• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
ರಷ್ಯಾದ ದಾಗೆಸ್ತಾನ್  ಅಲ್ಲೋಲ ಕಲ್ಲೋಲ!  ಕ್ರೈಸ್ತ, ಯಹೂದಿಗಳ ಮೇಲೆ ಇಸ್ಲಾಮಿಕ್ ಉಗ್ರರ ದಾಳಿ?

ರಷ್ಯಾದ ದಾಗೆಸ್ತಾನ್ ಅಲ್ಲೋಲ ಕಲ್ಲೋಲ! ಕ್ರೈಸ್ತ, ಯಹೂದಿಗಳ ಮೇಲೆ ಇಸ್ಲಾಮಿಕ್ ಉಗ್ರರ ದಾಳಿ?

June 25, 2024
ಮುಸ್ಲಿಂ ವ್ಯಕ್ತಿ ಜೊತೆ ಲಿವಿಂಗ್ ಟುಗೆದರ್ ಇಬ್ಬರು ಮಕ್ಕಳ ತಾಯಿ ಕಸದ ಲಾರಿಯಲ್ಲಿ ಶವವಾಗಿ ಪತ್ತೆ!

ಮುಸ್ಲಿಂ ವ್ಯಕ್ತಿ ಜೊತೆ ಲಿವಿಂಗ್ ಟುಗೆದರ್ ಇಬ್ಬರು ಮಕ್ಕಳ ತಾಯಿ ಕಸದ ಲಾರಿಯಲ್ಲಿ ಶವವಾಗಿ ಪತ್ತೆ!

June 30, 2025
ಅತ್ಯಾಚಾರ ನಡೆಸಿ ಮಗುವಿಗೆ ಜನ್ಮನೀಡಿದ ಪ್ರಕರಣ ಮಾತುಕತೆ ನಡೆಸಿದವರೆ ,ನೀವು ಎಲ್ಲಿದ್ದೀರಿ, ನ್ಯಾಯ ಕೊಡಿಸಲು ಹಿಂಜರಿಕೆ ಯಾಕೆ?: ಮಹಮ್ಮದಾಲಿ

ಅತ್ಯಾಚಾರ ನಡೆಸಿ ಮಗುವಿಗೆ ಜನ್ಮನೀಡಿದ ಪ್ರಕರಣ ಮಾತುಕತೆ ನಡೆಸಿದವರೆ ,ನೀವು ಎಲ್ಲಿದ್ದೀರಿ, ನ್ಯಾಯ ಕೊಡಿಸಲು ಹಿಂಜರಿಕೆ ಯಾಕೆ?: ಮಹಮ್ಮದಾಲಿ

June 30, 2025
ದೇಶದ ಪ್ರಮುಖ ಖಾಸಗಿ ಕರ್ನಾಟಕ ಬ್ಯಾಂಕ್​ನ ಕೋಟಿ ಕೋಟಿ ಅವ್ಯವಹಾರ ಸಂಕಷ್ಟದಲ್ಲಿ ಬ್ಯಾಂಕ್; ಕರ್ಣಾಟಕ ಬ್ಯಾಂಕ್ ಸಿಇಓ ಶ್ರೀಕೃಷ್ಣನ್ ಹರಿಹರ ಶರ್ಮಾ ರಾಜೀನಾಮೆ

ದೇಶದ ಪ್ರಮುಖ ಖಾಸಗಿ ಕರ್ನಾಟಕ ಬ್ಯಾಂಕ್​ನ ಕೋಟಿ ಕೋಟಿ ಅವ್ಯವಹಾರ ಸಂಕಷ್ಟದಲ್ಲಿ ಬ್ಯಾಂಕ್; ಕರ್ಣಾಟಕ ಬ್ಯಾಂಕ್ ಸಿಇಓ ಶ್ರೀಕೃಷ್ಣನ್ ಹರಿಹರ ಶರ್ಮಾ ರಾಜೀನಾಮೆ

June 30, 2025
ಪುತ್ತೂರು: ಮದುವೆಯಾಗುವುದಾಗಿ ನಂಬಿಸಿ ಯುವತಿ ಮೇಲೆ ಅತ್ಯಾಚಾರ ಪ್ರಕರಣ ಸಂತ್ರಸ್ತೆ ಯುವತಿಯ ತಾಯಿ ಪತ್ರಿಕಾಗೋಷ್ಠಿ

ಪುತ್ತೂರು: ಮದುವೆಯಾಗುವುದಾಗಿ ನಂಬಿಸಿ ಯುವತಿ ಮೇಲೆ ಅತ್ಯಾಚಾರ ಪ್ರಕರಣ ಸಂತ್ರಸ್ತೆ ಯುವತಿಯ ತಾಯಿ ಪತ್ರಿಕಾಗೋಷ್ಠಿ

