• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
ನೆಟ್ಟಣಿಗೆ ಮುಡ್ನೂರು 25ನೇ ಅಕ್ರಮ ಸಕ್ರಮ ಬೈಠಕ್, 94 ಸಿ ಹಕ್ಕುಪತ್ರ ವಿತರಣೆ  ನಾನು ಜನರ ಬಳಿ ವೋಟು ಕೇಳಿದ್ದೇನೆ ಹೊರತು ನಿಮ್ಮ ಹಾಗೇ ಹಣ ಕೇಳಿಲ್ಲ : ಬಿಜೆಪಿಗೆ ತಿರುಗೇಟು ನೀಡಿದ ಶಾಸಕ ಅಶೋಕ್ ರೈ

ನೆಟ್ಟಣಿಗೆ ಮುಡ್ನೂರು 25ನೇ ಅಕ್ರಮ ಸಕ್ರಮ ಬೈಠಕ್, 94 ಸಿ ಹಕ್ಕುಪತ್ರ ವಿತರಣೆ ನಾನು ಜನರ ಬಳಿ ವೋಟು ಕೇಳಿದ್ದೇನೆ ಹೊರತು ನಿಮ್ಮ ಹಾಗೇ ಹಣ ಕೇಳಿಲ್ಲ : ಬಿಜೆಪಿಗೆ ತಿರುಗೇಟು ನೀಡಿದ ಶಾಸಕ ಅಶೋಕ್ ರೈ

June 3, 2026

June 3, 2026
ಸಾಮೆತ್ತಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪುತ್ತೂರು ತಾಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ

ಸಾಮೆತ್ತಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪುತ್ತೂರು ತಾಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ

June 3, 2026
ಐಪಿಎಲ್ 2026ರ ಹೈವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಗುಜರಾತ್ ವಿರುದ್ಧ ಭರ್ಜರಿ ಜಯ ಸಾಧಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು

ಐಪಿಎಲ್ 2026ರ ಹೈವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಗುಜರಾತ್ ವಿರುದ್ಧ ಭರ್ಜರಿ ಜಯ ಸಾಧಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು

June 1, 2026
ಹಿಂದೂ ಜಾಗರಣ ವೇದಿಕೆ ಸಂಚಾಲಕರಾಗಿದ್ದ  ಭಾಸ್ಕರ್ ಆಚಾರ್ಯ ಹೃದಯಾಘಾತದಿಂದ ನಿಧನ

ಹಿಂದೂ ಜಾಗರಣ ವೇದಿಕೆ ಸಂಚಾಲಕರಾಗಿದ್ದ ಭಾಸ್ಕರ್ ಆಚಾರ್ಯ ಹೃದಯಾಘಾತದಿಂದ ನಿಧನ

June 1, 2026
ಪುತ್ತೂರು ಠಾಣೆಯಲ್ಲಿ ಕಾರ್ಯನಿರ್ವಹಿಸಿದ್ದ ಸ್ಕರಿಯ ಬಡ್ತಿ ಹಾಗೂ ವರ್ಗಾವಣೆಯೊಂದಿಗೆ ಹೆಡ್‌ ಕಾನ್‌ಸ್ಟೆಬಲ್‌ ಆಗಿ ಸುಳ್ಯ ಠಾಣೆಗೆ

ಪುತ್ತೂರು ಠಾಣೆಯಲ್ಲಿ ಕಾರ್ಯನಿರ್ವಹಿಸಿದ್ದ ಸ್ಕರಿಯ ಬಡ್ತಿ ಹಾಗೂ ವರ್ಗಾವಣೆಯೊಂದಿಗೆ ಹೆಡ್‌ ಕಾನ್‌ಸ್ಟೆಬಲ್‌ ಆಗಿ ಸುಳ್ಯ ಠಾಣೆಗೆ

