ಪುತ್ತೂರು: ಪ್ರಜಾಪ್ರಭುತ್ವದಲ್ಲಿ ನಾಲ್ಕನೇ ಅಂಗವಾಗಿ ಪತ್ರಿಕೆ ಸಹಿತ ಮಾಧ್ಯಮಗಳನ್ನು ಗುರುತಿಸಲಾಗುತ್ತಿದೆ. ಮಾಧ್ಯಮಗಳಿಗೆ ಗುರುತರ ಜವಾಬ್ದಾರಿ ಇದೆ. ಇತ್ತೀಚಿನ ದಿನ ಮಾನಗಳಲ್ಲಿ ಸಣ್ಣ ಪುಟ್ಟ ತಪ್ಪುಗಳನ್ನೇ ವೈಭವೀಕರಣ ಮಾಡುವ ಪ್ರಕ್ರಿಯೆ ಮಾಧ್ಯಮ ಲೋಕದಲ್ಲಿ ಕಂಡು ಬರುತ್ತಿದೆ. ಅದರ ಜತೆಗೆ ಉತ್ತಮ ಸಂಗತಿಗಳನ್ನು ಕೂಡ ವೈಭವೀಕರಿಸುವ ಕಾರ್ಯ ನಡೆಯುಬೇಕು. ಮಾಧ್ಯಮಗಳು ಸತ್ಯಶೋಧನೆಗೆ ಒತ್ತು ನೀಡಬೇಕು ಎಂದು ಶಾಸಕ ಅಶೋಕ್ ರೈ ಹೇಳಿದರು.
ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪುತ್ತೂರು ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾ ದಿನಾಚರಣೆ, ಉಪನ್ಯಾಸ, ಬಿ.ಟಿ. ರಂಜನ್ ಪ್ರಶಸ್ತಿ ಪ್ರದಾನ ಮತ್ತು ಸಾಧಕರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳು ಎಷ್ಟು ಮುಖ್ಯವೋ ನಾಲ್ಕನೇ ಅಂಗವಾದ ಪತ್ರಿಕಾ ರಂಗವೂ ಅಷ್ಟೇ ಮುಖ್ಯವಾದುದು. ಉಳಿದೆಲ್ಲ ಅಂಗಗಳನ್ನು ಪ್ರಶ್ನಿಸುವ ತಿದ್ದುವ ಶಕ್ತಿ, ಅವಕಾಶ ಮಾಧ್ಯಗಳಿಗಿದೆ ಎಂದವರು ಹೇಳಿದರು.
ಅಭಿವೃದ್ಧಿ ರಾಜಕಾರಣ ಚರ್ಚೆಯಾಗಲಿ, ಧರ್ಮ ರಾಜಕಾರಣ ಚರ್ಚೆಯಾಗಬಾರದು. ಪುತ್ತೂರಿನ ಸಮಗ್ರ ಅಭಿವೃದ್ಧಿಗಾಗಿ ನಾನು ಹಲವಾರು ಕನಸುಗಳನ್ನು ಕಟ್ಟಿಕೊಂಡಿz್ದÉೀನೆ. ಪುತ್ತೂರಿಗೆ ಸರಕಾರಿ ಮೆಡಿಕಲ್ ಕಾಲೇಜು ಬರಲಿದೆ. ಆಮೇಲೆ ಇಲ್ಲಿ ಸುಮಾರು 25 ಸಾವಿರ ಜನರಿಗೆ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗ ಸಿಗಲಿದೆ. ಪುತ್ತೂರು ಮೆಡಿಕಲ್ ಕಾಲೇಜನ್ನು ಅಧ್ಯಯನಕ್ಕೆ ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿ ಪುತ್ತೂರಿನಲ್ಲಿ ಶಾಂತಿಯುತ ವಾತಾವರಣ ಇದ್ಯಾ ಎಂದು ನೋಡುತ್ತಾನೆ. ಇಲ್ಲಿನ ಶಾಂತ ವಾತಾವರಣವನ್ನು ನಾವೇ ಕೆಡಿಸುತ್ತ ಹೋದರೆ ಹೇಗೆ ಇಲ್ಲಿಗೆ ನಾಡಿನ ಮೂಲೆ ಮೂಲೆಗಳಿಂದ ಮೆಡಿಕಲ್ ವಿದ್ಯಾರ್ಥಿಗಳು ಬರಲು ಸಾಧ್ಯ? ಭವಿಷ್ಯದ ಸುಂದರ ಪುತ್ತೂರು ನಿರ್ಮಾಣದಲ್ಲಿ ಮಾಧ್ಯಮಗಳ ಪಾಲು ಕೂಡ ಇದೆ ಎಂದವರು ಹೇಳಿದರು.
