• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
IPL, RCB:ಎಡಗೈ ಸ್ಪಿನ್ನರ್ ಆರ್​ಸಿಬಿ ತಂಡದ ಲಕ್ಕಿ ಚಾರ್ಮ್ ಸ್ವಪ್ನಿಲ್ ಸಿಂಗ್

IPL, RCB:ಎಡಗೈ ಸ್ಪಿನ್ನರ್ ಆರ್​ಸಿಬಿ ತಂಡದ ಲಕ್ಕಿ ಚಾರ್ಮ್ ಸ್ವಪ್ನಿಲ್ ಸಿಂಗ್

May 22, 2024
ಕೋಡಿಂಬಾಡಿ: ಶಾಸಕ ಅಶೋಕ್ ಕುಮಾರ್ ರೈಯವರ ಮನೆಯ ಹಟ್ಟಿ ಸಂಪೂರ್ಣ ಹಾನಿ, ದನ ಸಾವು

ಕೋಡಿಂಬಾಡಿ: ಶಾಸಕ ಅಶೋಕ್ ಕುಮಾರ್ ರೈಯವರ ಮನೆಯ ಹಟ್ಟಿ ಸಂಪೂರ್ಣ ಹಾನಿ, ದನ ಸಾವು

May 31, 2025
ಮಲಗಿದ್ದವರ ಪಾಲಿಗೆ ನರಕವಾದ ಮಳೆ, ಗುಡ್ಡ ಕುಸಿತಕ್ಕೆ ಮೂವರು ಬಲಿ, ನಿರಂತರ ಕಾರ್ಯಾಚರಣೆ ನಡೆಸಿ ನಾಲ್ವರ ರಕ್ಷಣೆ

ಮಲಗಿದ್ದವರ ಪಾಲಿಗೆ ನರಕವಾದ ಮಳೆ, ಗುಡ್ಡ ಕುಸಿತಕ್ಕೆ ಮೂವರು ಬಲಿ, ನಿರಂತರ ಕಾರ್ಯಾಚರಣೆ ನಡೆಸಿ ನಾಲ್ವರ ರಕ್ಷಣೆ

May 30, 2025
ಕರ್ನಾಟಕ ವಿಧಾನಸಭೆಗೆ ಚುನಾವಣೆ ನಡೆದರೆ ಬಿಜೆಪಿ ಸಂಪೂರ್ಣ ಬಹುಮತ ಪಡೆಯುವ ಸಾಧ್ಯತೆ: ಸಮೀಕ್ಷಾ ವರದಿ

ಕರ್ನಾಟಕ ವಿಧಾನಸಭೆಗೆ ಚುನಾವಣೆ ನಡೆದರೆ ಬಿಜೆಪಿ ಸಂಪೂರ್ಣ ಬಹುಮತ ಪಡೆಯುವ ಸಾಧ್ಯತೆ: ಸಮೀಕ್ಷಾ ವರದಿ

May 30, 2025
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ ದೇರಳೆಕಟ್ಟೆಯಲ್ಲಿ ಕಂಪೌಂಡ್ ಮನೆ ಮೇಲೆ ಕುಸಿದು ಬಿದ್ದು ಬಾಲಕಿ ಸಾವು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ ದೇರಳೆಕಟ್ಟೆಯಲ್ಲಿ ಕಂಪೌಂಡ್ ಮನೆ ಮೇಲೆ ಕುಸಿದು ಬಿದ್ದು ಬಾಲಕಿ ಸಾವು

May 30, 2025
ಭಯೋತ್ಪಾದನೆ ವಿರುದ್ಧ ಭಾರತದ ನಿಲುವಿಗೆ ಗ್ರೀಸ್ ಸಂಪೂರ್ಣ ಬೆಂಬಲ  ರಾಜಿರಹಿತ ನೀತಿ ಸ್ಪಷ್ಟಪಡಿಸಿದ ಸಂಸದ ಕ್ಯಾ. ಚೌಟ ಒಳಗೊಂಡ ಸರ್ವಪಕ್ಷಗಳ ನಿಯೋಗ