May 31, 2026
ಮಾಂತೂರು ಮುಂಡತಡ್ಕ ಅಕ್ರಮ ಗೋವಧೆ ಪ್ರಕರಣ: ಮೂವರು ಆರೋಪಿಗಳ ಬಂಧನ

ಮಾಂತೂರು ಮುಂಡತಡ್ಕ ಅಕ್ರಮ ಗೋವಧೆ ಪ್ರಕರಣ: ಮೂವರು ಆರೋಪಿಗಳ ಬಂಧನ

May 31, 2026
ಸಿಎಲ್‌ಪಿ ಸಭೆಯಲ್ಲಿ ಅಧಿಕೃತವಾಗಿ ಸರ್ವಾನುಮತದಿಂದ  ಕರ್ನಾಟಕದ ನೂತನ ಸಿಎಂ ಡಿ.ಕೆ. ಶಿವಕುಮಾರ್​​ ಹೆಸರು ಘೋಷಣೆ – ಜೂನ್​​ 3ರಂದು ಡಿ.ಕೆ ಪ್ರಮಾಣವಚನ

ಸಿಎಲ್‌ಪಿ ಸಭೆಯಲ್ಲಿ ಅಧಿಕೃತವಾಗಿ ಸರ್ವಾನುಮತದಿಂದ ಕರ್ನಾಟಕದ ನೂತನ ಸಿಎಂ ಡಿ.ಕೆ. ಶಿವಕುಮಾರ್​​ ಹೆಸರು ಘೋಷಣೆ – ಜೂನ್​​ 3ರಂದು ಡಿ.ಕೆ ಪ್ರಮಾಣವಚನ

May 30, 2026
ಶಾಸಕರಾದ ಅಶೋಕ್ ಕುಮಾರ್ ಅವರಿಗೆ ಮಂತ್ರಿ ಸ್ಥಾನ  ಲಭಿಸಲೆಂದು ಕಾಂಗ್ರೆಸ್ ಹಾರಾಡಿ ವಲಯದಿಂದ ವಿಶೇಷ ಪೂಜೆ

ಶಾಸಕರಾದ ಅಶೋಕ್ ಕುಮಾರ್ ಅವರಿಗೆ ಮಂತ್ರಿ ಸ್ಥಾನ ಲಭಿಸಲೆಂದು ಕಾಂಗ್ರೆಸ್ ಹಾರಾಡಿ ವಲಯದಿಂದ ವಿಶೇಷ ಪೂಜೆ

May 30, 2026
ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ ಮಂಗಳೂರು ಇದರ ಸದಸ್ಯರಾಗಿ ಜಗನ್ನಾಥ ಶೆಟ್ಟಿ ನಡುಮನೆ ನೇಮಕ

ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ ಮಂಗಳೂರು ಇದರ ಸದಸ್ಯರಾಗಿ ಜಗನ್ನಾಥ ಶೆಟ್ಟಿ ನಡುಮನೆ ನೇಮಕ

May 30, 2026
ಪುತ್ತೂರು ಶಾಸಕ ಅಶೋಕ್ ರೈಯವರಿಗೆ ಸಚಿವ ಸ್ಥಾನ ದೊರೆಯಲು ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ

ಪುತ್ತೂರು ಶಾಸಕ ಅಶೋಕ್ ರೈಯವರಿಗೆ ಸಚಿವ ಸ್ಥಾನ ದೊರೆಯಲು ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ

May 30, 2026
ಕಬಕ – ಅರ್ಕ- ಕೊಡಿಪ್ಪಾಡಿ ರಸ್ತೆ ಅಭಿವೃದ್ಧಿಯಾಗಿಲ್ಲ : ರಸ್ತೆ ಅವ್ಯವಸ್ಥೆ ಬಗ್ಗೆ ಮಾಜಿ ಗ್ರಾಮ ಪಂಚಾಯತ್ ಸದಸ್ಯರಿಂದ ಪತ್ರಿಕಾಗೋಷ್ಠಿ

ಕಬಕ – ಅರ್ಕ- ಕೊಡಿಪ್ಪಾಡಿ ರಸ್ತೆ ಅಭಿವೃದ್ಧಿಯಾಗಿಲ್ಲ : ರಸ್ತೆ ಅವ್ಯವಸ್ಥೆ ಬಗ್ಗೆ ಮಾಜಿ ಗ್ರಾಮ ಪಂಚಾಯತ್ ಸದಸ್ಯರಿಂದ ಪತ್ರಿಕಾಗೋಷ್ಠಿ