ಪುತ್ತೂರು ಪತ್ರಿಕಾಭವನ ಕಟ್ಟಡದ ಮೂಲ ಸೌಕರ್ಯ ಹೆಚ್ಚಿಸಲು ಅನುದಾನ ಮಂಜೂರು ಮಾಡಲಾಗಿದೆ. ಕಾಮಗಾರಿ ಆರಂಭಗೊಂಡಿದೆ. ಮುಂದಿನ ದಿನಗಳಲ್ಲಿ ಪುತ್ತೂರು ಪತ್ರಕರ್ತರು ಉತ್ತಮ ಕಾರ್ಯಕ್ರಮಗಳನ್ನು ಇಲ್ಲಿ ಮಾಡಲು ಸಾಧ್ಯವಿದೆ. ಅಗತ್ಯಬಿದ್ದರೆ ಇನ್ನೂ ಹೆಚ್ಚಿನ ಅನುದಾನ ನೀಡುವುದಾಗಿ ಶಾಸಕರು ಭರವಸೆ ನೀಡಿದರು. ಇದೆ ಸಂದರ್ಭದಲ್ಲಿ
ಪುತ್ತೂರು ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಅಜಯ್ ಶಾಸ್ತ್ರಿ ಅವರು ಆಧುನಿಕ ಮಾಧ್ಯಮ ಕ್ಷೇತ್ರದಲ್ಲಿ ಎಐ ತಂತ್ರಜ್ಞಾನ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು. ಕೃತಕ ಬುದ್ಧಿಮತ್ತೆ ಇಂದು ಜಗತ್ತನ್ನು ಆವರಿಸಿದೆ. ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು ಕೂಡ ಈ ಎಐ ತಂತ್ರಜ್ಞಾನ ಬಳಸಿಕೊಂಡು ತಮ್ಮ ಕೆಲಸದ ಕ್ಷಮತೆ, ಉತ್ಪಾದಕತೆ ಮತ್ತು ಗುಣಮಟ್ಟ ಹೆಚ್ಚಿಸಿಕೊಳ್ಳಬಹುದು. ಆದರೆ ಅತಿಯಾದ ಎಐ ಬಳಕೆಯಿಂದ ಮಾನವ ಶ್ರಮ ಕಡಿಮೆಯಾಗಿ, ನಮ್ಮ ಬುದ್ಧಿಮತ್ತೆಯೂ ಕ್ಷೀಣಿಸುವ ಅಪಾಯವಿದೆ. ತಂತ್ರಜ್ಞಾನವನ್ನು ಉತ್ತಮವಾಗಿ ಬಳಸಿಕೊಂಡರೆ ಅದರಿಂದ ಪ್ರಯೋಜನವಿದೆ ಎಂದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾ ಕಾರಿ ಖಾದರ್ ಶಾ ಮುಖ್ಯ ಅತಿಥಿಗಳಾಗಿ ಮಾತನಾಡಿ, ಜಿಲ್ಲೆಯಲ್ಲಿ ಪತ್ರಕರ್ತರ ಸಂಘಟನೆಗಳು ಅತ್ಯುತ್ತಮವಾಗಿ ಕೆಲಸ ಮಾಡುತ್ತಿವೆ. ಪುತ್ತೂರು ಕಾರ್ಯನಿರತ ಪತ್ರಕರ್ತ ಸಂಘವು ಹಿರಿಯ ಪತ್ರಕರ್ತ ಬಿ.ಟಿ. ರಂಜನ್ ಹೆಸರಿನಲ್ಲಿ ಪ್ರಶಸ್ತಿ ನೀಡಲು ಆರಂಭಿಸಿರುವುದು ಶ್ಲಾಘನೀಯ ಕಾರ್ಯ. ಬಿ.ಟಿ. ರಂಜನ್ ಅವರು ನಮ್ಮ ಜಿಲ್ಲೆಯ ಒಬ್ಬ ೀಮಂತ ಪತ್ರಕರ್ತರಾಗಿದ್ದರು ಎಂದರು.
ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಧಾಕರ ಸುವರ್ಣ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೋಶಾ ಕಾರಿ ಸಂಶುದ್ದೀನ್ ಸಂಪ್ಯ ಸ್ವಾಗತಿಸಿ, ವಂದಿಸಿದರು. ಪ್ರಧಾನ ಕಾರ್ಯದರ್ಶಿ ಸಿ.ಶೇ. ಕಜೆಮಾರ್ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾಶ್ರೀ ಪ್ರಾರ್ಥನೆ ಹಾಡಿದರು. ಸುಧಾಕರ ಸುವರ್ಣ, ಕರುಣಾಕರ ರೈ ಸಿ.ಎಚ್., ಎಂ.ಎಸ್. ಭಟ್., ಅಜಿತ್ ಕುಮಾರ್, ನಝೀರ್ ಕೊೈಲ,ಕೃಷ್ಣ ಪ್ರಸಾದ್, ಫಾರೂಕ್ ಮುಕ್ವೆ ಅವರು ಅತಿಥಿಗಳನ್ನು ಹೂ, ಹಾರ, ಶಾಲುಗಳೊಂದಿಗೆ ಗೌರವಿಸಿದರು.
ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸ್ಥಾಪಕಾಧ್ಯಕ್ಷ ಬಿ.ಟಿ. ರಂಜನ್ ಅವರ ಹೆಸರಿನಲ್ಲಿ ಈ ವರ್ಷ ಸ್ಥಾಪಿಸಲಾದ ಬಿ.ಟಿ. ರಂಜನ್ ಪ್ರಶಸ್ತಿ-2026ನ್ನು ಬೆಳ್ತಂಗಡಿಯ ವಿಜಯ ಕರ್ನಾಟಕ ಪತ್ರಿಕೆ ವರದಿಗಾರ ಅರವಿಂದ ಹೆಬ್ಬಾರ್ ಮುಂಡಾಜೆ ಅವರಿಗೆ ಶಾಸಕ ಅಶೋಕ್ ರೈ ಪ್ರದಾನ ಮಾಡಿದರು. ಯು.ಎಲ್. ಉದಯಕುಮಾರ್ ಸನ್ಮಾನಪತ್ರ ವಾಚಿಸಿದರು. ಪ್ರಶಸ್ತಿಯು ಸನ್ಮಾನಪತ್ರ, ಶಾಲು,ಹಾರ, ಫಲಪುಷ್ಪ ಮತ್ತು 5ಸಾವಿರ ರೂ. ನಗದು ಒಳಗೊಂಡಿದೆ.
ಪತ್ರಿಕಾ ವಿತರಣೆ ಕ್ಷೇತ್ರದಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ಇಬ್ರಾಹಿಂ ನೆಕ್ಕಿಲಾಡಿ ಅವರನ್ನು ಸಂಘದ ಪರವಾಗಿ ಶಾಸಕ ಅಶೋಕ್ ರೈ ಸನ್ಮಾನಿಸಿದರು. ರಾಜೇಶ್ ಪಟ್ಟೆ ಸನ್ಮಾನ ಪತ್ರ ವಾಚಿಸಿದರು.