ಭಯೋತ್ಪಾದನೆ ವಿರುದ್ಧ ಭಾರತದ ನಿಲುವಿಗೆ ಗ್ರೀಸ್ ಸಂಪೂರ್ಣ ಬೆಂಬಲ ರಾಜಿರಹಿತ ನೀತಿ ಸ್ಪಷ್ಟಪಡಿಸಿದ ಸಂಸದ ಕ್ಯಾ. ಚೌಟ ಒಳಗೊಂಡ ಸರ್ವಪಕ್ಷಗಳ ನಿಯೋಗ

May 29, 2025
ಮಾತೃಭೂಮಿ ಯುವ ವೇದಿಕೆ (ರಿ.) ಮಾಣಿಲ ಸಂಘದ ನೇತೃತ್ವದಲ್ಲಿ 4 ನೇ ವರ್ಷದ ಉಚಿತ ಪುಸ್ತಕ ವಿತರಣೆ ಮತ್ತು ಸನ್ಮಾನ

ಮಾತೃಭೂಮಿ ಯುವ ವೇದಿಕೆ (ರಿ.) ಮಾಣಿಲ ಸಂಘದ ನೇತೃತ್ವದಲ್ಲಿ 4 ನೇ ವರ್ಷದ ಉಚಿತ ಪುಸ್ತಕ ವಿತರಣೆ ಮತ್ತು ಸನ್ಮಾನ

May 29, 2025
ಹೆದ್ದಾರಿಯಲ್ಲಿ ದರೋಡೆಗೆ ಹೊಂಚು ಹಾಕಿದ್ದ ‘ಗರುಡಾ ಗ್ಯಾಂಗ್ ಹೆಡೆಮುರಿ ಕಟ್ಟಿದ ಕಾರವಾರ ಪೊಲೀಸರು

ಹೆದ್ದಾರಿಯಲ್ಲಿ ದರೋಡೆಗೆ ಹೊಂಚು ಹಾಕಿದ್ದ ‘ಗರುಡಾ ಗ್ಯಾಂಗ್ ಹೆಡೆಮುರಿ ಕಟ್ಟಿದ ಕಾರವಾರ ಪೊಲೀಸರು

May 29, 2025
ರಹೀಂ ಕೊಲೆ ಪ್ರಕರಣ: ಗೃಹ ಸಚಿವ , ಉಸ್ತುವಾರಿ ಸಚಿವ ಬದಲಾವಣೆಗೆ ಮುಸ್ಲಿಂ ಮುಖಂಡರ ಪಟ್ಟು, ಕಾಂಗ್ರೆಸ್​ಗೆ ಎಚ್ಚರಿಕೆ

ರಹೀಂ ಕೊಲೆ ಪ್ರಕರಣ: ಗೃಹ ಸಚಿವ , ಉಸ್ತುವಾರಿ ಸಚಿವ ಬದಲಾವಣೆಗೆ ಮುಸ್ಲಿಂ ಮುಖಂಡರ ಪಟ್ಟು, ಕಾಂಗ್ರೆಸ್​ಗೆ ಎಚ್ಚರಿಕೆ

May 29, 2025
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಖಡಕ್ ಸೂಚನೆ ಹಿನ್ನಲೆ ಮಾಣಿ, ಉಪ್ಪಿನಂಗಡಿ ಅಂಡರ್ ಪಾಸ್ ಹಾಗೂ ಕಲ್ಲಡ್ಕ ಫ್ಲೈಓವರ್‌ ಒಂದು ಭಾಗ ವಾಹನ ಸಂಚಾರಕ್ಕೆ ಮುಕ್ತ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಖಡಕ್ ಸೂಚನೆ ಹಿನ್ನಲೆ ಮಾಣಿ, ಉಪ್ಪಿನಂಗಡಿ ಅಂಡರ್ ಪಾಸ್ ಹಾಗೂ ಕಲ್ಲಡ್ಕ ಫ್ಲೈಓವರ್‌ ಒಂದು ಭಾಗ ವಾಹನ ಸಂಚಾರಕ್ಕೆ ಮುಕ್ತ

May 28, 2025
ಬಂಟ್ವಾಳ: ಪಿಕಪ್ ಚಾಲಕನ ಬರ್ಬರವಾಗಿ ಕಡಿದು ಕೊಲೆ.

