• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
‘ಮನೆಮನೆಗೆ ಪೊಲೀಸ್​’ ಅಪರಾಧ ಕೃತ್ಯ ಭೇದಿಸಲು ಮಾತ್ರ ಹೊರ ರಾಜ್ಯಗಳ ಪೊಲೀಸ್!

‘ಮನೆಮನೆಗೆ ಪೊಲೀಸ್​’ ಅಪರಾಧ ಕೃತ್ಯ ಭೇದಿಸಲು ಮಾತ್ರ ಹೊರ ರಾಜ್ಯಗಳ ಪೊಲೀಸ್!

July 30, 2025
ಸಂಸ್ಕರಿಸದೆ ನದಿಗೆ ತ್ಯಾಜ್ಯ ಹರಿಸಿದರೆ ಕ್ರಿಮಿನಲ್ ಮೊಕದ್ದಮೆ : ಸಚಿವ ಈಶ್ವರ್‌ ಖಂಡ್ರೆ

ಸಂಸ್ಕರಿಸದೆ ನದಿಗೆ ತ್ಯಾಜ್ಯ ಹರಿಸಿದರೆ ಕ್ರಿಮಿನಲ್ ಮೊಕದ್ದಮೆ : ಸಚಿವ ಈಶ್ವರ್‌ ಖಂಡ್ರೆ

May 26, 2026
ಶಕುಂತಳಾ ಶೆಟ್ಟಿ ಜಾಗ ಮಾಡಿಟ್ಟು ಆಶೀರ್ವಾದ ಮಾಡಿದ್ರು – ನಾವು ಮೆಡಿಕಲ್ ಕಾಲೇಜು ತಂದೆವು: ಶಾಸಕ ಅಶೋಕ್ ರೈ

ಶಕುಂತಳಾ ಶೆಟ್ಟಿ ಜಾಗ ಮಾಡಿಟ್ಟು ಆಶೀರ್ವಾದ ಮಾಡಿದ್ರು – ನಾವು ಮೆಡಿಕಲ್ ಕಾಲೇಜು ತಂದೆವು: ಶಾಸಕ ಅಶೋಕ್ ರೈ

May 26, 2026
ಪೊಲೀಸರ ಎದುರೇ ವಿವಾದಿತ ಮುರಿನಕಟ್ಟೆ ಧ್ವಂಸ – ತೀವ್ರ ಉದ್ವಿಗ್ನತೆ ​: 3 ದಿನ ಇಡೀ ಭಟ್ಕಳ ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿ!

ಪೊಲೀಸರ ಎದುರೇ ವಿವಾದಿತ ಮುರಿನಕಟ್ಟೆ ಧ್ವಂಸ – ತೀವ್ರ ಉದ್ವಿಗ್ನತೆ ​: 3 ದಿನ ಇಡೀ ಭಟ್ಕಳ ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿ!

May 25, 2026
ಬೆಳ್ತಂಗಡಿ: ಕಾರು ಬೈಕ್ ನಡುವೆ ಅಪಘಾತ  ಯುವ ಫೋಟೋ ಗ್ರಾಫರ್ ಮೃತ್ಯು

ಬೆಳ್ತಂಗಡಿ: ಕಾರು ಬೈಕ್ ನಡುವೆ ಅಪಘಾತ ಯುವ ಫೋಟೋ ಗ್ರಾಫರ್ ಮೃತ್ಯು

May 26, 2026
ತೆನ್ಕಾಯಿಮಲೆ ಕಿರುಚಿತ್ರದ 1 ಲಕ್ಷ ವೀಕ್ಷಣೆಯ ಸಂಭ್ರಮಾಚರಣೆಯನ್ನು ಪ್ರಜ್ಞಾ ಆಶ್ರಮದಲ್ಲಿ ಸಂಭ್ರಮ ಆಚರಣೆ

ತೆನ್ಕಾಯಿಮಲೆ ಕಿರುಚಿತ್ರದ 1 ಲಕ್ಷ ವೀಕ್ಷಣೆಯ ಸಂಭ್ರಮಾಚರಣೆಯನ್ನು ಪ್ರಜ್ಞಾ ಆಶ್ರಮದಲ್ಲಿ ಸಂಭ್ರಮ ಆಚರಣೆ

