ಪುತ್ತೂರು: ಪ್ರತಿಷ್ಠಿತ ಬೆಂಗಳೂರು ನಾಡಪ್ರಭು ಪ್ರತಿಷ್ಠಾನದಿಂದ *ಸಂಶೋಧನಾ ಕ್ಷೇತ್ರದಲ್ಲಿ ಸಾಧನೆಗಾಗಿ * *2026ರ ಕೆಂಪೇಗೌಡ* ಪ್ರಶಸ್ತಿ ವಿಜೇತರಾದ
ಯಸ್ ಆರ್ ಕೆ ಲೆಡರ್ ಇದರ ಮಾಲಕರಾದ ಕೇಶವ ಗೌಡ ಅಮೈ ಇವರಿಗೆ ಪುತ್ತೂರು ಯುವ ಒಕ್ಕಲಿಗ ಗೌಡ ಸೇವಾ ಸಂಘ ದಿಂದ ಸನ್ಮಾನಿಸಲಾಯಿತು .
ಈ ಸಂದರ್ಭದಲ್ಲಿ ಪುತ್ತೂರು ತಾಲೂಕು ಯುವ ಗೌಡ ಸಂಘದ ಅಧ್ಯಕ್ಷ ಪ್ರಶಾಂತ್ ಕೆಮ್ಮಾಯಿ, ಉಪಾಧ್ಯಕ್ಷರಾದ ಆನಂದ್ ತೆಂಕಿಲ, ಪುತ್ತೂರು ವಲಯದ ಅಧ್ಯಕ್ಷ ದಾಮೋದರ ಗೇನಸಿನಕುಮೇರ್, ಕಾರ್ಯದರ್ಶಿ ಸತೀಶ್ ತೆಂಕಿಲ, ಬನ್ನೂರು ವಲಯದ ಅಧ್ಯಕ್ಷ ವಸಂತ ಗೌಡ ಕಬಕ, ತಾಲೂಕು ಪಂಚಾಯತ್ ಮಾಜಿ ಸದಸ್ಯ ಲಕ್ಷ್ಮಣ ಗೌಡ ಬೆಳ್ಳಿಪಾಡಿ, ಪತ್ತೂರು ವಲಯದ ಸಂಘಟನಾ ಕಾರ್ಯದರ್ಶಿ ಸತೀಶ್ ಮರಿಕೆ ಇವರುಗಳು ಉಪಸ್ಥಿತರಿದ್ದರು.
