ಬಂಟ್ವಾಳ: ಪಿಕಪ್ ಚಾಲಕನ ಬರ್ಬರವಾಗಿ ಕಡಿದು ಕೊಲೆ.

May 27, 2025
ಬಿಜೆಪಿಯಿಂದ ಶಾಸಕ ಎಸ್ ಟಿ ಸೋಮಶೇಖರ್ ಮತ್ತು ಶಿವರಾಮ್ ಹೆಬ್ಬಾರ್ ಆರು ವರ್ಷ ಉಚ್ಚಾಟನೆ.

ಬಿಜೆಪಿಯಿಂದ ಶಾಸಕ ಎಸ್ ಟಿ ಸೋಮಶೇಖರ್ ಮತ್ತು ಶಿವರಾಮ್ ಹೆಬ್ಬಾರ್ ಆರು ವರ್ಷ ಉಚ್ಚಾಟನೆ.

May 27, 2025
ಮಂಗಳೂರು: ಬಜ್ಪೆಚಲೋ ಪ್ರತಿಭಟನೆ ಸಭೆ.  ಭಾಷಣಕಾರ, ಕಾರ್ಯಕ್ರಮ ಅಯೋಜಕರ ಮೇಲೆ ಪ್ರಕರಣ ದಾಖಲು

ಮಂಗಳೂರು: ಬಜ್ಪೆಚಲೋ ಪ್ರತಿಭಟನೆ ಸಭೆ. ಭಾಷಣಕಾರ, ಕಾರ್ಯಕ್ರಮ ಅಯೋಜಕರ ಮೇಲೆ ಪ್ರಕರಣ ದಾಖಲು

May 26, 2025
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Sunday, June 1, 2025
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    ಕೋಡಿಂಬಾಡಿ: ಶಾಸಕ ಅಶೋಕ್ ಕುಮಾರ್ ರೈಯವರ ಮನೆಯ ಹಟ್ಟಿ ಸಂಪೂರ್ಣ ಹಾನಿ, ದನ ಸಾವು

    ಕೋಡಿಂಬಾಡಿ: ಶಾಸಕ ಅಶೋಕ್ ಕುಮಾರ್ ರೈಯವರ ಮನೆಯ ಹಟ್ಟಿ ಸಂಪೂರ್ಣ ಹಾನಿ, ದನ ಸಾವು

    ಮಾತೃಭೂಮಿ ಯುವ ವೇದಿಕೆ (ರಿ.) ಮಾಣಿಲ ಸಂಘದ ನೇತೃತ್ವದಲ್ಲಿ 4 ನೇ ವರ್ಷದ ಉಚಿತ ಪುಸ್ತಕ ವಿತರಣೆ ಮತ್ತು ಸನ್ಮಾನ

    ಮಾತೃಭೂಮಿ ಯುವ ವೇದಿಕೆ (ರಿ.) ಮಾಣಿಲ ಸಂಘದ ನೇತೃತ್ವದಲ್ಲಿ 4 ನೇ ವರ್ಷದ ಉಚಿತ ಪುಸ್ತಕ ವಿತರಣೆ ಮತ್ತು ಸನ್ಮಾನ

    ರಹೀಂ ಕೊಲೆ ಪ್ರಕರಣ: ಗೃಹ ಸಚಿವ , ಉಸ್ತುವಾರಿ ಸಚಿವ ಬದಲಾವಣೆಗೆ ಮುಸ್ಲಿಂ ಮುಖಂಡರ ಪಟ್ಟು, ಕಾಂಗ್ರೆಸ್​ಗೆ ಎಚ್ಚರಿಕೆ

    ರಹೀಂ ಕೊಲೆ ಪ್ರಕರಣ: ಗೃಹ ಸಚಿವ , ಉಸ್ತುವಾರಿ ಸಚಿವ ಬದಲಾವಣೆಗೆ ಮುಸ್ಲಿಂ ಮುಖಂಡರ ಪಟ್ಟು, ಕಾಂಗ್ರೆಸ್​ಗೆ ಎಚ್ಚರಿಕೆ

    ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಖಡಕ್ ಸೂಚನೆ ಹಿನ್ನಲೆ ಮಾಣಿ, ಉಪ್ಪಿನಂಗಡಿ ಅಂಡರ್ ಪಾಸ್ ಹಾಗೂ ಕಲ್ಲಡ್ಕ ಫ್ಲೈಓವರ್‌ ಒಂದು ಭಾಗ ವಾಹನ ಸಂಚಾರಕ್ಕೆ ಮುಕ್ತ

    ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಖಡಕ್ ಸೂಚನೆ ಹಿನ್ನಲೆ ಮಾಣಿ, ಉಪ್ಪಿನಂಗಡಿ ಅಂಡರ್ ಪಾಸ್ ಹಾಗೂ ಕಲ್ಲಡ್ಕ ಫ್ಲೈಓವರ್‌ ಒಂದು ಭಾಗ ವಾಹನ ಸಂಚಾರಕ್ಕೆ ಮುಕ್ತ

    ಬಂಟ್ವಾಳ: ಪಿಕಪ್ ಚಾಲಕನ ಬರ್ಬರವಾಗಿ ಕಡಿದು ಕೊಲೆ.

    ಬಂಟ್ವಾಳ: ಪಿಕಪ್ ಚಾಲಕನ ಬರ್ಬರವಾಗಿ ಕಡಿದು ಕೊಲೆ.

    ಕಡಬ ಐಐಸಿಟಿ ಮೊಂಟೆಸ್ಸರಿ ತರಬೇತಿ ಸಂಸ್ಥೆಗೆ ಶೇ.100 ಫಲಿತಾಂಶ

    ಕಡಬ ಐಐಸಿಟಿ ಮೊಂಟೆಸ್ಸರಿ ತರಬೇತಿ ಸಂಸ್ಥೆಗೆ ಶೇ.100 ಫಲಿತಾಂಶ

    ಮಂಗಳೂರು:ಪಿಲಿಕುಳಕ್ಕೆ ಲೋಕಾಯುಕ್ತ ದಾಳಿ

    ಮಂಗಳೂರು:ಪಿಲಿಕುಳಕ್ಕೆ ಲೋಕಾಯುಕ್ತ ದಾಳಿ

    ಮಾನ್ಸೂನ್ :16 ವರ್ಷಗಳ ಬಳಿಕ ಕೇರಳಕ್ಕೆ ಮುಂಚಿತವಾಗಿಯೇ ಮುಂಗಾರು ಪ್ರವೇಶ

    ಮಾನ್ಸೂನ್ :16 ವರ್ಷಗಳ ಬಳಿಕ ಕೇರಳಕ್ಕೆ ಮುಂಚಿತವಾಗಿಯೇ ಮುಂಗಾರು ಪ್ರವೇಶ

    ಪುತ್ತೂರು ಶ್ರೀ ಮಹಾಲಿಂಗೇಶರ ದೇವರ ಜಾತ್ರೋತ್ಸವ ಹಿನ್ನೆಲೆ ಡ್ರೋಣ್ ನಿರ್ಬಂಧ! ಮುಖ್ಯರಸ್ತೆಗೆ ದೀಪಾಲಂಕಾರ, ಬಸ್ ವ್ಯವಸ್ಥೆ, ಹಿಂದಿನಂತೆ ಅನ್ಯಮತೀಯರಿಗೆ ವ್ಯಾಪಾರಕ್ಕೆ ಅವಕಾಶ ಇಲ್ಲ

    ಇತಿಹಾಸ ಪ್ರಸಿದ್ಧ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶುದ್ಧ ಎಳ್ಳೆಣ್ಣೆ ಸಮರ್ಪಣಾ ಸೌಲಭ್ಯಕ್ಕೆ ಚಾಲನೆ

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ಪ್ರಾದೇಶಿಕ

IPL, RCB:ಎಡಗೈ ಸ್ಪಿನ್ನರ್ ಆರ್​ಸಿಬಿ ತಂಡದ ಲಕ್ಕಿ ಚಾರ್ಮ್ ಸ್ವಪ್ನಿಲ್ ಸಿಂಗ್

by ಪ್ರಜಾಧ್ವನಿ ನ್ಯೂಸ್
May 22, 2024
in ಪ್ರಾದೇಶಿಕ, ರಾಜ್ಯ
0
IPL, RCB:ಎಡಗೈ ಸ್ಪಿನ್ನರ್ ಆರ್​ಸಿಬಿ ತಂಡದ ಲಕ್ಕಿ ಚಾರ್ಮ್ ಸ್ವಪ್ನಿಲ್ ಸಿಂಗ್
20
SHARES
58
VIEWS
ShareShareShare