June 30, 2025
ಪುತ್ತಿಲ ಪರಿವಾರ ಸೇವಾ ಟ್ರಸ್ಟ್  ಇದರ ವತಿಯಿಂದ ನಡೆಯುವ ವರ ಮಹಾಲಕ್ಷ್ಮಿಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ

ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಇದರ ವತಿಯಿಂದ ನಡೆಯುವ ವರ ಮಹಾಲಕ್ಷ್ಮಿಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ

June 30, 2025
ಕಾಂಗ್ರೇಸ್ ಸರ್ಕಾರ ಮರಳು ಮತ್ತು ಕೆಂಪುಕಲ್ಲು ಅಭಾವ ಸೃಷ್ಟಿಸಿರುವುದರಿಂದ ಪ್ರಾಕೃತಿಕ ವಿಕೋಪಗಳಿಂದ ಹಾನಿಯಾದ ಮನೆಗಳ ದುರಸ್ಥಿಯೂ ಮಾಡಲಾಗುತ್ತಿಲ್ಲ – ಬಡ ಕಾರ್ಮಿಕರಿಗೆ ಕೂಲಿ ಕೆಲಸವೂ ಇಲ್ಲದಂತಾಗಿದೆ :  ಅರುಣ್ ಪುತ್ತಿಲ

ಕಾಂಗ್ರೇಸ್ ಸರ್ಕಾರ ಮರಳು ಮತ್ತು ಕೆಂಪುಕಲ್ಲು ಅಭಾವ ಸೃಷ್ಟಿಸಿರುವುದರಿಂದ ಪ್ರಾಕೃತಿಕ ವಿಕೋಪಗಳಿಂದ ಹಾನಿಯಾದ ಮನೆಗಳ ದುರಸ್ಥಿಯೂ ಮಾಡಲಾಗುತ್ತಿಲ್ಲ – ಬಡ ಕಾರ್ಮಿಕರಿಗೆ ಕೂಲಿ ಕೆಲಸವೂ ಇಲ್ಲದಂತಾಗಿದೆ : ಅರುಣ್ ಪುತ್ತಿಲ

June 30, 2025
ನಮ್ಮ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ:ಶುದ್ಧೀಕರಣ ಕೇವಲ ಪ್ರೋಕ್ಷಣೆಯಿಂದ ಆಗಲ್ಲ-ಡಿ.ವಿ.ಸದಾನಂದಗೌಡ

ನಮ್ಮ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ:ಶುದ್ಧೀಕರಣ ಕೇವಲ ಪ್ರೋಕ್ಷಣೆಯಿಂದ ಆಗಲ್ಲ-ಡಿ.ವಿ.ಸದಾನಂದಗೌಡ

June 27, 2025
ಮದುವೆಯಾಗುವುದಾಗಿ ನಂಬಿಸಿ ಯುವತಿ ಮೇಲೆ ಅತ್ಯಾಚಾರ : ಪುತ್ತೂರಿನ ವಾಸ್ತು ಶಿಲ್ಪಿಯ ಪುತ್ರನ ವಿರುದ್ದ ಕೇಸ್; ಆರೋಪಿ ಎಸ್ಕೆಪ್

ಮದುವೆಯಾಗುವುದಾಗಿ ನಂಬಿಸಿ ಯುವತಿ ಮೇಲೆ ಅತ್ಯಾಚಾರ : ಪುತ್ತೂರಿನ ವಾಸ್ತು ಶಿಲ್ಪಿಯ ಪುತ್ರನ ವಿರುದ್ದ ಕೇಸ್; ಆರೋಪಿ ಎಸ್ಕೆಪ್

June 30, 2025
ಕ್ರೈಸ್ತ ದಫನ್ ಭೂಮಿಯ ಸಮಾಧಿಗೆ ಹಾನಿ ದೂರು – ಪುತ್ತೂರು ಪೊಲೀಸರಿಂದ ತನಿಖೆ

ಕ್ರೈಸ್ತ ದಫನ್ ಭೂಮಿಯ ಸಮಾಧಿಗೆ ಹಾನಿ ದೂರು – ಪುತ್ತೂರು ಪೊಲೀಸರಿಂದ ತನಿಖೆ

June 25, 2025
ಎಸ್ ಪಿ ವೈ ಎಸ್ ಎಸ್ ಉಪ್ಪಿನಂಗಡಿ ಇದರ ವತಿಯಿಂದ 4 ಕಡೆ ಅಂತರಾಷ್ಟ್ರೀಯ ಯೋಗ ದಿನಾಚರಣೆ : ಶಾಸಕರು ಭಾಗಿ

ಎಸ್ ಪಿ ವೈ ಎಸ್ ಎಸ್ ಉಪ್ಪಿನಂಗಡಿ ಇದರ ವತಿಯಿಂದ 4 ಕಡೆ ಅಂತರಾಷ್ಟ್ರೀಯ ಯೋಗ ದಿನಾಚರಣೆ : ಶಾಸಕರು ಭಾಗಿ

