• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
ಕೆಂಪು ಕಲ್ಲು, ಮರಳು ಅಭಾವ- ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ: ಬೆಲೆ ಏರಿಕೆಯೇ ಕಾಂಗ್ರೆಸ್ ಸರಕಾರದ ಗ್ಯಾರಂಟಿಯಾಗಿದೆ ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್

ಕೆಂಪು ಕಲ್ಲು, ಮರಳು ಅಭಾವ- ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ: ಬೆಲೆ ಏರಿಕೆಯೇ ಕಾಂಗ್ರೆಸ್ ಸರಕಾರದ ಗ್ಯಾರಂಟಿಯಾಗಿದೆ ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್

July 16, 2025
ಪೊಲೀಸರ ಎದುರೇ ವಿವಾದಿತ ಮುರಿನಕಟ್ಟೆ ಧ್ವಂಸ – ತೀವ್ರ ಉದ್ವಿಗ್ನತೆ ​: 3 ದಿನ ಇಡೀ ಭಟ್ಕಳ ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿ!

ಪೊಲೀಸರ ಎದುರೇ ವಿವಾದಿತ ಮುರಿನಕಟ್ಟೆ ಧ್ವಂಸ – ತೀವ್ರ ಉದ್ವಿಗ್ನತೆ ​: 3 ದಿನ ಇಡೀ ಭಟ್ಕಳ ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿ!

May 25, 2026
ಬೆಳ್ತಂಗಡಿ: ಕಾರು ಬೈಕ್ ನಡುವೆ ಅಪಘಾತ ಗಂಭಿರವಾಗಿ ಗಾಯಗೊಂಡಿದ್ದ ಯುವ ಫೋಟೋ ಗ್ರಾಫರ್ ಮೃತ್ಯು

ಬೆಳ್ತಂಗಡಿ: ಕಾರು ಬೈಕ್ ನಡುವೆ ಅಪಘಾತ ಗಂಭಿರವಾಗಿ ಗಾಯಗೊಂಡಿದ್ದ ಯುವ ಫೋಟೋ ಗ್ರಾಫರ್ ಮೃತ್ಯು

May 25, 2026
ತೆನ್ಕಾಯಿಮಲೆ ಕಿರುಚಿತ್ರದ 1 ಲಕ್ಷ ವೀಕ್ಷಣೆಯ ಸಂಭ್ರಮಾಚರಣೆಯನ್ನು ಪ್ರಜ್ಞಾ ಆಶ್ರಮದಲ್ಲಿ ಸಂಭ್ರಮ ಆಚರಣೆ

ತೆನ್ಕಾಯಿಮಲೆ ಕಿರುಚಿತ್ರದ 1 ಲಕ್ಷ ವೀಕ್ಷಣೆಯ ಸಂಭ್ರಮಾಚರಣೆಯನ್ನು ಪ್ರಜ್ಞಾ ಆಶ್ರಮದಲ್ಲಿ ಸಂಭ್ರಮ ಆಚರಣೆ

May 25, 2026
ಕೊಲ್ಲೂರು:ಅಪಘಾತದಲ್ಲಿ ಮೃತಪಟ್ಟ ಮಹಿಳೆಯ ಚಿನ್ನ ಕದ್ದಿದ್ದ ಕಳ್ಳ ಅರೆಸ್ಟ್

ಕೊಲ್ಲೂರು:ಅಪಘಾತದಲ್ಲಿ ಮೃತಪಟ್ಟ ಮಹಿಳೆಯ ಚಿನ್ನ ಕದ್ದಿದ್ದ ಕಳ್ಳ ಅರೆಸ್ಟ್

May 25, 2026
ಮಾಣಿ: ಸ್ಕೂಟರ್ ಮೀನಿನ ಲಾರಿ ಡಿಕ್ಕಿ – ಸ್ಕೂಟರ್ ಸವಾರ ಮೃತ್ಯು

ಮಾಣಿ: ಸ್ಕೂಟರ್ ಮೀನಿನ ಲಾರಿ ಡಿಕ್ಕಿ – ಸ್ಕೂಟರ್ ಸವಾರ ಮೃತ್ಯು

May 25, 2026
ಪುತ್ತೂರು ಮುಖ್ಯ ರಸ್ತೆಯ ಅಪಾಯಕಾರಿ ಕಟ್ಟಡಕ್ಕೆ ಮುಕ್ತಿ ಯಾವಾಗ ಅಧಿಕಾರಿಗಳೇ?- ಸಂಚಾರಿಸುವ ಜನರ ಪ್ರಾಣ ಅಪಾಯದಲ್ಲಿ…!

ಪುತ್ತೂರು ಮುಖ್ಯ ರಸ್ತೆಯ ಅಪಾಯಕಾರಿ ಕಟ್ಟಡಕ್ಕೆ ಮುಕ್ತಿ ಯಾವಾಗ ಅಧಿಕಾರಿಗಳೇ?- ಸಂಚಾರಿಸುವ ಜನರ ಪ್ರಾಣ ಅಪಾಯದಲ್ಲಿ…!

