ದಕ್ಷಿಣಕನ್ನಡ: ರೌಡಿಗಳ ಮೇಲೆ ಶೂಟೌಟ್ ಮಾಡಲು ಸಚಿವ ಯು.ಟಿ.ಖಾದರ್ ಮಂಗಳೂರು ಪೋಲೀಸ್ ಕಮಿಷನರ್ ಗೆ ನೀಡಿದ್ದ ಸೂಚನೆಗೆ ಎಸ್.ಡಿ.ಪಿ.ಐ ಆಕ್ರೋಶ ವ್ಯಕ್ತಪಡಿಸಿದೆ.
ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ SDPI ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಸಚಿವರನ್ನು ತಕ್ಷಣವೇ ಸಂಪುಟದಿಂದ ಕಿತ್ತು ಹಾಕುವಂತೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗೆ ಮನವಿ ಮಾಡಿದ್ದಾರೆ.
ಸಚಿವರ ಹೇಳಿಕೆ ಸಂವಿಧಾನ ವಿರೋಧಿ ಹೇಳಿಕೆಯಾಗಿದೆ.ಗುಂಡು ಹಾಕುವಂತೆ ಹೇಳೋದು ಕಾನೂನುಬಾಹಿರವಾಗಿದ್ದು,
ಪೋಲೀಸರು ತಮ್ಮ ರಕ್ಷಣೆಗಾಗಿ ಬಂದೂರು, ರಿವಾಲ್ವರ್ ಹಿಡಿಯುತ್ತಾರೆ ಹೊರತು ಯಾರ ಮೇಲೂ ಶೂಟ್ ಮಾಡಲು ಹಿಡಿಯೋದಲ್ಲ. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೋಲೀಸ್ ಅಧಿಕಾರಿಗಳು ದಕ್ಷರಾಗಿದ್ದಾರೆ.ಅವರು ಬಂದೂಕಿನಿಂದಲ್ಲ, ಕಾನೂನಿನ ಮೂಲಕ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಪಾಲಿಸಿದ್ದಾರೆ.
ಜಿಲ್ಲೆಯಲ್ಲಿ ಎಲ್ಲಾ ಕಡೆಯಲ್ಲೂ ಶಾಂತಿ ನೆಲೆಸಿದೆ.ಆದರೆ ಈ ವಾತಾವರಣ ಯು.ಟಿ.ಖಾದರ್ ಮತ್ತು ಅವರ ಚೇಲಾರಿಗೆ ಬೇಕಾಗಿಲ್ಲ.ಜಿಲ್ಲೆಯ ಈ ಇಬ್ಬರು ದಕ್ಷ ಪೋಲೀಸರು ಸಚಿವರ ಚೇಲಾಗಳ ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡುತ್ತಿಲ್ಲ. ಇದು ಸಚಿವರ ಚೇಲಾರಿಗೆ ಸಮಸ್ಹೆಯಾಗಿದೆ.
ಈ ಕಾರಣಕ್ಕೆ ಹೇಗಾದರೂ ಮಾಡಿ ಇಬ್ಬರೂ ಅಧಿಕಾರಿಗಳನ್ನು ಜಿಲ್ಲೆಯಿಂದ ಓಡಿಸುವ ಪ್ರಯತ್ನ ಮಾಡುತ್ತಿದ್ದಾರೆ.ಅದಕ್ಕಾಗಿಯೇ ಸಚಿವರು ಅಧಿಕಾರಿಗಳಿಗೆ ಶೂಟ್ ಮಾಡಿ ಎಂದು ಸೂಚಿಸಿರೋದು ಎಂದು ಆರೋಪಿಸಿದ ಅವರು ಶೂಟ್ ಮಾಡಿದ ಬಳಿಕ ಅಧಿಕಾರಿಗಳನ್ನು ತಪ್ಪಿತಸ್ಥರನ್ನಾಗಿ ಮಾಡಿ ಜಿಲ್ಲೆಯಿಂದ ಕಳುಹಿಸುವ ವ್ಯವಸ್ಥಿತ ಷಡ್ಯಂತ್ರವಿದು ಎಂದು ಆರೋಪಿಸಿದ್ದಾರೆ. SDPI ಪುತ್ತೂರು ವಿಧಾನಸಭಾ ಕ್ಷೇತ್ರದ ಜೊತೆ ಕಾರ್ಯದರ್ಶಿ ಅಬ್ದುಲ್ ರಹಮಾನ್ ಕೂಡಾ ಸಚಿವರ ಹೇಳಿಕೆಯನ್ನು ಖಂಡಿಸಿದ್ದಾರೆ.
























