ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾ ಕಾಳಿ ದೇವಸ್ಥಾನದ ಎದುರು ಭಾಗದಲ್ಲಿ ಪ್ರಥಮ ಬಾರಿಗೆ ನಡೆಯಲಿರುವ ನಾಗಮಂಡಲಕ್ಕೆ ಚಪ್ಪರಮಹೂರ್ತ ನೆರವೇರಿತು. ಚಪ್ಪರಮಹೂರ್ತದ ಧಾರ್ಮಿಕ ವಿಧಿ ವಿಧಾನಗಳನ್ನು ಸಹಸ್ರಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾಗಿರುವ ಹರೀಶ್ ಭಟ್ಟ ಅವರು ನೆರವೇರಿಸಿದರು.
ಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿರುವ ರಾಧಾಕೃಷ್ಣ ನಾೖಕ್ ಅವರು ತೆಂಗಿನ ಕಾಯಿ ಒಡೆದು ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು, ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷರಾಗಿರುವ ಪ್ರತಾಪ್ ಪೆರಿಯಡ್ಕ ಅಧ್ಯಕ್ಷರಾಗಿರುವಂತ ಚಂದಪ್ಪ ಮೂಲ್ಯ, ಸಂಚಾಲಕರು ಅರುಣ್ ಪುತ್ತಿಲ, ಕಾರ್ಯಾಧ್ಯಕ್ಷರಾಗಿರುವ ಹರಿಪ್ರಸಾದ್ ರೈ, ಪ್ರಧಾನ ಕಾರ್ಯದರ್ಶಿಯಾಗಿರುವ ನವೀನ್ ಕಲ್ಯಾಟ್ಟೆ, ಪ್ರಶಾಂತ್ ನೆಕ್ಕಿಲಾಡಿ, ಕೋಶಾಧಿಕಾರಿಯಾಗಿರುವ ಯತೀಶ್ ಶೆಟ್ಟಿ ಮತ್ತು ಸಮಿತಿಯ ಪದಾಧಿಕಾರಿಗಳಾಗಿರುವ, ಜಯಂತ ಪುರೊಳಿ, ಜಯರಾಮ ಆಚಾರ್ಯ, ರಾಜಗೋಪಾಲ್ ಭಟ್, ರಾಮಚಂದ್ರ ಮಣಿಯಾಣಿ, ಮಹೇಂದ್ರ ವರ್ಮ, ವಿಜಿತ್, ಮನೀಶ್ ಕುಲಾಲ್, ಜನಾರ್ಧನ್ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸಹಸ್ರಲಿಂಗೇಶ್ವರ ಮಹಾಕಾಳಿ ಸನ್ನಿಧಿಯ ವಠಾರದಲ್ಲಿ ಪ್ರಥಮ ಬಾರಿಗೆ ನಡೆಯುವ ಚತುರ್ ಪವಿತ್ರ ನಾಗಮಂಡಲ ಉತ್ಸವದ ಕಾರ್ಯಾಲಯದ ಉದ್ಘಾಟನೆ ನೆರವೇರಿತು. ಕಾರ್ಯಾಲಯವನ್ನು ದೀಪ ಬೆಳಗಿಸಿ, ನಾಳಿಕೆರ ಒಡೆದು ಉದ್ಘಾಟಿಸಿ ಮಾತನಾಡಿದ ಸಹಸ್ರಲಿಂಗೇಶ್ವರ ದೇವಸ್ಥಾನದ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿರುವ ಅರ್ತಿಲ ಕೃಷ್ಣರಾವ್ ಪ್ರಥಮ ಬಾರಿಗೆ ಕ್ಷೇತ್ರದ ವಠಾರದಲ್ಲಿ ನಾಗಮಂಡಲವು ಧಾರ್ಮಿಕ ವಿಧಿ ವಿಧಾನ ದೊಂದಿಗೆ ನಡೆಯುತ್ತಿದ್ದು ಈ ಧಾರ್ಮಿಕ ಕಾರ್ಯಕ್ರಮದಿಂದ ಸಾನಿಧ್ಯ ವೃದ್ಧಿಯಾಗುವುದು ಮತ್ತು ನಾಗಮಂಡಲ ನೋಡಬೇಕೆಂಬ ಭಕ್ತರ ಬಹುವರ್ಷದ ಕನಸು ನನಸಾಗಿದ್ದು ಎಲ್ಲ ಹಿಂದೂ ಬಂಧುಗಳು ಈ ಪವಿತ್ರ ಉತ್ಸವದಲ್ಲಿ ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡು ಭಾಗವಹಿಸಿ ಪ್ರಸಾದವನ್ನು ಸ್ವೀಕರಿಸಬೇಕೆಂದರು.