May 30, 2026
“ಚೈನ್ ಲಿಂಕ್ ಸಂಸ್ಥೆ”  ಕ್ರಿಪ್ಟೋ ಗ್ಯಾಂಗ್! ಪ್ರಮುಖ ಆರೋಪಿ ಅರೆಸ್ಟ್

“ಚೈನ್ ಲಿಂಕ್ ಸಂಸ್ಥೆ” ಕ್ರಿಪ್ಟೋ ಗ್ಯಾಂಗ್! ಪ್ರಮುಖ ಆರೋಪಿ ಅರೆಸ್ಟ್

May 29, 2026
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Wednesday, June 3, 2026
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ

    ನೆಟ್ಟಣಿಗೆ ಮುಡ್ನೂರು 25ನೇ ಅಕ್ರಮ ಸಕ್ರಮ ಬೈಠಕ್, 94 ಸಿ ಹಕ್ಕುಪತ್ರ ವಿತರಣೆ  ನಾನು ಜನರ ಬಳಿ ವೋಟು ಕೇಳಿದ್ದೇನೆ ಹೊರತು ನಿಮ್ಮ ಹಾಗೇ ಹಣ ಕೇಳಿಲ್ಲ : ಬಿಜೆಪಿಗೆ ತಿರುಗೇಟು ನೀಡಿದ ಶಾಸಕ ಅಶೋಕ್ ರೈ

    ನೆಟ್ಟಣಿಗೆ ಮುಡ್ನೂರು 25ನೇ ಅಕ್ರಮ ಸಕ್ರಮ ಬೈಠಕ್, 94 ಸಿ ಹಕ್ಕುಪತ್ರ ವಿತರಣೆ ನಾನು ಜನರ ಬಳಿ ವೋಟು ಕೇಳಿದ್ದೇನೆ ಹೊರತು ನಿಮ್ಮ ಹಾಗೇ ಹಣ ಕೇಳಿಲ್ಲ : ಬಿಜೆಪಿಗೆ ತಿರುಗೇಟು ನೀಡಿದ ಶಾಸಕ ಅಶೋಕ್ ರೈ

    ಸಾಮೆತ್ತಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪುತ್ತೂರು ತಾಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ

    ಸಾಮೆತ್ತಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪುತ್ತೂರು ತಾಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ

    ಹಿಂದೂ ಜಾಗರಣ ವೇದಿಕೆ ಸಂಚಾಲಕರಾಗಿದ್ದ  ಭಾಸ್ಕರ್ ಆಚಾರ್ಯ ಹೃದಯಾಘಾತದಿಂದ ನಿಧನ

    ಹಿಂದೂ ಜಾಗರಣ ವೇದಿಕೆ ಸಂಚಾಲಕರಾಗಿದ್ದ ಭಾಸ್ಕರ್ ಆಚಾರ್ಯ ಹೃದಯಾಘಾತದಿಂದ ನಿಧನ

    ಪುತ್ತೂರು ಠಾಣೆಯಲ್ಲಿ ಕಾರ್ಯನಿರ್ವಹಿಸಿದ್ದ ಸ್ಕರಿಯ ಬಡ್ತಿ ಹಾಗೂ ವರ್ಗಾವಣೆಯೊಂದಿಗೆ ಹೆಡ್‌ ಕಾನ್‌ಸ್ಟೆಬಲ್‌ ಆಗಿ ಸುಳ್ಯ ಠಾಣೆಗೆ

    ಪುತ್ತೂರು ಠಾಣೆಯಲ್ಲಿ ಕಾರ್ಯನಿರ್ವಹಿಸಿದ್ದ ಸ್ಕರಿಯ ಬಡ್ತಿ ಹಾಗೂ ವರ್ಗಾವಣೆಯೊಂದಿಗೆ ಹೆಡ್‌ ಕಾನ್‌ಸ್ಟೆಬಲ್‌ ಆಗಿ ಸುಳ್ಯ ಠಾಣೆಗೆ

