ಪುತ್ತೂರು : ಸಾರ್ವಜನಿಕ ಶ್ರೀ ವರಮಹಾಲಕ್ಷ್ಮಿ ಪೂಜೆಯ ಲೆಕ್ಕಪತ್ರ ಮಂಡನಾ ಸಭೆ ಸೀತಾ ಪರಿವಾರ ಪದಾಧಿಕಾರಿಗಳ ಆಯ್ಕೆ ಹಾಗೂ ಅಭಿನಂದನಾ ಸಭೆ
ದಿನಾಂಕ 07.09.2026ರಂದು ಸುಭದ್ರ ಸಭಾಂಗಣದಲ್ಲಿ ಆಗಸ್ಟ್ 28ರಂದು ನಡೆದ ಶ್ರೀ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮದ ಖರ್ಚು ವೆಚ್ಚಗಳ ಲೆಕ್ಕಪತ್ರ ಮಂಡನಾ ಸಭೆ ಪುತ್ತಿಲ ಪರಿವಾರ ಸೇವಾ ಟ್ರಸ್ಟಿನ ಸಂಚಾಲಕರಾದ ಶ್ರೀ ಅರುಣ್ ಕುಮಾರ್ ಪುತ್ತಿಲ ಇವರ ಮಾರ್ಗದರ್ಶನದಲ್ಲಿ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಅಧ್ಯಕ್ಷರಾದ ವೀಣಾ ಬಲ್ಲಾಳ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು , ಕಾರ್ಯಕ್ರಮದ ಖರ್ಚು ವೆಚ್ಚಗಳ ವಿವರವನ್ನು ಕೋಶಾಧಿಕಾರಿ ಪ್ರಜ್ವಲ್ ಘಾಟೆ ನೆರವೇರಿಸಿದರು, ಸಭೆಯನ್ನು ಉದ್ದೇಶಿಸಿ ಮಾತನಾಡಿ ಶ್ರೀ ಅರುಣ್ ಕುಮಾರ್ ಪುತ್ತಿಲ ರವರು ಪುತ್ತೂರು ತಾಲೂಕಿನಲ್ಲಿ ಅತ್ಯಂತ ವಿಜ್ರಂಭಣೆಯಿಂದ ವ್ಯವಸ್ಥಿತವಾಗಿ ಕಳೆದ ಎರಡು ವರ್ಷಗಳಲ್ಲಿ ನಡೆದ ವರಮಹಾಲಕ್ಷ್ಮಿ ಪೂಜೆಗಿಂತಲೂ ವಿಶೇಷವಾಗಿ ಮೂರನೇ ವರ್ಷದ ವರಮಹಾಲಕ್ಷ್ಮಿ ಪೂಜೆಯು ಅದ್ದೂರಿಯಾಗಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ತಾಲೂಕಿನ ಗ್ರಾಮಗಳಿಂದ ಬಂದಂತ ಎಲ್ಲಾ ತಾಯಂದಿರಿಗೆ ಪ್ರಸಾದ ರೂಪವಾಗಿ ಈ ವರ್ಷವೂ ಸೀರೆ, ಅರಿಶಿನ ಕುಂಕುಮ ಬಲೆ ಇನ್ನಿತರ ಪೂಜಾ ಸಾಹಿತ್ಯಗಳನ್ನು ವ್ಯವಸ್ಥಿತವಾಗಿ ನೀಡಲಾಯಿತು ,ಮತ್ತು ಬಂದಂತಹ ಸಾವಿರಾರು ಭಗವದ್ ಭಕ್ತರಿಗೆ ಅನ್ನದಾನ ನಡೆಯಿತು, ಹಾಗೂ ಹಗಲಿರುಳು ದುಡಿದ ಎಲ್ಲಾ ಪದಾಧಿಕಾರಿಗಳಿಗೆ ಕಾರ್ಯಕರ್ತರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು,ಕಾರ್ಯಕ್ರಮದಲ್ಲಿ ಖರ್ಚು ವೆಚ್ಚಗಳ ಲೆಕ್ಕಪತ್ರ ಮಂಡನೆ ನಂತರ ಉಳಿಕೆ ಹಣವನ್ನ ಮಹಿಳಾ ಸಮಿತಿಯ ಪದಾಧಿಕಾರಿಗಳು ಟ್ರಸ್ಟಿನ ಅಧ್ಯಕ್ಷರಿಗೆ ಹಸ್ತಾಂತರಿಸಿದರು.
ನಂತರ ಸೀತಾ ಪರಿವಾರದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು , ಗೌರವ ಅಧ್ಯಕ್ಷರಾಗಿ ಮಲ್ಲಿಕಾ ಪ್ರಸಾದ್, ಅಧ್ಯಕ್ಷರಾಗಿ ಪ್ರೇಮ ರಾಧಾಕೃಷ್ಣ ರೈ, ಪ್ರಧಾನ ಕಾರ್ಯದರ್ಶಿಯಾಗಿ ಪ್ರೇಮಾ ಮುಂಡೂರು, ಮತ್ತು ಅನ್ನಪೂರ್ಣ ಸಿ ರಾವ್ ಹಾಗೂ ಉಪಾಧ್ಯಕ್ಷರಾಗಿ ಸ್ಮಿತಾ ನಾಯ್ಕ್, ವೀಣಾ ಬಲ್ಲಾಳ್, ಪುಷ್ಪ ರಾಜೇಶ್, ರಜತಾ ಗಿರೀಶ್ ಭಟ್, ವೀಣಾ ಪರ್ಲಡ್ಕ, ಕಾರ್ಯದರ್ಶಿಯಾಗಿ ಪವಿತ್ರ ದೊಡ್ಡಡ್ಕ, ಸ್ವಯಂ ಪ್ರಭಾ, ಪುಷ್ಪ ಆಚಾರ್, ಸುಲೋಚನಾ ಮತ್ತು ಅನ್ನಪೂರ್ಣೇಶ್ವರಿ ಬಲ್ಲಾಳ್ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಹಾಗೂ 55ಕ್ಕೂ ಹೆಚ್ಚು ಮಹಿಳೆಯರನ್ನು ಸದಸ್ಯರಾಗಿ ನೇಮಕಮಾಡಲಾಯಿತು.
