May 25, 2026
ರಾಜ್ಯಸಭೆಗೆ ಡಿ ವಿ ಸದಾನಂದ ಗೌಡರ ಹೆಸರು ಮುಂಚೂಣಿಯಲ್ಲಿ – ವರಿಷ್ಠರಿಗೆ ಶಿಫಾರಸು ಮಾಡುವ ಬಗ್ಗೆ ಬಿಜೆಪಿ ಪ್ರಮುಖರ ಸಮಿತಿ ಸಭೆಯಲ್ಲಿ ಚರ್ಚೆ

ರಾಜ್ಯಸಭೆಗೆ ಡಿ ವಿ ಸದಾನಂದ ಗೌಡರ ಹೆಸರು ಮುಂಚೂಣಿಯಲ್ಲಿ – ವರಿಷ್ಠರಿಗೆ ಶಿಫಾರಸು ಮಾಡುವ ಬಗ್ಗೆ ಬಿಜೆಪಿ ಪ್ರಮುಖರ ಸಮಿತಿ ಸಭೆಯಲ್ಲಿ ಚರ್ಚೆ

May 25, 2026
ಪುತ್ತೂರು: ಮೇ 25ಕ್ಕೆ ಆರ್ಯಪು ಪ್ರಾಥಮಿಕ ಸಹಕಾರಿ ಕೃಷಿ ಪತ್ತಿನ ಸಂಘದಿಂದ ದಿಂದ ಸಹಕಾರ “ಸಂಜೀವಿನಿ ವಿಮೆ” ಜಾರಿ.

ಪುತ್ತೂರು: ಮೇ 25ಕ್ಕೆ ಆರ್ಯಪು ಪ್ರಾಥಮಿಕ ಸಹಕಾರಿ ಕೃಷಿ ಪತ್ತಿನ ಸಂಘದಿಂದ ದಿಂದ ಸಹಕಾರ “ಸಂಜೀವಿನಿ ವಿಮೆ” ಜಾರಿ.

May 23, 2026
ಪರಿಸರ ರಕ್ಷಣೆಗಾಗಿ “ಸೀಡ್ ಬಾಲ್” ಅಂದ್ರೆ ಏನು?  ಬೋರು ಗುಡ್ಡ ದಲ್ಲಿ ಕಾಡು ಬೆಳೆಸಲು ಈಗ ಉತ್ತಮ ಸಮಯ

ಪರಿಸರ ರಕ್ಷಣೆಗಾಗಿ “ಸೀಡ್ ಬಾಲ್” ಅಂದ್ರೆ ಏನು? ಬೋರು ಗುಡ್ಡ ದಲ್ಲಿ ಕಾಡು ಬೆಳೆಸಲು ಈಗ ಉತ್ತಮ ಸಮಯ

May 25, 2026
ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಗೃಹ ಸಚಿವರಿಗೆ ಮನವಿ ಮಾಡಿದ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೋಟ್ಯಾಡಿ

ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಗೃಹ ಸಚಿವರಿಗೆ ಮನವಿ ಮಾಡಿದ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೋಟ್ಯಾಡಿ

May 23, 2026
ಬೈಕಂಪಾಡಿ- KIOCL ಜಂಕ್ಷನ್ ವರೆಗೆ ಎಲಿವೇಟೆಡ್ ಫ್ಲೈಓವರ್ ಮತ್ತು ಸರ್ವಿಸ್ ರಸ್ತೆ ನಿರ್ಮಾಣ  414.16 ಕೋ ರೂ. ವೆಚ್ಚದ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ : ಸಂಸದ ಕ್ಯಾ. ಚೌಟ

ಬೈಕಂಪಾಡಿ- KIOCL ಜಂಕ್ಷನ್ ವರೆಗೆ ಎಲಿವೇಟೆಡ್ ಫ್ಲೈಓವರ್ ಮತ್ತು ಸರ್ವಿಸ್ ರಸ್ತೆ ನಿರ್ಮಾಣ 414.16 ಕೋ ರೂ. ವೆಚ್ಚದ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ : ಸಂಸದ ಕ್ಯಾ. ಚೌಟ

May 23, 2026
ಮುಂಬಯಿಯಲ್ಲಿ ಕೆಯ್ಯುರು ಯುವಕ ಆತ್ಮಹತ್ಯೆ

ಮುಂಬಯಿಯಲ್ಲಿ ಕೆಯ್ಯುರು ಯುವಕ ಆತ್ಮಹತ್ಯೆ

May 23, 2026
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Tuesday, May 26, 2026
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    ಬೆಳ್ತಂಗಡಿ: ಕಾರು ಬೈಕ್ ನಡುವೆ ಅಪಘಾತ ಗಂಭಿರವಾಗಿ ಗಾಯಗೊಂಡಿದ್ದ ಯುವ ಫೋಟೋ ಗ್ರಾಫರ್ ಮೃತ್ಯು

