• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
ಅಶೋಕ ಜನಮನ ಕಾರ್ಯಕ್ರಮದಲ್ಲಿ‌ ಜನಸ್ತೋಮದ ನಡುವೆ ಕೆಲವರು ಅಸ್ವಸ್ಥ: ಆಸ್ಪತ್ರೆಗೆ ಭೇಟಿ‌ ನೀಡಿದ ಮಾಜಿ ಶಾಸಕ ಮತ್ತು ಪುತ್ತೂರು ಬಜೆಪಿ ಪದಾಧಿಕಾರಿಗಳು

ಅಶೋಕ ಜನಮನ ಕಾರ್ಯಕ್ರಮದಲ್ಲಿ‌ ಜನಸ್ತೋಮದ ನಡುವೆ ಕೆಲವರು ಅಸ್ವಸ್ಥ: ಆಸ್ಪತ್ರೆಗೆ ಭೇಟಿ‌ ನೀಡಿದ ಮಾಜಿ ಶಾಸಕ ಮತ್ತು ಪುತ್ತೂರು ಬಜೆಪಿ ಪದಾಧಿಕಾರಿಗಳು

October 21, 2025
ಎಸ್‌ಡಿಪಿಐ ಹೆಸರಿನಲ್ಲಿ ನಿಷೇಧಿತ ಪಿಎಫ್‌ಐನ ಹಿಂಬಾಗಿಲ ರಾಜಕೀಯ ಪ್ರವೇಶ ಪ್ರಜಾಪ್ರಭುತ್ವ-ರಾಷ್ಟ್ರೀಯ ಭದ್ರತೆಗೆ ದೊಡ್ಡ ಅಪಾಯʼ  ಗಂಭೀರ ವಿಷಯದ ಬಗ್ಗೆ ಸದನದಲ್ಲಿ ಧ್ವನಿಯೆತ್ತಿದ ದಕ್ಷಿಣ ಕನ್ನಡ ಸಂಸದ ಕ್ಯಾ. ಚೌಟ

ಎಸ್‌ಡಿಪಿಐ ಹೆಸರಿನಲ್ಲಿ ನಿಷೇಧಿತ ಪಿಎಫ್‌ಐನ ಹಿಂಬಾಗಿಲ ರಾಜಕೀಯ ಪ್ರವೇಶ ಪ್ರಜಾಪ್ರಭುತ್ವ-ರಾಷ್ಟ್ರೀಯ ಭದ್ರತೆಗೆ ದೊಡ್ಡ ಅಪಾಯʼ ಗಂಭೀರ ವಿಷಯದ ಬಗ್ಗೆ ಸದನದಲ್ಲಿ ಧ್ವನಿಯೆತ್ತಿದ ದಕ್ಷಿಣ ಕನ್ನಡ ಸಂಸದ ಕ್ಯಾ. ಚೌಟ

December 5, 2025
ಶಿವಗಿರಿ ಶಾಖಾ ಮಠ ಸ್ಥಾಪನೆಗೆ 5 ಎಕರೆ ಜಮೀನು ಘೋಷಣೆ ಜಾಗ ಗುರುತಿಸಲು ಬಿಲ್ಲವ ಸಮಾಜದ ಮುಖಂಡರಿಗೆ ಸೂಚಿಸಿದ : ಸಿಎಂ

ಶಿವಗಿರಿ ಶಾಖಾ ಮಠ ಸ್ಥಾಪನೆಗೆ 5 ಎಕರೆ ಜಮೀನು ಘೋಷಣೆ ಜಾಗ ಗುರುತಿಸಲು ಬಿಲ್ಲವ ಸಮಾಜದ ಮುಖಂಡರಿಗೆ ಸೂಚಿಸಿದ : ಸಿಎಂ

December 4, 2025
ಉಪ್ಪಿನಂಗಡಿ ಬಾಲಕಿಗೆ ಕಿರುಕುಳ :ಪೋಕ್ಸೊ ಕಾಯ್ದೆಯಡಿ ಆರೋಪಿಯ ಬಂಧನ

ಉಪ್ಪಿನಂಗಡಿ ಬಾಲಕಿಗೆ ಕಿರುಕುಳ :ಪೋಕ್ಸೊ ಕಾಯ್ದೆಯಡಿ ಆರೋಪಿಯ ಬಂಧನ

December 4, 2025
ಪ್ರಮೋದ್ ಮದ್ವರಾಜ್ ಗಿಲ್ಲ ಪ್ರಧಾನಿ ಮೋದಿ ಭೇಟಿ ಚಾನ್ಸ್ : ಹುದ್ದೆಯಲ್ಲಿಲ್ಲದ ಬೊಟ್ಯಾಡಿ ಪತ್ನಿಗೆ ಭೇಟಿ ಭಾಗ್ಯ !?

ಪ್ರಮೋದ್ ಮದ್ವರಾಜ್ ಗಿಲ್ಲ ಪ್ರಧಾನಿ ಮೋದಿ ಭೇಟಿ ಚಾನ್ಸ್ : ಹುದ್ದೆಯಲ್ಲಿಲ್ಲದ ಬೊಟ್ಯಾಡಿ ಪತ್ನಿಗೆ ಭೇಟಿ ಭಾಗ್ಯ !?