June 25, 2025
ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಯು.ಜಿ.ರಾಧಾ ಅರ್ಜಿ: ಅರುಣ್ ಶ್ಯಾಮ್ ವಾದ

ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಯು.ಜಿ.ರಾಧಾ ಅರ್ಜಿ: ಅರುಣ್ ಶ್ಯಾಮ್ ವಾದ

June 23, 2025
ಪಡ್ನೂರು ಮದಗ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರ ಹಿನ್ನೆಲೆ-ಗ್ರಾಮವಾರು ಸಮಿತಿ ರಚನೆಗೆ ಚಾಲನೆ:ಶಾಸಕರಿಂದ ಉದ್ಘಾಟನೆ

ಪಡ್ನೂರು ಮದಗ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರ ಹಿನ್ನೆಲೆ-ಗ್ರಾಮವಾರು ಸಮಿತಿ ರಚನೆಗೆ ಚಾಲನೆ:ಶಾಸಕರಿಂದ ಉದ್ಘಾಟನೆ

June 23, 2025
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Wednesday, July 2, 2025
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    ಅತ್ಯಾಚಾರ ನಡೆಸಿ ಮಗುವಿಗೆ ಜನ್ಮನೀಡಿದ ಪ್ರಕರಣ ಮಾತುಕತೆ ನಡೆಸಿದವರೆ ,ನೀವು ಎಲ್ಲಿದ್ದೀರಿ, ನ್ಯಾಯ ಕೊಡಿಸಲು ಹಿಂಜರಿಕೆ ಯಾಕೆ?: ಮಹಮ್ಮದಾಲಿ

    ಅತ್ಯಾಚಾರ ನಡೆಸಿ ಮಗುವಿಗೆ ಜನ್ಮನೀಡಿದ ಪ್ರಕರಣ ಮಾತುಕತೆ ನಡೆಸಿದವರೆ ,ನೀವು ಎಲ್ಲಿದ್ದೀರಿ, ನ್ಯಾಯ ಕೊಡಿಸಲು ಹಿಂಜರಿಕೆ ಯಾಕೆ?: ಮಹಮ್ಮದಾಲಿ

    ಪುತ್ತೂರು: ಮದುವೆಯಾಗುವುದಾಗಿ ನಂಬಿಸಿ ಯುವತಿ ಮೇಲೆ ಅತ್ಯಾಚಾರ ಪ್ರಕರಣ ಸಂತ್ರಸ್ತೆ ಯುವತಿಯ ತಾಯಿ ಪತ್ರಿಕಾಗೋಷ್ಠಿ

    ಪುತ್ತೂರು: ಮದುವೆಯಾಗುವುದಾಗಿ ನಂಬಿಸಿ ಯುವತಿ ಮೇಲೆ ಅತ್ಯಾಚಾರ ಪ್ರಕರಣ ಸಂತ್ರಸ್ತೆ ಯುವತಿಯ ತಾಯಿ ಪತ್ರಿಕಾಗೋಷ್ಠಿ

    ಪುತ್ತಿಲ ಪರಿವಾರ ಸೇವಾ ಟ್ರಸ್ಟ್  ಇದರ ವತಿಯಿಂದ ನಡೆಯುವ ವರ ಮಹಾಲಕ್ಷ್ಮಿಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ

    ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಇದರ ವತಿಯಿಂದ ನಡೆಯುವ ವರ ಮಹಾಲಕ್ಷ್ಮಿಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ

    ಕಾಂಗ್ರೇಸ್ ಸರ್ಕಾರ ಮರಳು ಮತ್ತು ಕೆಂಪುಕಲ್ಲು ಅಭಾವ ಸೃಷ್ಟಿಸಿರುವುದರಿಂದ ಪ್ರಾಕೃತಿಕ ವಿಕೋಪಗಳಿಂದ ಹಾನಿಯಾದ ಮನೆಗಳ ದುರಸ್ಥಿಯೂ ಮಾಡಲಾಗುತ್ತಿಲ್ಲ – ಬಡ ಕಾರ್ಮಿಕರಿಗೆ ಕೂಲಿ ಕೆಲಸವೂ ಇಲ್ಲದಂತಾಗಿದೆ :  ಅರುಣ್ ಪುತ್ತಿಲ

