• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
ಸೌತ್ ಕೆನರಾ ಫೋಟೋಗ್ರಫರ್ಸ್ ಅಸೋಸಿಯೇಶನ್ (ರಿ.)  ‌‌ಪುತ್ತೂರು ವಲಯ ಪದಪ್ರದಾನ

ಸೌತ್ ಕೆನರಾ ಫೋಟೋಗ್ರಫರ್ಸ್ ಅಸೋಸಿಯೇಶನ್ (ರಿ.) ‌‌ಪುತ್ತೂರು ವಲಯ ಪದಪ್ರದಾನ

December 22, 2025
ಡಿ.23ರಂದು ಯು.ಆರ್. ಪ್ರಾಪರ್ಟೀಸ್ ಪುತ್ತೂರು ಬೆದ್ರಾಳ ಶ್ರೀಮಾ ಥೀಂ ಪಾರ್ಕ್ ಲೋಕಾರ್ಪಣೆ ಮತ್ತು ದೈವಗಳ ನೇಮೋತ್ಸವ

ಡಿ.23ರಂದು ಯು.ಆರ್. ಪ್ರಾಪರ್ಟೀಸ್ ಪುತ್ತೂರು ಬೆದ್ರಾಳ ಶ್ರೀಮಾ ಥೀಂ ಪಾರ್ಕ್ ಲೋಕಾರ್ಪಣೆ ಮತ್ತು ದೈವಗಳ ನೇಮೋತ್ಸವ

December 22, 2025
ಧರ್ಮಸ್ಥಳದಲ್ಲಿ ಉಚಿತ ಟೈಲರಿಂಗ್‌ ತರಬೇತಿ ಶಿಬಿರ ಉದ್ಘಾಟನೆ

ಧರ್ಮಸ್ಥಳದಲ್ಲಿ ಉಚಿತ ಟೈಲರಿಂಗ್‌ ತರಬೇತಿ ಶಿಬಿರ ಉದ್ಘಾಟನೆ

December 22, 2025
ಬೆಳ್ತಂಗಡಿ ಆರಂಬೋಡಿ ಗ್ರಾಮದ ಕುದುಂಬುಡ -ಕೊಮ್ಮಡ ರಸ್ತೆ  ತಡೆಗೋಡೆ ನಿರ್ಮಾಣಕ್ಕೆ ರೂ.1.00 ಕೋಟಿ ಅನುದಾನ ನೀಡಿದ ತಾಲೂಕಿನ ಜನಪ್ರಿಯ ಶಾಸಕರಾದ ಶ್ರೀ ಹರೀಶ್ ಪೂಂಜರಿಗೆ ಗ್ರಾಮಸ್ಥರಿಂದ ಅಭಿನಂದನೆ

ಬೆಳ್ತಂಗಡಿ ಆರಂಬೋಡಿ ಗ್ರಾಮದ ಕುದುಂಬುಡ -ಕೊಮ್ಮಡ ರಸ್ತೆ ತಡೆಗೋಡೆ ನಿರ್ಮಾಣಕ್ಕೆ ರೂ.1.00 ಕೋಟಿ ಅನುದಾನ ನೀಡಿದ ತಾಲೂಕಿನ ಜನಪ್ರಿಯ ಶಾಸಕರಾದ ಶ್ರೀ ಹರೀಶ್ ಪೂಂಜರಿಗೆ ಗ್ರಾಮಸ್ಥರಿಂದ ಅಭಿನಂದನೆ

December 22, 2025
ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಕುಂತೂರು ಕೋಡ್ಲ ನಿವಾಸಿ ರವಿ ಪೂಜಾರಿ ಆಯ್ಕೆ

ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಕುಂತೂರು ಕೋಡ್ಲ ನಿವಾಸಿ ರವಿ ಪೂಜಾರಿ ಆಯ್ಕೆ

December 22, 2025
ಜ.2: “ಆರಿಗೊ” ಗರೋಡಿಯಲ್ಲಿ ನೇಮೋತ್ಸವ; ಡಿ.23ರಂದು ಗೊನೆ ಮುಹೂರ್ತ

ಜ.2: “ಆರಿಗೊ” ಗರೋಡಿಯಲ್ಲಿ ನೇಮೋತ್ಸವ; ಡಿ.23ರಂದು ಗೊನೆ ಮುಹೂರ್ತ

December 22, 2025
ಡಿಸೆಂಬರ್ 31ರಂದು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆಯಲಿರುವ ಉಡುಪಿ ಪರ್ಯಾಯ ಪೀಠವೇರಲಿರುವ ಶಿರೂರು ಸ್ವಾಮೀಜಿಗಳ ಪೌರ ಸನ್ಮಾನದ ಆಮಂತ್ರಣ ಪತ್ರ ಬಿಡುಗಡೆ

ಡಿಸೆಂಬರ್ 31ರಂದು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆಯಲಿರುವ ಉಡುಪಿ ಪರ್ಯಾಯ ಪೀಠವೇರಲಿರುವ ಶಿರೂರು ಸ್ವಾಮೀಜಿಗಳ ಪೌರ ಸನ್ಮಾನದ ಆಮಂತ್ರಣ ಪತ್ರ ಬಿಡುಗಡೆ