May 25, 2026
ಕೊಲ್ಲೂರು:ಅಪಘಾತದಲ್ಲಿ ಮೃತಪಟ್ಟ ಮಹಿಳೆಯ ಚಿನ್ನ ಕದ್ದಿದ್ದ ಕಳ್ಳ ಅರೆಸ್ಟ್

ಕೊಲ್ಲೂರು:ಅಪಘಾತದಲ್ಲಿ ಮೃತಪಟ್ಟ ಮಹಿಳೆಯ ಚಿನ್ನ ಕದ್ದಿದ್ದ ಕಳ್ಳ ಅರೆಸ್ಟ್

May 25, 2026
ಮಾಣಿ: ಸ್ಕೂಟರ್ ಮೀನಿನ ಲಾರಿ ಡಿಕ್ಕಿ – ಸ್ಕೂಟರ್ ಸವಾರ ಮೃತ್ಯು

ಮಾಣಿ: ಸ್ಕೂಟರ್ ಮೀನಿನ ಲಾರಿ ಡಿಕ್ಕಿ – ಸ್ಕೂಟರ್ ಸವಾರ ಮೃತ್ಯು

May 25, 2026
ಪುತ್ತೂರು ಮುಖ್ಯ ರಸ್ತೆಯ ಅಪಾಯಕಾರಿ ಕಟ್ಟಡಕ್ಕೆ ಮುಕ್ತಿ ಯಾವಾಗ ಅಧಿಕಾರಿಗಳೇ?- ಸಂಚಾರಿಸುವ ಜನರ ಪ್ರಾಣ ಅಪಾಯದಲ್ಲಿ…!

ಪುತ್ತೂರು ಮುಖ್ಯ ರಸ್ತೆಯ ಅಪಾಯಕಾರಿ ಕಟ್ಟಡಕ್ಕೆ ಮುಕ್ತಿ ಯಾವಾಗ ಅಧಿಕಾರಿಗಳೇ?- ಸಂಚಾರಿಸುವ ಜನರ ಪ್ರಾಣ ಅಪಾಯದಲ್ಲಿ…!

May 25, 2026
ರಾಜ್ಯಸಭೆಗೆ ಡಿ ವಿ ಸದಾನಂದ ಗೌಡರ ಹೆಸರು ಮುಂಚೂಣಿಯಲ್ಲಿ – ವರಿಷ್ಠರಿಗೆ ಶಿಫಾರಸು ಮಾಡುವ ಬಗ್ಗೆ ಬಿಜೆಪಿ ಪ್ರಮುಖರ ಸಮಿತಿ ಸಭೆಯಲ್ಲಿ ಚರ್ಚೆ

ರಾಜ್ಯಸಭೆಗೆ ಡಿ ವಿ ಸದಾನಂದ ಗೌಡರ ಹೆಸರು ಮುಂಚೂಣಿಯಲ್ಲಿ – ವರಿಷ್ಠರಿಗೆ ಶಿಫಾರಸು ಮಾಡುವ ಬಗ್ಗೆ ಬಿಜೆಪಿ ಪ್ರಮುಖರ ಸಮಿತಿ ಸಭೆಯಲ್ಲಿ ಚರ್ಚೆ

May 25, 2026
ಪುತ್ತೂರು: ಮೇ 25ಕ್ಕೆ ಆರ್ಯಪು ಪ್ರಾಥಮಿಕ ಸಹಕಾರಿ ಕೃಷಿ ಪತ್ತಿನ ಸಂಘದಿಂದ ದಿಂದ ಸಹಕಾರ “ಸಂಜೀವಿನಿ ವಿಮೆ” ಜಾರಿ.

ಪುತ್ತೂರು: ಮೇ 25ಕ್ಕೆ ಆರ್ಯಪು ಪ್ರಾಥಮಿಕ ಸಹಕಾರಿ ಕೃಷಿ ಪತ್ತಿನ ಸಂಘದಿಂದ ದಿಂದ ಸಹಕಾರ “ಸಂಜೀವಿನಿ ವಿಮೆ” ಜಾರಿ.

May 23, 2026
ಪರಿಸರ ರಕ್ಷಣೆಗಾಗಿ “ಸೀಡ್ ಬಾಲ್” ಅಂದ್ರೆ ಏನು?  ಬೋರು ಗುಡ್ಡ ದಲ್ಲಿ ಕಾಡು ಬೆಳೆಸಲು ಈಗ ಉತ್ತಮ ಸಮಯ

ಪರಿಸರ ರಕ್ಷಣೆಗಾಗಿ “ಸೀಡ್ ಬಾಲ್” ಅಂದ್ರೆ ಏನು? ಬೋರು ಗುಡ್ಡ ದಲ್ಲಿ ಕಾಡು ಬೆಳೆಸಲು ಈಗ ಉತ್ತಮ ಸಮಯ

May 25, 2026
ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಗೃಹ ಸಚಿವರಿಗೆ ಮನವಿ ಮಾಡಿದ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೋಟ್ಯಾಡಿ

ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಗೃಹ ಸಚಿವರಿಗೆ ಮನವಿ ಮಾಡಿದ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೋಟ್ಯಾಡಿ

May 23, 2026
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Tuesday, May 26, 2026
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    ಸಂಸ್ಕರಿಸದೆ ನದಿಗೆ ತ್ಯಾಜ್ಯ ಹರಿಸಿದರೆ ಕ್ರಿಮಿನಲ್ ಮೊಕದ್ದಮೆ : ಸಚಿವ ಈಶ್ವರ್‌ ಖಂಡ್ರೆ

