ಮಂಗಳೂರು : ಸಮಾಜ ಸೇವೆಯಲ್ಲಿ ಮಹತ್ತರದ ಸೇವೆಯನ್ನು ಸಲ್ಲಿಸಿದಂತಹ ಪ್ರತಿಷ್ಠಿತ ಸ್ವರ್ಣೋದ್ಯಮ ಸಂಸ್ಥೆಯಾದ ಭೀಮಾ ಜ್ಯುವೆಲ್ಲರ್ಸ್ ಇನ್ನೊಂದು ಹೆಜ್ಜೆ ಮುಂದಿಟ್ಟು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ. ) ಗೆ ನೂತನ ಜೀವ ರಕ್ಷಕ ವಾಹನವನ್ನು ಮಂಗಳೂರಿನ ಸಂಸ್ಥೆಯಲ್ಲಿ ಹಸ್ತಾಂತರಿಸಿದರು.
ಈ ಒಂದು ಕಾರ್ಯಕ್ರಮವು ತುರ್ತು ಸಂದರ್ಭದಲ್ಲಿ ಅವಶ್ಯಕತೆ ಇರುವ ಎಲ್ಲಾ ವರ್ಗದ ಜನರಿಗೆ ವೈದ್ಯಕೀಯ ಸಹಾಯವನ್ನು ತಲುಪಿಸುವ ಪುಣ್ಯಕಾರ್ಯವಾಗಿದೆ.
ಇದರಿಂದ ತುರ್ತು ಸಂದರ್ಭದಲ್ಲಿ ರೋಗಿಗಳನ್ನು ಕೂಡಲೇ ಆಸ್ಪತ್ರೆ ಗೆ ತಲುಪಿಸಲು, ನಗರ ಮತ್ತು ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಪ್ರದೇಶದ ಜನರಿಗೆ ವೈದ್ಯಕೀಯ ಸೇವೆಯು ದೊರೆಯುವುದರಲ್ಲಿ ಪ್ರಾಮುಖ್ಯವಾದ ಒಂದು ಸೇವೆಯಾಗಿದೆ.

ಈ ಒಂದು ಜೀವ ರಕ್ಷಕ ವಾಹನ ಟ್ರಸ್ಟ್ ಗೆ ಸೇರ್ಪಡೆಯಾದ್ದರಿಂದ, ಟ್ರಸ್ಟ್ ನ ಸೇವೆಯನ್ನು ಇನ್ನಷ್ಟು ಹೆಚ್ಚು ಗೊಳಿಸಲು ಸಹಕಾರಿಯಾಗಿದೆ.
ಈ ಸಂದರ್ಭದಲ್ಲಿ ಟ್ರಸ್ಟ್ ನ ಸಂಚಾಲಕರಾದ ಅರುಣ್ ಕುಮಾರ್ ಪುತ್ತಿಲ ಮಾತನಾಡಿ ” ಭೀಮಾ ಜ್ಯುವೆಲ್ಲರ್ಸ್ ಸಂಸ್ಥೆಯು ನಮ್ಮ ಟ್ರಸ್ಟ್ ಮೇಲೆ ಭರವಸೆ ಇರಿಸಿ ನೀಡಿದಂತ ಈ ಜೀವ ರಕ್ಷಕ ವಾಹನವನ್ನು ಸದಾ ಸಮಾಜದ ಸೇವೆಗಾಗಿ ಬಳಸಿಕೊಂಡು, ಯಾರೇ ತುರ್ತು ಸಂದರ್ಭದಲ್ಲಿ
ನಮಗೆ ತಿಳಿಸಿದ್ದಲ್ಲಿ, ಯಾವುದೇ ಪರಿಸ್ಥಿತಿ ಇರಲಿ, ಯಾವುದೇ ಸಮಯ ಇರಲಿ. ಅವರ ನೆರವಿಗೆ ಸ್ಪಂದಿಸಲು ನಾವು ಸದಾ ಸಿದ್ದರಿದ್ದೇವೆ ಎಂದರು.
ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಂತಹ ಭೀಮಾ ಜ್ಯುವೆಲ್ಲರ್ಸ್ ಸಂಸ್ಥೆಯ ಒಂದು ಸೇವೆಯಿಂದ ಇವರ ಸಾಮಾಜಿಕ ಬದ್ಧತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಭೀಮಾ ಜ್ಯುವೆಲ್ಲರ್ಸ್ ನ ಈ ಒಂದು ಮಹತ್ವಪೂರ್ಣ ಕೊಡುಗೆಗೆ ಟ್ರಸ್ಟ್ ಹಾಗೂ ಸಾರ್ವಜನಿಕರಿಂದ ವ್ಯಾಪಕ ಪ್ರಸಂಸೆ ವ್ಯತ್ಯವಾಗಿದೆ.
ಈ ಒಂದು ಕಾರ್ಯಕ್ರಮದಲ್ಲಿ ಟ್ರಸ್ಟ್ ನ ಸದಸ್ಯರು, ಸ್ಥಳೀಯ ಗಣ್ಯರು ಮತ್ತು ಭೀಮಾ ಜುವೆಲ್ಲರ್ಸ್ ಪ್ರತಿನಿಧಿಗಳು ಭಾಗವಹಿಸಿದ್ದರು.




