ಸ್ವಪ್ನಿಲ್ ಸಿಂಗ್ ಈ ಹೆಸರು ಇದೀಗ ಆರ್​ಸಿಬಿ ಅಭಿಮಾನಿಗಳಿಗೆ ಚಿರಪರಿಚಿತ. ಏಕೆಂದರೆ ಈ ಬಾರಿಯ ಐಪಿಎಲ್​ನಲ್ಲಿ ಆರ್​ಸಿಬಿ ತಂಡ ಸತತ ಸೋಲುಗಳಿಂದ ಕಂಗೆಟ್ಟಿತ್ತು. ಆದರೆ ಯಾವಾಗ ಸ್ವಪ್ನಿಲ್ ಸಿಂಗ್ ಕಣಕ್ಕಿಳಿದರೋ ಅಲ್ಲಿಂದ RCB ತಂಡ ಸೋಲಿನ ರುಚಿ ನೋಡಿಲ್ಲ. ಹೀಗಾಗಿಯೇ ಸ್ವಪ್ನಿಲ್ ಸಿಂಗ್ ಆರ್​ಸಿಬಿ ಅಭಿಮಾನಿಗಳ ಪಾಲಿಗೆ ಲಕ್ಕಿ ಚಾರ್ಮ್​ ಆಗಿ ಬದಲಾಗಿದ್ದಾರೆ.

ಆದರೆ ಸ್ವಪ್ನಿಲ್ ಸಿಂಗ್ ಅವರ ಆರ್​ಸಿಬಿ ಎಂಟ್ರಿಯೇ ಬಲು ರೋಚಕ. ಏಕೆಂದರೆ 2008 ರಿಂದ ಐಪಿಎಲ್​ನಲ್ಲಿದ್ದರೂ ಎಡಗೈ ಸ್ಪಿನ್ನರ್ ಈವರೆಗೆ ಆಡಿರುವುದು ಕೇವಲ 13 ಮ್ಯಾಚ್​ಗಳನ್ನು ಮಾತ್ರ.

ವಿಶೇಷ ಎಂದರೆ ಇದೇ ಸ್ವಪ್ನಿಲ್ ಸಿಂಗ್ ವಿರಾಟ್ ಕೊಹ್ಲಿ ಅವರ ರೂಮ್ ಮೇಟ್ ಆಗಿದ್ದರು. ಭಾರತ ತಂಡವು ಅಂಡರ್ 19 ವಿಶ್ವಕಪ್ ಗೆದ್ದಾಗ ಸ್ವಪ್ನಿಲ್ ಕೂಡ ಟೀಮ್ ಇಂಡಿಯಾದ ಭಾಗವಾಗಿದ್ದರು. ಇದಕ್ಕೂ ಮುನ್ನ ಅಂಡರ್ 15 ನಲ್ಲೂ ಕೊಹ್ಲಿ ಜೊತೆ ಸ್ವಪ್ನಿಲ್ ಕೂಡ ಭಾರತ ತಂಡವನ್ನು ಪ್ರತಿನಿಧಿಸಿದ್ದರು.

ವಿರಾಟ್ ಜೊತೆಗಿನ ಬಾಂಧವ್ಯವನ್ನು ನೆನಪಿಸಿಕೊಂಡ ಸ್ವಪ್ನಿಲ್, ತಾನು ವಿರಾಟ್‌ನೊಂದಿಗೆ U15 ಮತ್ತು U19 ಮಟ್ಟದ ಕ್ರಿಕೆಟ್ ಆಡಿದ್ದೇನೆ. ಶ್ರೀಲಂಕಾ ಮತ್ತು ಮಲೇಷ್ಯಾ ಪ್ರವಾಸಗಳಲ್ಲಿ ನಾನು ಮತ್ತು ಅವರು ರೂಮ್‌ಮೇಟ್ ಆಗಿದ್ದೆವು. ಇದೀಗ ಹಲವು ವರ್ಷಗಳ ಬಳಿಕ ಕೊಹ್ಲಿ ಮತ್ತು ನಾನು ಜೊತೆಯಾಗಿ ಆರ್​ಸಿಬಿ ಆಡುತ್ತಿದ್ದೇವೆ. ಈ ವೇಳೆ ನಾವಿಬ್ಬರೂ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದೇವೆ ಎಂದು ತಿಳಿಸಿದ್ದಾರೆ.2008 ರಲ್ಲಿ ವಿರಾಟ್ ಕೊಹ್ಲಿ ಆರ್​ಸಿಬಿಗೆ ಆಯ್ಕೆಯಾದರೆ, ಸ್ವಪ್ನಿಲ್ ಸಿಂಗ್ ಮುಂಬೈ ಇಂಡಿಯನ್ಸ್ ತಂಡಕ್ಕೆ ಆಯ್ಕೆಯಾಗಿದ್ದರು.