December 19, 2025
ಯೋಜನೆಗಳ ಹೆಸರು ಬದಲಾವಣೆಯೇ ಮೋದಿ ಸರ್ಕಾರದ ಸಾಧನೆ: ರಕ್ಷಿತ್ ಶಿವರಾಂ

ಯೋಜನೆಗಳ ಹೆಸರು ಬದಲಾವಣೆಯೇ ಮೋದಿ ಸರ್ಕಾರದ ಸಾಧನೆ: ರಕ್ಷಿತ್ ಶಿವರಾಂ

December 18, 2025
ಪುತ್ತೂರು: ಬಿಜೆಪಿ ಗ್ರಾಮಾಂತರ ಮಂಡಲದ ಉಪಾಧ್ಯಕ್ಷರುಗಳಾಗಿ ವಿರೂಪಾಕ್ಷ ಭಟ್, ನಾಗೇಶ್ ಕೆಮ್ಮಾಯಿ ನೇಮಕ

ಪುತ್ತೂರು: ಬಿಜೆಪಿ ಗ್ರಾಮಾಂತರ ಮಂಡಲದ ಉಪಾಧ್ಯಕ್ಷರುಗಳಾಗಿ ವಿರೂಪಾಕ್ಷ ಭಟ್, ನಾಗೇಶ್ ಕೆಮ್ಮಾಯಿ ನೇಮಕ

December 17, 2025
ಬೆಳ್ತಂಗಡಿ ತಾಲೂಕು 19 ನೇಯ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಯಕ್ಷಗಾನ, ಸಾಂಸ್ಕೃತಿಕ ಹಾಗೂ ಸಾಹಿತ್ಯ ಸಂಘಟಕ ಬಿ. ಭುಜಬಲಿ ಧರ್ಮಸ್ಥಳ

ಬೆಳ್ತಂಗಡಿ ತಾಲೂಕು 19 ನೇಯ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಯಕ್ಷಗಾನ, ಸಾಂಸ್ಕೃತಿಕ ಹಾಗೂ ಸಾಹಿತ್ಯ ಸಂಘಟಕ ಬಿ. ಭುಜಬಲಿ ಧರ್ಮಸ್ಥಳ

December 17, 2025
ಅಡಿಕೆ ಹಾಗೂ ಕಾಳುಮೆಣಸು ಬೆಳೆಗಳು ನಾಶವಾಗಿದ್ದು ರೈತರು ಕಂಗೆಟಿದ್ದಾರೆ-ಬೆಳೆ ವಿಮೆ ಪರಿಹಾರದಲ್ಲಿ ತಾರತಮ್ಯ ನೀತಿಯನ್ನು ಖಂಡಿಸಿ ಕಾನೂನು ಹೋರಾಟ : ಜಯಾನಂದ ಕಲ್ಲಾಪು

ಅಡಿಕೆ ಹಾಗೂ ಕಾಳುಮೆಣಸು ಬೆಳೆಗಳು ನಾಶವಾಗಿದ್ದು ರೈತರು ಕಂಗೆಟಿದ್ದಾರೆ-ಬೆಳೆ ವಿಮೆ ಪರಿಹಾರದಲ್ಲಿ ತಾರತಮ್ಯ ನೀತಿಯನ್ನು ಖಂಡಿಸಿ ಕಾನೂನು ಹೋರಾಟ : ಜಯಾನಂದ ಕಲ್ಲಾಪು

December 17, 2025
ಡ್ಯಾನ್ಸ್ ಮಾಡಲು ಬಂದಿದ್ದ ಬಾಲಕಿ ಮೇಲೆ ಅತ್ಯಾಚಾರ: ಯೂಟ್ಯೂಬ್ ಸ್ಟಾರ್ ವಿರುದ್ಧ ಪೋಕ್ಸೋ ಕೇಸ್

ಡ್ಯಾನ್ಸ್ ಮಾಡಲು ಬಂದಿದ್ದ ಬಾಲಕಿ ಮೇಲೆ ಅತ್ಯಾಚಾರ: ಯೂಟ್ಯೂಬ್ ಸ್ಟಾರ್ ವಿರುದ್ಧ ಪೋಕ್ಸೋ ಕೇಸ್

December 17, 2025
ಹೊಸ ವರ್ಷಾಚರಣೆ: ಹೋಟೆಲ್, ಬಾರ್, ಪಬ್, ರೆಸ್ಟೋರೆಂಟ್‌ಗೆ ಮಾರ್ಗಸೂಚಿ ಪ್ರಕಟ – ಪೊಲೀಸ್‌ ಗೈಡ್‌ಲೈನ್ಸ್‌

ಹೊಸ ವರ್ಷಾಚರಣೆ: ಹೋಟೆಲ್, ಬಾರ್, ಪಬ್, ರೆಸ್ಟೋರೆಂಟ್‌ಗೆ ಮಾರ್ಗಸೂಚಿ ಪ್ರಕಟ – ಪೊಲೀಸ್‌ ಗೈಡ್‌ಲೈನ್ಸ್‌

December 17, 2025
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Monday, December 22, 2025
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    ಡಿ.23ರಂದು ಯು.ಆರ್. ಪ್ರಾಪರ್ಟೀಸ್ ಪುತ್ತೂರು ಬೆದ್ರಾಳ ಶ್ರೀಮಾ ಥೀಂ ಪಾರ್ಕ್ ಲೋಕಾರ್ಪಣೆ ಮತ್ತು ದೈವಗಳ ನೇಮೋತ್ಸವ