December 4, 2025
ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ (ರಿ) ಉದಯಗಿರಿ ಮುಂಡೂರು ಆಮಂತ್ರಣ ಪತ್ರ ಬಿಡುಗಡೆ

ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ (ರಿ) ಉದಯಗಿರಿ ಮುಂಡೂರು ಆಮಂತ್ರಣ ಪತ್ರ ಬಿಡುಗಡೆ

December 3, 2025
ಬೆಳ್ತಂಗಡಿ ತಾಲೂಕಿನ ವಿವಿಧ ಕಾಮಗಾರಿಗಳಿಗೆ ರಾಜ್ಯ ಸರಕಾರದಿಂದ ಅನುದಾನ ಬಿಡುಗಡೆ: ಹರೀಶ್ ಪೂಂಜ

ಬೆಳ್ತಂಗಡಿ ತಾಲೂಕಿನ ವಿವಿಧ ಕಾಮಗಾರಿಗಳಿಗೆ ರಾಜ್ಯ ಸರಕಾರದಿಂದ ಅನುದಾನ ಬಿಡುಗಡೆ: ಹರೀಶ್ ಪೂಂಜ

December 3, 2025
ಪುತ್ತೂರು ನಗರದ ಹೊಂಡ ಗುಂಡಿ ರಸ್ತೆ ಮುಕ್ತಿ: ಬಿರುಸಿನಿಂದ ಸಾಗುತ್ತಿದೆ ರಸ್ತೆ ಹೊಂಡ ಮುಚ್ಚುವ ಕಾರ್ಯ

ಪುತ್ತೂರು ನಗರದ ಹೊಂಡ ಗುಂಡಿ ರಸ್ತೆ ಮುಕ್ತಿ: ಬಿರುಸಿನಿಂದ ಸಾಗುತ್ತಿದೆ ರಸ್ತೆ ಹೊಂಡ ಮುಚ್ಚುವ ಕಾರ್ಯ

December 2, 2025
ಮೊಬೈಲ್‌ಗಳಲ್ಲಿ ಸಂಚಾರ ಸಾಥಿ ಆ್ಯಪ್‌ ಅಳವಡಿಕೆ : ಸರ್ವಾಧಿಕಾರ ರಾಷ್ಟ್ರವನ್ನಾಗಿಸುವ ಹುನ್ನಾರ- ಪ್ರಿಯಾಂಕಾ ಆಕ್ರೋಶ

ಮೊಬೈಲ್‌ಗಳಲ್ಲಿ ಸಂಚಾರ ಸಾಥಿ ಆ್ಯಪ್‌ ಅಳವಡಿಕೆ : ಸರ್ವಾಧಿಕಾರ ರಾಷ್ಟ್ರವನ್ನಾಗಿಸುವ ಹುನ್ನಾರ- ಪ್ರಿಯಾಂಕಾ ಆಕ್ರೋಶ

December 2, 2025
ಆನ್ಲೈನ್ ಫೋಟೋಗ್ರಾಫರ್‌ಗಳಿಗಿಂತ ಸಂಪ್ರದಾಯಿಕ ಸ್ಥಳೀಯ ಫೋಟೋಗ್ರಾಫರ್‌ರ ಮಹತ್ವ, ಅನುಭವವೇ ಅವರ ಶಕ್ತಿ

ಆನ್ಲೈನ್ ಫೋಟೋಗ್ರಾಫರ್‌ಗಳಿಗಿಂತ ಸಂಪ್ರದಾಯಿಕ ಸ್ಥಳೀಯ ಫೋಟೋಗ್ರಾಫರ್‌ರ ಮಹತ್ವ, ಅನುಭವವೇ ಅವರ ಶಕ್ತಿ

December 2, 2025
ಶ್ರೀನಿವಾಸ ಕಲ್ಯಾಣೊತ್ಸವ ಕಾರ್ಯಕ್ರಮದಲ್ಲಿ  ಕಲ್ಯಾಣೋತ್ಸವದಲ್ಲಿ ಅವಮಾನ ಆರೋಪ :ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಸನ್ನ ಕುಮಾರ್ ಮಾರ್ತ ಪ್ರಾರ್ಥನೆ

ಶ್ರೀನಿವಾಸ ಕಲ್ಯಾಣೊತ್ಸವ ಕಾರ್ಯಕ್ರಮದಲ್ಲಿ ಕಲ್ಯಾಣೋತ್ಸವದಲ್ಲಿ ಅವಮಾನ ಆರೋಪ :ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಸನ್ನ ಕುಮಾರ್ ಮಾರ್ತ ಪ್ರಾರ್ಥನೆ

December 1, 2025
ಉಜಿರೆ ರಬ್ಬರ್ ಟ್ಯಾಪರ್ ಮತ್ತು ಕೃಷಿ ಮಜ್ದೂರ್ ಸಂಘದಿಂದ ಸಂಸದರಾದ  ಕ್ಯಾ ! ಬ್ರಜೇಶ್ ಚೌಟ ಅವರಿಗೆ ಮನವಿ ಸಲ್ಲಿಕೆ

