀವ ಬೆದರಿಕೆ ಆರೋಪ – ಎರಡು ಪ್ರತ್ಯೇಕ ಪ್ರಕರಣ ದಾಖಲು

    ಪುತ್ತೂರು: ನಿಂದನೆ, ಜೀವ ಬೆದರಿಕೆ ಆರೋಪ – ಎರಡು ಪ್ರತ್ಯೇಕ ಪ್ರಕರಣ ದಾಖಲು

    ಪುತ್ತೂರಿನ ಹೃದಯ ಭಾಗದಲ್ಲಿರುವ ಸರಕಾರಿ ಆಸ್ಪತ್ರೆ ಸೇಡಿಯಾಪಿಗೆ ಸ್ಥಳಾಂತರ ಬೇಡ!! ಆರೋಗ್ಯ ರಕ್ಷಾ ಸಮಿತಿಯ ನಿಕಟಪೂರ್ವ ಸದಸ್ಯರಿಂದ ಪತ್ರಿಕಾಗೋಷ್ಠಿ

    ಪುತ್ತೂರಿನ ಹೃದಯ ಭಾಗದಲ್ಲಿರುವ ಸರಕಾರಿ ಆಸ್ಪತ್ರೆ ಸೇಡಿಯಾಪಿಗೆ ಸ್ಥಳಾಂತರ ಬೇಡ!! ಆರೋಗ್ಯ ರಕ್ಷಾ ಸಮಿತಿಯ ನಿಕಟಪೂರ್ವ ಸದಸ್ಯರಿಂದ ಪತ್ರಿಕಾಗೋಷ್ಠಿ

    ಉಪ್ಪಿನಂಗಡಿ ಸೇತುವೆ ಬಳಿ ರಿಕ್ಷಾ ಮತ್ತು ಕಾರ್ ಅಪಘಾತ ಮಗು ಗಂಭೀರ

    ಉಪ್ಪಿನಂಗಡಿ ಸೇತುವೆ ಬಳಿ ರಿಕ್ಷಾ ಮತ್ತು ಕಾರ್ ಅಪಘಾತ ಮಗು ಗಂಭೀರ

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ಅಂತರರಾಜ್ಯ

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ರಾತ್ರೋರಾತ್ರಿ ದಿಢೀರ್‌ ಶ್ರೀಮಂತರಾಗುವ ಕನಸು ನನಸು ಮಾಡಿಕೊಳ್ಳುವ ಮುನ್ನ ಇರಲಿ ಎಚ್ಚರ..!

by ಪ್ರಜಾಧ್ವನಿ ನ್ಯೂಸ್
November 3, 2024
in ಅಂತರರಾಜ್ಯ, ಕ್ರೈಮ್, ಬೆಂಗಳೂರು, ಮಂಗಳೂರು, ಮೈಸೂರು
0
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ರಾತ್ರೋರಾತ್ರಿ ದಿಢೀರ್‌ ಶ್ರೀಮಂತರಾಗುವ ಕನಸು ನನಸು ಮಾಡಿಕೊಳ್ಳುವ ಮುನ್ನ ಇರಲಿ ಎಚ್ಚರ..!
68
SHARES
195
VIEWS
ShareShareShare

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ರಾತ್ರೋರಾತ್ರಿ ದಿಢೀರ್‌ ಶ್ರೀಮಂತರಾಗುವ ಕನಸು ನನಸು ಮಾಡಿಕೊಳ್ಳುವ ಮುನ್ನ ಇರಲಿ ಎಚ್ಚರ..! ಏಕೆಂದರೆ, ಸೈಬರ್‌ ವಂಚಕರು ಹೂಡಿಕೆ ತಜ್ಞರ ಹೆಸರಲ್ಲಿ ಕೋಟ್ಯಂತರ ರೂ. ಲಪಟಾಯಿಸುತ್ತಿದ್ದಾರೆ. ಈ ವಂಚನೆ ಜಾಲಕ್ಕೆ ಬಿದ್ದವರು ಪ್ರತಿನಿತ್ಯ ನಗರದ ಸೈಬರ್‌ ಠಾಣೆಗಳ ಮೆಟ್ಟಿಲೇರುತ್ತಿದ್ದಾರೆ.