    ಸಂಸ್ಕರಿಸದೆ ನದಿಗೆ ತ್ಯಾಜ್ಯ ಹರಿಸಿದರೆ ಕ್ರಿಮಿನಲ್ ಮೊಕದ್ದಮೆ : ಸಚಿವ ಈಶ್ವರ್‌ ಖಂಡ್ರೆ

    ಶಕುಂತಳಾ ಶೆಟ್ಟಿ ಜಾಗ ಮಾಡಿಟ್ಟು ಆಶೀರ್ವಾದ ಮಾಡಿದ್ರು – ನಾವು ಮೆಡಿಕಲ್ ಕಾಲೇಜು ತಂದೆವು: ಶಾಸಕ ಅಶೋಕ್ ರೈ

    ಶಕುಂತಳಾ ಶೆಟ್ಟಿ ಜಾಗ ಮಾಡಿಟ್ಟು ಆಶೀರ್ವಾದ ಮಾಡಿದ್ರು – ನಾವು ಮೆಡಿಕಲ್ ಕಾಲೇಜು ತಂದೆವು: ಶಾಸಕ ಅಶೋಕ್ ರೈ

    ಬೆಳ್ತಂಗಡಿ: ಕಾರು ಬೈಕ್ ನಡುವೆ ಅಪಘಾತ  ಯುವ ಫೋಟೋ ಗ್ರಾಫರ್ ಮೃತ್ಯು

    ಬೆಳ್ತಂಗಡಿ: ಕಾರು ಬೈಕ್ ನಡುವೆ ಅಪಘಾತ ಯುವ ಫೋಟೋ ಗ್ರಾಫರ್ ಮೃತ್ಯು

    ತೆನ್ಕಾಯಿಮಲೆ ಕಿರುಚಿತ್ರದ 1 ಲಕ್ಷ ವೀಕ್ಷಣೆಯ ಸಂಭ್ರಮಾಚರಣೆಯನ್ನು ಪ್ರಜ್ಞಾ ಆಶ್ರಮದಲ್ಲಿ ಸಂಭ್ರಮ ಆಚರಣೆ

    ತೆನ್ಕಾಯಿಮಲೆ ಕಿರುಚಿತ್ರದ 1 ಲಕ್ಷ ವೀಕ್ಷಣೆಯ ಸಂಭ್ರಮಾಚರಣೆಯನ್ನು ಪ್ರಜ್ಞಾ ಆಶ್ರಮದಲ್ಲಿ ಸಂಭ್ರಮ ಆಚರಣೆ

    ಮಾಣಿ: ಸ್ಕೂಟರ್ ಮೀನಿನ ಲಾರಿ ಡಿಕ್ಕಿ – ಸ್ಕೂಟರ್ ಸವಾರ ಮೃತ್ಯು

    ಮಾಣಿ: ಸ್ಕೂಟರ್ ಮೀನಿನ ಲಾರಿ ಡಿಕ್ಕಿ – ಸ್ಕೂಟರ್ ಸವಾರ ಮೃತ್ಯು

    ಪುತ್ತೂರು ಮುಖ್ಯ ರಸ್ತೆಯ ಅಪಾಯಕಾರಿ ಕಟ್ಟಡಕ್ಕೆ ಮುಕ್ತಿ ಯಾವಾಗ ಅಧಿಕಾರಿಗಳೇ?- ಸಂಚಾರಿಸುವ ಜನರ ಪ್ರಾಣ ಅಪಾಯದಲ್ಲಿ…!

    ಪುತ್ತೂರು ಮುಖ್ಯ ರಸ್ತೆಯ ಅಪಾಯಕಾರಿ ಕಟ್ಟಡಕ್ಕೆ ಮುಕ್ತಿ ಯಾವಾಗ ಅಧಿಕಾರಿಗಳೇ?- ಸಂಚಾರಿಸುವ ಜನರ ಪ್ರಾಣ ಅಪಾಯದಲ್ಲಿ…!

    ರಾಜ್ಯಸಭೆಗೆ ಡಿ ವಿ ಸದಾನಂದ ಗೌಡರ ಹೆಸರು ಮುಂಚೂಣಿಯಲ್ಲಿ – ವರಿಷ್ಠರಿಗೆ ಶಿಫಾರಸು ಮಾಡುವ ಬಗ್ಗೆ ಬಿಜೆಪಿ ಪ್ರಮುಖರ ಸಮಿತಿ ಸಭೆಯಲ್ಲಿ ಚರ್ಚೆ

    ರಾಜ್ಯಸಭೆಗೆ ಡಿ ವಿ ಸದಾನಂದ ಗೌಡರ ಹೆಸರು ಮುಂಚೂಣಿಯಲ್ಲಿ – ವರಿಷ್ಠರಿಗೆ ಶಿಫಾರಸು ಮಾಡುವ ಬಗ್ಗೆ ಬಿಜೆಪಿ ಪ್ರಮುಖರ ಸಮಿತಿ ಸಭೆಯಲ್ಲಿ ಚರ್ಚೆ

    ಪುತ್ತೂರು: ಮೇ 25ಕ್ಕೆ ಆರ್ಯಪು ಪ್ರಾಥಮಿಕ ಸಹಕಾರಿ ಕೃಷಿ ಪತ್ತಿನ ಸಂಘದಿಂದ ದಿಂದ ಸಹಕಾರ “ಸಂಜೀವಿನಿ ವಿಮೆ” ಜಾರಿ.