    ಕಾಂಗ್ರೇಸ್ ಸರ್ಕಾರ ಮರಳು ಮತ್ತು ಕೆಂಪುಕಲ್ಲು ಅಭಾವ ಸೃಷ್ಟಿಸಿರುವುದರಿಂದ ಪ್ರಾಕೃತಿಕ ವಿಕೋಪಗಳಿಂದ ಹಾನಿಯಾದ ಮನೆಗಳ ದುರಸ್ಥಿಯೂ ಮಾಡಲಾಗುತ್ತಿಲ್ಲ – ಬಡ ಕಾರ್ಮಿಕರಿಗೆ ಕೂಲಿ ಕೆಲಸವೂ ಇಲ್ಲದಂತಾಗಿದೆ : ಅರುಣ್ ಪುತ್ತಿಲ

    ಮದುವೆಯಾಗುವುದಾಗಿ ನಂಬಿಸಿ ಯುವತಿ ಮೇಲೆ ಅತ್ಯಾಚಾರ : ಪುತ್ತೂರಿನ ವಾಸ್ತು ಶಿಲ್ಪಿಯ ಪುತ್ರನ ವಿರುದ್ದ ಕೇಸ್; ಆರೋಪಿ ಎಸ್ಕೆಪ್

    ಮದುವೆಯಾಗುವುದಾಗಿ ನಂಬಿಸಿ ಯುವತಿ ಮೇಲೆ ಅತ್ಯಾಚಾರ : ಪುತ್ತೂರಿನ ವಾಸ್ತು ಶಿಲ್ಪಿಯ ಪುತ್ರನ ವಿರುದ್ದ ಕೇಸ್; ಆರೋಪಿ ಎಸ್ಕೆಪ್

    ಕ್ರೈಸ್ತ ದಫನ್ ಭೂಮಿಯ ಸಮಾಧಿಗೆ ಹಾನಿ ದೂರು – ಪುತ್ತೂರು ಪೊಲೀಸರಿಂದ ತನಿಖೆ

    ಕ್ರೈಸ್ತ ದಫನ್ ಭೂಮಿಯ ಸಮಾಧಿಗೆ ಹಾನಿ ದೂರು – ಪುತ್ತೂರು ಪೊಲೀಸರಿಂದ ತನಿಖೆ

    ಎಸ್ ಪಿ ವೈ ಎಸ್ ಎಸ್ ಉಪ್ಪಿನಂಗಡಿ ಇದರ ವತಿಯಿಂದ 4 ಕಡೆ ಅಂತರಾಷ್ಟ್ರೀಯ ಯೋಗ ದಿನಾಚರಣೆ : ಶಾಸಕರು ಭಾಗಿ

    ಎಸ್ ಪಿ ವೈ ಎಸ್ ಎಸ್ ಉಪ್ಪಿನಂಗಡಿ ಇದರ ವತಿಯಿಂದ 4 ಕಡೆ ಅಂತರಾಷ್ಟ್ರೀಯ ಯೋಗ ದಿನಾಚರಣೆ : ಶಾಸಕರು ಭಾಗಿ

    ಪಡ್ನೂರು ಮದಗ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರ ಹಿನ್ನೆಲೆ-ಗ್ರಾಮವಾರು ಸಮಿತಿ ರಚನೆಗೆ ಚಾಲನೆ:ಶಾಸಕರಿಂದ ಉದ್ಘಾಟನೆ

    ಪಡ್ನೂರು ಮದಗ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರ ಹಿನ್ನೆಲೆ-ಗ್ರಾಮವಾರು ಸಮಿತಿ ರಚನೆಗೆ ಚಾಲನೆ:ಶಾಸಕರಿಂದ ಉದ್ಘಾಟನೆ

    ಕಾನೂನು ಸೇವಾ ಸಮಿತಿ ಪುತ್ತೂರು ಇವರ ಆಶ್ರಯದಲ್ಲಿ ಜುಲೈ 12 ರಂದು ರಾಷ್ಟ್ರೀಯ ಲೋಕ್ ಅದಾಲತ್

    ಕಾನೂನು ಸೇವಾ ಸಮಿತಿ ಪುತ್ತೂರು ಇವರ ಆಶ್ರಯದಲ್ಲಿ ಜುಲೈ 12 ರಂದು ರಾಷ್ಟ್ರೀಯ ಲೋಕ್ ಅದಾಲತ್

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ಅಂತರಾಷ್ಟ್ರೀಯ

ರಷ್ಯಾದ ದಾಗೆಸ್ತಾನ್ ಅಲ್ಲೋಲ ಕಲ್ಲೋಲ! ಕ್ರೈಸ್ತ, ಯಹೂದಿಗಳ ಮೇಲೆ ಇಸ್ಲಾಮಿಕ್ ಉಗ್ರರ ದಾಳಿ?