    ಮಾಂತೂರು ಮುಂಡತಡ್ಕ ಅಕ್ರಮ ಗೋವಧೆ ಪ್ರಕರಣ: ಮೂವರು ಆರೋಪಿಗಳ ಬಂಧನ

    ಮಾಂತೂರು ಮುಂಡತಡ್ಕ ಅಕ್ರಮ ಗೋವಧೆ ಪ್ರಕರಣ: ಮೂವರು ಆರೋಪಿಗಳ ಬಂಧನ

    ಶಾಸಕರಾದ ಅಶೋಕ್ ಕುಮಾರ್ ಅವರಿಗೆ ಮಂತ್ರಿ ಸ್ಥಾನ  ಲಭಿಸಲೆಂದು ಕಾಂಗ್ರೆಸ್ ಹಾರಾಡಿ ವಲಯದಿಂದ ವಿಶೇಷ ಪೂಜೆ

    ಶಾಸಕರಾದ ಅಶೋಕ್ ಕುಮಾರ್ ಅವರಿಗೆ ಮಂತ್ರಿ ಸ್ಥಾನ ಲಭಿಸಲೆಂದು ಕಾಂಗ್ರೆಸ್ ಹಾರಾಡಿ ವಲಯದಿಂದ ವಿಶೇಷ ಪೂಜೆ

    ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ ಮಂಗಳೂರು ಇದರ ಸದಸ್ಯರಾಗಿ ಜಗನ್ನಾಥ ಶೆಟ್ಟಿ ನಡುಮನೆ ನೇಮಕ

    ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ ಮಂಗಳೂರು ಇದರ ಸದಸ್ಯರಾಗಿ ಜಗನ್ನಾಥ ಶೆಟ್ಟಿ ನಡುಮನೆ ನೇಮಕ

    ಪುತ್ತೂರು ಶಾಸಕ ಅಶೋಕ್ ರೈಯವರಿಗೆ ಸಚಿವ ಸ್ಥಾನ ದೊರೆಯಲು ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ

    ಪುತ್ತೂರು ಶಾಸಕ ಅಶೋಕ್ ರೈಯವರಿಗೆ ಸಚಿವ ಸ್ಥಾನ ದೊರೆಯಲು ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ಪ್ರಾದೇಶಿಕ ಪುತ್ತೂರು

ನೆಟ್ಟಣಿಗೆ ಮುಡ್ನೂರು 25ನೇ ಅಕ್ರಮ ಸಕ್ರಮ ಬೈಠಕ್, 94 ಸಿ ಹಕ್ಕುಪತ್ರ ವಿತರಣೆ ನಾನು ಜನರ ಬಳಿ ವೋಟು ಕೇಳಿದ್ದೇನೆ ಹೊರತು ನಿಮ್ಮ ಹಾಗೇ ಹಣ ಕೇಳಿಲ್ಲ : ಬಿಜೆಪಿಗೆ ತಿರುಗೇಟು ನೀಡಿದ ಶಾಸಕ ಅಶೋಕ್ ರೈ

by ಪ್ರಜಾಧ್ವನಿ ನ್ಯೂಸ್
June 3, 2026
in ಪುತ್ತೂರು
0
ನೆಟ್ಟಣಿಗೆ ಮುಡ್ನೂರು 25ನೇ ಅಕ್ರಮ ಸಕ್ರಮ ಬೈಠಕ್, 94 ಸಿ ಹಕ್ಕುಪತ್ರ ವಿತರಣೆ  ನಾನು ಜನರ ಬಳಿ ವೋಟು ಕೇಳಿದ್ದೇನೆ ಹೊರತು ನಿಮ್ಮ ಹಾಗೇ ಹಣ ಕೇಳಿಲ್ಲ : ಬಿಜೆಪಿಗೆ ತಿರುಗೇಟು ನೀಡಿದ ಶಾಸಕ ಅಶೋಕ್ ರೈ
4
SHARES
12
VIEWS
ShareShareShare