    ಪುತ್ತೂರು: ಮೇ 25ಕ್ಕೆ ಆರ್ಯಪು ಪ್ರಾಥಮಿಕ ಸಹಕಾರಿ ಕೃಷಿ ಪತ್ತಿನ ಸಂಘದಿಂದ ದಿಂದ ಸಹಕಾರ “ಸಂಜೀವಿನಿ ವಿಮೆ” ಜಾರಿ.

    ಪರಿಸರ ರಕ್ಷಣೆಗಾಗಿ “ಸೀಡ್ ಬಾಲ್” ಅಂದ್ರೆ ಏನು?  ಬೋರು ಗುಡ್ಡ ದಲ್ಲಿ ಕಾಡು ಬೆಳೆಸಲು ಈಗ ಉತ್ತಮ ಸಮಯ

    ಪರಿಸರ ರಕ್ಷಣೆಗಾಗಿ “ಸೀಡ್ ಬಾಲ್” ಅಂದ್ರೆ ಏನು? ಬೋರು ಗುಡ್ಡ ದಲ್ಲಿ ಕಾಡು ಬೆಳೆಸಲು ಈಗ ಉತ್ತಮ ಸಮಯ

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ರಾಜ್ಯ

‘ಮನೆಮನೆಗೆ ಪೊಲೀಸ್​’ ಅಪರಾಧ ಕೃತ್ಯ ಭೇದಿಸಲು ಮಾತ್ರ ಹೊರ ರಾಜ್ಯಗಳ ಪೊಲೀಸ್!

by ಪ್ರಜಾಧ್ವನಿ ನ್ಯೂಸ್
July 30, 2025
in ರಾಜ್ಯ
0
‘ಮನೆಮನೆಗೆ ಪೊಲೀಸ್​’ ಅಪರಾಧ ಕೃತ್ಯ ಭೇದಿಸಲು ಮಾತ್ರ ಹೊರ ರಾಜ್ಯಗಳ ಪೊಲೀಸ್!
137
SHARES
391
VIEWS
ShareShareShare

‘ಮನೆಮನೆಗೆ ಪೊಲೀಸ್​’ ಎಂಬ ವಿನೂತನ ಕಾರ್ಯಕ್ರಮಕ್ಕೆ ಕರ್ನಾಟಕ ಪೊಲೀಸ್ ಇಲಾಖೆ  ಕಳೆದ ವಾರ ಚಾಲನೆ ಕೊಟ್ಟಿದೆ. ಪೊಲೀಸರು ಮತ್ತು ನಾಗರಿಕ ಜಗತ್ತಿನ ನಡುವಿನ ಅಂತರವನ್ನು ಕಡಿಮೆ ಮಾಡಿ, ಅವರ ಮಧ್ಯೆ ಬಾಂಧವ್ಯವನ್ನು ಬೆಸೆದು, ನಾಗರಿಕರು ಕಾನೂನನ್ನು ಕೈಗೆತ್ತಿಕೊಳ್ಳದೇ ಪೊಲೀಸರ ಜೊತೆ ಸಹಕರಿಸುವಂತೆ ಮಾಡುವುದಕ್ಕಾಗಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ನಿಜವಾಗಿಯೂ ಶ್ಲಾಘನೀಯ. ಈ ಕಾರ್ಯಕ್ರಮ, ಇತ್ತೀಚೆಗೆ ಅಧಿಕಾರವಹಿಸಿಕೊಂಡಿರುವ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ. ಸಲೀಂ ಅವರ ಕನಸಿನ ಕೂಸು. ಮೊದಲ ಹಂತದಲ್ಲಿ ನಗರ ಪ್ರದೇಶಗಳಿಗೆ ಸೀಮಿತವಾಗಿರುವ ಈ ಕಾರ್ಯಕ್ರಮ ಗ್ರಾಮೀಣ ಭಾಗಕ್ಕೂ ಪಸರಿಸಲಿ. ಈ ಕಾರ್ಯಕ್ರಮದ ಜೊತೆಗೆ ಇನ್ನೂ ಹಲವಾರು ನಾಗರಿಕ-ಕೇಂದ್ರಿತ ಕಾರ್ಯಕ್ರಮಗಳನ್ನು ಡಾ ಸಲೀಂ ಅವರು ತರಲಿ.