by ಪ್ರಜಾಧ್ವನಿ ನ್ಯೂಸ್
June 25, 2024
in ಅಂತರಾಷ್ಟ್ರೀಯ, ಇತರೆ, ಕ್ರೈಮ್, ರಾಷ್ಟ್ರೀಯ
0
ರಷ್ಯಾದ ದಾಗೆಸ್ತಾನ್  ಅಲ್ಲೋಲ ಕಲ್ಲೋಲ!  ಕ್ರೈಸ್ತ, ಯಹೂದಿಗಳ ಮೇಲೆ ಇಸ್ಲಾಮಿಕ್ ಉಗ್ರರ ದಾಳಿ?
352
SHARES
1k
VIEWS
ShareShareShare

ಭಾನುವಾರ.. ಜೂನ್ 23.. ರಷ್ಯಾ ದೇಶದ ದಾಗೆಸ್ತಾನ್‌ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿತ್ತು. ಈ ಘಟನೆಯಿಂದ ಕ್ರೈಸ್ತರು ಹಾಗೂ ಯಹೂದಿಗಳು ಆತಂಕದಲ್ಲಿದ್ದಾರೆ. ಚರ್ಚ್ ಹಾಗೂ ಯಹೂದಿ ಪ್ರಾರ್ಥನಾ ಮಂದಿರಗಳನ್ನೇ ಗುರಿಯಾಗಿಸಿ ಉಗ್ರರು ದಾಳಿ ನಡೆಸಿದ್ದಾರೆ. ಮುಸ್ಲಿಂ ಪ್ರಾಬಲ್ಯದ ದಾಗೆಸ್ತಾನ್‌ನಲ್ಲಿ ನಡೆದಿರೋ ಈ ಕೃತ್ಯ ವಿಶ್ವಾದ್ಯಂತ ಭಾರೀ ಚರ್ಚೆಯಾಗ್ತಿದೆ. ಜೊತೆಯಲ್ಲೇ ಕ್ರೈಸ್ತರು ಹಾಗೂ ಯಹೂದಿ ಭಕ್ತರನ್ನು ರಕ್ಷಿಸಲು ರಷ್ಯಾ ಪೊಲೀಸರು ತಮ್ಮ ಜೀವವನ್ನೇ ಪಣಕ್ಕಿಟ್ಟು ಹೋರಾಡಿದ ರೀತಿ ಕೂಡಾ ಗಮನ ಸೆಳೆದಿದೆ.

Akshaya College Puttur

ಜಾಹೀರಾತು

ರಷ್ಯಾದ ದಾಗೆಸ್ತಾನ್ ಪ್ರಾಂತ್ಯ ಮುಸ್ಲಿಂ ಬಾಹುಳ್ಯದ ಪ್ರದೇಶ.. ಈ ಪ್ರಾಂತ್ಯದಲ್ಲಿ ಕಳೆದ ಭಾನುವಾರ ಧಾರ್ಮಿಕ ರಜಾ ದಿನ ಇತ್ತು. ಈ ಹಿನ್ನೆಲೆಯಲ್ಲಿ ಭಾನುವಾರ ಸಂಜೆ ವೇಳೆ ಕ್ರೈಸ್ತರು ಚರ್ಚ್‌ಗಳಿಗೆ ತೆರಳಿದ್ದರೆ, ಯಹೂದಿಗಳು ತಮ್ಮ ಪ್ರಾರ್ಥನಾ ಸ್ಥಳಕ್ಕೆ ಭೇಟಿ ನೀಡಿದ್ದರು. ಭಾರತದ ಕಾಲ ಮಾನದ ಪ್ರಕಾರ ಹೇಳೋದಾದರೆ ಭಾನುವಾರ ರಾತ್ರಿ 8.30ರ ಸುಮಾರಿಗೆ ಚರ್ಚ್ ಹಾಗೂ ಯಹೂದಿ ಪ್ರಾರ್ಥನಾ ಸ್ಥಳಗಳ ಮೇಲೆ ಉಗ್ರರು ಲಗ್ಗೆ ಇಟ್ಟಿದ್ದರು.

ದಾಗೆಸ್ತಾನ್ ಪ್ರಾಂತ್ಯದ ರಾಜಧಾನಿ ಮಖಚ್ಕಲಾಗೆ ಧಾವಿಸಿದ ಉಗ್ರರು ಮೊದಲಿಗೆ ಸಂಚಾರಿ ಪೊಲೀಸರ ಚೆಕ್ ಪೋಸ್ಟ್‌ ಮೇಲೆ ದಾಳಿ ನಡೆಸಿದರು. ಬಳಿಕ ಚರ್ಚ್ ಹಾಗೂ ಯಹೂದಿಗಳ ಎರಡು ಪ್ರಾರ್ಥನಾ ಕೇಂದ್ರಗಳ ಮೇಲೆ ಏಕ ಕಾಲಕ್ಕೆ ಉಗ್ರರು ದಾಳಿ ನಡೆಸಿದರು. ಈ ವೇಳೆ, ಎಲ್ಲ ಪ್ರಾರ್ಥನಾ ಮಂದಿರಗಳಲ್ಲೂ ಭಕ್ತರು ಸೇರಿದ್ದರು. ಈ ಕಟ್ಟಡಗಳ ಒಳಗೆ ನುಗ್ಗಿ ಭಕ್ತ ಸಮೂಹದ ಮೇಲೆ ಮನಬಂದಂತೆ ಗುಂಡು ಹಾರಿಸಬೇಕು ಅನ್ನೋದು ಉಗ್ರರ ಉದ್ದೇಶವಾಗಿತ್ತು. ಒಂದು ವೇಳೆ ಉಗ್ರರ ಈ ಪ್ಲಾನ್ ಸಕ್ಸಸ್ ಆಗಿದ್ದರೆ, ಮೃತರ ಸಂಖ್ಯೆ ನೂರರ ಗಡಿ ದಾಟುತ್ತಿತ್ತು.. ಆದರೆ, ಘಟನಾ ಸ್ಥಳದಲ್ಲಿ ನಡೆದದ್ಧೇ ಬೇರೆ..