    ಬೆಳ್ತಂಗಡಿ: ಕಾರು ಬೈಕ್ ನಡುವೆ ಅಪಘಾತ ಗಂಭಿರವಾಗಿ ಗಾಯಗೊಂಡಿದ್ದ ಯುವ ಫೋಟೋ ಗ್ರಾಫರ್ ಮೃತ್ಯು

    ತೆನ್ಕಾಯಿಮಲೆ ಕಿರುಚಿತ್ರದ 1 ಲಕ್ಷ ವೀಕ್ಷಣೆಯ ಸಂಭ್ರಮಾಚರಣೆಯನ್ನು ಪ್ರಜ್ಞಾ ಆಶ್ರಮದಲ್ಲಿ ಸಂಭ್ರಮ ಆಚರಣೆ

    ತೆನ್ಕಾಯಿಮಲೆ ಕಿರುಚಿತ್ರದ 1 ಲಕ್ಷ ವೀಕ್ಷಣೆಯ ಸಂಭ್ರಮಾಚರಣೆಯನ್ನು ಪ್ರಜ್ಞಾ ಆಶ್ರಮದಲ್ಲಿ ಸಂಭ್ರಮ ಆಚರಣೆ

    ಮಾಣಿ: ಸ್ಕೂಟರ್ ಮೀನಿನ ಲಾರಿ ಡಿಕ್ಕಿ – ಸ್ಕೂಟರ್ ಸವಾರ ಮೃತ್ಯು

    ಮಾಣಿ: ಸ್ಕೂಟರ್ ಮೀನಿನ ಲಾರಿ ಡಿಕ್ಕಿ – ಸ್ಕೂಟರ್ ಸವಾರ ಮೃತ್ಯು

    ಪುತ್ತೂರು ಮುಖ್ಯ ರಸ್ತೆಯ ಅಪಾಯಕಾರಿ ಕಟ್ಟಡಕ್ಕೆ ಮುಕ್ತಿ ಯಾವಾಗ ಅಧಿಕಾರಿಗಳೇ?- ಸಂಚಾರಿಸುವ ಜನರ ಪ್ರಾಣ ಅಪಾಯದಲ್ಲಿ…!

    ಪುತ್ತೂರು ಮುಖ್ಯ ರಸ್ತೆಯ ಅಪಾಯಕಾರಿ ಕಟ್ಟಡಕ್ಕೆ ಮುಕ್ತಿ ಯಾವಾಗ ಅಧಿಕಾರಿಗಳೇ?- ಸಂಚಾರಿಸುವ ಜನರ ಪ್ರಾಣ ಅಪಾಯದಲ್ಲಿ…!

    ರಾಜ್ಯಸಭೆಗೆ ಡಿ ವಿ ಸದಾನಂದ ಗೌಡರ ಹೆಸರು ಮುಂಚೂಣಿಯಲ್ಲಿ – ವರಿಷ್ಠರಿಗೆ ಶಿಫಾರಸು ಮಾಡುವ ಬಗ್ಗೆ ಬಿಜೆಪಿ ಪ್ರಮುಖರ ಸಮಿತಿ ಸಭೆಯಲ್ಲಿ ಚರ್ಚೆ

    ರಾಜ್ಯಸಭೆಗೆ ಡಿ ವಿ ಸದಾನಂದ ಗೌಡರ ಹೆಸರು ಮುಂಚೂಣಿಯಲ್ಲಿ – ವರಿಷ್ಠರಿಗೆ ಶಿಫಾರಸು ಮಾಡುವ ಬಗ್ಗೆ ಬಿಜೆಪಿ ಪ್ರಮುಖರ ಸಮಿತಿ ಸಭೆಯಲ್ಲಿ ಚರ್ಚೆ

    ಪುತ್ತೂರು: ಮೇ 25ಕ್ಕೆ ಆರ್ಯಪು ಪ್ರಾಥಮಿಕ ಸಹಕಾರಿ ಕೃಷಿ ಪತ್ತಿನ ಸಂಘದಿಂದ ದಿಂದ ಸಹಕಾರ “ಸಂಜೀವಿನಿ ವಿಮೆ” ಜಾರಿ.

    ಪುತ್ತೂರು: ಮೇ 25ಕ್ಕೆ ಆರ್ಯಪು ಪ್ರಾಥಮಿಕ ಸಹಕಾರಿ ಕೃಷಿ ಪತ್ತಿನ ಸಂಘದಿಂದ ದಿಂದ ಸಹಕಾರ “ಸಂಜೀವಿನಿ ವಿಮೆ” ಜಾರಿ.