ಉಜಿರೆ ರಬ್ಬರ್ ಟ್ಯಾಪರ್ ಮತ್ತು ಕೃಷಿ ಮಜ್ದೂರ್ ಸಂಘದಿಂದ ಸಂಸದರಾದ ಕ್ಯಾ ! ಬ್ರಜೇಶ್ ಚೌಟ ಅವರಿಗೆ ಮನವಿ ಸಲ್ಲಿಕೆ

December 1, 2025
ಪುತ್ತೂರು:ಸೇಡಿಯಾಪು ಬಳಿ ಯುವಕನ ಮೃತದೇಹ ಪತ್ತೆ

ಪುತ್ತೂರು:ಸೇಡಿಯಾಪು ಬಳಿ ಯುವಕನ ಮೃತದೇಹ ಪತ್ತೆ

December 1, 2025
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Saturday, December 6, 2025
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    ಎಸ್‌ಡಿಪಿಐ ಹೆಸರಿನಲ್ಲಿ ನಿಷೇಧಿತ ಪಿಎಫ್‌ಐನ ಹಿಂಬಾಗಿಲ ರಾಜಕೀಯ ಪ್ರವೇಶ ಪ್ರಜಾಪ್ರಭುತ್ವ-ರಾಷ್ಟ್ರೀಯ ಭದ್ರತೆಗೆ ದೊಡ್ಡ ಅಪಾಯʼ  ಗಂಭೀರ ವಿಷಯದ ಬಗ್ಗೆ ಸದನದಲ್ಲಿ ಧ್ವನಿಯೆತ್ತಿದ ದಕ್ಷಿಣ ಕನ್ನಡ ಸಂಸದ ಕ್ಯಾ. ಚೌಟ

    ಎಸ್‌ಡಿಪಿಐ ಹೆಸರಿನಲ್ಲಿ ನಿಷೇಧಿತ ಪಿಎಫ್‌ಐನ ಹಿಂಬಾಗಿಲ ರಾಜಕೀಯ ಪ್ರವೇಶ ಪ್ರಜಾಪ್ರಭುತ್ವ-ರಾಷ್ಟ್ರೀಯ ಭದ್ರತೆಗೆ ದೊಡ್ಡ ಅಪಾಯʼ ಗಂಭೀರ ವಿಷಯದ ಬಗ್ಗೆ ಸದನದಲ್ಲಿ ಧ್ವನಿಯೆತ್ತಿದ ದಕ್ಷಿಣ ಕನ್ನಡ ಸಂಸದ ಕ್ಯಾ. ಚೌಟ

    ಶಿವಗಿರಿ ಶಾಖಾ ಮಠ ಸ್ಥಾಪನೆಗೆ 5 ಎಕರೆ ಜಮೀನು ಘೋಷಣೆ ಜಾಗ ಗುರುತಿಸಲು ಬಿಲ್ಲವ ಸಮಾಜದ ಮುಖಂಡರಿಗೆ ಸೂಚಿಸಿದ : ಸಿಎಂ

    ಶಿವಗಿರಿ ಶಾಖಾ ಮಠ ಸ್ಥಾಪನೆಗೆ 5 ಎಕರೆ ಜಮೀನು ಘೋಷಣೆ ಜಾಗ ಗುರುತಿಸಲು ಬಿಲ್ಲವ ಸಮಾಜದ ಮುಖಂಡರಿಗೆ ಸೂಚಿಸಿದ : ಸಿಎಂ

    ಉಪ್ಪಿನಂಗಡಿ ಬಾಲಕಿಗೆ ಕಿರುಕುಳ :ಪೋಕ್ಸೊ ಕಾಯ್ದೆಯಡಿ ಆರೋಪಿಯ ಬಂಧನ

    ಉಪ್ಪಿನಂಗಡಿ ಬಾಲಕಿಗೆ ಕಿರುಕುಳ :ಪೋಕ್ಸೊ ಕಾಯ್ದೆಯಡಿ ಆರೋಪಿಯ ಬಂಧನ

    ಪ್ರಮೋದ್ ಮದ್ವರಾಜ್ ಗಿಲ್ಲ ಪ್ರಧಾನಿ ಮೋದಿ ಭೇಟಿ ಚಾನ್ಸ್ : ಹುದ್ದೆಯಲ್ಲಿಲ್ಲದ ಬೊಟ್ಯಾಡಿ ಪತ್ನಿಗೆ ಭೇಟಿ ಭಾಗ್ಯ !?

    ಪ್ರಮೋದ್ ಮದ್ವರಾಜ್ ಗಿಲ್ಲ ಪ್ರಧಾನಿ ಮೋದಿ ಭೇಟಿ ಚಾನ್ಸ್ : ಹುದ್ದೆಯಲ್ಲಿಲ್ಲದ ಬೊಟ್ಯಾಡಿ ಪತ್ನಿಗೆ ಭೇಟಿ ಭಾಗ್ಯ !?

    ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ (ರಿ) ಉದಯಗಿರಿ ಮುಂಡೂರು ಆಮಂತ್ರಣ ಪತ್ರ ಬಿಡುಗಡೆ

    ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ (ರಿ) ಉದಯಗಿರಿ ಮುಂಡೂರು ಆಮಂತ್ರಣ ಪತ್ರ ಬಿಡುಗಡೆ

    ಬೆಳ್ತಂಗಡಿ ತಾಲೂಕಿನ ವಿವಿಧ ಕಾಮಗಾರಿಗಳಿಗೆ ರಾಜ್ಯ ಸರಕಾರದಿಂದ ಅನುದಾನ ಬಿಡುಗಡೆ: ಹರೀಶ್ ಪೂಂಜ

    ಬೆಳ್ತಂಗಡಿ ತಾಲೂಕಿನ ವಿವಿಧ ಕಾಮಗಾರಿಗಳಿಗೆ ರಾಜ್ಯ ಸರಕಾರದಿಂದ ಅನುದಾನ ಬಿಡುಗಡೆ: ಹರೀಶ್ ಪೂಂಜ

    ಪುತ್ತೂರು ನಗರದ ಹೊಂಡ ಗುಂಡಿ ರಸ್ತೆ ಮುಕ್ತಿ: ಬಿರುಸಿನಿಂದ ಸಾಗುತ್ತಿದೆ ರಸ್ತೆ ಹೊಂಡ ಮುಚ್ಚುವ ಕಾರ್ಯ

    ಪುತ್ತೂರು ನಗರದ ಹೊಂಡ ಗುಂಡಿ ರಸ್ತೆ ಮುಕ್ತಿ: ಬಿರುಸಿನಿಂದ ಸಾಗುತ್ತಿದೆ ರಸ್ತೆ ಹೊಂಡ ಮುಚ್ಚುವ ಕಾರ್ಯ

    ಆನ್ಲೈನ್ ಫೋಟೋಗ್ರಾಫರ್‌ಗಳಿಗಿಂತ ಸಂಪ್ರದಾಯಿಕ ಸ್ಥಳೀಯ ಫೋಟೋಗ್ರಾಫರ್‌ರ ಮಹತ್ವ, ಅನುಭವವೇ ಅವರ ಶಕ್ತಿ

    ಆನ್ಲೈನ್ ಫೋಟೋಗ್ರಾಫರ್‌ಗಳಿಗಿಂತ ಸಂಪ್ರದಾಯಿಕ ಸ್ಥಳೀಯ ಫೋಟೋಗ್ರಾಫರ್‌ರ ಮಹತ್ವ, ಅನುಭವವೇ ಅವರ ಶಕ್ತಿ

    ಶ್ರೀನಿವಾಸ ಕಲ್ಯಾಣೊತ್ಸವ ಕಾರ್ಯಕ್ರಮದಲ್ಲಿ  ಕಲ್ಯಾಣೋತ್ಸವದಲ್ಲಿ ಅವಮಾನ ಆರೋಪ :ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಸನ್ನ ಕುಮಾರ್ ಮಾರ್ತ ಪ್ರಾರ್ಥನೆ

    ಶ್ರೀನಿವಾಸ ಕಲ್ಯಾಣೊತ್ಸವ ಕಾರ್ಯಕ್ರಮದಲ್ಲಿ ಕಲ್ಯಾಣೋತ್ಸವದಲ್ಲಿ ಅವಮಾನ ಆರೋಪ :ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಸನ್ನ ಕುಮಾರ್ ಮಾರ್ತ ಪ್ರಾರ್ಥನೆ

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ಪ್ರಾದೇಶಿಕ ಪುತ್ತೂರು

ಅಶೋಕ ಜನಮನ ಕಾರ್ಯಕ್ರಮದಲ್ಲಿ‌ ಜನಸ್ತೋಮದ ನಡುವೆ ಕೆಲವರು ಅಸ್ವಸ್ಥ: ಆಸ್ಪತ್ರೆಗೆ ಭೇಟಿ‌ ನೀಡಿದ ಮಾಜಿ ಶಾಸಕ ಮತ್ತು ಪುತ್ತೂರು ಬಜೆಪಿ ಪದಾಧಿಕಾರಿಗಳು

 ಜನಮನದಲ್ಲಿ ಅವ್ಯವಸ್ಥೆ – ಬಿಜೆಪಿ ಆರೋಪ

by ಪ್ರಜಾಧ್ವನಿ ನ್ಯೂಸ್
October 21, 2025
in ಪುತ್ತೂರು
0
ಅಶೋಕ ಜನಮನ ಕಾರ್ಯಕ್ರಮದಲ್ಲಿ‌ ಜನಸ್ತೋಮದ ನಡುವೆ ಕೆಲವರು ಅಸ್ವಸ್ಥ: ಆಸ್ಪತ್ರೆಗೆ ಭೇಟಿ‌ ನೀಡಿದ ಮಾಜಿ ಶಾಸಕ ಮತ್ತು ಪುತ್ತೂರು ಬಜೆಪಿ ಪದಾಧಿಕಾರಿಗಳು
34
SHARES
96
VIEWS
ShareShareShare