ನಾನು ದೇಶೀಯ ಅಂಗಳದಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಐಪಿಎಲ್​ನಲ್ಲಿ ಚಾನ್ಸ್ ಸಿಗುತ್ತಿರಲಿಲ್ಲ. ಆದರೆ ಕಳೆದ ವರ್ಷ ಬರೋಡಾದ ಆಲ್‌ರೌಂಡರ್ ದೀಪಕ್ ಹೂಡಾ ನನಗೆ ಕರೆ ಮಾಡಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ನೆಟ್ ಬೌಲರ್ ಆಗ್ತೀಯಾ ಎಂದು ಕೇಳಿದ್ದರು. ನಾನು ಸರಿಯಾಗಿಯೇ ಬೈದೆ. ಇದಾದ ಬಳಿಕ ಮತ್ತೊಮ್ಮೆ ಕರೆ ಮಾಡಿದ ಹೂಡಾ ಇನ್ನೊಮ್ಮೆ ಯೋಚಿಸಿ ನಿರ್ಧಾರ ತಿಳಿಸುವಂತೆ ಹೇಳಿದರು.

Friends Beke

ಜಾಹೀರಾತು

ಈ ವೇಳೆ ನಾನು ಮತ್ತೆ ಇರ್ಫಾನ್ ಪಠಾಣ್​ಗೆ ಕರೆ ಮಾಡಿದೆ. ಅವರು ನೆಟ್ ಬೌಲರ್ ಆಗಿ ಹೋಗುವಂತೆ ಸೂಚಿಸಿದರು. ಅದರಂತೆ ನಾನು ಒಲ್ಲದ ಮನಸ್ಸಿನೊಂದಿಗೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ನೆಟ್ ಬೌಲರ್ ಆಗಿ ಕಾಣಿಸಿಕೊಂಡೆ.

ಈ ವೇಳೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ಕೋಚ್ ಆಗಿ ಆ್ಯಂಡಿ ಫ್ಲವರ್ ಕಾರ್ಯ ನಿರ್ವಹಿಸುತ್ತಿದ್ದರು. ಅಲ್ಲದೆ ಎಲ್​ಎಸ್​ಜಿ ತಂಡದ ಸ್ಪಿನ್ ಕೋಚ್ ಆಗಿದ್ದ ನರೇಂದ್ರ ಹಿರ್ವಾನಿ ಅವರು ನನ್ನ ಬೌಲಿಂಗ್‌ನಿಂದ ಪ್ರಭಾವಿತರಾದರು. ಅವರ ಗರಡಿಯಲ್ಲಿ ಒಂದಷ್ಟು ಕಲಿತೆ.

ಇತ್ತ ಆ್ಯಂಡಿ ಫ್ಲವರ್ ಕೂಡ ನನ್ನ ಬೌಲಿಂಗ್​ ಅನ್ನು ಮೆಚ್ಚಿಕೊಂಡಿದ್ದರು. ಹೀಗಾಗಿ ನಾನು ಬ್ಯಾಟಿಂಗ್ ಕೂಡ ಮಾಡಬಲ್ಲೆ ಎಂದು ಅವರಿಗೆ ತಿಳಿಸಿದ್ದೆ. ಅಲ್ಲದೆ ನನ್ನ ಬ್ಯಾಟಿಂಗ್ ಅನ್ನು ನೋಡುವಂತೆ ಆ್ಯಂಡಿ ಅವರಲ್ಲಿ ಮನವಿ ಮಾಡಿದೆ. ಅವರು ನನಗೆ ಅವಕಾಶ ಕಲ್ಪಿಸಿದರು.

ಆ್ಯಂಡಿ ಫ್ಲವರ್ ಅವರಂತಹ ಒಬ್ಬ ಕೋಚ್ ಮಾತ್ರ ಒಬ್ಬ ನೆಟ್ ಬೌಲರ್​ಗೆ ತನ್ನ ಸಾಮರ್ಥ್ಯಗಳನ್ನು ಪ್ರದರ್ಶಿಸಲು ಅವಕಾಶ ಕೊಡುತ್ತಾರೆ ಎಂಬುದು ನನ್ನ ಭಾವನೆ. ಬೇರೆ ಯಾರೂ ಕೂಡ ಇಂತಹ ಕೆಲಸ ಮಾಡಲ್ಲ. ಹೀಗಾಗಿಯೇ ನಾನು ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ತೊರೆಯುವಾಗ ನನಗೆ ಐಪಿಎಲ್​ನಲ್ಲಿ ಒಂದೇ ಒಂದು ಚಾನ್ಸ್ ನೀಡುವಂತೆ ಅವರಲ್ಲಿ ಮನವಿ ಮಾಡಿದ್ದೆ. ಅವರು ನೋಡೋಣ ಎಂದಷ್ಟೇ ಉತ್ತರಿಸಿದ್ದರು.

ಹೀಗಾಗಿ ಈ ಬಾರಿಯ ಐಪಿಎಲ್​ಗೂ ಮುನ್ನ ಆ್ಯಂಡಿ ಫ್ಲವರ್ ನನ್ನನ್ನು ಆರ್​ಸಿಬಿ ಕ್ಯಾಂಪ್​ಗೆ ಕರೆಸಿಕೊಂಡಿದ್ದರು. ಇದಾಗ್ಯೂ ನನಗೆ ತಂಡದಲ್ಲಿ ಚಾನ್ಸ್ ಸಿಗುತ್ತದೆ ಎಂಬ ಭರವಸೆ ಇರಲಿಲ್ಲ. ಏಕೆಂದರೆ ಕ್ಯಾಂಪ್​ನಲ್ಲಿ ನಾನೇನು ಅತ್ಯುತ್ತಮ ಪ್ರದರ್ಶನ ನೀಡಿರಲಿಲ್ಲ. ಆದರೆ ಕೆಟ್ಟ ಪ್ರದರ್ಶನವನ್ನೂ ಮುಂದಿಟ್ಟಿರಲಿಲ್ಲ.

Padmashree 9980546864

ಜಾಹೀರಾತು

ಜಾಹೀರಾತು

ಇದಾದ ಬಳಿಕ ನಾನು ರಣಜಿ ಟ್ರೋಫಿ ಆಡಲು ತೆರಳಿದ್ದೆ. ಐಪಿಎಲ್ ಹರಾಜು ನಡೆಯುವಾಗ ರಣಜಿ ಪಂದ್ಯಕ್ಕಾಗಿ ಡೆಹ್ರಾಡೂನ್​ಗೆ ಹೋಗುತ್ತಿದ್ದೆ. ಆದರೆ ಮೊದಲ ಸುತ್ತುಗಳಲ್ಲಿ ನನ್ನನ್ನು ಯಾರು ಕೂಡ ಖರೀದಿಸಿರಲಿಲ್ಲ. ಹೀಗಾಗಿ ನನ್ನ ಐಪಿಎಲ್ ಕೆರಿಯರ್ ಖತಂ ಎಂದೇ ಭಾವಿಸಿದ್ದೆ.

ಅಲ್ಲದೆ ಈ ಸಲದ ರಣಜಿ ಟೂರ್ನಿಯೊಂದಿಗೆ ಕ್ರಿಕೆಟ್ ಬದುಕಿಗೆ ವಿದಾಯ ಹೇಳಬೇಕೆಂದು ನಿರ್ಧರಿಸಿದ್ದೆ. ಏಕೆಂದರೆ ಕ್ರಿಕೆಟ್​ನಿಂದ ಜೀವನ ಕಟ್ಟಲಾಗುತ್ತಿಲ್ಲ ಎಂದಾದರೆ, ಬೇರೆ ದಾರಿ ನೋಡಲೇಬೇಕಾಗುತ್ತದೆ. ಹೀಗಾಗಿ ಈ ವರ್ಷ ಅಥವಾ ಮುಂದಿನ ವರ್ಷ ಕ್ರಿಕೆಟ್​ಗೆ ವಿದಾಯ ಹೇಳಬೇಕೆಂದು ನಿರ್ಧರಿಸಿದೆ.

