‘ಬಿಗ್ ಬಾಸ್ ಕನ್ನಡ ಸೀಸನ್ 12’ ಆರಂಭ ಆಗಿದೆ. 19 ಸ್ಪರ್ಧಿಗಳು ಬಿಗ್ ಬಾಸ್ ಮನೆ ಒಳಗೆ ಹೋಗಿದ್ದಾರೆ. ಅಲ್ಲಿಯ ಸೆಟಪ್ ನೋಡಿ ಎಲ್ಲರೂ ಅಚ್ಚರಿಗೊಂಡರು. ಬಿಗ್ ಬಾಸ್ ವೇದಿಕೆ ಮೇಲೆ ಸುದೀಪ್ ಅವರನ್ನು ನೋಡಿ ಖುಷಿಪಟ್ಟರು. ಅದೇ ರೀತಿ ಕರಾವಳಿ ಮೂಲದ ರಕ್ಷಿತಾ ಶೆಟ್ಟಿ ಕೂಡ ಸುದೀಪ್ ಅವರನ್ನು ನೋಡಿ ಸಾಕಷ್ಟು ಭಯಗೊಂಡರು. ಈ ವೇಳೆ ಅವರ ಕೈ ನಡುಗುತ್ತಾ ಇತ್ತು. ಅವರು ತಾವು ಕನ್ಫ್ಯೂಸ್ ಆಗುವುದು ಅಲ್ಲದೆ, ಸುದೀಪ್ ಅವರನ್ನೂ ಕನ್ಫ್ಯೂಸ್ ಮಾಡಿದರು.
ರಕ್ಷಿತಾ ಶೆಟ್ಟಿ ಅಡುಗೆ ಮಾಡೋ ಹುಡುಗಿ. ಕರಾವಳಿಯ ಈ ಪುಟ್ಟ ಬೆಡಗಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಎಂಟ್ರಿ ಅಲ್ಲಿಯೇ ಕಿಚ್ಚನಿಗೆ ನಗು ಬರೋ ರೀತಿನೇ ಮಾತನಾಡಿದ್ದಾರೆ.
ರಕ್ಷಿತಾ ಶೆಟ್ಟಿ ಅವರು ಕರಾವಳಿ ಮೂಲದವರು. ಅವರು ಮುಂಬೈನಲ್ಲಿ ಹುಟ್ಟಿ ಬೆಳೆದವರು. ಅವರಿಗೆ ಕನ್ನಡ ಅಷ್ಟು ಸ್ಪಷ್ಟವಾಗಿ ಮಾತನಾಡೋಕೆ ಬರಲ್ಲ. ತಮ್ಮ ಅರೆಬರೆ ಕನ್ನಡದಲ್ಲೇ ಅವರು ಕುಕಿಂಗ್ ವಿಡಿಯೋ ಮಾಡುತ್ತಿದ್ದರು. ಈ ಕಾರಣಕ್ಕೆ ಅವರು ಟ್ರೋಲ್ ಆಗಿದ್ದರು. ಆದರೆ, ಈಗ ಅವರು ಬಿಗ್ ಬಾಸ್ ಸ್ಪರ್ಧಿಯಾಗುವ ಅವಕಾಶ ಪಡೆದಿದ್ದಾರೆ.
ಬಿಗ್ ಬಾಸ್ ವೇದಿಕೆ ಏರಿ ಸುದೀಪ್ ಎದುರು ನಿಂತಾಗ ಅವರಿಗೆ ಏನು ಮಾತನಾಡಬೇಕು ಎಂಬುದೇ ಗೊತ್ತಾಗುತ್ತಾ ಇರಲಿಲ್ಲ. ಅವರು ಭಯದಲ್ಲೇ ಏನೇನೋ ಮಾತನಾಡಿದರು. ‘ಏಡಿ ತಿಂತೀರಾ’ ಎಂದು ಸುದೀಪ್ ಕೇಳಿದರು. ‘ಹೌದು ತಿಂತೇನೆ’ ಎಂದರು. ‘ಇಲ್ಲಿ ಏಡಿ ಕೊಡೋಕೆ ಆಗಲ್ಲ’ ಎಂದು ಸುದೀಪ್ ಹೇಳಿದರು.
‘ನಾನು ರಕ್ಷಿತಾ ಶೆಟ್ಟಿ, ಹುಟ್ಟಿದ್ದು ಬೆಳೆದಿದ್ದು ಮುಂಬೈಲ್ಲಿ, ಶಾಲಾ-ಕಾಲೇಜ್ ಓದಿದ್ದು ಮುಂಬೈನಲ್ಲಿ. ಶಾಲಾ ಕಾಲೇಜು ಆದ್ಮೇಲೆ ಉಡುಪಿಗೆ ಬಂದೆ. ಶಾಲೆ-ಕಾಲೇಜು ಸಮಯದಲ್ಲಿ ರಜೆ ಸಿಕ್ಕಾಗ ಬರುತ್ತಿದೆ. ಕಾಲೇಜು ಮುಗಿದ ಬಳಿಕ ನಾನು ಸಂಪುರ್ಣವಾಗಿ ಅಜ್ಜಿ ಮನೆಗೆ ಶಿಫ್ಟ್ ಆದೆ. ಕೊರೊನಾ ಬಳಿಕ ಯೂಟ್ಯೂಬ್ನೇ ವೃತ್ತಿಯಾಗಿ ಆಯ್ಕೆ ಮಾಡಿಕೊಂಡೆ’ ಎಂದರು. ಇದು ಸುದೀಪ್ಗೆ ಸರಿಯಾಗಿ ಅರ್ಥ ಆಯಿತು.
‘ಕೊರೊನಾ ಟೈಮ್ನಲ್ಲಿ ಮೂರು ತಿಂಗಳು ಊರಿಗೆ ಹೋಗಿ ಬಂದಿದೀವಿ’ ಎಂದರು ರಕ್ಷಿತಾ. ‘ಉಡುಪಿ ಹೋಗಿ ಮುಂಬೈಗೆ ಬಂದಿದೀವಿ’ ಎಂದರು ರಕ್ಷಿತಾ. ಇದೆಲ್ಲ ಕೇಳಿ ಸುದೀಪ್ ಸಖತ್ ಕನ್ಫ್ಯೂಸ್ ಆದರು. ಆ ಬಳಿಕ ಅವರು ಹೇಳಿದ ಒಂದಷ್ಟು ವಿಚಾರವನ್ನು ಹೇಗೋ ಅರ್ಥ ಮಾಡಿಕೊಂಡರು.