    ಡಿ.23ರಂದು ಯು.ಆರ್. ಪ್ರಾಪರ್ಟೀಸ್ ಪುತ್ತೂರು ಬೆದ್ರಾಳ ಶ್ರೀಮಾ ಥೀಂ ಪಾರ್ಕ್ ಲೋಕಾರ್ಪಣೆ ಮತ್ತು ದೈವಗಳ ನೇಮೋತ್ಸವ

    ಧರ್ಮಸ್ಥಳದಲ್ಲಿ ಉಚಿತ ಟೈಲರಿಂಗ್‌ ತರಬೇತಿ ಶಿಬಿರ ಉದ್ಘಾಟನೆ

    ಧರ್ಮಸ್ಥಳದಲ್ಲಿ ಉಚಿತ ಟೈಲರಿಂಗ್‌ ತರಬೇತಿ ಶಿಬಿರ ಉದ್ಘಾಟನೆ

    ಬೆಳ್ತಂಗಡಿ ಆರಂಬೋಡಿ ಗ್ರಾಮದ ಕುದುಂಬುಡ -ಕೊಮ್ಮಡ ರಸ್ತೆ  ತಡೆಗೋಡೆ ನಿರ್ಮಾಣಕ್ಕೆ ರೂ.1.00 ಕೋಟಿ ಅನುದಾನ ನೀಡಿದ ತಾಲೂಕಿನ ಜನಪ್ರಿಯ ಶಾಸಕರಾದ ಶ್ರೀ ಹರೀಶ್ ಪೂಂಜರಿಗೆ ಗ್ರಾಮಸ್ಥರಿಂದ ಅಭಿನಂದನೆ

    ಬೆಳ್ತಂಗಡಿ ಆರಂಬೋಡಿ ಗ್ರಾಮದ ಕುದುಂಬುಡ -ಕೊಮ್ಮಡ ರಸ್ತೆ ತಡೆಗೋಡೆ ನಿರ್ಮಾಣಕ್ಕೆ ರೂ.1.00 ಕೋಟಿ ಅನುದಾನ ನೀಡಿದ ತಾಲೂಕಿನ ಜನಪ್ರಿಯ ಶಾಸಕರಾದ ಶ್ರೀ ಹರೀಶ್ ಪೂಂಜರಿಗೆ ಗ್ರಾಮಸ್ಥರಿಂದ ಅಭಿನಂದನೆ

    ಸೌತ್ ಕೆನರಾ ಫೋಟೋಗ್ರಫರ್ಸ್ ಅಸೋಸಿಯೇಶನ್ (ರಿ.)  ‌‌ಪುತ್ತೂರು ವಲಯ ಪದಪ್ರದಾನ

    ಸೌತ್ ಕೆನರಾ ಫೋಟೋಗ್ರಫರ್ಸ್ ಅಸೋಸಿಯೇಶನ್ (ರಿ.) ‌‌ಪುತ್ತೂರು ವಲಯ ಪದಪ್ರದಾನ

    ಜ.2: “ಆರಿಗೊ” ಗರೋಡಿಯಲ್ಲಿ ನೇಮೋತ್ಸವ; ಡಿ.23ರಂದು ಗೊನೆ ಮುಹೂರ್ತ

    ಜ.2: “ಆರಿಗೊ” ಗರೋಡಿಯಲ್ಲಿ ನೇಮೋತ್ಸವ; ಡಿ.23ರಂದು ಗೊನೆ ಮುಹೂರ್ತ

    ಡಿಸೆಂಬರ್ 31ರಂದು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆಯಲಿರುವ ಉಡುಪಿ ಪರ್ಯಾಯ ಪೀಠವೇರಲಿರುವ ಶಿರೂರು ಸ್ವಾಮೀಜಿಗಳ ಪೌರ ಸನ್ಮಾನದ ಆಮಂತ್ರಣ ಪತ್ರ ಬಿಡುಗಡೆ

    ಡಿಸೆಂಬರ್ 31ರಂದು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆಯಲಿರುವ ಉಡುಪಿ ಪರ್ಯಾಯ ಪೀಠವೇರಲಿರುವ ಶಿರೂರು ಸ್ವಾಮೀಜಿಗಳ ಪೌರ ಸನ್ಮಾನದ ಆಮಂತ್ರಣ ಪತ್ರ ಬಿಡುಗಡೆ

    ಯೋಜನೆಗಳ ಹೆಸರು ಬದಲಾವಣೆಯೇ ಮೋದಿ ಸರ್ಕಾರದ ಸಾಧನೆ: ರಕ್ಷಿತ್ ಶಿವರಾಂ

    ಯೋಜನೆಗಳ ಹೆಸರು ಬದಲಾವಣೆಯೇ ಮೋದಿ ಸರ್ಕಾರದ ಸಾಧನೆ: ರಕ್ಷಿತ್ ಶಿವರಾಂ

    ಪುತ್ತೂರು: ಬಿಜೆಪಿ ಗ್ರಾಮಾಂತರ ಮಂಡಲದ ಉಪಾಧ್ಯಕ್ಷರುಗಳಾಗಿ ವಿರೂಪಾಕ್ಷ ಭಟ್, ನಾಗೇಶ್ ಕೆಮ್ಮಾಯಿ ನೇಮಕ