ಆದರೆ ಸಡನ್ ಆಗಿ ಕುಟುಂಬಸ್ಥರಿಂದ ಫೋನ್ ಬಂತು. ಕೊನೆಯ ಸುತ್ತಿನಲ್ಲಿ ಆರ್​ಸಿಬಿ ನನ್ನನ್ನು ಖರೀದಿಸಿದ್ದಾರೆ ಎಂದು ತಿಳಿಸಿದರು. ನಿಜವಾಗಲೂ ಇದನ್ನು ಕೇಳಿ ನನಗೆ ಕಣ್ಣೀರು ಬಂತು…ನನ್ನ ಈ ಎಲ್ಲಾ ಹಾದಿಗಳನ್ನು ನೆನಪಿಸಿಕೊಂಡರೆ ಈಗಲೂ ತುಂಬಾ ಭಾವುಕನಾಗುತ್ತೇನೆ ಎಂದು ಇದೇ ವೇಳೆ ಸ್ವಪ್ನಿಲ್ ಸಿಂಗ್ ಕಣ್ಣೀರು ಹಾಕಿದರು.

ಈ ಎಲ್ಲಾ ಕಷ್ಟಕಾರ್ಪಣ್ಯಗಳನ್ನು ಮೆಟ್ಟಿ ನಿಂತಿರುವ ಸ್ವಪ್ನಿಲ್ ಸಿಂಗ್ ಈ ಬಾರಿಯ ಐಪಿಎಲ್​ನಲ್ಲಿ 6 ವಿಕೆಟ್​ಗಳನ್ನು ಕಬಳಿಸಿದ್ದಾರೆ. ಈ ಮೂಲಕ ಆರ್​ಸಿಬಿ ಪಾಲಿನ ಲಕ್ಕಿ ಚಾರ್ಮ್ ಆಗಿ ಬದಲಾಗಿದ್ದಾರೆ. ಈ ಲಕ್ಕಿ ಚಾರ್ಮ್​ನೊಂದಿಗೆ ಈ ಬಾರಿ ಆರ್​ಸಿಬಿ ತಂಡಕ್ಕೆ ಚೊಚ್ಚಲ ಟ್ರೋಫಿ ಗೆದ್ದು ಕೊಡುವ ವಿಶ್ವಾಸದಲ್ಲಿದ್ದಾರೆ.

SendShare8Share
Previous Post

ಮಗಳನ್ನು ಪ್ರೀತಿಸುತ್ತಿದ್ದ ಯುವಕ ಮನೆಗೆ ಬಂದಿದ್ದಕ್ಕೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Next Post

CAA: ಭಾರತೀಯ ಪೌರತ್ವಕ್ಕಾಗಿ ಕರ್ನಾಟಕದಿಂದ 145 ಮಂದಿ ಅರ್ಜಿ

ಪ್ರಜಾಧ್ವನಿ ನ್ಯೂಸ್

ಪ್ರಜಾಧ್ವನಿ ನ್ಯೂಸ್

Next Post
CAA: ಭಾರತೀಯ ಪೌರತ್ವಕ್ಕಾಗಿ ಕರ್ನಾಟಕದಿಂದ 145 ಮಂದಿ ಅರ್ಜಿ

CAA: ಭಾರತೀಯ ಪೌರತ್ವಕ್ಕಾಗಿ ಕರ್ನಾಟಕದಿಂದ 145 ಮಂದಿ ಅರ್ಜಿ

Leave a Reply Cancel reply

Your email address will not be published. Required fields are marked *

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

No Result
View All Result
  • ಮುಖಪುಟ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಉದ್ಯೋಗ – ಶಿಕ್ಷಣ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಿನಿಮಾ
  • ಲೈಫ್ ಸ್ಟೈಲ್

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..