ಪುತ್ತೂರು :ಪುರುಷರಕಟ್ಟೆಯಿಂದ-ಶಾಂತಿಗೋಡು-ಆನಡ್ಕ ಸಂಪರ್ಕ ರಸ್ತೆಯು ಮಾಯಂಗಲದಿಂದ ಕೂಡುರಸ್ತೆಯವರೆಗೆ ಸಂಪೂರ್ಣವಾಗಿ ಹದಗೆಟ್ಟಿದ್ದು ವಾಹನ ಸಂಚಾರಕ್ಕೆ ಯೋಗ್ಯವಲ್ಲದ ರೀತಿಯಲ್ಲಿದ್ದು ಸದ್ರಿ ರಸ್ತೆಯನ್ನು ಶೀಘ್ರದಲ್ಲಿ ವಾಹನ ಸಂಚಾರಕ್ಕೆ ಯೋಗ್ಯವಾಗಿಸಬೇಕೆಂದು ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಪುತ್ತೂರು ಇವರನ್ನು 23-07-2026 ರಂದು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಸಂಚಾಲಕರಾದ ಅರುಣ್ ಕುಮಾರ್ ಪುತ್ತಿಲ ಹಾಗೂ ಟ್ರಸ್ಟಿನ ಪದಾಧಿಕಾರಿಗಳು ಭೇಟಿ ನೀಡಿ ಮನವಿ ನೀಡಿದ್ದರು.
ತಕ್ಷಣ ಮನವಿಗೆ ಸ್ಪಂದಿಸಿದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗ್ರಾಮದ ಪಿಡಿಓ ರವರನ್ನು ಹದಗೆಟ್ಟಿರುವ ರಸ್ತೆಯ ಸ್ಥಳಕ್ಕೆ ಕಳುಹಿಸಿದ್ದಾರೆ.
ಸ್ಥಳದಲ್ಲಿ ಪುತ್ತಿಲ ಪರಿವಾರ ನಿಯೋಗ ಹಾಗೂ ಗ್ರಾಮಸ್ಥರು ಪಿಡಓ ರವರನ್ನು ರಸ್ತೆ ಕೂಡಲೇ ಸಂಚಾರಕ್ಕೆ ಯೋಗ್ಯವಾಗಿಸಬೇಕೆಂದು ಆಗ್ರಸಿದ್ದಾರೆ.ಪಿಡಿಓ ರವರು ಕೂಡಲೇ ಕಾರ್ಯಪ್ರವೃತ್ತರಾಗುತ್ತೇವೆ ಎನ್ನುವ ಭರವಸೆ ನೀಡಿದ್ದಾರೆ.ಈ ಸಂದರ್ಭದಲ್ಲಿ ಟ್ರಸ್ಟಿನ ಪದಾಧಿಕಾರಿಗಳಾದ ಉಮೇಶ್ ಕೋಡಿಬೈಲು,ಅನಿಲ್ ತೆಂಕಿಲ,ವಿಶ್ವನಾಥ ಬಲ್ಯಾಯ,ಜಯರಾಮ ಪೂಜಾರಿ,ಲಕ್ಷ್ಮೀಪ್ರಸಾದ್ ಆನಾಜೆ,ಅವಿನಾಶ್ ಪುರುಷರಕಟ್ಟೆ,ರಾಕೇಶ್ ಓಜಾಲ ಉಪಸ್ಥಿತರಿದ್ದರು.
ರಸ್ತೆಯಲ್ಲಿ ಚರಂಡಿ ಇಲ್ಲದೆ ನೀರು ಹರಿದು ಡಮಾರು ಎದ್ದು ಹೋಗಿದ್ದು ರಸ್ತೆ ಬದಿ ಚರಂಡಿ ಇಲ್ಲದೆ ನೀರು ರಸ್ತೆ ಗೆ ಹರಿಯುದರಿಂದ ಎಲ್ಲಡೆ ರಸ್ತೆಗಳು ಹಾಳಾಗುತಿದ್ದು ಮುಖ್ಯವಾಗಿ ಕೆಲವು ಕಡೆ ಮನೆಗಳಿಂದ ರಸ್ತೆಗೆ ನೀರು ಬಿಡುದರಿಂದ ರಸ್ತೆ ಬದಿ ಕಣಿಗಳು ಮುಚ್ಚಿ ನೀರು ನಿಲ್ಲುತ್ತೆ.



