ಇಂತಹ ಖುಷಿಯ ಸಂದರ್ಭದಲ್ಲಿ ಒಂದು ಗಂಭೀರ ವಿಚಾರವನ್ನು ಹೇಳಲೇಬೇಕು. ಹಗಲಿರುಳು ಬೆವರು ಸುರಿಸಿ ರಾಜ್ಯದ ಜನರನ್ನು ಕಾಯುತ್ತಾ, ಅಪರಾಧ ಮಾಡಿದವರ ಜಾಡು ಹಿಡಿದು ಕೇಸುಗಳನ್ನು ಭೇದಿಸುತ್ತಿರುವ ನೂರಾರು ಪ್ರಾಮಾಣಿಕ ಅಧಿಕಾರಿಗಳ ಮಧ್ಯೆಯಿರುವ ಬೆರಳೆಣಿಕೆಯ ತೋಳಗಳ ಲೋಪಗಳಿಂದ ಪ್ರಾಮಾಣಿಕ ಅಧಿಕಾರಿಗಳು ತಲೆತಗ್ಗಿಸುವಂತಾಗಿದೆ. ಇದು ಹೀಗೆ ಮುಂದುವರೆದರೆ ಮುಂದೊಂದು ದಿನ ಕರ್ನಾಟಕ ರಾಜ್ಯಕ್ಕೆ ಬಹು ದೊಡ್ಡ ಕಂಟಕ ಕಾದಿದೆ.

ಕಳೆದ ಆರು ತಿಂಗಳಲ್ಲಿ ನಡೆದ ಅನೇಕ ಅಪರಾಧ ಕೃತ್ಯಗಳ ಪೈಕಿ ನಾಲ್ಕು ಕೃತ್ಯಗಳು ರಾಜ್ಯದ ಜನರ ನಿದ್ದೆ ಕೆಡಿಸಿವೆ. ಆದರೆ, ಸರಕಾರ ಮಾತ್ರ ಇವೆಲ್ಲ ಬಿಡಿ ಅಪರಾಧ ಕೃತ್ಯಗಳು. ಒಂದಕ್ಕೊಂದು ಸಂಬಂಧ ಇಲ್ಲ. ಹಾಗಾಗಿ ಕಾನೂನು ಸುವ್ಯವಸ್ಥೆ ಸರಿಯಾಗಿದೆ ಎಂದುಕೊಂಡಂತಿದೆ.

ಈ ಸರಣಿಯಲ್ಲಿ ಮೊದಲು ಬಂದಿದ್ದು, ಬಂಗಾರ ಕಳ್ಳಸಾಗಣೆ ಕೇಸ್. ಇದು ಜನರಿಗೆ ಶಾಕ್ ನೀಡಿತು​. ಈ ಕುರಿತು ರಾಜ್ಯದ ಜನ ಊರೂರಲ್ಲಿ ಮಾತಾಡಿಕೊಂಡರು. ಶಿಷ್ಟಾಚಾರದ ಗಡಿ ದಾಟಿ ಪೊಲೀಸರು ನೇಮಕ ಮಾಡಿದ್ದ ಕಾವಲು ಗಡಿಯನ್ನೇ ಉಪಯೋಗಿಸಿಕೊಂಡು ಬಂಗಾರ ಕಳ್ಳಸಾಗಣೆ ಮಾಡಿದ ಆರೋಪ ನಟಿ ರನ್ಯಾ ರಾವ್​ ಅವರ ಮೇಲೆ ಬಂದಾಗ ಕರ್ನಾಟಕ ಪೊಲೀಸರಿಗೆ ಮುಖಭಂಗವಾಯಿತು. ಯಾಕೆಂದರೆ, ರನ್ಯಾರಾವ್​ ಹೇಳಿ ಕೇಳಿ ಓರ್ವ ಡಿಜಿಪಿ ಹಂತದ ಅಧಿಕಾರಿಯ ಮಗಳು. ಇದನ್ನು ಭೇದಿಸಿದವರು ಕೇಂದ್ರ ಕಂದಾಯ ಗುಪ್ತಚರ ಇಲಾಖೆ.

Keshari Durga

ಜಾಹೀರಾತು

ಸುಮಾರು ಮೂರು ವಾರಗಳ ಹಿಂದೆ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹದ ಮೇಲೆ ದಾಳಿ ನಡೆಸಿದ ಕೇಂದ್ರೀಯ ತನಿಖಾ ದಳ, ಓರ್ವ ವೈದ್ಯ ಹಾಗೂ ಮತ್ತೊಬ್ಬ ಎಎಸ್ಐನನ್ನು ಬಂಧಿಸಿತು. ಖಚಿತ ಮಾಹಿತಿಯೊಂದಿಗೆ ನಡೆಸಿದ ದಾಳಿಯ ನಂತರ, ಎನ್​ಐಎ ತನಿಖೆಯಿಂದ ಗಂಭೀರ ವಿಚಾರಗಳು ಹೊರಬಂದಿವೆ. ಜೈಲಿನ ಒಳಗಿರುವ ಆರೋಪಿಯೊಬ್ಬನಿಗೆ ಬಂದೀಖಾನೆಯಿಂದ ತಪ್ಪಿಸಿಕೊಳ್ಳಲು ಯೋಜನೆಯೊಂದನ್ನು ರೂಪಿಸಲು ಎಎಸ್ಐ ಚಾಂದ್​ ಪಾಷಾ ಸಹಕರಿಸುತ್ತಿದ್ದ. ಜೈಲಿನಿಂದ ತಪ್ಪಿಸಿಕೊಂಡು ಹೊರ ಬಂದ ನಂತರ ಕೇರಳಕ್ಕೆ ಹೋಗಿ, ಅಲ್ಲಿಂದ ಮುಂದೆ ಮಧ್ಯ ಪ್ರಾಚ್ಯಕ್ಕೆ ಹೋಗಲು ಅನುಕೂಲವಾಗುವಂತೆ ಪೊಲೀಸ್​ ಸಮವಸ್ತ್ರವನ್ನು ಹೊಲಿಸಿದ್ದ ಎನ್ನುವ ಮಾಹಿತಿ ನಿಜವೇ ಆಗಿದ್ದರೆ, ಇದು ಬಹಳ ಗಂಭೀರ ವಿಚಾರ.