camera center ad

ಜಾಹೀರಾತು

ಹೌದು, ಷೇರು ಮಾರುಕಟ್ಟೆ ಲಾಭದ ‘ಅಸ್ತ್ರ’ವನ್ನೇ ನಾಗರಿಕರ ಮೇಲೆ ಪ್ರಯೋಗಿಸುತ್ತಿರುವ ಸೈಬರ್‌ ವಂಚಕರು, ಹೂಡಿಕೆ ಸಲಹೆ ಹಾಗೂ ದುಪ್ಪಟ್ಟು ಲಾಭದ ಆಮಿಷವೊಡ್ಡಿ ಸಾಮಾಜಿಕ ಜಾಲತಾಣಗಳ ಮೂಲಕ ಬಲೆ ಬೀಸುತ್ತಿದ್ದಾರೆ. ಆಮಿಷಕ್ಕೆ ಸಿಲುಕಿದ ಐಟಿ ಉದ್ಯೋಗಿಗಳು, ಖಾಸಗಿ ಕಂಪನಿಗಳ ನೌಕರರು, ಉದ್ಯಮಿಗಳು ಹಾಗೂ ಮಹಿಳೆಯರ ಬ್ಯಾಂಕ್‌ ಖಾತೆಗಳನ್ನು ಬರಿದು ಮಾಡುತ್ತಿದ್ದಾರೆ. ಪರಿಣಾಮ ಕಳೆದ 9 ತಿಂಗಳಲ್ಲಿ ಟ್ರೇಡಿಂಗ್‌ ಹೆಸರಿನಲ್ಲಿ ಮೋಸ ಮಾಡಿದ ಪ್ರಕರಣಗಳೇ ನಗರದಲ್ಲಿ ಒಂದು ಸಾವಿರಕ್ಕೂ ಅಧಿಕ ಕೇಸ್‌ಗಳು ವರದಿಯಾಗಿದ್ದು, 100 ಕೋಟಿ ರೂ.ಗಳಿಗೂ ಹೆಚ್ಚು ವಂಚನೆಯಾಗಿದೆ ಎಂದು ನಗರ ಪೊಲೀಸರು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳನ್ನೇ ಕೇಂದ್ರ ಸ್ಥಾನ ಮಾಡಿಕೊಂಡಿರುವ ಸೈಬರ್‌ ವಂಚಕರು ವಾಟ್ಸಾಪ್‌, ಟೆಲಿಗ್ರಾಂ, ಇನ್‌ಸ್ಟಾಗ್ರಾಂಗಳಲ್ಲಿ ಆಕ್ಟೀವ್‌ ಆಗಿದ್ದಾರೆ. ಟ್ರೇಡಿಂಗ್‌ ಕುರಿತ ಸಲಹೆ ನೀಡುವುದಾಗಿ ಆನ್‌ಲೈನ್‌ ಲಿಂಕ್‌ಗಳನ್ನು ರಾಂಡಮ್‌ ಆಗಿ ಕಳಿಸುತ್ತಾರೆ. ಕ್ಲಿಕ್‌ ಮಾಡಿದವರು ವಾಟ್ಸಾಪ್‌ ಗ್ರೂಪ್‌ಗೆ ಸೇರ್ಪಡೆಗೊಳ್ಳುತ್ತಾರೆ. ಈ ಗ್ರೂಪ್‌ನಲ್ಲಿ ಟ್ರೇಡಿಂಗ್‌, ಲಾಭ ಮತ್ತಿತರ ವಿಚಾರಗಳ ಕುರಿತ ಚರ್ಚೆ, ವಿಡಿಯೊಗಳ ಜತೆಗೆ ಲಾಭ ಗಳಿಸಿದವರ ಸಕ್ಸೆಸ್‌ ಸ್ಟೋರಿಗಳ ಕುರಿತು ಹೆಚ್ಚು ಚರ್ಚೆ ನಡೆಯಲಿವೆ. ಈ ನಕಲಿ ಗ್ರೂಪ್‌ನ ಚರ್ಚೆಗಳನ್ನು ನಂಬಿ ಹೂಡಿಕೆ ಆಸಕ್ತಿ ತೋರಿಸಿದವರಿಗೆ ಖೆಡ್ಡಾ ತೋಡುವ ವಂಚಕರು, ನಕಲಿ ಷೇರು ಮಾರುಕಟ್ಟೆ ಕಂಪನಿಗಳ ಹೆಸರು ಹೇಳಿ ಒಂದು ಲಕ್ಷ ರೂ.ಗಳಿಂದ 1 ಕೋಟಿ ರೂ.ವರೆಗೆ ಹೂಡಿಕೆ ಮಾಡಿಸಿ ವಂಚಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಹೂಡಿಕೆಯಲ್ಲಿ ಲಾಭ ಗಳಿಸುವ ಆಸೆಯಿಂದ ಬ್ಯಾಂಕ್‌ ಖಾತೆಯಲ್ಲಿ ಕೂಡಿಟ್ಟ ಹಣವನ್ನು ವಂಚಕರು ಹೇಳಿದಂತೆ ಹಂತ- ಹಂತವಾಗಿ ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸುತ್ತಾರೆ. ಎಐ ತಂತ್ರಜ್ಞಾನ ಬಳಸುವ ವಂಚಕರು ಹೂಡಿಕೆ ಹಣಕ್ಕೆ ಲಾಭ ಬಂದಿದೆ ಎಂದು ಸುಳ್ಳೇ ಸುಳ್ಳು ಬ್ಯಾಲೆನ್ಸ್‌ ಶೀಟ್‌ ತೋರಿಸುತ್ತಾರೆ. ಇದನ್ನು ನಿಜ ಎಂದು ನಂಬುವ ಅಮಾಯಕರು, ಮತ್ತಷ್ಟು ಹಣ ವರ್ಗಾವಣೆ ಮಾಡುತ್ತಾರೆ. ಅಂತಿಮವಾಗಿ ಹಣ ಖಾಲಿಯಾದ ಬಳಿಕ ತಾವೂ ಹೂಡಿಕೆ ಮಾಡಿದ ಹಣ ಡ್ರಾ ಮಾಡಲು ಮುಂದಾದಾಗ ವಂಚಕರು ಮತ್ತಷ್ಟು ಹೂಡಿಕೆ ಮಾಡಿದರೆ ಮಾತ್ರ ಡ್ರಾ ಮಾಡಬಹುದು ಎಂಬ ಷರತ್ತು ವಿಧಿಸುತ್ತಾರೆ. ಆ ಬಳಿಕವಷ್ಟೇ ತಾವು ಮೋಸ ಹೋಗಿರುವುದು ಗೊತ್ತಾಗಿ ಠಾಣೆಗಳಿಗೆ ದೂರು ನೀಡುತ್ತಿದ್ದಾರೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದರು.

