• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ರಾತ್ರೋರಾತ್ರಿ ದಿಢೀರ್‌ ಶ್ರೀಮಂತರಾಗುವ ಕನಸು ನನಸು ಮಾಡಿಕೊಳ್ಳುವ ಮುನ್ನ ಇರಲಿ ಎಚ್ಚರ..!

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ರಾತ್ರೋರಾತ್ರಿ ದಿಢೀರ್‌ ಶ್ರೀಮಂತರಾಗುವ ಕನಸು ನನಸು ಮಾಡಿಕೊಳ್ಳುವ ಮುನ್ನ ಇರಲಿ ಎಚ್ಚರ..!

November 3, 2024
ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ರಿ ಪುತ್ತೂರು ಹಾಗೂ ಅರುಣ ಸಾರಥಿ ಸಂಘಟನೆ ವತಿಯಿಂದ ಧನಸಹಾಯ

ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ರಿ ಪುತ್ತೂರು ಹಾಗೂ ಅರುಣ ಸಾರಥಿ ಸಂಘಟನೆ ವತಿಯಿಂದ ಧನಸಹಾಯ

April 30, 2026
ಮಾತೃಭೂಮಿ ಯುವ ವೇದಿಕೆ (ರಿ.) ಮಾಣಿಲ ಸಂಘದ ವತಿಯಿಂದ 5ನೇ ವರ್ಷದ ಉಚಿತ ಪುಸ್ತಕ ವಿತರಣೆ ಮತ್ತು ಸನ್ಮಾನ ಸಮಾರಂಭ

ಮಾತೃಭೂಮಿ ಯುವ ವೇದಿಕೆ (ರಿ.) ಮಾಣಿಲ ಸಂಘದ ವತಿಯಿಂದ 5ನೇ ವರ್ಷದ ಉಚಿತ ಪುಸ್ತಕ ವಿತರಣೆ ಮತ್ತು ಸನ್ಮಾನ ಸಮಾರಂಭ

April 30, 2026
ಮಾಣಿಲ: ಸಿರಿಯ ನದಿಗೆ ಸೇತುವೆ ನಿರ್ಮಾಣಕ್ಕೆ 20 ಕೋಟಿ ಮಂಜೂರು: ಕರ್ನಾಟಕ-ಕೇರಳ ಸಂಪರ್ಕಕೊಂಡಿಯಾಗಲಿರುವ ನೂತನ ಸೇತುವೆ- ಕೊಟ್ಟ ಮಾತನ್ನು ಉಳಿಸಿದ ಶಾಸಕ ಅಶೋಕ್ ರೈ

ಮಾಣಿಲ: ಸಿರಿಯ ನದಿಗೆ ಸೇತುವೆ ನಿರ್ಮಾಣಕ್ಕೆ 20 ಕೋಟಿ ಮಂಜೂರು: ಕರ್ನಾಟಕ-ಕೇರಳ ಸಂಪರ್ಕಕೊಂಡಿಯಾಗಲಿರುವ ನೂತನ ಸೇತುವೆ- ಕೊಟ್ಟ ಮಾತನ್ನು ಉಳಿಸಿದ ಶಾಸಕ ಅಶೋಕ್ ರೈ

April 29, 2026
ಬೆಂಗಳೂರುನಲ್ಲಿ ಮಳೆಗೆ ಆಸ್ಪತ್ರೆ ಕಾಂಪೌಂಡ್ ಕುಸಿದು ಮಕ್ಕಳು ಸೇರಿ 8 ಮಂದಿ ಸಾವು

ಬೆಂಗಳೂರುನಲ್ಲಿ ಮಳೆಗೆ ಆಸ್ಪತ್ರೆ ಕಾಂಪೌಂಡ್ ಕುಸಿದು ಮಕ್ಕಳು ಸೇರಿ 8 ಮಂದಿ ಸಾವು

April 29, 2026
ಉಪ್ಪಿನಂಗಡಿ:ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್-ಲಾರಿ ನಡುವೆ ಅಪಘಾತ : ಬೈಕ್ ಸವಾರ ಮೃತ್ಯು- ವಿದ್ಯಾರ್ಥಿನಿ ಗಂಭೀರ

