ಪುತ್ತೂರಿನ ಶಾಸಕರಾದ ಶ್ರೀ ಅಶೋಕ್ ಕುಮಾರ್ ರೈ ಹಾಗೂ ಕುಟುಂಬದವರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಸ್ವರ್ಣ ಮುಖ ಕವಚ ನಿರ್ಮಾಣದ ಪವಿತ್ರ ಕಾರ್ಯಕ್ಕೆ 100 ಗ್ರಾಂ ಚಿನ್ನವನ್ನು ಭಕ್ತಿಪೂರ್ವಕವಾಗಿ ಸಮರ್ಪಿಸಿದರು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರಿಗೆ ಶಾಸಕ ಅಶೋಕ್ ರೈ ಕುಟುಂಬದಿಂದ 100 ಗ್ರಾಂ ( ಸುಮಾರು 15) ಲಕ್ಷ ಮೌಲ್ಯದ ಚಿನ್ನವನ್ನು ಸಮರ್ಪಿಸಲಾಯಿತು
ದೇವರ ಸನ್ನಿಧಿಯಲ್ಲಿ ಕುಟುಂಬ ಸಮೇತವಾಗಿ ಸಲ್ಲಿಸಿದ ಈ ಸುವರ್ಣ ಕಾಣಿಕೆಯು ಕೇವಲ ದಾನವಲ್ಲ ಶ್ರೀ ಮಹಾಲಿಂಗೇಶ್ವರ ದೇವರ ಮೇಲಿನ ಅಚಲ ಭಕ್ತಿ, ಶ್ರದ್ಧೆ ಹಾಗೂ ಸಮರ್ಪಣೆಯ ಪ್ರತೀಕವಾಗಿದೆ.
ಸಾವಿರಾರು ಭಕ್ತರ ಭಕ್ತಿ ಮತ್ತು ಸಹಕಾರದಿಂದ ಸಾಕಾರಗೊಳ್ಳುತ್ತಿರುವ ಈ ಸುವರ್ಣ ಸಂಕಲ್ಪಕ್ಕೆ ಅಶೋಕ್ ಕುಮಾರ್ ರೈ ಹಾಗೂ ಕುಟುಂಬದವರ ಕೊಡುಗೆ ಮತ್ತಷ್ಟು ಪ್ರೇರಣೆಯನ್ನು ನೀಡಿದೆ.
ಈ ಸಂದರ್ಭದಲ್ಲಿ ಸುಮಾ ಅಶೋಕ್ ರೈ, ಮಕ್ಕಳಾದ ರಿಧಿ ರೈ, ಪ್ರಧೀಲ್ ರೈ, ಶ್ರೀಧಿ ರೈ, ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರು ಸದಸ್ಯರು ಗಳು ಉಪಸ್ಥಿತರಿದ್ದರು
