    ಪರಿಸರ ರಕ್ಷಣೆಗಾಗಿ “ಸೀಡ್ ಬಾಲ್” ಅಂದ್ರೆ ಏನು?  ಬೋರು ಗುಡ್ಡ ದಲ್ಲಿ ಕಾಡು ಬೆಳೆಸಲು ಈಗ ಉತ್ತಮ ಸಮಯ

    ಪರಿಸರ ರಕ್ಷಣೆಗಾಗಿ “ಸೀಡ್ ಬಾಲ್” ಅಂದ್ರೆ ಏನು? ಬೋರು ಗುಡ್ಡ ದಲ್ಲಿ ಕಾಡು ಬೆಳೆಸಲು ಈಗ ಉತ್ತಮ ಸಮಯ

    ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಗೃಹ ಸಚಿವರಿಗೆ ಮನವಿ ಮಾಡಿದ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೋಟ್ಯಾಡಿ

    ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಗೃಹ ಸಚಿವರಿಗೆ ಮನವಿ ಮಾಡಿದ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೋಟ್ಯಾಡಿ

    ಬೈಕಂಪಾಡಿ- KIOCL ಜಂಕ್ಷನ್ ವರೆಗೆ ಎಲಿವೇಟೆಡ್ ಫ್ಲೈಓವರ್ ಮತ್ತು ಸರ್ವಿಸ್ ರಸ್ತೆ ನಿರ್ಮಾಣ  414.16 ಕೋ ರೂ. ವೆಚ್ಚದ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ : ಸಂಸದ ಕ್ಯಾ. ಚೌಟ

    ಬೈಕಂಪಾಡಿ- KIOCL ಜಂಕ್ಷನ್ ವರೆಗೆ ಎಲಿವೇಟೆಡ್ ಫ್ಲೈಓವರ್ ಮತ್ತು ಸರ್ವಿಸ್ ರಸ್ತೆ ನಿರ್ಮಾಣ 414.16 ಕೋ ರೂ. ವೆಚ್ಚದ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ : ಸಂಸದ ಕ್ಯಾ. ಚೌಟ

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ಪ್ರಾದೇಶಿಕ ಪುತ್ತೂರು

ಕೆಂಪು ಕಲ್ಲು, ಮರಳು ಅಭಾವ- ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ: ಬೆಲೆ ಏರಿಕೆಯೇ ಕಾಂಗ್ರೆಸ್ ಸರಕಾರದ ಗ್ಯಾರಂಟಿಯಾಗಿದೆ ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್

by ಪ್ರಜಾಧ್ವನಿ ನ್ಯೂಸ್
July 16, 2025
in ಪುತ್ತೂರು
0
ಕೆಂಪು ಕಲ್ಲು, ಮರಳು ಅಭಾವ- ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ: ಬೆಲೆ ಏರಿಕೆಯೇ ಕಾಂಗ್ರೆಸ್ ಸರಕಾರದ ಗ್ಯಾರಂಟಿಯಾಗಿದೆ ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್
5
SHARES
15
VIEWS
ShareShareShare

ಪುತ್ತೂರು: ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಗ್ಯಾರಂಟಿ ಯೋಜನೆಯಲ್ಲಿ ಉಚಿತವನ್ನೂ ಸರಿಯಾಗಿ ಕೊಡದೆ ಅಭಿವೃದ್ಧಿಯು ಶೂನ್ಯವಾಗಿದೆ. ಕಾಂಗ್ರೆಸ್ ಸರಕಾರ ಕೆಲಸ ಮಾಡದ ಗ್ಯಾರಂಟಿ ಸರಕಾರವಾಗಿದೆ. ಭ್ರಷ್ಟಾಚಾರ, ಬೆಲೆ ಏರಿಕೆಯೇ ಕಾಂಗ್ರೆಸ್ ಸರಕಾರದ ಗ್ಯಾರಂಟಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಪುಕಲ್ಲು ಹಾಗೂ ಮರಳಿನ ಅಭಾವದಿಂದ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಆಗುತ್ತಿರುವ ತೊಂದರೆ, ಹಾಗೂ ರಾಜ್ಯ ಸರಕಾರದ ಜನವಿರೋಧಿ ನೀತಿ ವಿರುದ್ಧ ದ.ಕ.ಜಿಲ್ಲೆಯಾದ್ಯಂತ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಬಿಜೆಪಿ ವತಿಯಿಂದ ನಡೆಯುವ ಪ್ರತಿಭಟನೆಯ ಅಂಗವಾಗಿ ಪುತ್ತೂರಿನ ಅಮರ್ ಜವಾನ್ ಜ್ಯೋತಿ ಬಳಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ಸರಕಾರ ಕೆಂಪುಕಲ್ಲು ಹೊಯಿಗೆಯ ಮೇಲೆ ರಾಯಲ್ಟಿ ಧನವನ್ನು ಏರಿಕೆ ಮಾಡಿ ಕಾರ್ಮಿಕರ ಜೀವನವನ್ನು ಬೀದಿಗೆ ತಂದು ನಿಲ್ಲಿಸಿದೆ.

