ಮಂಗಳೂರು ಭಾಗದ ಒಕ್ಕಲಿಗರು ದೊಡ್ಡರಲ್ಲ ಅನ್ನೋ ರೀತಿ ವಿಶ್ವನಾಥ್ ಅವರು ಹೇಳಿಕೆಯನ್ನು ನೀಡಿದ್ದರು. ಇದರ ಬೆನ್ನಲ್ಲೇ ಅವರು ಕರಾವಳಿ ಭಾಗದ ಎಲ್ಲ ಒಕ್ಕಲಿಗರ ಬಳಿ ಕ್ಷಮೆಯಾಚಿಸಿದ್ದಾರೆ.
ಹೀಗಾಗಿ ಈ ಬಗ್ಗೆ ಮಾತನಾಡಿರುವ ವಿಶ್ವನಾಥ್ ಅವರು , ಸದಾನಂದಗೌಡರ ಮೇಲೆ ನನಗೂ ಬೇಜಾರಿದೆ. ಎಂ.ಎಲ್.ಎ ವಿಶ್ವನಾಥ್ ಒಕ್ಕಲಿಗರೇ ಅಲ್ಲ ಅಂದಿದ್ದಾರೆ, ನೀವು ಕರಾವಳಿ ಗೌಡ್ರು ನೀವು ಎಂತಹ ಒಕ್ಕಲಿಗರು ಎಂದು ವೈಯಕ್ತಿಕವಾಗಿ ಹೇಳಿದ್ದೇನೆ ಹೊರತು ಕರಾವಳಿಯ ಒಕ್ಕಲಿಗರು ಆಗಲಿ, ಕರಾವಳಿ ಸಂಪ್ರದಾಯ ಬಗ್ಗೆ ಆಗಲಿ ನಾನು ಯಾವತ್ತಿಗೂ ಮಾತಾಡಿಲ್ಲ ಎಂದು ಹೇಳಿದರು.
ಯಲಹಂಕದಲ್ಲಿ ಕೆಂಪೇಗೌಡ ಜಯಂತಿ ಮಾಡ್ತಾ ಬರುತ್ತಿದ್ದೇವೆ, ಎರಡು ಕಡೆ ಮಾಡೋದು ಬೇಡ ಒಂದು ಕಡೆ ಮಾಡೋಣ ಎಂದಿದ್ದೆ, ಇದಕ್ಕೆ ಡಿವಿಎಸ್ ಅವರನ್ನು ಹೋಗಿ ಕರೆದಿದ್ರು, ನಾನು ಅದಕ್ಕೆ ಹೋಗಬೇಡಿ ಎಂದು ಹೇಳಿದ್ದೆ, ಆದರೂ ನಾನು ಹೋಗ್ತೀನಿ ಅಂತಾ ಹೇಳಿದ್ರು, ಸರಿ ಹೋಗೋದಿದ್ರೆ ನಮ್ಮ ಕಡೆಗೂ ಬನ್ನಿ ಎಂದಿದ್ದೆ, ಮುಖ್ಯಮಂತ್ರಿಗಳು ಎರಡು ಕಡೆಗೂ ಬಂದಿದ್ದಾರೆ, ಇವ್ರು ಮುಖ್ಯಮಂತ್ರಿಗಳಾಗಿದ್ದಾಗ ನಾವು ಅವರ ಜೊತೆ ನಿಂತವರು, ಅವರ ಬರಲಿಲ್ಲ ಅಂತಾ ಬೇಜಾರಾಗಿತ್ತು ಎಂದು ಹೇಳಿದರು.
ಮುಂದುವರೆದು ಮಾತನಾಡಿದ ಅವರು, ಎಂಎಲ್ಎ ವಿಶ್ವನಾಥ್ ಒಕ್ಕಲಿಗರೇ ಅಲ್ಲ ಅಂದಿದ್ದಾರೆ, ನೀವು ಕರಾವಳಿ ಗೌಡ್ರು ನೀವು ಎಂತಹ ಒಕ್ಕಲಿಗರು ಎಂದು ವೈಯಕ್ತಿಕವಾಗಿ ಹೇಳಿದ್ದೇನೆ, ಹೊರತು ಕರಾವಳಿಯ ಒಕ್ಕಲಿಗರು ಆಗಲಿ, ಕರಾವಳಿ ಸಂಪ್ರದಾಯ ಬಗ್ಗೆ ಆಗಲಿ ನಾನು ಯಾವತ್ತಿಗೂ ಮಾತಾಡಿಲ್ಲ, ನಾನು ಕೂಡ ಹಿಂದೂ ಜಾಗರಣ ವೇದಿಕೆಯಲ್ಲಿ ಕೆಲಸ ಮಾಡಿದವನು, ಕರಾವಳಿ ಸಂಪ್ರದಾಯದ ಬಗ್ಗೆ ನನಗೂ ಗೊತ್ತು, ಅಂತಹ ಮೂರ್ಖನೂ ನಾನಲ್ಲ, ಕರಾವಳಿ ಜನರಿಗೆ ನೋವು ಆಗಿದ್ರೆ ನಾನು ಕ್ಷಮೆ ಕೇಳುತ್ತೇನೆ ಎಂದರು.
ಅಲ್ಲದೆ ಆದರೆ ಸದಾನಂದ ಗೌಡರಿಗೆ ಅಂದಿದ್ದಂತೂ ನಿಜ, ಅಲ್ಲಿನ ಒಕ್ಕಲಿಗರು ಅಲ್ಲಿ ಸಾಫ್ಟ್, ಇಲ್ಲಿನ ಒಕ್ಕಲಿಗರು ಸ್ವಲ್ಪ ಸ್ಟ್ರಾಂಗ್, ಸದಾನಂದಗೌಡ್ರು ನನ್ನ ನಡುವಿನ ಮಾತು ಮತ್ತೆ ಮುಂದುವರಿಸಲ್ಲ, ಯಾಕೆಂದರೆ ಈಗಾಗಲೇ ನಮ್ಮ ಹಿರಿಯ ನಾಯಕರು ಹೇಳಿದ್ದಾರೆ, ಪಾಕಿಸ್ತಾನದಲ್ಲಿ ಕೆಂಪೇಗೌಡ ಜಯಂತಿ ಆಗಲ್ಲ ಅಂತಾ ಇವರಿಗೂ ಗೊತ್ತು, ನೀವು ನಮ್ಮಲ್ಲಿ ಬರಬಹುದಿತ್ತಲ್ಲ, ನಮ್ಮ ಪಕ್ಷದಲ್ಲಿ ನಾನು ಶಾಸಕ ಇದ್ದೇನೆ, ಬಂದು ಅಲ್ಲೂ ಮಾಲಾರ್ಪಣೆ ಮಾಡಿ ಹೋಗಬಹುದಿತ್ತಲ್ಲ, ಆದರೆ ನಮಗೆ ಅವಮಾನ ಮಾಡಿದ್ರಲ್ಲ ಅಂತಾ ಸ್ವಲ್ಪ ಆಕ್ರೋಶ ಭರಿತವಾಗಿ ಮಾತಾಡಿದ್ದೇನೆ ಎಂದು ಹೇಳಿದ್ದಾರೆ.