ತಂತ್ರಜ್ಞಾನವನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್‌ ವಂಚಕರು ಷೇರುಮಾರುಕಟ್ಟೆ ಅಧಿಕೃತ ಕಂಪನಿಗಳ ಹೆಸರಲ್ಲಿ ನಕಲಿ ವೆಬ್‌ಸೈಟ್‌, ಆ್ಯಪ್‌ಗಳನ್ನು ಸೃಷ್ಟಿಸಿ ವಂಚನೆ ಮಾಡುತ್ತಿದ್ದಾರೆ. ಟ್ರೇಡಿಂಗ್‌ ಕುರಿತ ಆಸೆ ಹಾಗೂ ಜ್ಞಾನದ ಕೊರತೆಯಿಂದ ವಂಚಕರ ಗಾಳಕ್ಕೆ ಸಿಲುಕುತ್ತಿರುವ ಜನರು ಹಣ ಕಳೆದುಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಸೈಬರ್‌ ತಜ್ಞ ಡಾ. ಹರ್ಷ.

Muliya

ಜಾಹೀರಾತು

ಷೇರು ಹೂಡಿಕೆ ಕುರಿತು ಆಸಕ್ತಿ ಹೊಂದಿರುವವರು ತಾವು ಖಾತೆ ಹೊಂದಿರುವ ಬ್ಯಾಂಕ್‌ಗಳನ್ನೇ ಸಂಪರ್ಕಿಸಿ ಸಲಹೆ ಪಡೆಯಬೇಕು. ಈ ಮಾರ್ಗದಲ್ಲಿ ಹೂಡಿಕೆ ಮಾಡಿದರೆ ಅಪಾಯ ಇರುವುದಿಲ್ಲ. ಜತೆಗೆ, ಒಂದು ವೇಳೆ ಮೋಸ ಹೋದರೂ ಬ್ಯಾಂಕ್‌ ಜವಾಬ್ದಾರಿ ಇರಲಿದೆ ಎಂದು ಡಾ. ಹರ್ಷ ತಿಳಿಸುತ್ತಾರೆ.