ಪುತ್ತೂರು: ಅಕ್ರಮ ಸಕ್ರಮ ಕಡತವಿಲೇವಾರಿ ಮಾಡುವಾಗ , 94 ಸಿ ಸಿಸಿ ಹಕ್ಕು ಪತ್ರ ವಿತರಣೆ ಮಾಡುವಾಗ ಮತ್ತು ಇತರೆ ಅಭಿವೃದ್ದಿ ಕೆಲಸ ಮಾಡಿದಾಗ ಶಾಸಕ ಅಶೋಕ್ ರೈಯವರು ಜನರ ಬಳಿ ವೋಟು ಕೇಳುತ್ತಾರೆ ಎಂದು ಮೊನ್ನೆ ಬಿಜೆಪಿಯವರು ಆರೋಪ ಮಾಡಿದ್ದರು, ಅಶೋಕ್ ರೈ ಜನರ ಬಳಿ ವೋಟು ಕೇಳಿದ್ದು ನಿಜ ಆದರೆ ನಿಮ್ಮ ಹಾಗೆ ಬಡವರ ಬಳಿ ಹಣ ಕೇಳಿಲ್ಲ ಎಂದು ಶಾಸಕ ಅಶೋಕ್ ರೈ ತಿರುಗೇಟು ನೀಡಿದ್ದಾರೆ.

Muliya

ಜಾಹೀರಾತು

Sathyasayi Hospital

ಜಾಹೀರಾತು

ಅವರು ನೆಟ್ಟಣಿಗೆ ಮುಡ್ನೂರು ಗ್ರಾಪಂ ಕಚೇರಿ ಸಭಾಂಗಣದಲ್ಲಿ ನಡೆದ 25ನೇ ಅಕ್ರಮ ಸಕ್ರಮ ಬೈಠಕ್ ಉದ್ಘಾಟಿಸಿ ಮಾತನಾಡಿದರು.

ಅಕ್ರಮ ಸಕ್ರಮ ಮಾಡುವುದಕ್ಕೆ , 94 ಸಿ ಹಕ್ಕು ಪತ್ರ ನೀಡಲು ಬಿಜೆಪಿ ಶಾಸಕರು ಎಲ್ಲರಿಂದಲೂ ಹಣ ಪಡೆದುಕೊಂಡಿದ್ದಾರೆ, ಹಣ ಕೊಡದವರ ಯಾವುದೇ ಕಡತವನ್ನು ಇವರು ವಿಲೇವಾರಿ ಮಾಡಿಯೇ ಇಲ್ಲ. ನಾನು ಶಾಸಕನಾದ ಬಳಿಕ ಒಬ್ಬೊಬ್ಬರೇ ಬಂದು ನನ್ನಲ್ಲಿ ವಿಷಯ ಹೇಳಿದ್ದಾರೆ. ನನ್ನ ಬಳಿ ಬಿಜೆಪಿ ಶಾಸಕರ ಕಥೆ ಹೇಳಿದವರ ಪೈಕಿ ಬಿಜೆಪಿಯವರೂ ಇದ್ದಾರೆ, ಅವರ ಶಕ್ತಿ ಕೇಂದ್ರದ ಅಧ್ಯಕ್ಷರುಗಳೂ ಇದ್ದಾರೆ ಅವರ ಪಕ್ಷದವರೇ ಆದರೂ ಹಣ ಕೊಡದ ಕಾರಣ ಕಡತ ವಿಲೇವಾರಿ ಮಾಡಿಕೊಟ್ಟಿಲ್ಲ, ಬಡವರ ಕಡತಕ್ಕೆ ಕುಮ್ಕಿ ಎಂದು ನಾಮಕರಣ ಮಾಡಿ ಜೀವ ಮಾನದಲ್ಲಿ ಅವರಿಗೆ ಅಕ್ರಮ ಸಕ್ರಮ ಮಾಡದ ಹಾಗೆ ಮಾಡಿದ್ದಾರೆ ಇದು ಮಹಾ ಅನ್ಯಾಯವಾಗಿದೆ ಎಂದ ಶಾಸಕರು ನಾನು ಬಡವರಿಗೆ ಅನ್ಯಾಯ ಮಾಡಿಲ್ಲ, ಪಕ್ಷ ಬೇದವಿಲ್ಲದೆ, ಧರ್ಮ ಬೇಧವಿಲ್ಲದೆ ಅರ್ಹರಿಗೆ ಅಕ್ರಮ ಸಕ್ರಮ ಮಾಡಿಕೊಟ್ಟಿದ್ದೇನೆ ಎಂದು ಖಾರವಾಗಿಯೇ ಹೇಳಿದರು.