ಪುತ್ತೂರು: ಅಶೋಕ ಜನಮನ ಕಾರ್ಯಕ್ರಮದಲ್ಲಿ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರ ಪೈಕಿ ಇಬ್ಬರು ಮಹಿಳೆಯರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಕಡಬ ಕೋಟೆಗುಡ್ಡೆಯ ನಿವಾಸಿ ಬಾಲಕೃಷ್ಣ ಅವರ ಪತ್ನಿ ಲೀಲಾವತಿ(53) ಮತ್ತು ಮೊಮ್ಮಕ್ಕಳೊಂದಿಗೆ ಬಂದಿದ್ದ ಬೆಳ್ಳಾರೆ ನಿವಾಸಿ ಬೀಫಾತಿಮಾ (60) ಅವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.ಆಸ್ಪತ್ರೆಗೆ ಮಾಜಿ ಶಾಸಕ ಸಂಜೀವ ಮಠಂದೂರು ಭೇಟಿ ಮಾಡಿ ಆಸ್ಪತ್ರೆಯಲ್ಲಿ ದಾಖಲಾದ ಮಹಿಳೆಯರಿಬ್ಬರ ಆರೋಗ್ಯ ವಿಚಾರಿಸಿದ್ದಾರೆ.

HPR Institute Of Nursing And Paramedical Sciences & Friends Beke

ಜಾಹೀರಾತು

ಬಿಜೆಪಿ ಕಚೇರಿಯಲ್ಲಿ ಮಾಧ್ಯಮಕ್ಕೆ ಮಾಹಿತಿ

ಅಶೋಕ ಜನಮನ ಕಾರ್ಯಕ್ರಮದಲ್ಲಿ ಕೇವಲ ರಾಜಕೀಯ ಲಾಭಕ್ಕಾಗಿ ಬಡ ಜನರನ್ನು ಕರೆಸಿ, ಅವರನ್ನು ಗೂಡಲ್ಲಿ ಕೂಡಿ ಹಾಕಿ ಹಿಂಸೆ ಕೊಟ್ಟದ್ದು ಬಿಟ್ರೆ ಬೇರೇನು ಇಲ್ಲ. ಇದರ ಜೊತೆಗೆ 13 ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವುದು ಕಾರ್ಯಕ್ರಮದ ಅವ್ಯವಸ್ಥೆಯನ್ನು ಸೂಚಿಸುತ್ತದೆ. ಇದೊಂದು ಸ್ಟೇಟ್ ಇಶ್ಯೂ, ರಾಜ್ಯ ಸರಕಾರ, ಗೃಹ ಇಲಾಖೆ, ಜಿಲ್ಲಾಡಳಿತ ಇದಕ್ಕೆ ಹೊಣೆ ಎಂದು ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಮತ್ತು ಮಾಜಿ ಶಾಸಕ ಸಂಜೀವ ಮಠಂದೂರು ಬಿಜೆಪಿ ಕಚೇರಿಯಲ್ಲಿ ಮಾಧ್ಯಮಕ್ಕೆ ಮಾಹಿತಿ ನೀಡಿದರು.

ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಮಾತನಾಡಿ, ಟ್ರಸ್ಟ್ ಮೂಲಕ ನಡೆಯುವ ಕಾರ್ಯಕ್ರಮಕ್ಕೆ ಒಂದೂವರೆ ತಿಂಗಳಿನಿಂದ ಲಕ್ಷ ಲಕ್ಷ ಜನ ಸೇರುತ್ತಾರೆ ಎಂದು ಮಾಧ್ಯಮದಲ್ಲಿ ಬಿತ್ತರಿಸಿರುವುದನ್ನು ಎಲ್ಲರೂ ಗಮನಿಸಿದ್ದಾರೆ. ಕ್ರೀಡಾಪಟುಗಳಿಗೆ ಉಪಯೋಗಿಸುವ ಕ್ರೀಡಾಂಗಣವನ್ನು ಹಾಳು ಮಾಡದ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿರುತ್ತದೆ. ಆದರೆ ನಿನ್ನೆ ನಡೆದ ಕಾರ್ಯಕ್ರಮ ಕ್ರೀಡಾ ಇಲಾಖೆಯ ಮೈದಾನದಲ್ಲಿ ಆಯೋಜನೆಯಾಗಿತ್ತು. ದೊಡ್ಡ ಕಾರ್ಯಕ್ರಮ ಮಾಡುವಾಗ ಆಯೋಜಕರು ಗಂಭೀರವಾಗಿ ಗಮನಿಸಬೇಕಾಗಿತ್ತು. ಪೊಲೀಸ್ ಇಲಾಖೆಯೂ ಅದನ್ನು ನೋಡಬೇಕಾಗಿತ್ತು. ಇದೆಲ್ಲವನ್ನು ಮೀರಿ ಮುಖ್ಯಮಂತ್ರಿಗಳು ಬಂದ ಸಂದರ್ಭ ಬಡಜನರು ಸೇರಿದ್ದರು. ವಸ್ತ್ರ ವಿತರಣೆಯ ಕಾರ್ಯಕ್ರಮದಲ್ಲಿ ಬೆಳಗ್ಗಿನಿಂದಲೇ ಜನ ಜಮಾಯಿಸಿದ್ದರು. ಅಲ್ಲಿ ಒಮ್ಮೆ ಒಳಗೆ ಹೋದವರಿಗೆ ಸರಿಯಾದ ವ್ಯವಸ್ಥೆಯೂ ಇರಲಿಲ್ಲ. ಬಂದವರಿಗೆ ನೀರು ನೀಡಿಲ್ಲ. ಊಟೋಪಚಾರವೂ ಸಮಯಕ್ಕೆ ಸರಿಯಾಗಿ ನೀಡದೆ ಬೆಳಿಗ್ಗೆ 9 ಗಂಟೆಗೆ ಬಂದವರನ್ನೆಲ್ಲ ಕೂಡಿ ಹಾಕಿ ಮುಖ್ಯಮಂತ್ರಿಗೆ ಶಕ್ತಿ ಪ್ರದರ್ಶನ ಮಾಡುವ ರೀತಿಯಲ್ಲಿ ಆಯೋಜನೆ ಮಾಡಿರುವುದು ಸ್ಪಷ್ಟವಾಗಿ ಕಾಣುತ್ತದೆ ಎಂದು ಆರೋಪಿಸಿದರು.