ಸಾಮಾಜಿಕ ಜಾಲತಾಣ, ವಾಟ್ಸಾಪ್‌ ಗ್ರೂಪ್‌ಗಳಲ್ಲಿ ಲಿಂಕ್‌ ಕಳಿಸಿ ಹೂಡಿಕೆಯಲ್ಲಿ ಲಾಭ ಮಾಡಿಸಿಕೊಡುತ್ತೇವೆ ಎಂದು ಲಿಂಕ್‌ ಕಳಿಸಿದರೆ ನಂಬಲೇಬಾರದು. ಏಕೆಂದರೆ, ಈ ಲಿಂಕ್‌ಗಳು ಶೇ 99ರಷ್ಟು ವಂಚನೆ ಸಲುವಾಗಿಯೇ ಸೃಷ್ಟಿಸಲಾಗಿರುತ್ತದೆ. ಹೂಡಿಕೆ ಕುರಿತ ಆ್ಯಪ್‌ ಡೌನ್‌ಲೋಡ್‌ ಮಾಡಿ ಎಂದು ಹೇಳಿದ ಕೂಡಲೇ ಡೌನ್‌ಲೋಡ್‌ ಮಾಡಬಾರದು. ಮೊದಲಿಗೆ ಅಂತಹ ಆ್ಯಪ್‌ನ ಅಧಿಕೃತತೆ ತಿಳಿಯಬೇಕು. ಇಂಟರ್ನೆಟ್‌ ಯುಗದಲ್ಲಿ ಅಧಿಕೃತತೆ ತಿಳಿಯುವುದು ಅಸಾಧ್ಯ ಏನಲ್ಲ. ಮೊದಲಿಗೆ ಆ್ಯಪ್‌ನ ಕಚೇರಿ ಎಲ್ಲಿದೆ? ಅದರ ವಹಿವಾಟು ಯಾವ ದೇಶದಲ್ಲಿ ನಡೆಯುತ್ತಿದೆ ಎಂಬುದರ ಮಾಹಿತಿ ಪಡೆಯಬೇಕು. ಇಲ್ಲವಾದಲ್ಲಿ ವಂಚಕರ ಜಾಲಕ್ಕೆ ಸಿಲುಕಿ ಹಣ ಕಳೆದುಕೊಳ್ಳುವುದು ನಿಶ್ಚಿತ ಎಂದು ಅವರು ಹೇಳುತ್ತಾರೆ.

ashwinistudioputtur

ಜಾಹೀರಾತು

Poorna squash

ಜಾಹೀರಾತು

vishnu studio

ಜಾಹೀರಾತು

ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣಮೂರ್ತಿ, ಉದ್ಯಮಿ ಮುಖೇಶ್‌ ಅಂಬಾನಿ ಹೆಸರಿನಲ್ಲಿಸೈಬರ್‌ ವಂಚಕರು ಟ್ರೇಡಿಂಗ್‌ ಕುರಿತು ಸೃಷ್ಟಿಸಿದ್ದ ನಕಲಿ ಜಾಹೀರಾತು ನಂಬಿದ ವೃದ್ಧರೊಬ್ಬರು 19 ಲಕ್ಷ ರೂ. ಕಳೆದುಕೊಂಡಿದ್ದಾರೆ. ಈ ಕುರಿತು ಅಶೋಕ್‌ (ಹೆಸರು ಬದಲಿಸಲಾಗಿದೆ) ಬೆಂಗಳೂರು ಗ್ರಾಮಾಂತರ ಸೈಬರ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಫೇಸ್‌ಬುಕ್‌ನಲ್ಲಿ ನಾರಾಯಣಮೂರ್ತಿ ಹಾಗೂ ಅಂಬಾನಿ ಅವರು ಹೂಡಿಕೆ ಕಂಪನಿಯೊಂದರ ಕುರಿತು ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ನೋಡಿದ್ದರು. ಬಳಿಕ ವಿಡಿಯೋ ಆಧರಿಸಿ ವಂಚಕರು ಕಳಿಸಿದ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡಿದ್ದರು. ವಂಚಕರು ತಿಳಿಸಿದಂತೆ ಹಂತ- ಹಂತವಾಗಿ 19 ಲಕ್ಷ ರೂ.ವರ್ಗಾಯಿಸಿದ್ದಾರೆ. ಅಂತಿಮವಾಗಿ ತಾವು ಮೋಸ ಹೋಗಿರುವುದು ಗೊತ್ತಾಗಿ ದೂರು ನೀಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

 

SendShare27Share
Previous Post

ವಿಮಾನದಲ್ಲಿ ಬೆಂಗಳೂರಿಗೆ ಬಂದು ಕಾರು ಕದಿಯುವ ಖದೀಮರ ಬಂಧನ

Next Post

ಪುತ್ತೂರು; ತಲೆಬುರುಡೆ ಪತ್ತೆ – ಮಹಿಳೆಯೋರ್ವರು ಕುಂಬ್ರದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಶಂಕೆ…!?

ಪ್ರಜಾಧ್ವನಿ ನ್ಯೂಸ್

ಪ್ರಜಾಧ್ವನಿ ನ್ಯೂಸ್

Next Post
ಪುತ್ತೂರು; ತಲೆಬುರುಡೆ ಪತ್ತೆ – ಮಹಿಳೆಯೋರ್ವರು ಕುಂಬ್ರದಲ್ಲಿ  ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಶಂಕೆ…!?

ಪುತ್ತೂರು; ತಲೆಬುರುಡೆ ಪತ್ತೆ – ಮಹಿಳೆಯೋರ್ವರು ಕುಂಬ್ರದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಶಂಕೆ…!?

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂದರ್ಭಿಕ ಚಿತ್ರ
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

No Result
View All Result
  • ಮುಖಪುಟ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಉದ್ಯೋಗ – ಶಿಕ್ಷಣ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಿನಿಮಾ
  • ಲೈಫ್ ಸ್ಟೈಲ್

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..