ಬಡವರಿಗೆ ಮೋಸ ಮಾಡಬೇಡಿ: ಭಾವುಕರಾದ ಶಾಸಕರು

ಕಳೆದ ಹಲವಾರು ವರ್ಷಗಳಿಂದಮನೆ ಕಟ್ಟಿ ಮಾಡಿಕೊಂಡಿರುವ ಬಡವರು ತಮ್ಮ ಸ್ವಾಧೀನದಲ್ಲಿರುವ 9 ಸೆಂಟ್ಸ್ ಜಾಗಕ್ಕೆ ಹಕ್ಕು ಪತ್ರ ಕೇಳುತ್ತಾರೆ ಅದಕ್ಕಾಗಿ ಅವರನ್ನು ಅಲೆದಾಡಿಸಬೇಡಿ, ಕದ್ದು ಮುಚ್ಚಿ ಅವರಿಂದ ಹಣ ಕೇಳಬೇಡಿ. ಬಡವರ ಕಷ್ಟ ಏನೆಂಬುದನ್ನು ನಾನು ಚಿಕ್ಕವನಿರುವಾಗ ಅನುಭವಿಸಿದ್ದೇನೆ ಎಂದ ಶಾಕರು ತಮ್ಮ ಬಾಲ್ಯ ಪ್ರಾಯದಲ್ಲಿ ಕೊಟ್ಟಿಗೆಯ ಜೀವನ ನೆನೆದು ಭಾವುಕರಾದರು. ಯಾರಾದರೂ ಬಡವರಿಂದ ಹಣ ಪಡೆದುಕೊಂಡಿದ್ದರೆ ಅದನ್ನು ಅವರಿಗೆ ಮರಳಿಸಿ ಯಾಕೆಂದರೆ ಅವರ ಬೆವರು ಸುರಿಸಿ ಮಾಡಿದ ಹಣ ಆ ಹಣವನ್ನು ಯಾರೂ ದೋಚುವ ಕೆಲಸ ಮಾಡಬೇಡಿ ಎಂದು ಶಾಸಕರು ಮನವಿ ಮಾಡಿದರು. ಬಡವರಿಗೆ ದ್ರೋಹ ಮಾಡಿದವ ಏಳಿಗೆಯಾಗುವುದಿಲ್ಲ ಎಂದು ಕೂಡಾ ಹೇಳಿದರು.

9 ಸೆಂಟ್ ಜಾಗದವಿದೆ 5 ಸೆಂಟ್ ಕೊಟ್ಟಿದ್ದು ಯಾಕೆ?

