ಪುತ್ತೂರು ಕೋಟಿ ಚೆನ್ನಯ ಕೆ.ಯಸ್.ಆರ್.ಟಿ.ಸಿ ಬಸ್ಸು ನಿಲ್ದಾಣಕ್ಕೆ ಬರುವ ಬಸ್ ಮತ್ತು ಇತರ ವಾಹನಗಳು ಪ್ರಧಾನ ರಸ್ತೆ ಯಿಂದ ಅರುಣ ಚಿತ್ರಮಂದಿರದ ಬಳಿ ತಿರುಗಿ ಎ.ಪಿ.ಎಂ.ಸಿ ರಸ್ತೆಯ ಸಿಟಿ ಆಸ್ಪತ್ರೆಯ ಮುಂಬಾಗದಿಂದ ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಹೋಗುವ ರಸ್ತೆಯು ಕಿರಿದಾದ ಮತ್ತು ಏರು ರಸ್ತೆಯಾಗಿದ್ದು ಕೆ.ಎಸ್.ಆರ್.ಟಿ.ಸಿ ಯ ಎಲ್ಲಾ ವಾಹನಗಳು ಇದೇ ರಸ್ತೆಯಲ್ಲಿ ಹೋಗಬೇಕಾಗಿರುತ್ತದೆ.
ಸದರಿ ರಸ್ತೆಯು ಧ್ವಿಮುಖ ಸಂಚಾರ ರಸ್ತೆಯಾಗಿದ್ದುಒಂದು ಬದಿಯಲ್ಲಿ ಹೊಸದಾಗಿ ಒಳ ಚರಂಡಿಯ ವ್ಯವಸ್ಥೆಯನ್ನು ಮಾಡಿರುವುದರಿಂದ ರಸ್ತೆ ಇನ್ನಷ್ಟು ಕಡಿದಾಗಿರುತ್ತದೆ.
ಇದರಿಂದ ಎರಡು ವಾಹನಗಳು ಸುಗಮವಾಗಿ ಚಲಿಸಲು ಅಸಾದ್ಯವಾಗುವುದಿಲ್ಲ.
ಕೆ.ಎಸ್.ಆರ್.ಟಿ.ಸಿ. ಬಸ್ಸು ನಿಲ್ದಾಣದಿಂದ ತುಸು ಮುಂದಕ್ಕೆ ಅಂಬಿಕಾ ಶಾಲೆಗೆ ತಿರುಗುವ ರಸ್ತೆ ಬಳಿಯಿಂದ ಸಿಟಿ ಅಸ್ಪತ್ರೆಯ ಮುಂಭಾಗ ಎ.ಪಿ.ಎಂ.ಸಿ ರಸ್ತೆಗೆ ಸೇರುವವರೆಗಿನ ಸುಮಾರು 100 ಮೀಟರ್ ಉದ್ದದ ರಸ್ತೆಯನ್ನು ಪ್ರವೇಶವಿಲ್ಲ (no entry), ಬೋರ್ಡ್ ಅಳವಡಿಸಿ, ಸಿಟಿ ಆಸ್ಪತ್ರೆಯಿಂದ ಬಸ್ ನಿಲ್ದಾಣದವರೆಗಿನ ರಸ್ತೆಯನ್ನು ಏಕಮುಖ ಸಂಚಾರ ರಸ್ತೆಯನ್ನಾಗಿ ಆದೇಶ ಮಾಡುವಂತೆ
ಆಯುಕ್ತರು ನಗರಸಭೆ ಪುತ್ತೂರು,ಸಹಾಯಕ ಕಮಿಷನರ್,ಪುತ್ತೂರು ಉಪ ವಿಭಾಗ ಪುತ್ತೂರು,ವೃತ್ತ ನಿರೀಕ್ಷಕರುಸಂಚಾರಿ ಠಾಣೆ ಪುತ್ತೂರು,ಅಶೋಕ್ ಕುಮಾರ್ ರೈಶಾಸಕರು ಪುತ್ತೂರು ವಿಧಾನಸಭಾ ಕ್ಷೇತ್ರ,
ಕೆ.ಎಸ್.ಆರ್.ಟಿ .ಸಿ ಅಧಿಕಾರಿಗಳಿಗೆ ಕೆ.ಯಸ್ .ಆರ್. ಟಿ.ಸಿ ಸ್ಟಾಫ್ & ವರ್ಕರ್ಸ್ ಯೂನಿಯನ್ ಪುತ್ತೂರು ವಿಭಾಗದ ವತಿಯಿಂದ ಮನವಿ ಸಲ್ಲಿಸಲಾಯಿತು.ಕೋಚಣ್ಣ ಪೂಜಾರಿ,
ಪ್ರಧಾನ ಕಾರ್ಯದರ್ಶಿ, ಸ್ಟಾಫ್ & ವರ್ಕರ್ಸ್ ಯೂನಿಯನ್ ಪುತ್ತೂರು ವಿಭಾಗ,ಅಬ್ದುಲ್ ಅಝಿಝ್ ಚಾಲಕರು, ಪುತ್ತೂರು,ಶಶಿಧರ ಚಾಲಕರು ಪುತ್ತೂರು, ಲೋಕೆಶ್ ಚಾಲಕರು ಸುಳ್ಯ ,ಪ್ರಕಾಶ್ ಮೊಂತೋರೋ ಚಾಲಕರು ಪುತ್ತೂರು ಜತೆಗಿದ್ದರು.



