ಉಪ್ಪಿನಂಗಡಿ:ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್-ಲಾರಿ ನಡುವೆ ಅಪಘಾತ : ಬೈಕ್ ಸವಾರ ಮೃತ್ಯು- ವಿದ್ಯಾರ್ಥಿನಿ ಗಂಭೀರ

April 30, 2026
ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ (ರಿ) ವತಿಯಿಂದ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 6 ನೇ ಸ್ಥಾನ ಪಡೆದ ಕು. ಪ್ರಾಪ್ತಿ ಗೌಡ ಗೆ ಸನ್ಮಾನ

ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ (ರಿ) ವತಿಯಿಂದ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 6 ನೇ ಸ್ಥಾನ ಪಡೆದ ಕು. ಪ್ರಾಪ್ತಿ ಗೌಡ ಗೆ ಸನ್ಮಾನ

April 29, 2026
ಏ.30(ನಾಳೆ ): ಮಠಂತಬೆಟ್ಟು ಶ್ರೀ ಮಹಿಷಮರ್ಧಿನಿ ದೇವಸ್ಥಾನದ ಜಾತ್ರೋತ್ಸವ

ಏ.30(ನಾಳೆ ): ಮಠಂತಬೆಟ್ಟು ಶ್ರೀ ಮಹಿಷಮರ್ಧಿನಿ ದೇವಸ್ಥಾನದ ಜಾತ್ರೋತ್ಸವ

April 29, 2026
ಪುತ್ತೂರು ಆರೋಗ್ಯದಲ್ಲಿ ಏರುಪೇರಾಗಿ ಮಹಿಳೆ ಮಹಿಳೆ ಮೃತ್ಯು

ಪುತ್ತೂರು ಆರೋಗ್ಯದಲ್ಲಿ ಏರುಪೇರಾಗಿ ಮಹಿಳೆ ಮಹಿಳೆ ಮೃತ್ಯು

April 30, 2026
ಕುರಾಯ ಶ್ರೀ ಸದಾಶಿವ ದೇವರ ವಾರ್ಷಿಕ ಜಾತ್ರೋತ್ಸವ ಪ್ರಯುಕ್ತ  ಶ್ರೀ  ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಬಯಲಾಟ

ಕುರಾಯ ಶ್ರೀ ಸದಾಶಿವ ದೇವರ ವಾರ್ಷಿಕ ಜಾತ್ರೋತ್ಸವ ಪ್ರಯುಕ್ತ ಶ್ರೀ ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಬಯಲಾಟ

April 10, 2026
ಮಹಾತೋಬಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆಗೆ ಧ್ವಜಾರೋಹಣಗೊಂಡು ಚಾಲನೆ-ಭಕ್ತಾದಿಗಳಿಂದ ಹೊರಕಾಣಿಕೆಯ ಮಹಾಪೂರ

ಮಹಾತೋಬಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆಗೆ ಧ್ವಜಾರೋಹಣಗೊಂಡು ಚಾಲನೆ-ಭಕ್ತಾದಿಗಳಿಂದ ಹೊರಕಾಣಿಕೆಯ ಮಹಾಪೂರ

April 10, 2026
ಪ್ರತಿಭಾವಂತ ಫೋಟೋಗ್ರಾಫರ್ ನೇಣು ಬಿಗಿದು ಆತ್ಮಹತ್ಯೆ..!

ಪ್ರತಿಭಾವಂತ ಫೋಟೋಗ್ರಾಫರ್ ನೇಣು ಬಿಗಿದು ಆತ್ಮಹತ್ಯೆ..!

