ಪುತ್ತೂರು: ಶಾಸಕರಾದ ಅಶೋಕ್ ರೈ ಯವರಿಗೆ ಮಂತ್ರಿ ಸ್ಥಾನ ದೊರಕ ಬೇಕೆಂದು ಶ್ರೀ ಬಲಮುರಿ ವಿಧ್ಯಾ ಗಣಪತಿ ದೇವಸ್ಥಾನ ದಲ್ಲಿ ಹಾರಾಡಿ ವಲಯ ಕಾಂಗ್ರೆಸ್ ಅಧ್ಯಕ್ಷ ರೋಶನ್ ಭಂಡಾರಿಮತ್ತು ಸದಸ್ಯರು ಸೇರಿ ಮಹಾ ಪೂಜೆ ನಡೆಸಿ ಪ್ರಾರ್ಥಿಸಲಾಯಿತು.
ಈ ಸಂಧರ್ಭ ದಲ್ಲಿ ಸಮೀತಿ ಸದಸ್ಯ ರಾದ ಶಭರೀಶ, ಪ್ರಜ್ವಲ್ , ಹೇಮ ಹಾಗೂ ಸುಜಾತ ರವರು ಪಾಲ್ಗೊಂಡರು.
ಶಾಸಕರಾದ ಅಲ್ಪಾವಧಿಯಲ್ಲಿ ಅತಿ ಹೆಚ್ಚು ಅಭಿವೃದ್ಧಿ ಕೆಲಸಗಳನ್ನು ಮಾಡಿ, ಸಾರ್ವಜನಿಕರಿಂದಲೂ ಪ್ರಸಂಶೆಗೊಳಪಟ್ಟ ತನ್ನ ಕಾರ್ಯ ವೈಖರಿಯಿಂದ ಅತಿ ಹೆಚ್ಚು ಅನುದಾನವನ್ನು ತಂದಂತಹ ಪುತ್ತೂರಿನ ಶಾಸಕರಾದ ಶ್ರೀ ಅಶೋಕ್ ಕುಮಾರ್ ರೈ ಯವರ ಹೆಸರು ಈಗ ನೂತನ ಸಚಿವರ ಹೆಸರಿನ ಸಾಲಿನಲ್ಲಿ ಸದ್ದು ಮಾಡುತ್ತಿದೆ.
ಪ್ರಪ್ರಥಮವಾಗಿ ಶಾಸಕರಾಗಿ ಪುತ್ತೂರಿನಲ್ಲಿ ಹಲವು ಅಭಿವೃದ್ಧಿಗಳನ್ನು ಕೆಲಸಗಳನ್ನು ಮಾಡಿ, ಪ್ರಥಮವಾಗಿ ಬೆಂಗಳೂರಿನಲ್ಲಿ ಕಂಬಳವನ್ನು ಆಯೋಜನೆ ಮಾಡಿ ಯಶಸ್ವಿಯಾಗಿದ್ದಾರೆ. ಈ ಮೂಲಕ ರಾಜ್ಯದ ಸರಕಾರದ ದೊಂದಿಗೆ ನಿರಂತರ ಸಂಪರ್ಕದಲ್ಲೂ ಇದ್ದಾರೆ. ಆದುದರಿಂದ ಅಶೋಕ್ ಕುಮಾರ್ ರೈ ಅವರಿಗೆ ಸಚಿವ ಸ್ಥಾನ ದೊರೆತರೆ ಪುತ್ತೂರಿಗೂ ಸಂತೋಷದ ವಿಚಾರ.
ಆ ಮೂಲಕ ಪುತ್ತೂರಿಗೆ ಇನ್ನೂ ಹೆಚ್ಚಿನ ಅನುದಾನ ಬಂದು, ಈಗಾಗಲೇ ಕಾಮಗಾರಿ ಆರಂಭಗೊಂಡ ಮೆಡಿಕಲ್ ಕಾಲೇಜು ಕೂಡ ಆದಷ್ಟು ಬೇಗ ಆಗಿ ಸಾರ್ವಜನಿಕರಿಗೆ ಇದರ ಉಪಯೋಗ ಸಿಗುವಂತಾಗಲಿ ಎಂದು ನಮ್ಮೆಲ್ಲರ ಆಶಯ.

