ನಿನ್ನೆ ಆಗಿರುವ ಘಟನೆಯಿಂದ ಆಸ್ಪತ್ರೆಯಲ್ಲಿ ದಾಖಲಾದವರನ್ನು ನಾವು ಭೇಟಿ ಮಾಡಿ ಪರಿಶೀಲಿಸಿದ್ದೇವೆ. ಅಲ್ಲಿ ಸರಿಯಾದ ಇಂಟಿಮೇಷನ್ ಪೊಲೀಸ್ ಇಲಾಖೆಗೆ ಹೋಗಿಲ್ಲ. ಘಟನೆಯಲ್ಲಿ 3 ತಿಂಗಳ ಮಗು ನಾಲ್ಕು ಗಂಟೆ ಯಾರ್‍ಯಾರೋ ಕೈಯಲ್ಲಿ ಇರುವಂತೆ ಆಯಿತು. ದೇವಸ್ಥಾನದ ಸ್ಥಳವನ್ನು ಟ್ರಸ್ಟ್‌ಗೆ ಉಪಯೋಗಿಸಲಾಗಿತ್ತು. ನಿನ್ನೆ ಘಟನೆಗೆ ಯಾರು ಕಾರಣರು? ಜಿಲ್ಲಾಡಳಿತ ಇದನ್ನು ಗಮನಿಸಬೇಕು. ಇದಕ್ಕೆ ಪೂರಕವಾಗಿ ಎರಡು ಮೂರು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಐಪಿಎಲ್‌ಗೆ ಸಂಬಂಧಿಸಿ ಆರ್‌ಸಿಬಿ ವಿಜಯೋತ್ಸವದಲ್ಲಿ ದೊಡ್ಡ ಮಟ್ಟದ ಅನಾಹುತ ಆಗಿತ್ತು. ಜನ ಪ್ರಶ್ನೆ ಮಾಡಲು ಪ್ರಾರಂಭಿಸಿದಾಗ ದಕ್ಷ ಅಧಿಕಾರಿಗಳನ್ನು ಅಮಾನತು ಮಾಡುವ ಮೂಲಕ ಅವರ ಸರಕಾರ ತೀಟೆಯನ್ನು ತೀರಿಸಿಕೊಂಡರು. ಇವತ್ತು ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ಘಟನೆಯಲ್ಲಿ ಯಾರ ತಪ್ಪು? ಯಾರು ಇವರಿಗೆ ಅಧಿಕಾರ ಕೊಟ್ಟದ್ದು ಎಂದು ಜನ ಪ್ರಶ್ನಿಸುತ್ತಿದ್ದಾರೆ. 1 ಲಕ್ಷ ಜನ ಬರುತ್ತಾರೆ ಎಂದಾದರೆ 10 ಸಾವಿರ ಸೇರುವ ಸ್ಥಳದಲ್ಲಿ 1 ಲಕ್ಷ ಜನವನ್ನು ಹೇಗೆ ತುಂಬಿಸುವುದು. ಜನ ಸತ್ರು ತೊಂದರೆ ಇಲ್ಲ, ತನ್ನ ರಾಜಕೀಯ ಲಾಭಕ್ಕಾಗಿ ಈ ರೀತಿ ಮಾಡಿದ್ದಾರೆ ಎಂಬುದು ಸ್ಪಷ್ಟವಾಗಿ ಕಾಣುತ್ತದೆ. ಪ್ರತಿ ವಿಚಾರದಲ್ಲೂ ಮಹಾಲಿಂಗೇಶ್ವರನ ದಯೆ ಎಂದು ಹೇಳುವ ಶಾಸಕರು ನಿನ್ನೆ ಮುಖ್ಯಮಂತ್ರಿಗಳನ್ನು ಮಹಾಲಿಂಗೇಶ್ವರ ದೇವರ ಸನ್ನಿಧಿಗೆ ಕರೆದೊಯ್ಯಬಹುದಿತ್ತಲ್ಲ. ಒಟ್ಟಿನಲ್ಲಿ ಕೇವಲ ರಾಜಕೀಯ ಲಾಭಕ್ಕಾಗಿ ಬಡ ಜನರನ್ನು ಕರೆಸಿ, ಅವರನ್ನು ಗೂಡಲ್ಲಿ ಕೂಡಿ ಹಾಕಿ ಹಿಂಸೆ ಕೊಟ್ಟದ್ದು ಬಿಟ್ರೆ ಬೇರೇನು ಕಾಣಿಸಿಲ್ಲ. ಈ ಕುರಿತು ಜನ ಶಾಪ ಇಟ್ಟು ಹೋಗುತ್ತಿದ್ದರು ಎಂದು ದಯಾನಂದ ಶೆಟ್ಟಿ ಉಜಿರೆಮಾರು ಹೇಳಿದರು.

