ಸುಳ್ಯ: ಆಯುರ್ವೇದ ವೈದ್ಯಕೀಯ ಸ್ನಾತಕೋತರ ಪದವಿ ಪರೀಕ್ಷೆಯಲ್ಲಿ ಯೋಗ ಮತ್ತು ಸ್ವಸ್ತ ವಿಭಾಗದಲ್ಲಿ ರಾಜ್ಯದಲ್ಲಿ ಪ್ರಥಮ ರ್ಯಾಂಕ್ ಚಿನ್ನದ ಪದಕ ಪಡೆದ ಡಾ. ಹಿತಾ ಮಡ್ತಿಲ ಇವರಿಗೆ ಐವರ್ನಾಡು ಭಾರತೀಯ ಜನತಾ ಪಕ್ಷದ ಶಕ್ತಿ ಕೇಂದ್ರ ವತಿಯಿಂದ ಅವರ ಮನೆಯಲ್ಲಿ ಸನ್ಮಾನಿಸಲಾಯಿತು. ಸನ್ಮಾನವನ್ನ ಶ್ರೀಮತಿ ರೇವತಿ ಭೋಳುಗುಡ್ಡೆ ಮತ್ತು ಶ್ರೀಮತಿ ಭಾರತಿ ಗುತ್ತಿಗಾರು ಮೂಲೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಚಂದ್ರ ಕೊಲ್ಚಾರ್ ನಿರ್ದೇಶಕರು ಸಹಕಾರ ಮಹಾಮಂಡಲ ಬೆಂಗಳೂರು, ಕೃಷ್ಣ ಪ್ರಸಾದ್ ಮಡ್ತಿಲ ಮಾಜಿ ಅಧ್ಯಕ್ಷರು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ನಂದಕುಮಾರ ಸಂಚಾಲಕರು ಶಕ್ತಿಕೇಂದ್ರ ಬಿಜೆಪಿ ಐವರ್ನಾಡು , ಕಿಶನ್ ಜಬಳೆ,ಮೋಹನ ಬೋಳುಗುಡ್ಡೆ,ಅನಿಲ್ ದೇರಾಜೆ,ನಿವೃತ್ತ ಸೈನಿಕ ಗಣೇಶ್ ಬಜಂತಡ್ಕ ಮಡ್ತಿಲ, ನಿಖಿಲ್ ಮಡ್ತಿಲ, ಅನಿಲ್ ಕುತ್ತ್ಯಾಡಿ, ಕೀರ್ತನ್ ಬೋಳುಗುಡ್ಡೆ, ಶಶಿಧರ ಕೈವಲ್ತಡ್ಕ , ರಕ್ಷಿತ್ ಸಾರ ಕುಟೆಲು, ಅವರ ತಂದೆ ಕರುಣಾಕರ ಮಡ್ತಿಲ ತಾಯಿ ಶಾಂಭವಿ ಮಡ್ತಿಲ, ಶ್ರೀಮತಿ ಹೇಮಾ ಶಿವರಾಮ ಗೌಡ ಮಡ್ತಿಲ ಮತ್ತು ಮನೆಯವರು ಉಪಸ್ಥಿತರಿದ್ದರು.
