    ಪುತ್ತೂರು: ಬಿಜೆಪಿ ಗ್ರಾಮಾಂತರ ಮಂಡಲದ ಉಪಾಧ್ಯಕ್ಷರುಗಳಾಗಿ ವಿರೂಪಾಕ್ಷ ಭಟ್, ನಾಗೇಶ್ ಕೆಮ್ಮಾಯಿ ನೇಮಕ

    ಬೆಳ್ತಂಗಡಿ ತಾಲೂಕು 19 ನೇಯ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಯಕ್ಷಗಾನ, ಸಾಂಸ್ಕೃತಿಕ ಹಾಗೂ ಸಾಹಿತ್ಯ ಸಂಘಟಕ ಬಿ. ಭುಜಬಲಿ ಧರ್ಮಸ್ಥಳ

    ಬೆಳ್ತಂಗಡಿ ತಾಲೂಕು 19 ನೇಯ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಯಕ್ಷಗಾನ, ಸಾಂಸ್ಕೃತಿಕ ಹಾಗೂ ಸಾಹಿತ್ಯ ಸಂಘಟಕ ಬಿ. ಭುಜಬಲಿ ಧರ್ಮಸ್ಥಳ

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ಪ್ರಾದೇಶಿಕ ಪುತ್ತೂರು

ಸೌತ್ ಕೆನರಾ ಫೋಟೋಗ್ರಫರ್ಸ್ ಅಸೋಸಿಯೇಶನ್ (ರಿ.) ‌‌ಪುತ್ತೂರು ವಲಯ ಪದಪ್ರದಾನ

by ಪ್ರಜಾಧ್ವನಿ ನ್ಯೂಸ್
December 22, 2025
in ಪುತ್ತೂರು
0
ಸೌತ್ ಕೆನರಾ ಫೋಟೋಗ್ರಫರ್ಸ್ ಅಸೋಸಿಯೇಶನ್ (ರಿ.)  ‌‌ಪುತ್ತೂರು ವಲಯ ಪದಪ್ರದಾನ
8
SHARES
23
VIEWS
ShareShareShare

ಪುತ್ತೂರು: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೌತ್ ಕೆನರಾ ಫೋಟೋಗ್ರಾಫರ‍್ಸ್ ಅಸೋಸಿಯೇಶನ್ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಇದರ ಪುತ್ತೂರು ವಲಯದ 2025-27ನೇ ಸಾಲಿನ ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭವು ಡಿ.20ರಂದು ಮುರ ಗೌಡ ಸಮುದಾಯ ಭವನದಲ್ಲಿ ನೆರವೇರಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಜಿಲ್ಲಾ ಸಂಚಾಲಕ ಗೋಪಾಲ ಸುಳ್ಯ ಮಾತನಾಡಿ, ಯಾವುದೇ ಒಂದು ಸಂಘ ಸಂಸ್ಥೆ ಬೆಳೆಯಬೇಕಾದರೆ ಅಲ್ಲಿ ಸಂಘಟನೆ ಬಹುಮುಖ್ಯ. ಸಂಘಟನೆಯಿಂದಲೇ ನಮ್ಮ ಅಸೋಸಿಯೇಷನ್ ಬೆಳೆದಿದೆ. ನಮ್ಮಸಂಘಟನೆ ಇನ್ನಷ್ಣು ಬಲಿಷ್ಠವಾಗಬೇಕು. ಹೊಸ ಪದಾಧಿಕಾರಿಗಳಿಂದ ಉತ್ತಮ ಕೆಲಸಗಳು ನಡೆಯಬೇಕು. ಇದಕ್ಕೆ ವಲಯದ ಎಲ್ಲಾ ಸದಸ್ಯರು ಸಹಕರಿಸಬೇಕು ಎಂದು ಹೇಳಿದರು.

camera center ad

ಜಾಹೀರಾತು

ರೋಟರಿ ಕ್ಲಬ್ ಪುತ್ತೂರು ಪೂರ್ವದ ಅಧ್ಯಕ್ಷ ಶಶಿಧರ ಕಿನ್ನಿಮಜಲು ಮಾತನಾಡಿ, ಪ್ರಸ್ತುತ ಸಮಾಜ ತಂತ್ರಜ್ಞಾನ ಯುಗದಲ್ಲಿ ಮುನ್ನಡೆಯುತ್ತಿದೆ. ಫೋಟೋಗ್ರಫೀ ಉದ್ಯಮವು ಅತೀ ವೇಗದಲ್ಲಿ ಬದಲಾಗುತ್ತಿರುವ ಕ್ಷೇತ್ರದಲ್ಲಿ ಒಂದಾಗಿದೆ. ತಂತ್ರಜ್ಞಾನಗಳ ಜೊತೆಗೆ ಅಪ್ ಡೇಟ್ ಆಗಬೇಕಾದ ಆವಶ್ಯಕತೆಯಿದೆ. ಇಲ್ಲದಿದ್ದರೆ ಉದ್ಯಮದಲ್ಲಿ ಬೆಳೆಯಲು ಅಸಾಧ್ಯ ಎಂದರು. ಫೋಟೋಗ್ರಾಫರ್ ಅಸೋಸಿಯೇಷನ್ ಮೂಲಕ ತನ್ನ ವೃತ್ತಿಯ ಜೊತೆಗೆ ಸಮಾಜದಲ್ಲಿ ಶೋಷಿತರ ಕಣ್ಣೀರು ಒರೆಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಸಂಘಟನೆಯು ಇನ್ನಷ್ಟು ಬೆಳೆಯಲಿ ಎಂದರು.