ನೆಟ್ಟಣಿಗೆ ಮುಡ್ನೂರು ಗ್ರಾಮದ ಮಹಿಳೆಯೋರ್ವರಿ ೯ ಸೆಂಟ್ಸ್ ಜಾಗ ಇದ್ದರೂ ಗ್ರಾಮಕರಣಿಕ 5 ಸೆಂಟ್ ಜಾಗ 94 ಸಿಗೆ ಮಂಜೂರು ಮಾಡಿದ್ದರು. ಈ ಬಗ್ಗೆ ಮಹಿಳೆ ಶಾಸಕರಲ್ಲಿ ದೂರು ನೀಡಿದರು. ತಕ್ಷಣ ಗ್ರಾಮಕರಣಿಕರನ್ನು ಪ್ರಶ್ನಿಸಿದ ಶಾಸಕರು ಅವರ ಬಳಿ 9 ಸೆಂಟ್ ಜಾಗ ಇದ್ದಲ್ಲಿ 9 ಸೆಂಟ್ ಕೊಡಬೇಕು . 5 ಸೆಂಟ್ ಮಾಡಿಕೊಡ್ಲಿಕ್ಕೆ ನೀನು ಯಾರು? ಬಡವರ ಬಳಿ ಇರುವುದೇ 9 ಸೆಂಟ್ ಜಾಗ ಅದಕ್ಕೂ ಯಾಕೆ ಕತ್ತರಿ ಹಾಕುತ್ತೀಯ? 9 ಸೆಂಟ್ ಹಕ್ಕು ಪತ್ರ ಪಡೆದರೆ ಏನಾದರೂ ಪ್ರಯೋಜನವಾಗುತ್ತದೆ ಅವರಿಗೆ 9 ಸೆಂಟ್ ಮಾಡಿಕೊಡಿ ಎಂದು ೫ ಸೆಂಟ್ ಜಾಗದ ಹಕ್ಕು ಪತ್ರವನ್ನು ಶಾಸಕರು ನೀಡದೇ ಮುಂದಿನ ಬೈಠಕ್‌ನಲ್ಲಿ ಇವರ ಹಕ್ಕು ಪತ್ರ ರೆಡಿಮಾಡುವಂತೆ ವಿ ಎ ಗೆ ಸೂಚನೆ ನೀಡಿದರು. ಇದೇ ರೀತಿ ಇನ್ನೊಬ್ಬರಿಗೆ 3 ಸೆಂಟ್ ಮಂಜೂರು ಮಾಡಿದ್ದನ್ನು ಶಾಸಕರು ತಡೆ ಹಿಡಿದು ಮುಂದಿನ ಬೈಠಕ್‌ನಲ್ಲಿ ಹಕ್ಕು ಪತ್ರ ಕೊಡುವುದಾಗಿ ಹೇಳಿದರು.

ನಿವೇಶನವೇ ಇಲ್ಲದವರಿಗೆ ನಿವೇಶನ ಕೊಡುತ್ತೇನೆ

Keshari Durga

ಜಾಹೀರಾತು

ಯಾವುದೇ ಗ್ರಾಮದಲ್ಲಿ ಯಾರಿಗಾದರೂ ನಿವೇಶನವೇ ಇಲ್ಲದೇ ಇದ್ದರೆ ಅಂಥವರಿಗೆ ೨.೭೫ ಸೆಂಟ್ ಜಾಗವನ್ನು ನಾನು ಕೊಡಿಸ್ತೇನೆ. ಸೋಮವಾರ ಕಚೇರಿಗೆ ಅರ್ಜಿ ಸಮೇತವಾಗಿ ಬರಬೇಕು. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಯಾರೂ ಕೂಡಾ ನಿವೇಶನವಿಲ್ಲದೆ ಇರಬಾರದು ಎಂಬುದೇ ನನ್ನ ಉದ್ದೇಶ ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಮನವಿ ಮಾಡಿದರು.

ಇಂಥಹ ಸರಕಾರ ಯಾವತ್ತೂ ಬಂದಿಲ್ಲ

ಕರ್ನಾಟಕದ ಕಾಂಗ್ರೆಸ್ ಸರಕಾರದ ಮಾದರಿ ಸರಕಾರ ದೇಶದಲ್ಲಿ ಈ ಹಿಂದೆ ಎಲ್ಲಿಯೂ ಬಂದಿಲ್ಲ ಇನ್ನು ಬರುವುದೂ ಇಲ್ಲ. ಸರಕಾರದ ಪಂಚ ಗ್ಯಾರಂಟಿ ಯೋಜನೆಯು ಪ್ರತೀ ಕುಟುಂಬಕ್ಕೂ ನೆರವಾಗಿದೆ. ನೇರವಾಗಿ ಜನರ ಖಾತೆಗೆ ಹಣ ಜಮೆಯಾಗುತ್ತಿದೆ ಇದರಿಂದ ಒಂದು ಸಣ್ಣ ಕುಟುಂಬ ಬದುಕುವಂತಾಗಿದೆ. ಬಸ್ ಫ್ರೀ, ಕರೆಂಟ್ ಫ್ರೀ, ಅಕ್ಕಿ ಫ್ರೀ ಇದೆಲ್ಲವೂ ಕಾಂಗ್ರೆಸ್ ಸರಕಾರದ ಯೋಜನೆಯಾಗಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಮತಚಲಾಯಿಸುವಂತೆ ಮನವಿ ಮಾಡಿದರು.