ಉಗ್ರರು ತಮ್ಮ ಮೊದಲ ದಾಳಿ ನಡೆಸಿದ್ದು ಭಾನುವಾರ ರಾತ್ರಿ 8.30ಕ್ಕೆ.. ಈ ಘಟನಾ ಸ್ಥಳಕ್ಕೆ ರಷ್ಯಾದ ಉಗ್ರ ನಿಗ್ರಹ ದಳ ಧಾವಿಸಿದ್ದು, ಸೋಮವಾರ ಬೆಳಗ್ಗೆ 10.30ಕ್ಕೆ.. ಅಂದರೆ ಸರಿ ಸುಮಾರು 14 ಗಂಟೆಗಳ ಕಾಲ ಉಗ್ರರ ವಿರುದ್ಧ ಎದೆ ಒಡ್ಡಿದ್ದು, ರಷ್ಯಾ ಪೊಲೀಸರು!

ಎಷ್ಟು ಮಂದಿ ಉಗ್ರರಿದ್ದಾರೆ, ಅವರ ಬಳಿ ಯಾವ ರೀತಿಯ ಶಸ್ತ್ರಾಸ್ತ್ರಗಳು ಇವೆ ಅನ್ನೋದ್ರ ಮಾಹಿತಿ ಪೊಲೀಸರಿಗೆ ಇರಲಿಲ್ಲ. ಅಸಲಿಗೆ ಉಗ್ರ ನಿಗ್ರಹ ಕಾರ್ಯಾಚರಣೆ ನಡೆಸುವ ಸೂಕ್ತ ತರಬೇತಿ ಕೂಡಾ ಪೊಲೀಸರಿಗೆ ಇರೋದಿಲ್ಲ. ಇಷ್ಟಾದರೂ ಪ್ರಾರ್ಥನಾ ಮಂದಿರಗಳಲ್ಲಿ ಇದ್ದ ನಾಗರಿಕರ ರಕ್ಷಣೆ ಪೊಲೀಸರ ಪ್ರಥಮ ಆದ್ಯತೆ ಆಗಿತ್ತು.

ಉಗ್ರರ ವಿರುದ್ಧ ಹೋರಾಡುತ್ತಿದ್ದ ಪೊಲೀಸರಿಗೆ ನೆರವಾಗಲು ಭಯೋತ್ಪಾದನಾ ನಿಗ್ರಹ ದಳ ಧಾವಿಸಿದಷ್ಟೇ ವೇಗವಾಗಿ ಕಾರ್ಯಾಚರಣೆ ಮುಗಿದು ಹೋಗಿತ್ತು! ಸೋಮವಾರ ಬೆಳಗ್ಗೆ 10.30ರ ಸುಮಾರಿಗೆ ಕಾರ್ಯಾಚರಣೆ ಆರಂಭಿಸಿದ ಉಗ್ರ ನಿಗ್ರಹ ದಳ, ಮಧ್ಯಾಹ್ನ 12.30ರ ವೇಳೆಗೆ ತನ್ನ ಕಾರ್ಯಾಚರಣೆ ಅಂತ್ಯಗೊಳಿಸಿತ್ತು. ಎಲ್ಲಾ 6 ಉಗ್ರರನ್ನು ಹತ್ಯೆ ಮಾಡಿತ್ತು. ದುರಾದೃಷ್ಟವಶಾತ್ ಈ ಉಗ್ರರ ಗುಂಡಿಗೆ ಎದೆಯೊಡ್ಡಿದ್ದ 15 ಪೊಲೀಸರೂ ಸಾವಿಗೀಡಾದರು.

