ಪುತ್ತೂರು: ಕಬಕ ಗ್ರಾಪಂ ಸಭಾಂಗಣದಲ್ಲಿ ಹಕ್ಕು ಪತ್ರ ವಿತರಣೆ ನನ್ನ ವಿಧಾನಸಭಾ ಕ್ಷೇತ್ರದ ಪ್ರತೀಯೊಬ್ಬ ಬಡವನ ಮನೆಯ ಅಡಿಸ್ಥಳಕ್ಕೆ ಹಕ್ಕು ಪತ್ರ ನೀಡಿದಾಗ ಮಾತ್ರ ನನಗೆ ಸಮಾಧಾನವಾಗುತ್ತದೆ ಅಲ್ಲಿಯವರೆಗೆ ನನಗೆ ಸಮಾಧಾನವಾಗುವುದಿಲ್ಲ ಎಂದು ಶಾಸಕ ಅಶೋಕ್ ರೈ ಹೇಳಿದರು.
ಅವರು ಕಬಕ ಗ್ರಾಪಂ ಸಭಾಂಗಣದಲ್ಲಿ ನಡೆದ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 22 ನೇ ಅಕ್ರಮ ಸಕ್ರಮ ಬೈಠಕ್ ಮತ್ತು 24 ನೇ ಹಕ್ಕು ಪತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಾನು ಚುನಾವಣೆಗೆ ಪೂರ್ವ ಹಕ್ಕು ಪತ್ರ ಕೊಡಿಸುವುದಾಗಿ ಭರವಸೆ ಕೊಟ್ಟಿದ್ದೆ ಅದನ್ನು ಈಡೇರಿಸುವ ಕೆಲಸ ಮಾಡುತ್ತಿದ್ದೇನೆ. ಹಲವು ವರ್ಷಗಳ ಹಿಂದೆ ಅರ್ಜಿ ಹಾಕಿದವರ ಕಡತ ಬಾಕಿಯಾಗಿತ್ತು ಅವೆಲ್ಲವನ್ನೂ ಮಾಡಿಕೊಡುವ ಪ್ರತಿಜ್ಞೆ ಮಾಡಿದ್ದೇನೆ. ಯಾವುದೇ ಕಾರಣಕ್ಕೂ 94ಸಿ ಮತ್ತು ಸಿ ಸಿ ಅರ್ಜಿಗಳನ್ನು ವಿಲೇವಾರಿ ಮಾಡದೆ ಇರಬಾರದು ಎಂದು ಕಂದಾಯ ಇಲಾಖೆಗೆ ಶಾಸಕರು ಸೂಚನೆ ನೀಡಿದರು.
ರಿಜೆಕ್ಟ್ ಆದ ಕಡತವನ್ನೂ ವಿಕೇವಾರಿ: ವಿವಿಧ ಕಾರಣಗಳಿಗೆ ರಿಜೆಕ್ಟ್ ಆದ 94 ಸಿ,ಸಿಸಿ ಕಡತಗಳನ್ನು ವಿಕೇವಾರಿ ಮಾಡುವ ಬಗ್ಗೆ ಕಂದಾಯ ಸಚಿವರ ಜೊತೆ ಈಗಾಗಲೇ ಮಾತುಕತೆ ನಡೆಸಿದ್ದು ಅರ್ಹ ಎಲ್ಲಾ ಫಲಾನುಭವಿಗಳಿಗೂ ಹಕ್ಕು ಪತ್ರ ಕೊಟ್ಟೇ ಕೊಡ್ತೇನೆ ಎಂದು ಹೇಳಿದರು.
ನಾವು ಧರ್ಮ ದ್ವೇಷ ಹರಡುವುದಿಲ್ಲ
ನಾವು ಚುನಾವಣೆ ಸಮಯದಲ್ಲಿ ಧರ್ಮದ ಹೆಸರು ಹೇಳಿ, ದ್ವೇಷ ವಿಷ ಬೀಜ ಬಿತ್ತಿ ವೋಟು ಕೇಳುವುದಿಲ್ಲ,ಕಾಂಗ್ರೆಸ್ ಎಂದೂ ಅಭಿವೃದ್ದಿ ಪರ ಇರುವವರು ಅಭಿವೃದ್ದಿಗಾಗಿಯೇ ವೋಟು ಕೇಳುವವರು ಎಂದು ಶಾಸಕರು ಹೇಳಿದರು. ಬಿಜೆಪಿ ಚುನಾವಣೆ ಸಮಯದಲ್ಲಿ ಹಿಂದೂ ಮುಸ್ಲಿಂ ದ್ವೇಷ ಸೃಷ್ಟಿ ಮಾಡುತ್ತಾರೆ,ಅದನ್ನೇ ವಿಷಯ ಇಟ್ಟು ವೋಟು ಪಡೆಯುತ್ತಾರೆ ಗೆದ್ದ ಬಳಿಕ ಯಾವುದೇ ಅಭಿವೃದ್ದಿ ಕೆಲಸ ಮಾಡದೆ ದಿನ ದೂಡುತ್ತಾರೆ ಎಂದು ಶಾಸಕರು ಆರೋಪಿಸಿದರು.