ಜನ ಸೇವೆಯೇ ಶಾಸಕರ ಧ್ಯೇಯ; ಬಡಗನ್ನೂರು

ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಮಹಮ್ಮದ್ ಬಡಗನ್ನೂರು ಮಾತನಾಡಿ ಜನ ಸೇವೆಯೇ ಶಾಸಕರ ಮುಖ್ಯ ಧ್ಯೇಯವಾಗಿದೆ. ಹೊಸ ಸರಕಾರ ನಾಳೆ ಅಧಿಕಾರಕ್ಕೆ ಬರುವ ಸಿದ್ದತೆಯಲ್ಲಿದ್ದು, ಶಾಸಕರುಗಳು ಸಚಿವ ಸ್ಥಾನಕ್ಕಾಗಿ ಲಾಭಿ ನಡೆಸುತ್ತಿರುವ ವೇಳೆ ಅಶೋಕ್ ರೈಗಳು ನೆಟ್ಟಣಿಗೆ ಮುಡ್ನೂರಿನಲ್ಲಿ ಅಕ್ರಮ ಸಕ್ರಮ ಬೈಠಕ್ ಮಾಡುತ್ತಿದ್ದಾರೆ ಇಂಥಹ ಶಾಸಕರನ್ನು ಪಡೆದ ಧನ್ಯರು ಎಂದು ಹೇಳಿದರು. ಅಶೋಕ್ ರೈಯವರು ಮುಂದಿನ ಮೂರು ಅವಧಿಗೆ ಶಾಸಕರಾದರೆ ಮುಂದಿನ 30 ವರ್ಷ ಕ್ಷೇತ್ರದ ಜನತೆ , ಬಡವರು ನೆಮ್ಮದಿಯ ಜೀವನ ನಡೆಸಬಹುದಾಗಿದೆ , ಶಾಸಕರನ್ನು ಬೆಂಬಲಿಸುವ ಮೂಲಕ ಮುಂದಿನ ಚುನಾವಣೆಯಲ್ಲಿ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಅಕ್ರಮ ಸಕ್ರಮ ಸಮಿತಿ ಕಾರ್ಯದರ್ಶಿ ತಹಶಿಲ್ದಾರ್ ಕೂಡ್ಲಿಗಿ, ಸದಸ್ಯರಾದ ರಾಮಣ್ಣ ಪಿಲಿಂಜ, ರೂಪರೇಖಾ ಆಳ್ವ ಉಪಸ್ಥಿತರಿದ್ದರು. ಕಂದಾಯ ನಿರೀಕ್ಷಕರಾದ ಗೋಪಾಲ ಸ್ವಾಗತಿಸಿದರು. ಗ್ರಾಮಕರಣಿಕ ನರಿಯಪ್ಪ ವಂದಿಸಿದರು. ಶಾಸಕರ ಕಚೇರಿ ಸಿಬಂದಿ ಪ್ರವೀಣ್ , ಕೃಷ್ಣಪ್ರಸಾದ್ ಬೊಳ್ಳಾವು ,ಪಿ ಎ ರಂಜಿತ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.

SendShare2Share
Previous Post

ಸಾಮೆತ್ತಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪುತ್ತೂರು ತಾಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ

Next Post

ಪ್ರಜಾಧ್ವನಿ ನ್ಯೂಸ್

ಪ್ರಜಾಧ್ವನಿ ನ್ಯೂಸ್

Next Post

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂದರ್ಭಿಕ ಚಿತ್ರ
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

No Result
View All Result
  • ಮುಖಪುಟ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಉದ್ಯೋಗ – ಶಿಕ್ಷಣ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಿನಿಮಾ
  • ಲೈಫ್ ಸ್ಟೈಲ್

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..