ಮಾಜಿ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ನಿನ್ನೆ ಮುಖ್ಯಮಂತ್ರಿಗಳು ಬಂದು ನಡೆದ ಕಾರ್ಯಕ್ರಮದ ಜಾಗ ಯುವಜನ ಮತ್ತು ಕ್ರೀಡಾ ಇಲಾಖೆಗೆ ಸೇರಿದ್ದು, ನಾನು ಶಾಸಕನಾಗಿದ್ದ ಸಂದರ್ಭ ತಾಲೂಕು ಕ್ರೀಡಾಂಗಣವನ್ನು ಕ್ರೀಡೆಗೆ ಮಾತ್ರ ಕೊಡಬೇಕು. ಬೇರೆ ಯಾವುದೇ ಉದ್ದೇಶಕ್ಕೆ ಕೊಡಬಾರದು ಎಂದು ತೀರ್ಮಾನ ಆಗಿತ್ತು. ಅದೇ ರೀತಿ ಅದು ನಡೆದುಕೊಂಡು ಬರುತ್ತಿತ್ತು. ಅಲ್ಲಿ ಹಾಕಿದ ಲಕ್ಷಾಂತರ ರೂಪಾಯಿ ಟ್ರ್ಯಾಕ್ ಕೆಟ್ಟು ಹೋಗುತ್ತದೆ. ಕ್ರೀಡಾಚಟುವಟಿಕೆಗೆ ಅಲ್ಲಿ ಸಮಸ್ಯೆ ಆಗುತ್ತದೆ ಎಂದು ಕ್ರೀಡೆಗೆ ಮಾತ್ರ ಕೊಡುವಂತೆ ಸರಕಾರದ ಉದ್ದೇಶವಾಗಿತ್ತು. ಇವತ್ತು ಆ ಕ್ರೀಡಾಂಗಣವನ್ನು ಒಂದು ಟ್ರಸ್ಟ್‌ಗೆ, ವೈಯುಕ್ತಿಕ ಕಾರ್ಯಕ್ರಮಕ್ಕೆ ಅನುಮತಿ ಕೊಟ್ಟವರು ಯಾರು? ಯುವಜನ ಕ್ರೀಡಾ ಇಲಾಖೆ ಅಥವಾ ಜಿಲ್ಲಾಧಿಕಾರಿಯವರು ಕೊಟ್ಟಿದ್ದಾರೋ? ಯಾರಾದರೂ ಕೊಟ್ಟಿದ್ದರೆ ಅವರು ಯಾವ ಕಂಡಿಷನ್ ಹಾಕಿ ಕೊಟ್ಟಿದ್ದಾರೆ? ಇವತ್ತು ಕಾರ್ಯಕ್ರಮ ಮಾಡುವಾಗ ಸರಕಾರ ಸಂಘ ಸಂಸ್ಥೆಗಳಿಗೆ ಕಂಡಿಷನ್ ಹಾಕಿದೆ. ಯಾವ ಜಾಗದಲ್ಲಿ ಎಷ್ಟು ಜನ ಸೇರಿದರೆ ಏನು ಮಾಡಬೇಕು. ಪುತ್ತೂರು ತಾಲೂಕಿನ ತಾಲೂಕು ಕ್ರೀಡಾಂಗಣದಲ್ಲಿ 10 ಸಾವಿರ ಚಯರ್ ಹಾಕಿದ್ದಾರೆ. 2 ಸಾವಿರ ರಿಸರ್ವ್ ಇಟ್ಟಿದ್ದರು. 10 ಸಾವಿರ ಚಯರ್ ಹಾಕಿ 1 ಲಕ್ಷ ಸೇರಿಸುವಾಗ ಈ ಪೊಲೀಸ್ ಇಲಾಖೆ ಎಲ್ಲಿತ್ತು? ಅನುಮತಿ ಕೊಟ್ಟವರು ಎಲ್ಲಿದ್ರು? ಪೊಲೀಸ್ ಇಲಾಖೆ ನಿಯಮ ಬಾಹಿರವಾಗಿ ನಡೆದುಕೊಂಡಿದೆ.