April 6, 2026
ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ ಸುರೇಂದ್ರನ್ ಪರವಾಗಿ ವಿಧಾನ ಪರಿಷತ್ ಸದಸ್ಯ ಶ್ರೀ ಕಿಶೋರ್ ಕುಮಾರ್ ಪುತ್ತೂರು ಮನೆ ಮನೆಗೆ ತೆರಳಿ ಮತಪ್ರಚಾರ

ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ ಸುರೇಂದ್ರನ್ ಪರವಾಗಿ ವಿಧಾನ ಪರಿಷತ್ ಸದಸ್ಯ ಶ್ರೀ ಕಿಶೋರ್ ಕುಮಾರ್ ಪುತ್ತೂರು ಮನೆ ಮನೆಗೆ ತೆರಳಿ ಮತಪ್ರಚಾರ

April 6, 2026
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Friday, May 1, 2026
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ರಿ ಪುತ್ತೂರು ಹಾಗೂ ಅರುಣ ಸಾರಥಿ ಸಂಘಟನೆ ವತಿಯಿಂದ ಧನಸಹಾಯ

    ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ರಿ ಪುತ್ತೂರು ಹಾಗೂ ಅರುಣ ಸಾರಥಿ ಸಂಘಟನೆ ವತಿಯಿಂದ ಧನಸಹಾಯ

    ಮಾತೃಭೂಮಿ ಯುವ ವೇದಿಕೆ (ರಿ.) ಮಾಣಿಲ ಸಂಘದ ವತಿಯಿಂದ 5ನೇ ವರ್ಷದ ಉಚಿತ ಪುಸ್ತಕ ವಿತರಣೆ ಮತ್ತು ಸನ್ಮಾನ ಸಮಾರಂಭ

    ಮಾತೃಭೂಮಿ ಯುವ ವೇದಿಕೆ (ರಿ.) ಮಾಣಿಲ ಸಂಘದ ವತಿಯಿಂದ 5ನೇ ವರ್ಷದ ಉಚಿತ ಪುಸ್ತಕ ವಿತರಣೆ ಮತ್ತು ಸನ್ಮಾನ ಸಮಾರಂಭ

    ಮಾಣಿಲ: ಸಿರಿಯ ನದಿಗೆ ಸೇತುವೆ ನಿರ್ಮಾಣಕ್ಕೆ 20 ಕೋಟಿ ಮಂಜೂರು: ಕರ್ನಾಟಕ-ಕೇರಳ ಸಂಪರ್ಕಕೊಂಡಿಯಾಗಲಿರುವ ನೂತನ ಸೇತುವೆ- ಕೊಟ್ಟ ಮಾತನ್ನು ಉಳಿಸಿದ ಶಾಸಕ ಅಶೋಕ್ ರೈ

    ಮಾಣಿಲ: ಸಿರಿಯ ನದಿಗೆ ಸೇತುವೆ ನಿರ್ಮಾಣಕ್ಕೆ 20 ಕೋಟಿ ಮಂಜೂರು: ಕರ್ನಾಟಕ-ಕೇರಳ ಸಂಪರ್ಕಕೊಂಡಿಯಾಗಲಿರುವ ನೂತನ ಸೇತುವೆ- ಕೊಟ್ಟ ಮಾತನ್ನು ಉಳಿಸಿದ ಶಾಸಕ ಅಶೋಕ್ ರೈ

    ಉಪ್ಪಿನಂಗಡಿ:ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್-ಲಾರಿ ನಡುವೆ ಅಪಘಾತ : ಬೈಕ್ ಸವಾರ ಮೃತ್ಯು- ವಿದ್ಯಾರ್ಥಿನಿ ಗಂಭೀರ

    ಉಪ್ಪಿನಂಗಡಿ:ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್-ಲಾರಿ ನಡುವೆ ಅಪಘಾತ : ಬೈಕ್ ಸವಾರ ಮೃತ್ಯು- ವಿದ್ಯಾರ್ಥಿನಿ ಗಂಭೀರ

    ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ (ರಿ) ವತಿಯಿಂದ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 6 ನೇ ಸ್ಥಾನ ಪಡೆದ ಕು. ಪ್ರಾಪ್ತಿ ಗೌಡ ಗೆ ಸನ್ಮಾನ

    ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ (ರಿ) ವತಿಯಿಂದ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 6 ನೇ ಸ್ಥಾನ ಪಡೆದ ಕು. ಪ್ರಾಪ್ತಿ ಗೌಡ ಗೆ ಸನ್ಮಾನ

    ಏ.30(ನಾಳೆ ): ಮಠಂತಬೆಟ್ಟು ಶ್ರೀ ಮಹಿಷಮರ್ಧಿನಿ ದೇವಸ್ಥಾನದ ಜಾತ್ರೋತ್ಸವ

    ಏ.30(ನಾಳೆ ): ಮಠಂತಬೆಟ್ಟು ಶ್ರೀ ಮಹಿಷಮರ್ಧಿನಿ ದೇವಸ್ಥಾನದ ಜಾತ್ರೋತ್ಸವ

    ಪುತ್ತೂರು ಆರೋಗ್ಯದಲ್ಲಿ ಏರುಪೇರಾಗಿ ಮಹಿಳೆ ಮಹಿಳೆ ಮೃತ್ಯು

    ಪುತ್ತೂರು ಆರೋಗ್ಯದಲ್ಲಿ ಏರುಪೇರಾಗಿ ಮಹಿಳೆ ಮಹಿಳೆ ಮೃತ್ಯು

    ಕುರಾಯ ಶ್ರೀ ಸದಾಶಿವ ದೇವರ ವಾರ್ಷಿಕ ಜಾತ್ರೋತ್ಸವ ಪ್ರಯುಕ್ತ  ಶ್ರೀ  ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಬಯಲಾಟ

    ಕುರಾಯ ಶ್ರೀ ಸದಾಶಿವ ದೇವರ ವಾರ್ಷಿಕ ಜಾತ್ರೋತ್ಸವ ಪ್ರಯುಕ್ತ ಶ್ರೀ ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಬಯಲಾಟ

    ಮಹಾತೋಬಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆಗೆ ಧ್ವಜಾರೋಹಣಗೊಂಡು ಚಾಲನೆ-ಭಕ್ತಾದಿಗಳಿಂದ ಹೊರಕಾಣಿಕೆಯ ಮಹಾಪೂರ

    ಮಹಾತೋಬಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆಗೆ ಧ್ವಜಾರೋಹಣಗೊಂಡು ಚಾಲನೆ-ಭಕ್ತಾದಿಗಳಿಂದ ಹೊರಕಾಣಿಕೆಯ ಮಹಾಪೂರ

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ಅಂತರರಾಜ್ಯ

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ರಾತ್ರೋರಾತ್ರಿ ದಿಢೀರ್‌ ಶ್ರೀಮಂತರಾಗುವ ಕನಸು ನನಸು ಮಾಡಿಕೊಳ್ಳುವ ಮುನ್ನ ಇರಲಿ ಎಚ್ಚರ..!

by ಪ್ರಜಾಧ್ವನಿ ನ್ಯೂಸ್
November 3, 2024
in ಅಂತರರಾಜ್ಯ, ಕ್ರೈಮ್, ಬೆಂಗಳೂರು, ಮಂಗಳೂರು, ಮೈಸೂರು
0
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ರಾತ್ರೋರಾತ್ರಿ ದಿಢೀರ್‌ ಶ್ರೀಮಂತರಾಗುವ ಕನಸು ನನಸು ಮಾಡಿಕೊಳ್ಳುವ ಮುನ್ನ ಇರಲಿ ಎಚ್ಚರ..!
68
SHARES
195
VIEWS
ShareShareShare

