ವೇಣೂರಿನಲ್ಲಿ ಮೊನ್ನೆ ನಡೆದ ಕಂಬಳದಲ್ಲಿ ವೀಕ್ಷಕ ವಿವರಣೆಗಾರರಾದ ರಾಜೀವ ಶೆಟ್ಟಿ ಎಡ್ತೂರು ಅವರು ಛಾಯಾಗ್ರಾಹಕರ ಕುರಿತಾಗಿ ಅತ್ಯಂತ ಆಕ್ಷೇಪಾರ್ಹ ಶಬ್ದಗಳನ್ನು ಬಳಸಿ ನಿಂದಿಸಿರುವುದನ್ನು ನಮ್ಮ ಸಂಘವು ಅತ್ಯಂತ ಕಟುವಾಗಿ ಖಂಡಿಸುತ್ತದೆ.
ಸ್ವಾಭಿಮಾನದಿಂದ ವೃತ್ತಿಯನ್ನು ನಡೆಸುತ್ತಿರುವ ಛಾಯಾಗ್ರಾಹಕರ ಕುರಿತಾಗಿ ಅವಹೇಳನಕಾರಿಯಾಗಿ ಮಾತನಾಡಿರುವುದರ ವಿರುದ್ಧ ಸದ್ಯದಲ್ಲೇ ನಮ್ಮ ಸಂಘವು ಸೂಕ್ತ ಕ್ರಮವನ್ನು ಕೈಗೊಳ್ಳಲಿದ್ದು , ಇದರ ಕುರಿತು
ಸಂಘದ ತೀರ್ಮಾನವನ್ನು ಸದ್ಯದಲ್ಲೇ ಸದಸ್ಯರಿಗೆ ತಿಳಿಸಲಾಗುವುದು.
ನವೀನ್ ರೈ ಪಂಜಳ
ಜಿಲ್ಲಾಧ್ಯಕ್ಷರು,
ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ರಿ.
ದಕ್ಷಿಣ ಕನ್ನಡ – ಉಡುಪಿ ಜಿಲ್ಲೆ



