ಎಸ್.ಕೆ.ಪಿ.ಎ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ವಾಸುದೇವ ರಾವ್ ಮಾತನಾಡಿ, ಎಸ್‌ಕೆಪಿಎ ಸಹಕಾರ ಸಂಘವು ದಶಮಾನೋತ್ಸವದ ಸಂಭ್ರಮದಲ್ಲಿದೆ. ಇದರ ಅಂಗವಾಗಿ ಬಿಸಿರೋಡ್ ಶಾಖೆ ಪ್ರಾರಂಭಿಸಲಾಗುವುದು. ಶಾಖೆ ಶುಭಾರಂಭದ ಅಂಗವಾಗಿ ಠೇವಣಿಗಳಿಗೆ ಶೇ.10.50 ಬಡ್ಡಿದರವನ್ನು ನೀಡಲಾಗುತ್ತಿದೆ. ಈ ಕೊಡುಗೆ ಫೆಬ್ರವರಿ ತನಕ ಅನ್ವಯವಾಗಲಿದ್ದು ಎಲ್ಲಾ ವಲಯಗಳ ಸದಸ್ಯರು ಸಂಘದಲ್ಲಿ ಠೇವಣಿಯಿಟ್ಟು ಸಹಕರಿಸುವ ಜೊತೆಗೆ ಕೊಡುಗೆ ಪ್ರಯೋಜನ ಪಡೆದುಕೊಳ್ಳಬಹದು ಎಂದ ಅವರು ಸಂಘಟನೆಯಲ್ಲಿ ಕಾಳೆಲೆಯುವವರು, ವಿರೋಧ ಮಾಡುವವರು ಇದ್ದಾಗ ನಮಗೆ ಛಲ ಬರುತ್ತದೆ. ದಿಟ್ಟ ನಿರ್ಧಾರದಿಂದ ಸಂಘಟನೆ ಮತ್ತಷ್ಟು ಬಲೀಷ್ಠವಾಗುವಲ್ಲಿ ಸಹಕಾರಿಯಾಗುತ್ತದೆ ಎಂದು ಹೇಳಿದರು.

ಜಿಲ್ಲಾ ಕಟ್ಟಡ ಸಮಿತಿ ಅಧ್ಯಕ್ಷ ಆನಂದ ಎನ್ ಬಂಟ್ವಾಳ ಮಾತನಾಡಿ, ಜಿಲ್ಲಾ ಸಂಘದ ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ನಾಲ್ಕು ವರ್ಷದ ಹಿಂದೆ ನಿವೇಶನ ಪಡೆದುಕೊಳ್ಳಲಾಗಿದೆ. ಕಟ್ಟಡ ನಿರ್ಮಾಣಕ್ಕೆ ಪುತ್ತೂರು ವಲಯದಿಂದ ಪ್ರಥಮವಾಗಿ ರೂ.2ಲಕ್ಷ ದೇಣಿಗೆ ನೀಡಿದ್ದಾರೆ. ಕಟ್ಟಡ ನಿರ್ಮಾಣದ ಕುರಿತು ಜಿಲ್ಲಾ ಕಟ್ಟಡ ಸಮಿತಿ ಸಭೆ ನಡೆಸಿ ಮುಂದಿನ ಯೋಜನೆ ರೂಪಿಸಿ ಸುಸಜ್ಜಿತ ಕಟ್ಟಡ ನಿರ್ಮಿಸಿಲಾಗುವುದು ಎಂದರು.

ಅಸೋಸಿಯೇಷನ್‌ನ ಜಿಲ್ಲಾ ಕಾರ್ಯದರ್ಶಿ ಅಜೇಯ್ ಮಂಗಳೂರು ಮಾತನಾಡಿ, ಪುತ್ತೂರು ವಲಯದಲ್ಲಿ ಕಳೆದ ಎರಡು ವರ್ಷಗಳಲ್ಲಿ ಉತ್ತಮ ಕೆಲದ ಅಗಿದೆ. ಈ ಭಾರಿ ವಲಯದ ಅಧ್ಯಕ್ಷರು, ಜಿಲ್ಲಾಧ್ಯಕ್ಷರು ಒಂದೇ ವಲಯದವರಾಗಿದ್ದು ಪುತ್ತೂರು ವಲಯದ ಅಭಿವೃದ್ಧಿ ಸಹಕಾರಿಯಾಗಲಿದೆ. ನೂತನ ಸಮಿತಿಯ ಮೂಲಕ ಇನ್ನಷ್ಟು ಉತ್ತಮ ಕಾರ್ಯಕ್ರಮಗಳು ಮೂಡಿಬರಲಿ ಎಂದರು.