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ರಾತ್ರೋರಾತ್ರಿ ದಿಢೀರ್‌ ಶ್ರೀಮಂತರಾಗುವ ಕನಸು ನನಸು ಮಾಡಿಕೊಳ್ಳುವ ಮುನ್ನ ಇರಲಿ ಎಚ್ಚರ..! ಏಕೆಂದರೆ, ಸೈಬರ್‌ ವಂಚಕರು ಹೂಡಿಕೆ ತಜ್ಞರ ಹೆಸರಲ್ಲಿ ಕೋಟ್ಯಂತರ ರೂ. ಲಪಟಾಯಿಸುತ್ತಿದ್ದಾರೆ. ಈ ವಂಚನೆ ಜಾಲಕ್ಕೆ ಬಿದ್ದವರು ಪ್ರತಿನಿತ್ಯ ನಗರದ ಸೈಬರ್‌ ಠಾಣೆಗಳ ಮೆಟ್ಟಿಲೇರುತ್ತಿದ್ದಾರೆ.

Keshari Durga

ಜಾಹೀರಾತು

Scafold Academy

ಜಾಹೀರಾತು

ಹೌದು, ಷೇರು ಮಾರುಕಟ್ಟೆ ಲಾಭದ ‘ಅಸ್ತ್ರ’ವನ್ನೇ ನಾಗರಿಕರ ಮೇಲೆ ಪ್ರಯೋಗಿಸುತ್ತಿರುವ ಸೈಬರ್‌ ವಂಚಕರು, ಹೂಡಿಕೆ ಸಲಹೆ ಹಾಗೂ ದುಪ್ಪಟ್ಟು ಲಾಭದ ಆಮಿಷವೊಡ್ಡಿ ಸಾಮಾಜಿಕ ಜಾಲತಾಣಗಳ ಮೂಲಕ ಬಲೆ ಬೀಸುತ್ತಿದ್ದಾರೆ. ಆಮಿಷಕ್ಕೆ ಸಿಲುಕಿದ ಐಟಿ ಉದ್ಯೋಗಿಗಳು, ಖಾಸಗಿ ಕಂಪನಿಗಳ ನೌಕರರು, ಉದ್ಯಮಿಗಳು ಹಾಗೂ ಮಹಿಳೆಯರ ಬ್ಯಾಂಕ್‌ ಖಾತೆಗಳನ್ನು ಬರಿದು ಮಾಡುತ್ತಿದ್ದಾರೆ. ಪರಿಣಾಮ ಕಳೆದ 9 ತಿಂಗಳಲ್ಲಿ ಟ್ರೇಡಿಂಗ್‌ ಹೆಸರಿನಲ್ಲಿ ಮೋಸ ಮಾಡಿದ ಪ್ರಕರಣಗಳೇ ನಗರದಲ್ಲಿ ಒಂದು ಸಾವಿರಕ್ಕೂ ಅಧಿಕ ಕೇಸ್‌ಗಳು ವರದಿಯಾಗಿದ್ದು, 100 ಕೋಟಿ ರೂ.ಗಳಿಗೂ ಹೆಚ್ಚು ವಂಚನೆಯಾಗಿದೆ ಎಂದು ನಗರ ಪೊಲೀಸರು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳನ್ನೇ ಕೇಂದ್ರ ಸ್ಥಾನ ಮಾಡಿಕೊಂಡಿರುವ ಸೈಬರ್‌ ವಂಚಕರು ವಾಟ್ಸಾಪ್‌, ಟೆಲಿಗ್ರಾಂ, ಇನ್‌ಸ್ಟಾಗ್ರಾಂಗಳಲ್ಲಿ ಆಕ್ಟೀವ್‌ ಆಗಿದ್ದಾರೆ. ಟ್ರೇಡಿಂಗ್‌ ಕುರಿತ ಸಲಹೆ ನೀಡುವುದಾಗಿ ಆನ್‌ಲೈನ್‌ ಲಿಂಕ್‌ಗಳನ್ನು ರಾಂಡಮ್‌ ಆಗಿ ಕಳಿಸುತ್ತಾರೆ. ಕ್ಲಿಕ್‌ ಮಾಡಿದವರು ವಾಟ್ಸಾಪ್‌ ಗ್ರೂಪ್‌ಗೆ ಸೇರ್ಪಡೆಗೊಳ್ಳುತ್ತಾರೆ. ಈ ಗ್ರೂಪ್‌ನಲ್ಲಿ ಟ್ರೇಡಿಂಗ್‌, ಲಾಭ ಮತ್ತಿತರ ವಿಚಾರಗಳ ಕುರಿತ ಚರ್ಚೆ, ವಿಡಿಯೊಗಳ ಜತೆಗೆ ಲಾಭ ಗಳಿಸಿದವರ ಸಕ್ಸೆಸ್‌ ಸ್ಟೋರಿಗಳ ಕುರಿತು ಹೆಚ್ಚು ಚರ್ಚೆ ನಡೆಯಲಿವೆ. ಈ ನಕಲಿ ಗ್ರೂಪ್‌ನ ಚರ್ಚೆಗಳನ್ನು ನಂಬಿ ಹೂಡಿಕೆ ಆಸಕ್ತಿ ತೋರಿಸಿದವರಿಗೆ ಖೆಡ್ಡಾ ತೋಡುವ ವಂಚಕರು, ನಕಲಿ ಷೇರು ಮಾರುಕಟ್ಟೆ ಕಂಪನಿಗಳ ಹೆಸರು ಹೇಳಿ ಒಂದು ಲಕ್ಷ ರೂ.ಗಳಿಂದ 1 ಕೋಟಿ ರೂ.ವರೆಗೆ ಹೂಡಿಕೆ ಮಾಡಿಸಿ ವಂಚಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಹೂಡಿಕೆಯಲ್ಲಿ ಲಾಭ ಗಳಿಸುವ ಆಸೆಯಿಂದ ಬ್ಯಾಂಕ್‌ ಖಾತೆಯಲ್ಲಿ ಕೂಡಿಟ್ಟ ಹಣವನ್ನು ವಂಚಕರು ಹೇಳಿದಂತೆ ಹಂತ- ಹಂತವಾಗಿ ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸುತ್ತಾರೆ. ಎಐ ತಂತ್ರಜ್ಞಾನ ಬಳಸುವ ವಂಚಕರು ಹೂಡಿಕೆ ಹಣಕ್ಕೆ ಲಾಭ ಬಂದಿದೆ ಎಂದು ಸುಳ್ಳೇ ಸುಳ್ಳು ಬ್ಯಾಲೆನ್ಸ್‌ ಶೀಟ್‌ ತೋರಿಸುತ್ತಾರೆ. ಇದನ್ನು ನಿಜ ಎಂದು ನಂಬುವ ಅಮಾಯಕರು, ಮತ್ತಷ್ಟು ಹಣ ವರ್ಗಾವಣೆ ಮಾಡುತ್ತಾರೆ. ಅಂತಿಮವಾಗಿ ಹಣ ಖಾಲಿಯಾದ ಬಳಿಕ ತಾವೂ ಹೂಡಿಕೆ ಮಾಡಿದ ಹಣ ಡ್ರಾ ಮಾಡಲು ಮುಂದಾದಾಗ ವಂಚಕರು ಮತ್ತಷ್ಟು ಹೂಡಿಕೆ ಮಾಡಿದರೆ ಮಾತ್ರ ಡ್ರಾ ಮಾಡಬಹುದು ಎಂಬ ಷರತ್ತು ವಿಧಿಸುತ್ತಾರೆ. ಆ ಬಳಿಕವಷ್ಟೇ ತಾವು ಮೋಸ ಹೋಗಿರುವುದು ಗೊತ್ತಾಗಿ ಠಾಣೆಗಳಿಗೆ ದೂರು ನೀಡುತ್ತಿದ್ದಾರೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದರು.