Muliya

ಜಾಹೀರಾತು

ಇನ್ನೊಂದು ಘಟನೆಯಲ್ಲಿ, ಶನಿವಾರ ರಾತ್ರಿ ಮುಂಬೈ ಮತ್ತು ಅಹಮದಾಬಾದ್​ ಪೊಲೀಸರು ಮೈಸೂರಿಗೆ ಬಂದು ನಗರದ ಹೃದಯ ಭಾಗದಲ್ಲಿರುವ ಗ್ಯಾರೇಜೊಂದರಲ್ಲಿ ನಡೆಯುತ್ತಿದ್ದ ಡ್ರಗ್ಸ್ ಫ್ಯಾಕ್ಟರಿ ಮೇಲೆ ದಾಳಿ ನಡೆಸಿತು. ಈ ದಾಳಿ ಮಾಡುವಾಗ ಸ್ಥಳೀಯ ಪೊಲೀಸರ ಸಹಕಾರ ಪಡೆದಿತ್ತು ಎನ್ನುವುದು ಸಮಾಧಾನಕರ ವಿಷಯ. ಮೈಸೂರಿನ ಘಟನೆಗೆ ಸಂಬಂಧಿಸಿದಂತೆ ಅಲ್ಲಿಯ ಕಮಿಷನರ್ ಕ್ರಮ ತೆಗೆದುಕೊಳ್ಳಲು ಮುಂದಾದಾಗ ಅವರ ಕೈಕಟ್ಟಿದ್ದು ವಿಷಾದನೀಯ. ಯಾವ ಜಾಗದಲ್ಲಿ ಈ ಡ್ರಗ್ಸ್ ಫ್ಯಾಕ್ಟರಿ ನಡೆಯುತ್ತಿತ್ತೋ ಆ ಜಾಗ ಇರುವ ಪೊಲೀಸ್ ಠಾಣಾ ವ್ಯಾಪ್ತಿಯ ಇನ್ಸ್​ಪೆಕ್ಟರ್​​ರನ್ನು, ಕರ್ತವ್ಯ ಲೋಪದ ಆರೋಪದ ಮೇಲೆ ಅಮಾನತು ಮಾಡಿ ಕಮಿಷನರ್​ ಹೊರಡಿಸಿದ ಆದೇಶವನ್ನು 24 ಗಂಟೆ ಒಳಗೆ ಕಸದ ಬುಟ್ಟಿಗೆ ಎಸೆಯುವಂತೆ ಮಾಡಲಾಯಿತು.

ನಾಲ್ಕನೇಯದ್ದು; ಇನ್ಸ್ಟಾಗ್ರಾಮ್​​ನಲ್ಲಿ ಭಯೋತ್ಪಾದನೆಗೆ ಪ್ರಚೋದನೆ ನೀಡುತ್ತಿದ್ದಳು ಎನ್ನುವ ಆರೋಪದ ಮೇಲೆ ಬೆಂಗಳೂರಿನ ಮಹಿಳೆಯೋರ್ವಳನ್ನು ಅಹಮದಾಬಾದ್​ ಭಯೋತ್ಪಾದಕ ನಿಗ್ರಹ ದಳ ಬಂಧಿಸಿರುವ ವಿಚಾರ.

ಈ ನಾಲ್ಕೂ ಘಟನೆಯ ಹಿಂದೆ ಒಂದು ಸಾಮ್ಯತೆ ಇದೆ. ಈ ಘಟನೆಗಳ ಕುರಿತು ಸ್ಥಳೀಯ ಪೊಲೀಸರಿಗೆ ಮತ್ತು ರಾಜ್ಯದ ಗುಪ್ತಚರ ಇಲಾಖೆಗೆ ಮಾಹಿತಿಯಿರಲಿಲ್ಲ ಎನ್ನುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಅಥವಾ, ಅಪರಾಧಕ್ಕಿಳಿದಿರುವ ಸಮಾಜ ವಿರೋಧಿಗಳು, ಸ್ಥಳೀಯ ಪೊಲೀಸರು ಮತ್ತು ಗುಪ್ತಚರ ಇಲಾಖೆಯ ಕೆಲ ಅಧಿಕಾರಿಗಳನ್ನು ತಮ್ಮ ಕಿಸೆಗಿಳಿಸಿಕೊಂಡಿರುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.