ಈ ಉಗ್ರ ದಾಳಿಯಲ್ಲಿ ಒಟ್ಟು 20 ಮಂದಿ ಸಾವಿಗೀಡಾಗಿದ್ದಾರೆ. ಇದರಲ್ಲಿ 15 ಮಂದಿ ಪೊಲೀಸರೇ ಇದ್ದಾರೆ. ಇನ್ನುಳಿದ ಐವರು ನಾಗರಿಕರ ಪೈಕಿ ಓರ್ವ ಪಾದ್ರಿ ಕೂಡಾ ಇದ್ದಾರೆ. ಈ ಪಾದ್ರಿ ಕಳೆದ 40 ವರ್ಷಗಳಿಂದ ದಾಗೆಸ್ತಾನದ ಪ್ರಾರ್ಥನಾ ಮಂದಿರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

ಮ್ಯಾಪ್‌ನಲ್ಲಿ ನೋಡಿದರೆ ರಷ್ಯಾ ದೇಶದ ನೈರುತ್ಯ ಭಾಗದ ಅಂಚಿನಲ್ಲಿ ಬರುವ ಭಾಗವೇ ದಾಗೆಸ್ತಾನ್. ಕ್ಯಾಸ್ಪಿಯನ್ ಸಮುದ್ರದ ತೀರದಲ್ಲಿ ಇರುವ ಈ ಪ್ರಾಂತ್ಯ, ಇಸ್ಲಾಮಿಕ್ ರಾಷ್ಟ್ರಗಳ ಜೊತೆ ಅತಿ ಸುಲಭವಾಗಿ ಸಂಪರ್ಕ ಸಾಧಿಸಬಲ್ಲದು. ಇದೇ ಕಾರಣಕ್ಕಾಗಿ ಈ ಪ್ರಾಂತ್ಯದಲ್ಲಿ ಕ್ರೈಸ್ತರು ಹಾಗೂ ಯಹೂದಿಗಳಿಗಿಂತ ಹೆಚ್ಚಾಗಿ ಮುಸ್ಲಿಮರೇ ಇದ್ದಾರೆ. ಇಲ್ಲಿನ ಯುವಕರು ಸಿರಿಯಾಗೆ ಪ್ರಯಾಣ ಬೆಳೆಸಿ ಐಸಿಸ್‌ ಸೇರ್ಪಡೆಗೊಳ್ಳುತ್ತಾರೆ. ಅಲ್ಲಿ ತರಬೇತಿ ಪಡೆದ ಬಳಿಕ ದಾಗೆಸ್ತಾನ್‌ಗೆ ವಾಪಸ್ ಬಂದು ಇಲ್ಲಿ ಭಯೋತ್ಪಾದಕ ಕೃತ್ಯ ಎಸಗುತ್ತಾರೆ ಅನ್ನೋದು ರಷ್ಯಾ ಆರೋಪ.

ದಾಗೆಸ್ತಾನ್ ಬಳಿಕ ಚೆಚೈನ್ಯಾದಲ್ಲೂ ಇದೇ ಸಮಸ್ಯೆ.. 1990ರ ದಶಕದಲ್ಲಿ ಎರಡು ಭಾರೀ ರಷ್ಯಾ ಸೇನೆ ಚೆಚೈನ್ಯಾದಲ್ಲಿ ಇಸ್ಲಾಮಿಕ್ ಉಗ್ರರ ವಿರುದ್ಧ ದೊಡ್ಡ ಮಟ್ಟದ ಸಮರ ನಡೆಸಿತ್ತು. ಉಗ್ರರನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿತ್ತು. ಇದೀಗ ಮತ್ತೆ ಈ ಭಾಗದಲ್ಲಿ ಉಗ್ರರ ಆರ್ಭಟ ತೀವ್ರಗೊಂಡಿದೆ. ಇದಕ್ಕೆಲ್ಲಾ ಕಾರಣವಾಗಿದ್ದು, ಇಸ್ರೇಲ್ – ಹಮಾಸ್ ಯುದ್ಧ! ಇಸ್ರೇಲ್ – ಹಮಾಸ್ ಯುದ್ಧ ಶುರುವಾದ ಕೆಲವು ದಿನಗಳ ಬಳಿಕ ರಷ್ಯಾ ದೇಶದ ದಾಗೆಸ್ತಾನ್‌ಗೆ ಯಹೂದಿ ಪ್ರಯಾಣಿಕರಿದ್ದ ಒಂದು ವಿಮಾನ ಆಗಮಿಸಿತ್ತು.

ಈ ವೇಳೆ ದಾಗೆಸ್ತಾನ್‌ನ ಇಸ್ಲಾಂ ಧರ್ಮೀಯರು ಈ ವಿಮಾನದ ಮೇಲೆ ದಾಳಿ ನಡೆಸಿದ್ದರು! ರಷ್ಯಾ ದೇಶ ಯಹೂದಿಗಳಿಗೆ ನೆಲೆ ನೀಡಬಾರದು ಅನ್ನೋದು ದಾಗೆಸ್ತಾನ್ ಜನತೆಯ ಆಗ್ರಹ! 2023ರ ಅಕ್ಟೋಬರ್ 29 ರಂದು ನಡೆದ ಈ ಘಟನೆ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿತ್ತು. ಆದರೆ, ಇದು ಆರಂಭ ಮಾತ್ರ..