ಈ ಹಿಂದೆ ಪುತ್ತೂರಲ್ಲಿ ಎಷ್ಟು ಜನ ಶಾಸಕರು ಬಂದಿಲ್ಲ ಯಾಕೆ ಬಡವರಿಗೆ ಹಕ್ಕು ಪತ್ರ ಕೊಟ್ಟಿಲ್ಲ ಎಂದು ಪ್ರಶ್ನಿಸಿದ ಶಾಸಕರು ಹಣ ಕೊಟ್ಟವರ ಅರ್ಜಿ ವಿಲೇವಾರಿ ಮಾಡಿದ್ದಾರೆ. ಬಡವರ ಕಡತವನ್ನು ಮೂಲೆಯಲ್ಲಿ ಹಾಕಿ ನಿಮ್ಮದು ಆಗಿದೆ ಎಂದು ಸುಳ್ಳು ಹೇಳಿ ಬಿಜೆಪಿ ವೋಟಿ ಗಿಟ್ಟಿಸಿದೆ ಇದು ಬಡವರಿಗೆ ಮಾಡಿದ ಮಹಾ ಮೋಸವಾಗಿದೆ. ಬಿಜೆಪಿ ಶಾಸಕರ ಅವಧಿಯಲ್ಲಿ ಹಣ ಪಡೆದರೂ ಅಕ್ರಮ ಸಕ್ರಮ ಮಾಡದ 40 ಕಡತ ನಮ್ಮಲ್ಲಿದೆ ಎಂದ ಶಾಸಕರು ಬಾಕಿ ಇರುವ ಬಿಜೆಪಿಯವರದ್ದಾಗಿದ್ದು ನಾವು ಅದನ್ನು ಮಾಡಿಕೊಡ್ತೇವೆ ಎಂದ ಶಾಸಕರು ನಾವು ಅಭಿವೃದ್ದಿಯಲ್ಲಿ ರಾಜಕೀಯ ಮಾಡುವುದೇ ಇಲ್ಲ ಎಂದು ಹೇಳಿದರು.
ಯಾವ ಗ್ರಾಮಗಳು: ಕಬಕ, ಪಡ್ನೂರು, ಬನ್ನೂರು, ಕೋಡಿಂಬಾಡಿ, ಬೆಳ್ಳಿಪ್ಪಾಡಿ, ಚಿಕ್ಕಮುಡ್ನೂರು, 34 ನೆಕ್ಕಿಲಾಡಿ, ಉಪ್ಪಿನಂಗಡಿ, ಬಜತ್ತೂರು ಹಾಗೂ ಹಿರೆಬಂಡಾಡಿ ಗ್ರಾಮಗಳು
ಈ ಹಿಂದೆ ಹಕ್ಕು ಪತ್ರ ಕೊಡುತ್ತಿರಲಿಲ್ಲ: ತಹಶಿಲ್ದಾರ್
ಹಲವು ವರ್ಷಗಳ ಹಿಂದೆ ಅರ್ಜಿ ಹಾಕಿದ್ದರೂ ಹಕ್ಕು ಪತ್ರ ನೀಡಿರಲಿಲ್ಲ. ಈ ಹಿಂದೆ ಈ ರೀತಿ ಹಕ್ಕು ಪತ್ರ ವಿತರಣೆಯಾಗುತ್ತಿರಲಿಲ್ಲ. ಶಾಸಕ ಅಶೋಕ್ ರೈ ಅವರಿಗೆ ಬಡವರ ಮೇಲೆ ಅಪಾರ ಕಾಳಜಿ ಇದ್ದು ಈ ಕಾರಣಕ್ಕೆ ಗ್ರಾಮಗಳಿಗೆ ತೆರಳಿ ಹಕ್ಕು ಪತ್ರ ವಿತರಣೆ ಮಾಡುತ್ತಿದ್ದಾರೆ ,ಇದರಿಂದ ಗ್ರಾಮದ ಕಟ್ಟಕಡೇಯ ವ್ಯಕ್ತಿಗೂ ನ್ಯಾಯ ದೊರೆಯುವಂತಾಗಿದೆ ಎಂದು ತಹಶಿಲ್ದಾರ್ ಕೂಡ್ಲಿಗಿ ಹೇಳಿದರು.