ಕೆಂಪುಕಲ್ಲು ಹೊಯಿಗೆ ಸಿಗದೆ ಜನರು ಸಂಕಷ್ಟ ಪಡುತ್ತಿದ್ದಾರೆ. ನಮಗೆ ಕಲ್ಲು, ಹೊಯಿಗೆ ಕೊಡಿ. ಕೆಲಸ ಕೊಡಿ. ನಮಗೆ ನಿಮ್ಮ ಉಚಿತಗಳು ಬೇಡ ಎಂದು ಸರಕಾರದ ನೀತಿಗಳನ್ನು ಖಂಡಿಸಿದರು. ಪುತ್ತೂರು ಶಾಸಕರು ಕೂಡ ಪ್ರತಿಭಟನೆಗೆ ಬರಬೇಕಿತ್ತು. ಅವರ ಮೆಡಿಕಲ್ ಕಾಲೇಜು ಕಲ್ಲು ಹೊಯಿಗೆ ಇಲ್ಲದೆ ನಿಂತಿದೆ. ಶಾಲಾ ಮಕ್ಕಳಿಗೆ ನೀಡುವ ಆಹಾರ ಸಾಗಾಟದ ಲಾರಿಗೆ ಬಾಡಿಗೆ ಕೊಡುವ ಯೋಗ್ಯತೆ ಈ ಸರಕಾರಕ್ಕಿಲ್ಲ. ಇಂತಹ ಬೇಜವಾಬ್ದಾರಿ ಸರಕಾರವನ್ನು ಕರ್ನಾಟಕದ ಇತಿಹಾಸದಲ್ಲೇ ನಾನು ನೋಡಲಿಲ್ಲ. ಸರಕಾರದಲ್ಲಿ ಕುರ್ಚಿಗಾಗಿ ಹೋರಾಟ ನಡೆಯುತ್ತಿದೆ.

ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮಾತ್ರ ಕುರ್ಚಿ ಬಿಟ್ಟುಕೊಡುತ್ತಿಲ್ಲ ಎಂದರು. ಸರಕಾರದಿಂದ ಬೆಲೆಏರಿಕೆಯೇ ಉಚಿತವಾಗಿದೆ. ಸರಕಾರ ಎಲ್ಲದಕ್ಕೂ ತೆರಿಗೆ ವಿಧಿಸುತ್ತಿದೆ. ಕಸ ಹೆಕ್ಕುವುದಕ್ಕೂ ತೆರಿಗೆ ಹಾಕುತ್ತಿದೆ. ಕಾಂಗ್ರೆಸ್ ಸರಕಾರ ಎರಡು ವರ್ಷದಲ್ಲಿ 3 ಲಕ್ಷಕ್ಕೂ ಮಿಕ್ಕಿ ಸಾಲ ತೆಗೆದುಕೊಂಡಿದೆ. ಇದೇ ರೀತಿ ಮುಂದುವರೆದರೆ 5 ವರ್ಷದಲ್ಲಿ 10 ಲಕ್ಷ ಕೋಟಿ ಸಾಲ ದಾಟುತ್ತದೆ. ದ.ಕ.ಜಿಲ್ಲೆಯ ಜನರ ಸಮಸ್ಯೆಗೆ ಸರಿಯಾಗಿ ಕಾನೂನು ತರಬೇಕು. ಕಾನೂನು ಇರುವುದು ಜನರಿಗೆ ಗೌರವಯುತವಾಗಿ ಬದುಕು ನಡೆಸಲು. ಕಾನೂನಿನ ಹೆಸರಲ್ಲಿ ಜನರ ಹೊಟ್ಟೆಗೆ ಹೊಡೆಯಬಾರದು ಎಂದರು.

ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ ಕಾಂಗ್ರೆಸ್ ಸರಕಾರ ಗ್ಯಾರಂಟಿ ನೆಪದಲ್ಲಿ ಜನರನ್ನು ಮರುಳು ಮಾಡುತ್ತಿದೆ. ಒಂದು ಕೈಯಲ್ಲಿ ಉಚಿತ ಕೊಟ್ಟು ಇನ್ನೊಂದು ಕೈಯಿಂದ ಭರ್ಜರಿಯಾಗಿ ತಗೊಳ್ಳುತ್ತಿದೆ. ಇದೀಗ ಕೆಂಪು ಕಲ್ಲು, ಮರಳು ಪೂರೈಕೆ ಸ್ಥಗಿತವಾಗುವ ಹಾಗೆ ಮಾಡಿ ಕಾರ್ಮಿಕರ ಬದುಕನ್ನು ನುಚ್ಚುನೂರು ಮಾಡಿದೆ. ನಾವು ಕೋಣನ ಮುಂದೆ ಕಿಣ್ಣರಿ ಬಾರಿಸುವುದಿಲ್ಲ. ದಪ್ಪ ಚರ್ಮದ ಸರಕಾರಕ್ಕೆ ನಮ್ಮ ಕೂಗು ಕೇಳುವವರೆಗೂ ನಮ್ಮ ಹೋರಾಟ ಬಿಡುವುದಿಲ್ಲ ಎಂದರು. ರಾಜ್ಯದ ಮುಖ್ಯಮಂತ್ರಿಯವರು ಸೀಟಿಗಾಗಿ ಹೋರಾಟ ಮಾಡುತ್ತಿದ್ದಾರೆ. ಸೀಟಿಗಾಗಿ ಹೋರಾಟ ಮಾಡುತ್ತಿರುವ ಸರಕಾರ ಜನಸಮಾನ್ಯ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ. ಇವತ್ತು ದಿವಾಳಿಕೋರ ಸರಕಾರ ಕರ್ನಾಟಕದಲ್ಲಿದೆ. ಬಡವರ ಶೋಷಣೆ ಮಾಡುತ್ತಿದೆ ಎಂದರು.

ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಸನ್ನ ಮಾರ್ತಾ ಮಾತನಾಡಿ ಕಾಂಗ್ರೆಸ್ ಸರಕಾರದ ಜನವಿರೋಧಿ ನೀತಿಯಿಂದ ಇದೀಗ ಇಡೀ ಸಮಾಜಕ್ಕೆ ಸಮಸ್ಯೆ ಉಂಟಾಗಿದೆ. ಕರ್ನಾಟಕದಲ್ಲಿ ಸರಕಾರ ಕೆಂಪು ಕಲ್ಲಿಗೆ 295 ರೂ. ಮಾಡಿದ್ದಾರೆ. ಇದರಿಂದ ಎಲ್ಲರಿಗೂ ತೊಂದರೆಯಾಗಿದೆ. ಕೆಂಪು ಕಲ್ಲು ಹಾಗೂ ಮರಳು ಪೂರೈಕೆಯನ್ನು ಸರಳೀಕರಣ ಮಾಡಿ ಎಂದರು. ಬಿಜೆಪಿ ಕಾರ್ಮಿಕರು ಅಕ್ರಮ ಮರಳು, ಕೆಂಪು ಕಲ್ಲು ಸಾಗಾಟವನ್ನು ಎಂದೂ ಬೆಂಬಲಿಸುವುದಿಲ್ಲ. ಸಕ್ರಮವಾಗಿಯೇ ಕೆಲಸ ಮಾಡುತ್ತಿದ್ದಾರೆ. ಸರಕಾರ ಆದಷ್ಟು ಬೇಗ ಜನರ ಸಮಸ್ಯೆಯನ್ನು ಪರಿಹರಿಸಬೇಕು ಎಂದರು.

Muliya

ಜಾಹೀರಾತು

Sathyasayi Hospital

ಜಾಹೀರಾತು

ಪುತ್ತೂರಿನ ಈಗಿನ ಶಾಸಕರು ಕೋಟಿ ಕೋಟಿ ಮಾತನಾಡುತ್ತಾರೆ. ನಾನು ಅವರಿಗೆ ಸವಾಲು ಹಾಕುತ್ತೇನೆ. ನನ್ನ ಎರಡು ವರ್ಷದ ಅವಧಿಯಲ್ಲಾದ ಅಭಿವೃದ್ಧಿ ಹಾಗೂ ಅವರ ಎರಡು ವರ್ಷದ ಅಭಿವೃದ್ಧಿಯ ಅಂಕಿ ಅಂಶ ನೋಡೋಣ. ಶಾಸಕರ ಗೋಮುಖವನ್ನು ಮಾತ್ರ ನೋಡಿದ್ದೀರಿ. ಆದರೆ ಇತ್ತೀಚೆಗೆ ಅವರು ವ್ಯಾಘ್ರಮುಖವನ್ನು ತೋರಿಸಿ ದರ್ಪ ಮೆರೆದಿದ್ದಾರೆ ಎಂದರು. ಕೆಂಪು ಕಲ್ಲಿಗೆ 96 ರೂ. ಇದ್ದ ರಾಯಲ್ಟಿ ದರವನ್ನು ಸರಕಾರ 295ಕ್ಕೆ ಏರಿಸಿದೆ. ಇದರಿಂದ ಒಂದು ಕೆಂಪು ಕಲ್ಲಿಗೆ 52 ರೂ. ವೆಚ್ಚ ತಗುಲುತ್ತದೆ. ಇದರಿಂದ ಕಲ್ಲು ಕೋರೆಗಳು ಬಂದ್ ಆಗಿ ಕಾರ್ಮಿಕರು ಜೀವನ ನಡೆಸುವುದು ಕಷ್ಟಕರವಾಗಿದೆ. ಮುಂದಿನ ದಿನಗಳಲ್ಲಿ ಜನರೇ ಕ್ರಾಂತಿ ಎಬ್ಬಿಸಲಿದ್ದಾರೆ ಎಂದರು.

ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ವಾಮನ ಪೈ ಮಾತನಾಡಿ ಸರಕಾರದ ಕೆಂಪು ಕಲ್ಲು, ಮರಳು ನೀತಿಯಿಂದಾಗಿ ಬಡ ಕಾರ್ಮಿಕರಿಗೆ ಜೀವನ ನಡೆಸಲು ಕಷ್ಟ. ಇದರಿಂದ ವ್ಯಾಪಾರಿಗಳಿಗೆ ವ್ಯಾಪಾರ ಇಲ್ಲದಂತಾಗಿದೆ. ಸಿಮೆಂಟ್ ಮಾರಾಟವಿಲ್ಲದೆ ಅಂಗಡಿಗಳಲ್ಲಿ ಸಿಮೆಂಟ್ ಗಟ್ಟಿಯಾಗಿ ಕಲ್ಲಿನ ರೀತಿಯಾಗಿದೆ ಎಂದರು. ನದಿಗಳಿಂದ ಹೊಯಿಗೆ ತೆಗೆದರೆ ನೀರು ಬತ್ತಿ ಹೋಗುವುದಿಲ್ಲ ನೀರಿನ ಹರಿವು ಹೆಚ್ಚುತ್ತದೆ ಎಂದು ಹೇಳಿದ ಅವರು ಈ ಹೋರಾಟವನ್ನು ನಿಲ್ಲಿಸದೆ ನ್ಯಾಯ ಸಿಗುವವರೆಗೆ ಮುಂದುವರೆಸಬೇಕು ಎಂದರು.

ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ ಬಿಜೆಪಿ ಸರಕಾರದಿಂದ ರಾಷ್ಟ್ರ, ರಾಜ್ಯದಲ್ಲಿ ಅಲ್ಲದೆ ಪುತ್ತೂರಿನಲ್ಲಿಯೂ ಅಭಿವೃದ್ಧಿಯಾಗಿದೆ. ನಮ್ಮ ಅಂಕಿ ಅಂಶ ಮತ್ತು ಕಾಂಗ್ರೆಸ್ ಸರಕಾರದ ಅಂಕಿ ಅಂಶ ತುಲನೆ ಮಾಡಿದರೆ ಇದು ಗೊತ್ತಾಗುತ್ತದೆ. ಆದರೆ ಕಾಂಗ್ರೆಸ್ ಸರಕಾರ ರಾಜ್ಯದ ಚಿತ್ರಣವನ್ನು ಹಾಳು ಮಾಡಿದೆ. ಇದು ಜನವಿರೋಧಿ, ಬಡವರ ವಿರೋಧಿ ಸರಕಾರವಾಗಿದೆ ಎಂದರು. ನಗರಸಭಾ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪುತ್ತೂರು ಖಾಸಗಿ ಬಸ್ ನಿಲ್ದಾಣದಿಂದ ಪ್ರತಿಭಟನಾ ಮೆರವಣಿಗೆ ಆರಂಭಗೊಂಡು ಕೋರ್ಟ್ ರೋಡ್ ಮೂಲಕ ಅಮರ್ ಜವಾನ್ ಸ್ಮಾರಕದವರೆಗೆ ನಡೆದು ಅಲ್ಲಿ ಪ್ರತಿಭಟನೆ ನಡೆಯಿತು. ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಅನಿಲ್ ತೆಂಕಿಲ ಸರಕಾರಕ್ಕೆ ಸಲ್ಲಿಸಲಿರುವ ಮನವಿ ಓದಿದರು. ಬಿಜೆಪಿ ಗ್ರಾಮಾಂತರ ಮಂಡಲ ಉಪಾಧ್ಯಕ್ಷ ಹರಿಪ್ರಸಾದ್ ಯಾದವ್ ಕಾರ್ಯಕ್ರಮ ನಿರೂಪಿಸಿ ಬಿಜೆಪಿ ಗ್ರಾಮಾಂತರ ಮಂಡಲ ಕಾರ್ಯದರ್ಶಿ ಉಮೇಶ್ ಗೌಡ ಕೋಡಿಬೈಲು ವಂದಿಸಿದರು. ಬಿಜೆಪಿ ಮುಖಂಡರಾದ ಎಸ್. ಅಪ್ಪಯ್ಯ ಮಣಿಯಾಣಿ, ಬಂಗಾರಡ್ಕ ವಿಶ್ವೇಶ್ವರ ಭಟ್, ರಾಧಾಕೃಷ್ಣ ಬೋರ್ಕರ್, ಸಾಜ ರಾಧಾಕೃಷ್ಣ ಆಳ್ವ, ಪುರುಷೋತ್ತಮ ಮುಂಗ್ಲಿಮನೆ, ಶಶಿಕುಮಾರ್ ರೈ ಬಾಲ್ಯೊಟ್ಟು ಒಬಿಸಿ ರಾಜ್ಯ ಕಾರ್ಯದರ್ಶಿ ಆರ್.ಸಿ. ನಾರಾಯಣ ರೆಂಜ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು, ಚಂದ್ರಶೇಖರ ರಾವ್ ಬಪ್ಪಳಿಗೆ, ವಿದ್ಯಾ ಆರ್. ಗೌರಿ, ಬೂಡಿಯಾರ್ ರಾಧಾಕೃಷ್ಣ ರೈ, ಸುರೇಶ್ ಆಳ್ವ, ಗೌರಿ ಬನ್ನೂರು, ಕರುಣಾಕರ ಗೌಡ ಎಲಿಯ, ಗ್ರಾಮಾಂತರ ಮಂಡಲ ಯುವಮೋರ್ಛಾ ಅಧ್ಯಕ್ಷ ಶಿಶಿರ್ ಪೆರುವೋಡಿ, ನಗರ ಮಂಡಲ ಯುವಮೋರ್ಛಾ ಅಧ್ಯಕ್ಷ ನಿತೇಶ್, ಜಿಲ್ಲಾ ಎಸ್‌ಟಿ ಮೋರ್ಚಾ ಅಧ್ಯಕ್ಷ ಹರೀಶ್ ಬಿಜತ್ರೆ, ಜಿಲ್ಲಾ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಗುರುವಪ್ಪ ಪೂಜಾರಿ, ಗ್ರಾಮಾಮತರ ಮಂಡಲ ಮಹಿಳಾ ಮೋರ್ಛಾ ಅಧ್ಯಕ್ಷೆ ಯಶೋಧಾ ಕೆ. ಗೌಡ, ನಗರ ಮಂಡಲ ಮಹಿಳಾ ಮೋರ್ಛಾ ಅಧ್ಯಕ್ಷೆ ಸ್ವರ್ಣಲತಾ ಹೆಗ್ಡೆ, ಜೈಭಾರತ್ ಸಂಘದ ಮಾಜಿ ಅಧ್ಯಕ್ಷ ಧನ್ಯಕುಮಾರ್ ಬೆಳಂದೂರು ಸೇರಿದಂತೆ ಹಲವು ಮುಖಂಡರು, ನಗರಸಭಾ ಬಿಜೆಪಿ ಸದಸ್ಯರು, ಬಿಜೆಪಿ ಮಹಾಶಕ್ತಿಕೇಂದ್ರ, ಶಕ್ತಿಕೇಂದ್ರದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.

