ಬೆಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರೀ ಸುದ್ದಿಯಲ್ಲಿರುವ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಪೊಲೀಸರು ಬೆಳಗ್ಗೆ ವಶಕ್ಕೆ ಪಡೆದಿದ್ದಾರೆ. ಇದೀಗ ಯೂಟ್ಯೂಬರ್ ಸಮೀರ್ಗೆ ಬಂಧನ ಭೀತಿ ಎದುರಾಗಿದೆ. ಆತನನ್ನು ವಶಕ್ಕೆ ಪಡೆಯಲು ಮಂಗಳೂರು ಪೊಲೀಸರು ಬೆಂಗಳೂರಿನಲ್ಲಿರುವ ಸಮೀರ್ ಬಾಡಿಗೆ ಮನೆಯನ್ನು ಸುತ್ತುವರೆದಿದ್ದಾರೆ. ಆದ್ರೆ, ಸದ್ಯ ಸಮೀರ್ ಮನೆಯಲ್ಲಿಲ್ಲ. ಆತ ಎಸ್ಕೇಪ್ ಆಗಿದ್ದಾನೆ ಎಂದು ತಿಳಿದು ಬಂದಿದೆ.
ಬೆಂಗಳೂರಿನ ಬನ್ನೇರುಘಟ್ಟದ ಸಮೀಪ ಸಮೀರ್ ತಾಯಿ ಹಾಗೂ ಸಹೋದರಿಯ ಜೊತೆಗೆ ವಾಸವಿದ್ದಾನೆ. ಧರ್ಮಸ್ಥಳ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆನಂದ್ ಎನ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಸಮೀರ್ನನ್ನು ವಶಕ್ಕೆ ಪಡೆಯಲೆಂದು ಆತನ ನಿವಾಸದ ಮೇಲೆ ಮೊದಲು ಬೆಳಗ್ಗೆ 6 ಗಂಟೆಗೆ ಪೊಲೀಸರು ಸಮೀರ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಆದ್ರೆ, ಸಮೀರ್ ಮನೆಯಲ್ಲಿರಲಿಲ್ಲ.
ಇದೀಗ ಬೆಳಗ್ಗೆಯಿಂದ ಮೂರು ಬಾರಿ ಪೊಲೀಸರು ಸಮೀರ್ ಮನೆಗೆ ಭೇಟಿ ನೀಡಿದ್ದಾರೆ. ಆದ್ರೆ, ಸಮೀರ್ ಮಾತ್ರ ಮೊಬೈಲ್ ಮನೆ ಒಳಗಡೆ ಬಿಟ್ಟು ಎಸ್ಕೇಪ್ ಆಗಿದ್ದಾನೆ. ಸದ್ಯ, ಪೊಲೀಸರು ಮನೆಯಲ್ಲಿ ಸರ್ಚ್ ಮಾಡಲು ವಾರೆಂಟ್ ಸಹ ಪಡೆಯಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇದುವರೆಗೂ ಪೊಲೀಸರ ಕರೆಗೆ ಸಮೀರ್ ಕಡೆಯಿಂದ ಯಾವುದೇ ಉತ್ತರ ಬಂದಿಲ್ಲ ಎಂದು ತಿಳಿದು ಬಂದಿದೆ.