Muliya

ಜಾಹೀರಾತು

ತಂತ್ರಜ್ಞಾನವನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್‌ ವಂಚಕರು ಷೇರುಮಾರುಕಟ್ಟೆ ಅಧಿಕೃತ ಕಂಪನಿಗಳ ಹೆಸರಲ್ಲಿ ನಕಲಿ ವೆಬ್‌ಸೈಟ್‌, ಆ್ಯಪ್‌ಗಳನ್ನು ಸೃಷ್ಟಿಸಿ ವಂಚನೆ ಮಾಡುತ್ತಿದ್ದಾರೆ. ಟ್ರೇಡಿಂಗ್‌ ಕುರಿತ ಆಸೆ ಹಾಗೂ ಜ್ಞಾನದ ಕೊರತೆಯಿಂದ ವಂಚಕರ ಗಾಳಕ್ಕೆ ಸಿಲುಕುತ್ತಿರುವ ಜನರು ಹಣ ಕಳೆದುಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಸೈಬರ್‌ ತಜ್ಞ ಡಾ. ಹರ್ಷ.

camera center ad

ಜಾಹೀರಾತು

ಷೇರು ಹೂಡಿಕೆ ಕುರಿತು ಆಸಕ್ತಿ ಹೊಂದಿರುವವರು ತಾವು ಖಾತೆ ಹೊಂದಿರುವ ಬ್ಯಾಂಕ್‌ಗಳನ್ನೇ ಸಂಪರ್ಕಿಸಿ ಸಲಹೆ ಪಡೆಯಬೇಕು. ಈ ಮಾರ್ಗದಲ್ಲಿ ಹೂಡಿಕೆ ಮಾಡಿದರೆ ಅಪಾಯ ಇರುವುದಿಲ್ಲ. ಜತೆಗೆ, ಒಂದು ವೇಳೆ ಮೋಸ ಹೋದರೂ ಬ್ಯಾಂಕ್‌ ಜವಾಬ್ದಾರಿ ಇರಲಿದೆ ಎಂದು ಡಾ. ಹರ್ಷ ತಿಳಿಸುತ್ತಾರೆ.

Fashion street 9902633624

ಜಾಹೀರಾತು

ಸಾಮಾಜಿಕ ಜಾಲತಾಣ, ವಾಟ್ಸಾಪ್‌ ಗ್ರೂಪ್‌ಗಳಲ್ಲಿ ಲಿಂಕ್‌ ಕಳಿಸಿ ಹೂಡಿಕೆಯಲ್ಲಿ ಲಾಭ ಮಾಡಿಸಿಕೊಡುತ್ತೇವೆ ಎಂದು ಲಿಂಕ್‌ ಕಳಿಸಿದರೆ ನಂಬಲೇಬಾರದು. ಏಕೆಂದರೆ, ಈ ಲಿಂಕ್‌ಗಳು ಶೇ 99ರಷ್ಟು ವಂಚನೆ ಸಲುವಾಗಿಯೇ ಸೃಷ್ಟಿಸಲಾಗಿರುತ್ತದೆ. ಹೂಡಿಕೆ ಕುರಿತ ಆ್ಯಪ್‌ ಡೌನ್‌ಲೋಡ್‌ ಮಾಡಿ ಎಂದು ಹೇಳಿದ ಕೂಡಲೇ ಡೌನ್‌ಲೋಡ್‌ ಮಾಡಬಾರದು. ಮೊದಲಿಗೆ ಅಂತಹ ಆ್ಯಪ್‌ನ ಅಧಿಕೃತತೆ ತಿಳಿಯಬೇಕು. ಇಂಟರ್ನೆಟ್‌ ಯುಗದಲ್ಲಿ ಅಧಿಕೃತತೆ ತಿಳಿಯುವುದು ಅಸಾಧ್ಯ ಏನಲ್ಲ. ಮೊದಲಿಗೆ ಆ್ಯಪ್‌ನ ಕಚೇರಿ ಎಲ್ಲಿದೆ? ಅದರ ವಹಿವಾಟು ಯಾವ ದೇಶದಲ್ಲಿ ನಡೆಯುತ್ತಿದೆ ಎಂಬುದರ ಮಾಹಿತಿ ಪಡೆಯಬೇಕು. ಇಲ್ಲವಾದಲ್ಲಿ ವಂಚಕರ ಜಾಲಕ್ಕೆ ಸಿಲುಕಿ ಹಣ ಕಳೆದುಕೊಳ್ಳುವುದು ನಿಶ್ಚಿತ ಎಂದು ಅವರು ಹೇಳುತ್ತಾರೆ.

ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣಮೂರ್ತಿ, ಉದ್ಯಮಿ ಮುಖೇಶ್‌ ಅಂಬಾನಿ ಹೆಸರಿನಲ್ಲಿಸೈಬರ್‌ ವಂಚಕರು ಟ್ರೇಡಿಂಗ್‌ ಕುರಿತು ಸೃಷ್ಟಿಸಿದ್ದ ನಕಲಿ ಜಾಹೀರಾತು ನಂಬಿದ ವೃದ್ಧರೊಬ್ಬರು 19 ಲಕ್ಷ ರೂ. ಕಳೆದುಕೊಂಡಿದ್ದಾರೆ. ಈ ಕುರಿತು ಅಶೋಕ್‌ (ಹೆಸರು ಬದಲಿಸಲಾಗಿದೆ) ಬೆಂಗಳೂರು ಗ್ರಾಮಾಂತರ ಸೈಬರ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಫೇಸ್‌ಬುಕ್‌ನಲ್ಲಿ ನಾರಾಯಣಮೂರ್ತಿ ಹಾಗೂ ಅಂಬಾನಿ ಅವರು ಹೂಡಿಕೆ ಕಂಪನಿಯೊಂದರ ಕುರಿತು ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ನೋಡಿದ್ದರು. ಬಳಿಕ ವಿಡಿಯೋ ಆಧರಿಸಿ ವಂಚಕರು ಕಳಿಸಿದ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡಿದ್ದರು. ವಂಚಕರು ತಿಳಿಸಿದಂತೆ ಹಂತ- ಹಂತವಾಗಿ 19 ಲಕ್ಷ ರೂ.ವರ್ಗಾಯಿಸಿದ್ದಾರೆ. ಅಂತಿಮವಾಗಿ ತಾವು ಮೋಸ ಹೋಗಿರುವುದು ಗೊತ್ತಾಗಿ ದೂರು ನೀಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

Poorna squash

ಜಾಹೀರಾತು

 

ashwinistudioputtur

ಜಾಹೀರಾತು

SendShare27Share
Previous Post

ವಿಮಾನದಲ್ಲಿ ಬೆಂಗಳೂರಿಗೆ ಬಂದು ಕಾರು ಕದಿಯುವ ಖದೀಮರ ಬಂಧನ

Next Post

ಪುತ್ತೂರು; ತಲೆಬುರುಡೆ ಪತ್ತೆ – ಮಹಿಳೆಯೋರ್ವರು ಕುಂಬ್ರದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಶಂಕೆ…!?

ಪ್ರಜಾಧ್ವನಿ ನ್ಯೂಸ್

ಪ್ರಜಾಧ್ವನಿ ನ್ಯೂಸ್

Next Post
ಪುತ್ತೂರು; ತಲೆಬುರುಡೆ ಪತ್ತೆ – ಮಹಿಳೆಯೋರ್ವರು ಕುಂಬ್ರದಲ್ಲಿ  ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಶಂಕೆ…!?

ಪುತ್ತೂರು; ತಲೆಬುರುಡೆ ಪತ್ತೆ – ಮಹಿಳೆಯೋರ್ವರು ಕುಂಬ್ರದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಶಂಕೆ…!?

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂದರ್ಭಿಕ ಚಿತ್ರ
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

No Result
View All Result
  • ಮುಖಪುಟ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಉದ್ಯೋಗ – ಶಿಕ್ಷಣ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಿನಿಮಾ
  • ಲೈಫ್ ಸ್ಟೈಲ್

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..