Keshari Durga

ಜಾಹೀರಾತು

ಕೆಂಪು ಕಲ್ಲು, ಮರಳು ಅಭಾವವನ್ನು ಶೀಘ್ರ ಪರಿಹರಿಸುವಂತೆ ಬಿಜೆಪಿ ವತಿಯಿಂದ ತಹಶೀಲ್ದಾರ್‌ರವರ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ನೀಡಲಾಯಿತು. ಉಪತಹಶೀಲ್ದಾರ್ ಸುಲೋಚನಾರವರಿಗೆ ಮನವಿ ಸಲ್ಲಿಸಿ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಲಾಯಿತು.

 

SendShare2Share
Previous Post

ಲಾರಿ ಚಾಲಕನ ನಿರ್ಲಕ್ಷ್ಯ:ಪುತ್ತೂರು ನಗರಸಭಾ ಚರಂಡಿ ಸ್ಲ್ಯಾಬ್ ಮುರಿತ.

Next Post

ಚಲಿಸುತ್ತಿದ್ದ ಬಸ್ಸ್‌ನಲ್ಲೇ ಗಂಡು ಮಗು ಜನನ: ಬಟ್ಟೆ ಸುತ್ತಿ ಕಿಟಿಕಿಯಿಂದ ಎಸೆದ ಪಾಪಿ ತಾಯಿ

ಪ್ರಜಾಧ್ವನಿ ನ್ಯೂಸ್

ಪ್ರಜಾಧ್ವನಿ ನ್ಯೂಸ್

Next Post
ಚಲಿಸುತ್ತಿದ್ದ ಬಸ್ಸ್‌ನಲ್ಲೇ ಗಂಡು ಮಗು ಜನನ: ಬಟ್ಟೆ ಸುತ್ತಿ ಕಿಟಿಕಿಯಿಂದ ಎಸೆದ ಪಾಪಿ ತಾಯಿ

ಚಲಿಸುತ್ತಿದ್ದ ಬಸ್ಸ್‌ನಲ್ಲೇ ಗಂಡು ಮಗು ಜನನ: ಬಟ್ಟೆ ಸುತ್ತಿ ಕಿಟಿಕಿಯಿಂದ ಎಸೆದ ಪಾಪಿ ತಾಯಿ

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂದರ್ಭಿಕ ಚಿತ್ರ
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

No Result
View All Result
  • ಮುಖಪುಟ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಉದ್ಯೋಗ – ಶಿಕ್ಷಣ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಿನಿಮಾ
  • ಲೈಫ್ ಸ್ಟೈಲ್

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..