ಪುತ್ತೂರು ವಲಯದ ನೂತನ ಅಧ್ಯಕ್ಷ ಜಯಂತ ಗೌಡ ಕರ್ಕುಂಜ ಮಾತನಾಡಿ, ಪುತ್ತೂರು ವಲಯದಲ್ಲಿ ಉತ್ತಮ ತಂಡವಿದೆ. ನಾವು ಸಮಯಕ್ಕೆ ಆದ್ಯತೆ ನೀಡಬೇಕು. ಸದಸ್ಯತ್ವ ನವೀಕರಣ ಮಾಡಲು ಬಾಕಿ ಇರುವ ಸದಸ್ಯರು ನವೀಕರಿಸಿ ಸಹಕರಿಸಬೇಕು. ವಲಯದ ಎಲ್ಲಾ ಸಭೆಗಳನ್ನು ಸದಸ್ಯರು ಭಾಗವಹಿಸಬೇಕು. ಸಮಯಕ್ಕೆ ಸರಿಯಾಗಿ ಸಭೆಗಳಲ್ಲಿ ಭಾಗವಹಿಸಿ ವಲಯದ ಅಭಿವೃದ್ಧಿ ಕೆಲಸ ಕಾರ್ಯಗಳಲ್ಲಿ ಪ್ರತಿಯೊಬ್ಬರೂ ಸಹಕರಿಸುವಂತೆ ವಿನಂತಿಸಿದರು.

ಅಧ್ಯಕ್ಷತೆ ವಹಿಸಿದ್ದ ಸೌತ್ ಕೆನರಾ ಫೋಟೋಗ್ರಾಫರ‍್ಸ್ ಅಸೋಸಿಯೇಷನ್‌ನ ಜಿಲ್ಲಾಧ್ಯಕ್ಷ ನವೀನ್ ರೈ ಪಂಜಳ ಮಾತನಾಡಿ, ಇತರ ವೃತ್ತಿ ಬಾಂಧವರಿಗೆ ದೊರೆಯುವಂತ ಸರಕಾರದ ಸವಲತ್ತುಗಳನ್ನು ನಮಗೆ ದೊರೆಯುತ್ತಿಲ್ಲ. ಎಲ್ಲಾ ಸರಕಾರ ಬಂದಾಗಲೂ ಅಸೋಸಿಯೇಷನ್ ಮೂಲಕ ಮನವಿ ಮಾಡಿದರೂ ನಮಗೆ ಸರಕಾರದಿಂದ ಯಾವುದೇ ಸೌಲಭ್ಯಗಳು ದೊರೆದೇ ಇದ್ದು ಇದರ ದೊಡ್ಡ ನೋವಿದೆ ಎಂದರು. ತಂತ್ರಜ್ಞಾನ ವೇಗವಾಗಿ ಮುಂದುವರಿಯುತ್ತಿದ್ದು ಅದರ ಜೊತೆಯಲ್ಲಿ ಛಾಯಾವೃತ್ತಿ ಬಾಂಧವರು ಬೆಳೆಯುವ ನಿಟ್ಟಿನಲ್ಲಿ ತರಬೇತಿ ಕಾರ್ಯಾಗಾರಗಳನ್ನು ಅಸೋಸಿಯೇಷನ್ ಮೂಲಕ ಆಯೋಜಿಸಲಾಗುವುದು. ಈ ಕಾರ್ಯಾಗಾರಗಳಲ್ಲಿ ಸದಸ್ಯರು ಭಾಗವಹಿಸಿ ಛಾಯಾ ವೃತ್ತಿಯನ್ನು ಅಭಿವೃದ್ಧಿ ಪಡಿಸಿಕೊಳ್ಳಬೇಕು. ಸದಸ್ಯರು ಸಂಘಟನಾತ್ಮಕವಾಗಿ ಕೆಲಸ ಮಾಡುವ ಮೂಲಕ ವಲಯ ಹಾಗೂ ಜಿಲ್ಲಾ ಸಂಘಕ್ಕೆ ಸಹಕಾರ ನೀಡುವಂತೆ ಮನವಿ ಮಾಡಿದರು.