ಚಿನಾವಣಾ ಪೂರ್ವ ಭರವಸೆ
ಶಾಸಕರು ಈಡೇರಿಸಿದ್ದಾರೆ: ಬಡಗನ್ನೂರು
ಕಳೆದ ಚುನಾವಣೆಗೆ ಮೊದಲು ಕ್ಷೇತ್ರದ ಜನರಿಗೆ ಕೊಟ್ಟ ಭರವಸೆಯಂತೆ ಗ್ರಾಮಗಳಲ್ಲಿ ಅಕ್ರಮ ಸಕ್ರಮ ಬೈಠಕ್ ನಡೆಯುತ್ತಿದ್ದು ಜನತೆಗೆ ತಮ್ಮ ಹಕ್ಕಿನ ಭೂಮಿಗೆ ನ್ಯಾಯ ಕೊಡಿಸುವ ಕೆಲಸ ಆಗುತ್ತಿದೆ ಎಂದು ಸಮಿತಿ ಸದಸ್ಯರಾದ ಮಹಮ್ಮದ್ ಬಡಗನ್ನೂರು ಹೇಳಿದರು.
ರಾಜ್ಯದಲ್ಲಿ ಎಲ್ಲಿಯೂ ಆಗದ ಕೆಲಸಗಳು ಪುತ್ತೂರಿನಲ್ಲಿ ನಡೆಯುತ್ತಿದೆ. ರಾಜ್ಯದ ಜನತೆ ಅಭಿವೃದ್ದಿ ವಿಚಾರದಲ್ಲಿ ಪುತ್ತೂರಿಗೆ ಬೆರಳು ತೋರಿಸುವ ಕೆಲಸ ಶಾಸಕರು ಮಾಡಿದ್ದಾರೆ. ಪ್ರತೀ ಗ್ರಾಮದಲ್ಲೂ ಬಡವರಿಗೆ ನಿವೇಶನಕ್ಕೆ ಜಾಗ ಕಾಯ್ದಿರಿಸಿದ್ದಾರೆ. 1000 ನಿವೇಶನವನ್ನು ಏಕ ಸಮಯದಲ್ಲಿ ವಿತರಣೆ ಮಾಡಲಾಗುತ್ತದೆ. 22 ಬೈಠಕ್ ನಲ್ಲಿ 1600 ಕಡತಗಳನ್ನು ವಿಲೇವಾರಿ ಮಾಡಿದ್ದೇವೆ ಎಂದು ಹೇಳಿದರು. ಅಭಿವೃದ್ದಿ ವಿಚಾರದಲ್ಲಿ ಶಾಸಕರಿಗೆ 110 ಅಂಕಗಳನ್ನು ನೀಡಬಹುದು ಇದರಲ್ಲಿ ಅನುಮಾನವಿಲ್ಲ ಎಂದು ಹೇಳಿದರು.ಜಾತಿ,ಮತ, ಧರ್ಮಗಳ ಬೇಧವಿಲ್ಲದೆ ಎಲ್ಲರಿಗೂ ಸಾಮಾಜಿಕ ನ್ಯಾಯವನ್ನು ಕೊಡಿಸುವಲ್ಲಿ ಶಾಸಕರು ಸಫಲರಾಗಿದ್ದಾರೆ ಎಂದು ಹೇಳಿದರು.
ಕೇಂದ್ರ ಸರಕಾರದ ವೈಫಲ್ಯದಿಂದ
ಬಡವರು ಸಂಕಷ್ಟದಲ್ಲಿದ್ದಾರೆ. ಜನ ಚಿನ್ನ ಖರೀದಿ ಮಾಡದಷ್ಟು ದರ ಹೆಚ್ಚಾಗಿದೆ. ಪೆಟ್ರೋಲ್, ಸಿಲಿಂಡರ್ ಬೆಲೆ ಅಧಿಕವಾಗಿದೆ. ಎಲ್ಲಾ ಬೆಲೆ ಏರಿಕೆ ಮಧ್ಯೆ ರಾಜ್ಯದ ಜನತೆಗೆ ಗ್ಯಾರಂಟಿ ಬದುಕು ಕೊಟ್ಟಿದೆ ಎಂದು ಮಹಮ್ಮದ್ ಬಡಗನ್ನೂರು ಹೇಳಿದರು. ವೇದಿಕೆಯಲ್ಲಿ ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಮಣ್ಣ ಪಿಳಿಂಜ, ರೂಪರೇಖಾ ಆಳ್ವ,ಕಬಕ ಗ್ರಾಪಂ ಪಿಡಿಒ ಸುಭಾಶ್ಚಂದ್ರ ಉಪಸ್ಥಿತರಿದ್ಧರು.
ಉಪ್ಪಿನಂಗಡಿ ಕಂದಾಯ ನಿರೀಕ್ಷಕ ಚಂದ್ರ ನಾಯ್ಕ್ ಸ್ವಾಗತಿಸಿ ವಂದಿಸಿದರು

