ಒಂದೆಡೆ, ಮನೆ ಮನೆಗೆ ಪೊಲೀಸ್ ಎನ್ನುವ ಅತ್ಯಂತ ವಿನೂತನ ಕಾರ್ಯಕ್ರಮವನ್ನು ರೂಪಿಸುವ ಪೊಲೀಸ್ ಇಲಾಖೆ. ಮತ್ತೊಂದೆಡೆ, ಕರ್ತವ್ಯ ಚ್ಯುತಿಯ ಆರೋಪದ ಮೇಲೆ ಒಬ್ಬ ಇನ್ಸ್​​​ಪೆಕ್ಟರ್​​ರನ್ನು ಮೈಸೂರು ಪೊಲೀಸ್​ ಕಮಿಷನರ್​ ಅಮಾನತು ಮಾಡಿದರೆ, ರಾಜಕೀಯ ಒತ್ತಡದ ಕಾರಣಕ್ಕಾಗಿ ಆ ಆದೇಶವನ್ನು 24 ಗಂಟೆಯೊಳಗೆ ವಾಪಸ್ ತೆಗೆದುಕೊಳ್ಳುವಂತಾಗಿದ್ದು ವಿಪರ್ಯಾಸ.

ಈ ನಾಲ್ಕೂ ಕೇಸಿಗೆ ಸಂಬಂಧಿಸಿದಂತೆ ಇನ್ನೂ ಕೆಲವು ಸಾಮ್ಯತೆಗಳಿವೆ. ಸಮಾಜ ವಿರೋಧಿ ಮತ್ತು ಅಪರಾಧ ಮಾಡುವ ಸಾರ್ವಜನಿಕರು ತಮ್ಮ ಇನ್ನಿಂಗ್ಸ್​ ಆರಂಭಿಸುವುದು ಭ್ರಷ್ಟಾಚಾರದ ಮೂಲಕ. ಯಾರಿಗೋ ಬಿಪಿಎಲ್​ ಕಾರ್ಡ್​ ಕೊಡಿಸುವುದು-ಹೀಗೆ ಶುರುವಾಗುವ ಭ್ರಷ್ಟ ಕೆಲಸಗಳಿಂದ ಸಿಗುವ ಹಣ ತುಂಬಾ ಕಡಿಮೆಯಾಯ್ತು ಎನ್ನಿಸಿದಾಗ ಆತ ಒಂದು ಹೆಜ್ಜೆ ಮುಂದೆ ಹೋಗುತ್ತಾನೆ ಮತ್ತು ಗಂಭೀರ ಅಪರಾಧ ಕೃತ್ಯವೆಸಗುವ ತಂಡದ ಜೊತೆ ಕೈ ಜೋಡಿಸಿ ಒಂದೋ ಎರಡೋ ಅಪರಾಧ ಕೃತ್ಯವೆಸಗಿ ಜಾಕ್​ಪಾಟ್​ ಹೊಡೆದು ಕೋಟ್ಯಂತರ ರೂಪಾಯಿ ಗಳಿಸೋಣ ಎಂಬ ಲೆಕ್ಕಾಚಾರಕ್ಕಿಳಿಯುತ್ತಾನೆ. ಇನ್ನೊಂದು ವರ್ಗವಿದೆ. ಈ ವರ್ಗದ ಜನ ತಾವು ಮಾಡುವ ಅಪರಾಧಗಳನ್ನು ಮುಚ್ಚಿಡಲು ಮತ್ತು ಅದನ್ನು ಮುಂದುವರಿಸಿಕೊಂಡು ಹೋಗಲು ಪೊಲೀಸರ ಕೈ ಬೆಚ್ಚಗೆ ಮಾಡುತ್ತಲೇ ಇರುತ್ತಾರೆ. ಪರಪ್ಪನ ಅಗ್ರಹಾರ ಪ್ರಕರಣ ಮತ್ತು ಮೈಸೂರಿನ ಡ್ರಗ್ಸ್​ ಫ್ಯಾಕ್ಟರಿ- ಈ ಎರಡು ವಿಚಾರಗಳಿಗೆ ಸಂಬಂಧಿಸಿದಂತೆ ಭ್ರಷ್ಟ ಅಧಿಕಾರಿಗಳು ಮತ್ತವರ ಭ್ರಷ್ಟ ವ್ಯವಸ್ಥೆ ಕೆಲಸ ಮಾಡಿರುವುದು ನಿಚ್ಚಳವಾಗಿ ಕಾಣುತ್ತಿದೆ.

ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲು ಮುಂದಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾ. ಜಿ ಪರಮೇಶ್ವರ್ ಈ ಕುರಿತು ಗಮನ ಹರಿಸಬೇಕಾಗಿದೆ. ನಮ್ಮ ರಾಜ್ಯದಲ್ಲಿ ನಡೆಯುತ್ತಿರುವ ಗಂಭೀರ ಅಪರಾಧ ಕೃತ್ಯಗಳ ಬಗ್ಗೆ ಹೊರ ರಾಜ್ಯದ ಪೊಲೀಸರಿಗೆ ಮತ್ತು ಕೇಂದ್ರ ಸರಕಾರಕ್ಕೆ ಮಾಹಿತಿ ಸಿಗುತ್ತಿದೆ. ಹಾಗಿದ್ದರೆ, ನಮ್ಮ ಗುಪ್ತಚರ ಇಲಾಖೆ ಏನು ಮಾಡುತ್ತಿದೆ ಎನ್ನುವ ಪ್ರಶ್ನೆ ಉದ್ಭವಿಸುವುದು ಸಹಜ.

Sathyasayi Hospital

ಜಾಹೀರಾತು

ಪ್ರಾಮಾಣಿಕ ಪೊಲೀಸರ ನಡುವೆ ಇದ್ದು, ಭ್ರಷ್ಟ ವ್ಯವಸ್ಥೆಯನ್ನು ವ್ಯವಸ್ಥೆಯನ್ನು ಯಶಸ್ವಿಯಾಗಿ ನಡೆಸುವ ಭ್ರಷ್ಟರ ಕೂಟಕ್ಕೆ ಕೊನೆ ಹಾಡದಿದ್ದರೆ ಮುಂದೊಂದು ದಿನ ಆಡಳಿತ ಪಕ್ಷಕ್ಕೆ ಕಂಟಕ ಬರಬಹುದು. ಅದಕ್ಕಿಂತ ಹೆಚ್ಚಾಗಿ, ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಟ್ಟು, ಭವಿಷ್ಯದಲ್ಲಿ ರಾಜ್ಯದ ಜನ ಹಿಡಿಶಾಪ ಹಾಕುವ ದಿನ ಬರಬಹುದು.

SendShare55Share
Previous Post

ಭಯೋತ್ಪಾದಕ ಸಂಘಟನೆಯೊಂದಿಗೆ ಬೆಂಬಲ ಆನ್​ಲೈನ್​ನಲ್ಲಿ ಜಿಹಾದಿ ಕೃತ್ಯ ಆರೋಪದಡಿ ಶಮಾ ಪರ್ವೀನ್ ಬಂಧನ

Next Post

ದ.ಕ ಜಿಲ್ಲೆಯಲ್ಲಿ ಕೆಂಪು ಕಲ್ಲು ಮತ್ತು ಮರಳು ಅಭಾವನ್ನು ತ್ವರಿತವಾಗಿ ಬಗೆಹರಿಸುವಂತೆ ಮತ್ತು ಜನಪರ ನೀತಿಯನ್ನು ಜಾರಿಗೊಳಿಸುವಂತೆ ಜಿಲ್ಲೆಯ ಬಿಜೆಪಿ ನಿಯೋಗದಿಂದ ಮುಖ್ಯಮಂತ್ರಿ ಭೇಟಿಯಾಗಿ ಮನವಿ

ಪ್ರಜಾಧ್ವನಿ ನ್ಯೂಸ್

ಪ್ರಜಾಧ್ವನಿ ನ್ಯೂಸ್

Next Post
ದ.ಕ ಜಿಲ್ಲೆಯಲ್ಲಿ ಕೆಂಪು ಕಲ್ಲು ಮತ್ತು ಮರಳು ಅಭಾವನ್ನು ತ್ವರಿತವಾಗಿ ಬಗೆಹರಿಸುವಂತೆ ಮತ್ತು ಜನಪರ ನೀತಿಯನ್ನು ಜಾರಿಗೊಳಿಸುವಂತೆ ಜಿಲ್ಲೆಯ ಬಿಜೆಪಿ ನಿಯೋಗದಿಂದ ಮುಖ್ಯಮಂತ್ರಿ ಭೇಟಿಯಾಗಿ ಮನವಿ

ದ.ಕ ಜಿಲ್ಲೆಯಲ್ಲಿ ಕೆಂಪು ಕಲ್ಲು ಮತ್ತು ಮರಳು ಅಭಾವನ್ನು ತ್ವರಿತವಾಗಿ ಬಗೆಹರಿಸುವಂತೆ ಮತ್ತು ಜನಪರ ನೀತಿಯನ್ನು ಜಾರಿಗೊಳಿಸುವಂತೆ ಜಿಲ್ಲೆಯ ಬಿಜೆಪಿ ನಿಯೋಗದಿಂದ ಮುಖ್ಯಮಂತ್ರಿ ಭೇಟಿಯಾಗಿ ಮನವಿ

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂದರ್ಭಿಕ ಚಿತ್ರ
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

No Result
View All Result
  • ಮುಖಪುಟ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಉದ್ಯೋಗ – ಶಿಕ್ಷಣ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಿನಿಮಾ
  • ಲೈಫ್ ಸ್ಟೈಲ್

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..