ಕ್ಯಾಮರಾ ಸೆಂಟರ್‌ನ ಮ್ಹಾಲಕ ಭರತ್ ಕುಮಾರ್, ಈಶ್ವರಮಂಗಲ ಎಲ್‌ಎನ್‌ಟಿ ಲ್ಯಾಡರ‍್ಸ್‌ನ ಮ್ಹಾಲಕ ತಿಲಕ್ ಗೌಡ, ನೂತನ ಕೋಶಾಧಿಕಾರಿ ಚಂದ್ರಶೇಖರ ಶೆಟ್ಟಿ, ನಿಕಟಪೂರ್ವ ಗೌರವಾಧ್ಯಕ್ಷ ಹರೀಶ್ ಎಲಿಯ, ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ಕೋಶಾಧಿಕಾರಿ ಪ್ರಮೋದ್ ಸಾಲ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಧ್ಯಕ್ಷರಾಗಿ ಪೆರ್ಲಂಪಾಡಿ ಹರ್ಷಿತಾ ಸ್ಟುಡಿಯೋದ ಜಯಂತ ಗೌಡ ಕರ್ಕುಂಜ, ಪ್ರಧಾನ ಕಾರ್ಯದರ್ಶಿಯಗಿ ರಾಮಕುಂಜದ ಡಿ ಡಿಜಿಟಲ್ ಗಣೇಶ್ ಕಟ್ಟಪುಣಿ, ಕೋಶಾಧಿಕಾರಿಯಾಗಿ ಉಪ್ಪಿನಂಗಡಿ ಪ್ರಸಾದ್ ಸ್ಟುಡಿಯೋದ ಚಂದ್ರಶೇಖರ ಶೆಟ್ಟಿ, ಗೌರವಾಧ್ಯಕ್ಷರಾಗಿ ಫೋಟೋಶಾಫ್‌ನ ರಘು ಶೆಟ್ಟಿ, ಸಮಿತಿಯ ಉಪಾಧ್ಯಕ್ಷರಾಗಿ ವಿನಯ ರೈ, ಪ್ರಮೋದ್ ಸಾಲ್ಯಾನ್, ಜೊತೆ ಕಾರ್ಯದರ್ಶಿಯಾಗಿ ಶುಶ್ರುತ್, ಸಂತೋಷ್ ಬನ್ನೂರು, ಸಂಘಟನಾ ಕಾರ್ಯದರ್ಶಿಯಾಗಿ ಗುಣಕರ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಪ್ರವೀಣ್ ವಿಟ್ಲ, ಕ್ರೀಡಾ ಕಾರ್ಯದರ್ಶಿಯಾಗಿ ಸುಪ್ರೀತ್, ರವಿ ಉಪ್ಪಿನಂಗಡಿ, ಛಾಯಾ ಕಾರ್ಯದರ್ಶಿಯಾಗಿ ಸುಭಾಷ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶ್ರೀನಿಧಿ ನೆಕ್ಕರೆಕಾಡು, ಪ್ರಶಾಂತ್, ಹರೀಶ್ ಪುಣಚ, ವಸಂತ ಕಾಣಿಯೂರು, ವಸಂತ ರೋಲ್‌ಮಾರ್ಕ್, ಪ್ರಕಾಶ್ ನೆಲ್ಯಾಡಿ, ಚೇತನ್ ಕುಮಾರ್, ಜಿಲ್ಲಾ ನಿರ್ದೇಶಕರಾಗಿ ಸುದರ್ಶನ ರಾವ್, ನವೀನ್ ರೈ ಪಂಜಳ, ಜಯಂತ್ ಗೌಡ, ರಘು ಶೆಟ್ಟಿ, ಚಂದ್ರಶೇಖರ ಶೆಟ್ಟಿ, ಹರೀಶ್ ಎಲಿಯ, ಗಣೇಶ್ ಕಟ್ಟಪುಣಿ, ಗಿರೀಶ್ ಕಲ್ಲೇರಿ, ಸಂತೋಷ್ ಬನ್ನೂರು, ವಲಯ ನಿರ್ದೇಶಕರಾಗಿ ರೋಹಿತ್ ಪುರುಷರಕಟ್ಟೆ, ಕುಶಲ ಗೌಡ ಬನ್ನೂರು, ರಾಜೇಶ್ ರಾಮಕುಂಜ, ಶಿವಕುಮಾರ್ ಅನಂತಾಡಿ, ವೈ.ಪ್ರಕಾಶ್, ರೋಹಿತ್, ವೇಣುಗೋಪಾಲ್, ಕಿಶೋರ್ ರೈ, ಪುನೀತ್ ಕಡಬ, ಚಿದಾನಂದ ಬರೆಪ್ಪಾಡಿ, ಭವಿತ್ ಪದ ಸ್ವೀಕರಿಸಿದರು.

ನಿವೃತ್ತ ಯೋಧ ಪುರಂದರ ನಾಯ್ಕ ಎಂ ಮಲ್ಲಿಪ್ಪಾಡಿ, ವಾಯುಸೇನೆಗೆ ಆಯ್ಕೆಗೊಂಡಿರುವ ಹಿರೇಬಂಡಾಡಿಯ ಕಂದಲಾಜೆ ಕೀರ್ತನ್ ಗೌಡ, ಯುವ ಉದ್ಯಮಿ ಈಶ್ವರಮಂಗಲದ ಎಲ್ ಎನ್ಟಿ ಲ್ಯಾಡರ್ಸ್ ನ ತಿಲಕ್ ಗೌಡ ಭಕ್ತಕೋಡಿ, ರಾಷ್ಟ್ರ ಮಟ್ಟದ ಹೈ ಜಂಪ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದ ಕೀರ್ತಿ ಗೌಡ, ಕಡಬ ಪಟ್ಟಣ ಪಂಚಾಯತ್ ಉಪಾಧ್ಯಕ್ಷರಾಗಿ ಅಯ್ಕೆಯಾದ ಮಾಜಿ ಜಿಲ್ಲಾಧ್ಯಕ್ಷ ದಿ.ಶಿವರಾಮ್ ಕಡಬ ಅವರ ಪತ್ನಿ ನೀಲಾವತಿ ಶಿವರಾಮ್ ಕಡಬ, ಬಿಎಎಂಎಸ್ ಪರೀಕ್ಷೆಯ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಕೀರ್ತಿ ಮುಂಗ್ಲಿಮನೆ ಸನ್ಮಾನಿಸಲಾಯಿತು. ಮಾಜಿ ಅಧ್ಯಕ್ಷ ವಿಠಲ ಚೌಟ ಮಂಗಳೂರು, ನಿಕಟಪೂರ್ವ ಅಧ್ಯಕ್ಷ ಪದ್ಮ ಪ್ರಸಾದ್ ಜೈನ್ ಕಾರ್ಕಳ, ಮಾಜಿ ಕಾರ್ಯದರ್ಶಿ ಹರೀಶ್ ಅಡ್ಯಾರ್, ಕನ್ಯಾನ ಸೇವಾ ಆಶ್ರಮದ ಈಶ್ವರ ಭಟ್, ಅಸೋಸಿಯೇಷನ್ ನ ಜಿಲ್ಲಾ ಪದಾಧಿಕಾರಿಗಳು, ವಲಯ ಅಧ್ಯಕ್ಷರುಗಳನ್ನು ಗೌರವಿಸಲಾಯಿತು.