ಹಿಂದೂ ಬಂಧುಗಳಲ್ಲಿ ನಾಗನಿಗೆ ವಿಶೇಷ ಸ್ಥಾನವಿದೆ. ನಾಗನ ಆರಾಧನೆ ಮತ್ತು ಸೇವೆಯಿಂದ ಸುಖ, ಶಾಂತಿ ನೆಮ್ಮದಿಯನ್ನು ನಮ್ಮ ಜೀವನದಲ್ಲಿ ಪಡೆಯಲು ಸಾಧ್ಯ, ಈ ನಂಬಿಕೆಯಿಂದ ನಾವೆಲ್ಲ ಶ್ರದ್ದಾ ಭಕ್ತಿಯ ಜೊತೆಗೆ ನಾಗಮಂಡಲದಲ್ಲಿ ಪಾಲ್ಗೊಳ್ಳಬೇಕೆಂದರು. ನಾಗಮಂಡಲಕ್ಕೆ ಬೇಕಾಗುವ ಹಿಂಗಾರ, ಸಿಯಾಳವನ್ನು ಪ್ರತಿ ಮನೆಯಿಂದ ನೀಡಿ ಎಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದರು.ನಾಗಮಂಡಲ ಸಮಿತಿಯ ಅಧ್ಯಕ್ಷರಾದ ಚಂದಪ್ಪ ಮೂಲ್ಯ ಮಾತನಾಡಿ ನಾಗನ ಸೇವೆಯಲ್ಲಿ ಪಾಲ್ಗೊಳ್ಳುವ ಮತ್ತು ಸೇವೆಯನ್ನು ಮಾಡುವ ಅವಕಾಶ ನಮ್ಮ ಪಾಲಿಗೆ ಭಗವಂತ ಕರುಣಿಸಿದ್ದಾನೆ. ಈ ಪವಿತ್ರವಾಗಿರುವ ಕಾರ್ಯಕ್ರಮದಲ್ಲಿ ಇಡೀ ಹಿಂದೂ ಸಮಾಜ ಪಾಲ್ಗೊಂಡು ಆ ನಾಗನ ದೇವರ ಕೃಪೆಗೆ ಪಾತ್ರರಾಗಬೇಕು ಮತ್ತು ಈ ದಿವಸದಿಂದ ನಡೆಯುವ ಕರೆ ಸೇವೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಭಾಗವಹಿಸಬೇಕೆಂದು ವಿನಂತಿಸಿದರು.

ನಾಗಮಂಡಲದ ಚಪ್ಪರದ ಕೆಲಸ ಕಾರ್ಯಗಳು ಮತ್ತು ನಗರದ ಶೃಂಗಾರದ ಕಾರ್ಯಗಳು ಈ ದಿವಸದಿಂದ ಆರಂಭಗೊಳ್ಳಲಿದ್ದು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕೆಂದು ವಿನಂತಿಸಿದರು. ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷರಾಗಿರುವ ಕರುಣಾಕರ ಸುವರ್ಣ ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿರುವ ವೆಂಕಪ್ಪ ಪೂಜಾರಿ, ಪಾಕ ತಜ್ಞನಾಗಿರುವ ರವಿ ಕುಂಟಿನಿ, ದೇವಳದ ವೆಂಕಟೇಶ್, ಗುತ್ತಿಗೆದಾರರಾಗಿರುವ ಆನಂದ, ನಾಳಿಕೆರ ಒಡೆದು ಶುಭ ಹಾರೈಸಿದರು ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.ಸಮಿತಿಯ ಪ್ರದಾನ ಕಾರ್ಯದರ್ಶಿ ಪ್ರಶಾಂತ್ ನೆಕ್ಕಿಲಾಡಿ ಸ್ವಾಗತಿಸಿ, ಶ್ರೀರಾಮ್ ಭಟ್ ವಂದಿಸಿದರು. ಕಾರ್ಯಾಲಯ ಕಚೇರಿ ಪ್ರಮುಖ್ ವಿಜಿತ್ ಕಾರ್ಯಕ್ರಮ ನಿರೂಪಣೆ ಮಾಡಿದರು.




