ಶೈಕ್ಷಣಿಕ ಸಾಧಕಿಗೆ ಪುರಸ್ಕಾರ
ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ ಸಂಘದ ಸದಸ್ಯರ ಮಕ್ಕಳನ್ನು ಪುರಸ್ಕರಿಸುವ ಕಾರ್ಯಕ್ರಮದ ಅಡಿಯಲ್ಲಿ ಸಂಘದ ಉಪಾಧ್ಯಕ್ಷ ಕರುಣಾಕರ ರೈ ಸಿ.ಎಚ್. ಅವರ ಪುತ್ರಿ ಶ್ರೀನಿಕಾ ರೈ ಸಿ.ಎಚ್. ಅವರನ್ನು ಶಾಸಕ ಅಶೋಕ್ ರೈ ಪುರಸ್ಕರಿಸಿದರು. ಗೌತಮ್ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು.
ಸಾಧಕ, ಹಿರಿಯ ಪತ್ರಕರ್ತರಿಗೆ ಗೌರವ
ಪತ್ರಕರ್ತರಾಗಿದ್ದುಕೊಂಡು, ಅನ್ಯಾನ್ಯ ಸೃಜನಶೀಲ ಕ್ಷೇತ್ರಗಳಲ್ಲೂ ಹೆಸರು ಮಾಡುತ್ತಿರುವ ಸಂಘದ ಸದಸ್ಯರಾದ ನಾ. ಕಾರಂತ ಪೆರಾಜೆ, ಮೇಘ ಪಾಲೆತ್ತಾಡಿ, ಸಂಶುದ್ದೀನ್ ಸಂಪ್ಯ, ಸುಧಾಕರ ಸುವರ್ಣ, ಲೋಕೇಶ್ ಬನ್ನೂರು, ಸಿ.ಶೇ. ಕಜೆಮಾರ್ ಮತ್ತು ವಿದ್ಯಾಶ್ರೀ (ಶ್ರೀಶಾವಾಸವಿ ತುಳುನಾಡ್) ಅವರನ್ನು ಗೌರವಿಸಲಾಯತು. ತಾಲೂಕು ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪಡೆದ, ಸಂಘದ ಹಿರಿಯ ಸದಸ್ಯ ಯು.ಎಲ್. ಉದಯ ಕುಮಾರ್ ಅವರನ್ನು ಗೌರವಿಸಲಾಯಿತು. ಸುದೀರ್ಘ ಕಾಲದಿಂದ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿರುವ ಹಿರಿಯ ಪತ್ರಕರ್ತರಾದ ಶೇಖ್ ಜೈನುದ್ದೀನ್, ಕರುಣಾಕರ ರೈ ಸಿ.ಎಚ್. ಅವರನ್ನು ಗೌರವಿಸಲಾಯಿತು. ಸಾಧಕರ ಸನ್ಮಾನ ಪತ್ರಗಳನ್ನು ವಿದ್ಯಾಶ್ರೀ, ಲೋಕೇಶ್ ಬನ್ನೂರು, ಅನೀಶ್ ಕುಮಾರ್, ಉಮಾಪ್ರಸಾದ್ ರೈ ನಡುಬೈಲು, ಉಮಾಶಂಕರ್, , ಕರುಣಾಕರ ರೈ ಸಿ.ಎಚ್. ವಾಚಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಸುಧಾಕರ ಸುವರ್ಣ,ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಸಿದ್ದಿಕ್ ನೀರಾಜೆ,ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ಶ್ರೀನಿವಾಸ ಇಂದಾಜೆ, ಸುದ್ದಿ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ಡಾ.ಯು.ಪಿ.ಶಿವಾನಂದ, ಉಪಸ್ಥಿತರಿದ್ದರು.
