2024ರ ಮಾರ್ಚ್ 6 ರಂದು ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಸಂಗೀತ ಸಮ್ಮೇಳನ ನಡೆಯುತ್ತಿದ್ದ ಸಭಾಂಗಣದ ಮೇಲೆ ದಾಳಿ ನಡೆಸಿದ್ದರು. ಐಸಿಸ್‌ ಕೆ ಎಂದೇ ಕುಖ್ಯಾತವಾದ ಅಫ್ಘಾನಿಸ್ತಾನ ಮೂಲದ ಇಸ್ಲಾಮಿಕ್ ಸ್ಟೇಟ್ ಇನ್ ಖೊರಾಸನ್ ಈ ದಾಳಿಯ ಹೊಣೆಯನ್ನ ಹೊತ್ತುಕೊಂಡಿತ್ತು. ಉಗ್ರರಿಗೆ ಉಕ್ರೇನ್ ಕೂಡಾ ಬೆಂಬಲ ನೀಡಿರಬಹುದು ಅನ್ನೋ ಶಂಕೆಯನ್ನ ರಷ್ಯಾ ವ್ಯಕ್ತಪಡಿಸಿತ್ತು.

ಇದೀಗ ಮತ್ತೊಂದು ಉಗ್ರ ದಾಳಿ ದಾಗೆಸ್ತಾನ್‌ನಲ್ಲಿ ನಡೆದಿದೆ. ಈ ಕೃತ್ಯದ ಹೊಣೆಯನ್ನ ಈವರೆಗೂ ಯಾವುದೇ ಉಗ್ರ ಸಂಘಟನೆ ಹೊತ್ತುಕೊಂಡಿಲ್ಲ. ಆದರೆ, ಚರ್ಚ್ ಹಾಗೂ ಯಹೂದಿ ಪ್ರಾರ್ಥನಾ ಮಂದಿರಗಳ ಮೇಲೆ ಸಂಘಟಿತ ದಾಳಿ ನಡೆದಿರುವ ಹಿನ್ನೆಲೆಯಲ್ಲಿ ಇದು ಐಸಿಸ್ ಮಾದರಿ ಕೃತ್ಯ ಎಂದೇ ರಷ್ಯಾ ಸರ್ಕಾರ ಶಂಕಿಸಿದೆ. ಸದ್ಯ ದಾಗೆಸ್ತಾನದಲ್ಲಿ ಮೂರು ದಿನಗಳ ಕಾಲ ಶೋಕಾಚರಣೆ ಘೋಷಿಸಲಾಗಿದೆ. ಆದರೆ, ಪರಿಸ್ಥಿತಿ ಮಾತ್ರ ಬೂದಿ ಮುಚ್ಚಿದ ಕೆಂಡದಂತಿದೆ.

HPR Institute Of Nursing And Paramedical Sciences & Friends Beke

ಜಾಹೀರಾತು

ಜಾಹೀರಾತು

SendShare141Share
Previous Post

ಮಳೆಗೆ ಸೋರುತಿದೆ ಅಯೋಧ್ಯ ರಾಮ ಮಂದಿರದ ಗರ್ಭಗುಡಿ : ಪ್ರಧಾನ ಅರ್ಚಕರ ಆರೋಪ

Next Post

ಪುತ್ತೂರು: ಆಟೋ ಚಾಲಕರ ಮನವಿಗೆ ಸ್ಪಂದಿಸಿದ ಪುತ್ತೂರು ಶಾಸಕ ಅಶೋಕ್ ರೈ

ಪ್ರಜಾಧ್ವನಿ ನ್ಯೂಸ್

ಪ್ರಜಾಧ್ವನಿ ನ್ಯೂಸ್

Next Post
ಪುತ್ತೂರು: ಆಟೋ ಚಾಲಕರ ಮನವಿಗೆ ಸ್ಪಂದಿಸಿದ ಪುತ್ತೂರು ಶಾಸಕ ಅಶೋಕ್ ರೈ

ಪುತ್ತೂರು: ಆಟೋ ಚಾಲಕರ ಮನವಿಗೆ ಸ್ಪಂದಿಸಿದ ಪುತ್ತೂರು ಶಾಸಕ ಅಶೋಕ್ ರೈ

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

No Result
View All Result
  • ಮುಖಪುಟ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಉದ್ಯೋಗ – ಶಿಕ್ಷಣ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಿನಿಮಾ
  • ಲೈಫ್ ಸ್ಟೈಲ್

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..