ಅಸೋಸಿಯೇಷನ್‌ನಿಂದ ನಡೆಸಲಾದ ಮುದ್ದಕಂದ ಫೋಟೋ ಸ್ಪರ್ದೆ 2025-26ರಲ್ಲಿ ಮೆಚ್ಚುಗೆ ಪಡೆದ ಪುಟಾಣಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಸಂಘದ ಸದಸ್ಯರಾಗಿದ್ದು ಹೊಸ ಮನೆ ನಿರ್ಮಿಸಿದ ಮಂಜಪ್ಪ ಗೌಡ, ಹೊಸ ಸ್ಟುಡಿಯೋ ಪ್ರವೀಣ್ ವಿಟ್ಲ, ನವ ವಿವಾಹಿತ ಗುಣಕರ ದಿವ್ಯಾ ದಂಪತಿ, ಅತೀ ಹೆಚ್ಚ ರಕ್ತದಾನ ಮಾಡಿದ ಜಯಂತ ಗೌಡ ಕರ್ಕುಂಜ ಇವರುಗಳನ್ನು ಗೌರವಿಸಲಾಯಿತು.

ಹಿತಾ, ಮಾನ್ವಿ ಪ್ರಾರ್ಥಿಸಿದರು. ನಿಕಟಪೂರ್ವ ಅಧ್ಯಕ್ಷ ರಘು ಶೆಟ್ಟಿ ಸ್ವಾಗತಿಸಿದರು. ಜಿಲ್ಲಾ ಕಟ್ಟಡ ಸಮಿತಿಯ ಸುಧಾಕರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪದ್ಮರಾಜ್ ಚಾರ್ವಾಕ, ರವಿಚಂದ್ರ ರೈ ಮುಂಡೂರು ಕಾರ್ಯಕ್ರಮ ನಿರೂಪಿಸಿದರು. ನೂತನ ಕಾರ್ಯದರ್ಶಿ ಗಣೇಶ್ ಕಟ್ಟಪುಣಿ ವಂದಿಸಿದರು.

 

SendShare3Share
Previous Post

ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಕುಂತೂರು ಕೋಡ್ಲ ನಿವಾಸಿ ರವಿ ಪೂಜಾರಿ ಆಯ್ಕೆ

Next Post

ಬೆಳ್ತಂಗಡಿ ಆರಂಬೋಡಿ ಗ್ರಾಮದ ಕುದುಂಬುಡ -ಕೊಮ್ಮಡ ರಸ್ತೆ ತಡೆಗೋಡೆ ನಿರ್ಮಾಣಕ್ಕೆ ರೂ.1.00 ಕೋಟಿ ಅನುದಾನ ನೀಡಿದ ತಾಲೂಕಿನ ಜನಪ್ರಿಯ ಶಾಸಕರಾದ ಶ್ರೀ ಹರೀಶ್ ಪೂಂಜರಿಗೆ ಗ್ರಾಮಸ್ಥರಿಂದ ಅಭಿನಂದನೆ

ಪ್ರಜಾಧ್ವನಿ ನ್ಯೂಸ್

ಪ್ರಜಾಧ್ವನಿ ನ್ಯೂಸ್

Next Post
ಬೆಳ್ತಂಗಡಿ ಆರಂಬೋಡಿ ಗ್ರಾಮದ ಕುದುಂಬುಡ -ಕೊಮ್ಮಡ ರಸ್ತೆ  ತಡೆಗೋಡೆ ನಿರ್ಮಾಣಕ್ಕೆ ರೂ.1.00 ಕೋಟಿ ಅನುದಾನ ನೀಡಿದ ತಾಲೂಕಿನ ಜನಪ್ರಿಯ ಶಾಸಕರಾದ ಶ್ರೀ ಹರೀಶ್ ಪೂಂಜರಿಗೆ ಗ್ರಾಮಸ್ಥರಿಂದ ಅಭಿನಂದನೆ

ಬೆಳ್ತಂಗಡಿ ಆರಂಬೋಡಿ ಗ್ರಾಮದ ಕುದುಂಬುಡ -ಕೊಮ್ಮಡ ರಸ್ತೆ ತಡೆಗೋಡೆ ನಿರ್ಮಾಣಕ್ಕೆ ರೂ.1.00 ಕೋಟಿ ಅನುದಾನ ನೀಡಿದ ತಾಲೂಕಿನ ಜನಪ್ರಿಯ ಶಾಸಕರಾದ ಶ್ರೀ ಹರೀಶ್ ಪೂಂಜರಿಗೆ ಗ್ರಾಮಸ್ಥರಿಂದ ಅಭಿನಂದನೆ

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂದರ್ಭಿಕ ಚಿತ್ರ
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

No Result
View All Result
  • ಮುಖಪುಟ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಉದ್ಯೋಗ – ಶಿಕ್ಷಣ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಿನಿಮಾ
  • ಲೈಫ್ ಸ್ಟೈಲ್

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..