ಘಟನೆ ಆದ ಸಂದರ್ಭದಲ್ಲಿ 13 ಮಂದಿ ಸರಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಂಡಿದ್ದಾರೆ. ಅದರಲ್ಲಿ 2 ಮಂದಿ ಒಳರೋಗಿಗಳಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಕಡಬದ ಲೀಲಾವತಿ, ಬೆಳ್ಳಾರೆಯ ಬಿಪಾತುಮ್ಮ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭ ಚಿಕಿತ್ಸೆ ಪಡೆಯುತ್ತಿದ್ದರು. ಇನ್ನು ಕೆಲವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಒಂದು ಘಟನೆಯಾಗಿ ಹತ್ತಾರು ಜನರಿಗೆ ಗಾಯ ಆಗಿದೆ. ಸರಕಾರಿ ಆಸ್ಪತ್ರೆಯಿಂದ ಪೊಲೀಸ್ ಸ್ಟೇಷನ್‌ನಿಂದ ಇಂಟಿಮೇಷನ್ ಹೋಗಿದ್ಯಾ? ಚಿಕಿತ್ಸೆ ನೀಡುವ ಕುರಿತು ಜಿಲ್ಲಾಡಳಿತಕ್ಕೆ ತಿಳಿಸಿದ್ರಾ? ಎಫ್‌ಐಆರ್ ಆಗಿದ್ಯಾ? ಎಫ್‌ಐಆರ್ ಯಾರ ಮೇಲೆ ಆಗಿದೆ ಎಂಬೆಲ್ಲ ಪ್ರಶ್ನೆ ಮೂಡುತ್ತದೆ. ಯಾಕೆಂದರೆ ಬೆಂಗಳೂರಿನಲ್ಲಿ ಆರ್‌ಸಿಬಿ ವಿಜಯೋತ್ಸವದಲ್ಲಿ 11 ಮಂದಿ ಮರಣ ಹೊಂದಿದ ಘಟನೆಯನ್ನು ಜನರು ಪ್ರಶ್ನಿಸಿದಾಗ ಎಫ್‌ಐಆರ್ ಮಾಡಿದರು. ಒಂದಷ್ಟು ಪೊಲೀಸರನ್ನು ಅಮಾನತು ಮಾಡಿದ್ದರು. ಆದರೆ ಇಲ್ಲಿ ಜೀವ ಹೋಗಿಲ್ಲ. ಆದರೆ 13 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಇಲ್ಲಿ ಏನು ಕ್ರಮ ಕೈಗೊಳ್ಳಲಾಗಿದೆ? ಈ ಕಾರ್ಯಕ್ರಮ ಟ್ರಸ್ಟ್‌ಗೆ ಸಂಬಂಧಿಸಿದ್ದು, ದೇವಸ್ಥಾನದ ಜಾಗದಲ್ಲಿ ರಾಜಕೀಯ ಬ್ಯಾನರ್ ಅಳವಡಿಸಿದ್ದಾರೆ. ಅಮಾಯಕರು ಕಾರ್ಯಕ್ರಮದ ಮೂಲಕ ಆಸ್ಪತ್ರೆ ಸೇರುವ ಕೆಲಸ ಆಗಿದೆ. ಬೇರೆ ಬೇರೆ ಇಲಾಖೆಗಳು ಕಾನೂನು ಉಲ್ಲಂಘನೆ ಮಾಡುವ ಕೆಲಸ ಮಾಡಿದ್ಧಾರೆ. ಸರಕಾರ ಕಾನೂನು ಉಲ್ಲಂಘನೆ ಮಾಡಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ, ಬಿಜೆಪಿ ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಪಿ.ಬಿ ಉಪಸ್ಥಿತರಿದ್ದರು.

 

 

SendShare14Share
Previous Post

14ರ ವಯೋಮಾನದ ಬಾಲಕಿಯರ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಬಂದಾರು ಪ್ರಾಥಮಿಕ ಶಾಲೆಯ ಕು.ರಕ್ಷಿತಾ. ಜೆ ರಾಷ್ಟ್ರಮಟ್ಟಕ್ಕೆ ಆಯ್ಕೆ.

Next Post

ಪುತ್ತೂರು: ಬೆದ್ರಾಳದಲ್ಲಿ ಮನೆಗೆ ಸಿಡಿಲು ಬಡಿದು ಹಾನಿ : ಶಾಸಕ ಅಶೋಕ್ ರೈ ಭೇಟಿ

ಪ್ರಜಾಧ್ವನಿ ನ್ಯೂಸ್

ಪ್ರಜಾಧ್ವನಿ ನ್ಯೂಸ್

Next Post
ಪುತ್ತೂರು: ಬೆದ್ರಾಳದಲ್ಲಿ ಮನೆಗೆ ಸಿಡಿಲು ಬಡಿದು ಹಾನಿ : ಶಾಸಕ ಅಶೋಕ್ ರೈ ಭೇಟಿ

ಪುತ್ತೂರು: ಬೆದ್ರಾಳದಲ್ಲಿ ಮನೆಗೆ ಸಿಡಿಲು ಬಡಿದು ಹಾನಿ : ಶಾಸಕ ಅಶೋಕ್ ರೈ ಭೇಟಿ

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

No Result
View All Result
  • ಮುಖಪುಟ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಉದ್ಯೋಗ – ಶಿಕ್ಷಣ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಿನಿಮಾ
  • ಲೈಫ್ ಸ್ಟೈಲ್

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..