ಪುತ್ತೂರು : ಪಿ.ಜಿ. ಜಗನ್ನಿವಾಸ ರಾವ್ ಅವರು ಶಾರದಾ ಭಜನಾ ಮಂದಿರದ ಪ್ರಸ್ತುತ ಅಧ್ಯಕ್ಷರಾಗಿದ್ದು, ಮಂದಿರದ ಆಶ್ರಯದಲ್ಲಿ ನಡೆಯುವ ನವರಾತ್ರಿ ಉತ್ಸವ ಕಾರ್ಯಕ್ರಮಕ್ಕೆ ವಿಶ್ವಕರ್ಮ ಸಮಾಜದ ಸಂಪೂರ್ಣ ವಿರೋಧವಿದೆ. ಮಾತೃ ಸ್ವರೂಪಿಣಿಯಾದ ಶಾರದಾ ಮಾತೆಯನ್ನು ಪೂಜಿಸುವ ಈ ಆರಾಧನಾಲಯದಲ್ಲಿ ಇಷ್ಟು ವರ್ಷ ಯಾವುದೇ ಕಳಂಕ ರಹಿತವಾದ ಗಣ್ಯರು ಶಾರದಾ ಭಜನಾ ಮಂದಿರದ ಆಡಳಿತ ಮಂಡಳಿಯನ್ನು ನಡೆಸುತ್ತಿದ್ದರು, ಪ್ರಸ್ತುತ ಅಧ್ಯಕ್ಷರಾದ ಪಿ.ಜಿ.ಜಗನ್ನಿವಾಸ ರಾವ್ ಅವರ ಮಗ ಪಿ.ಜಿ. ಕೃಷ್ಣ ಜಿ. ರಾವ್ ಅವರಿಂದ ನಮ್ಮ ಸಮಾಜದ ಹೆಣ್ಣು ಮಗಳಿಗೆ ಅನ್ಯಾಯವಾಗಿದ್ದು, ಮುಗ್ಧ ಹೆಣ್ಣು ಮಗಳಿಗೆ ನ್ಯಾಯ ಒದಗಿಸುವಂತೆ ಬೇರೆ ಬೇರೆ ಮೂಲಗಳಿಂದ ಹಾಗೂ ವಯಕ್ತಿಕವಾಗಿ ಮನವಿ ಮಾಡಿದರು ಕೂಡಾ ಪಿ.ಜಿ. ಜಗನ್ನಿವಾಸ ರಾವ್ ಹಾಗೂ ಕುಟುಂಬ ಯಾವುದೇ ಸ್ಪಂದನೆ ನೀಡಲಿಲ್ಲ.
ಅಲ್ಲದೆ ನಮ್ಮ ಹಿರಿಯರಾದ ಅಮೈ ಮಂಜುನಾಥ ಆಚಾರ್ಯ, ಮಹಾಲಿಂಗ ಆಚಾರ್ಯ, ಗೋಪಾಲ ಆಚಾರ್ಯ, ಕೃಷ್ಣಪ್ಪ ಆಚಾರ್ಯ ಅವರು ಶಾರದಾ ಮಂದಿರದ ಸ್ಥಾಪನೆಯಲ್ಲಿ ಮುಂಚೂಣಿಯಲ್ಲಿದ್ದರು. ಪ್ರಸ್ತುತ ಯಶವಂತ ಆಚಾರ್ಯ ಉಪಾಧ್ಯಕ್ಷರಾಗಿದ್ದು ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ ಮಂದಿರದ ಧಾರ್ಮಿಕ ಕಾರ್ಯಕ್ರಮಗಳಿಗೆ ನಮ್ಮ ವಿಶ್ವಕರ್ಮ ಸಮುದಾಯದವರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲ ನೀಡುತ್ತಿದ್ದು, ಪ್ರಸ್ತುತ ಪಿ.ಜಿ. ಜಗನ್ನಿವಾಸ ರಾವ್ ಅವರ ಮುಂದಾಳತ್ವದಲ್ಲಿ ನಡೆಯುವ ಮಂದಿರದ ಯಾವುದೇ ಕಾರ್ಯಕ್ರಮಗಳಿಗೆ ನಮ್ಮ ಸಮಾಜದ ಬೆಂಬಲವಿರುವುದಿಲ್ಲ. ಆದರಿಂದ ತಕ್ಷಣ ಅವರನ್ನು ಅಧ್ಯಕ್ಷ ನೆಲೆಯಿಂದ ವಜಗೊಳಿಸುವಂತೆ ಮಾದ್ಯಮದ ಮೂಲಕ ಶಾರದಾ ಭಜನಾ ಮಂದಿರದ ಆಡಳಿತ ಮಂಡಳಿಯಲ್ಲಿ ವಿನಂತಿಸುತ್ತಿದ್ದೇವೆ. ಅನ್ಯಾಯಕೊಳಗಾದ ನಮ್ಮ ಸಮುದಾಯದ ಹೆಣ್ಣು ಮಗಳಿಗೆ ನ್ಯಾಯ ಸಿಗುವವರೆಗೆ ಆರೋಪಿ ಪಿ.ಜಿ ಕೃಷ್ಣಾ ಜೆ. ರಾವ್ ಅವರ ತಂದೆ ಪಿ.ಜಿ. ಜಗನ್ನಿವಾಸ ರಾವ್ ಅವರನ್ನು ಯಾವುದೇ ಧಾರ್ಮಿಕ ಕ್ಷೇತ್ರ, ಕಾರ್ಯಕ್ರಮಗಳಿಗೆ ಸೇರಿಸುವುದನ್ನು ನಮ್ಮ ವಿಶ್ವಕರ್ಮ ಸಮುದಾಯದ ಸಂಪೂರ್ಣ ವಿರೋಧ ವ್ಯಕ್ತಪಡಿಸುತ್ತದೆ.
ಸುದ್ದಿಘೋಷ್ಠಿಯಲ್ಲಿ ವಿಶ್ವಕರ್ಮ ಯುವ ಮಿಲನದ ಕರ್ನಾಟಕ ರಾಜ್ಯ ಯುವ ಮಿಲನದ ಪದಾಧಿಕಾರಿಗಳಾದ ವಿಕ್ರಂ ಆಚಾರ್ಯ ಮಂಗಳೂರು, ಸುಬ್ರಹ್ಮಣ್ಯ ಆಚಾರ್ಯ, ತಾಲೂಕು ಅಧ್ಯಕ್ಷರಾದ ಹರೀಶ್ ಆಚಾರ್ಯ ಕೆಮ್ಮಾಯಿ, ಪ್ರ.ಕಾರ್ಯದರ್ಶಿ ದಿವಾಕರ ಆಚಾರ್ಯ ಪಾಲ್ವಾ, ಕೋಶಧಿಕಾರಿ ಜಗದೀಶ ಆಚಾರ್ಯ ಅವರು ಉಪಸ್ಟಿರಿದ್ದರು