ವಿಟ್ಲ: ನೀಟ್ ಹೋರಾಟವನ್ನು ಅವಹೇಳನ ಮಾಡುವ ಉದ್ದೇಶದಿಂದ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ ಆರೋಪದಡಿ ವಿಟ್ಲ ಪೋಲೀಸರು ಬಂಧಿಸಿದ್ದ ಕೇಪು ಗ್ರಾಮದ ನಿವಾಸಿ ಭರತ್ (36) ಇವರನ್ನು ಬಿಡುಗಡೆ ಮಾಡಿ ಬಂಟ್ವಾಳದ ಪ್ರಥಮ ದರ್ಜೆ ನ್ಯಾಯಾಲಯದ ನ್ಯಾಯಾಧೀಶರು ಆದೇಶಿಸದ್ದಾರೆ. ಈ ಹಿನ್ನೆಲೆಯಲ್ಲಿ ಗುರುವಾರ ಸಂಜೆ ಬಂಧಿತನಾಗಿದ್ದ ಭರತ್ ಇಂದು ಸಂಜೆ ಬಿಡುಗಡೆಗೊಂಡಿದ್ದಾರೆ.
ಭರತ್ ಅವರ ಪರವಾಗಿ ಖ್ಯಾತ ನ್ಯಾಯವಾದಿ ಶ್ರೀಕೃಷ್ಣ ಕೇಪು ಇವರು ವಾದಿಸಿದರು.
ಈ ಸಂದರ್ಭ ಭಾರತೀಯ ಜನತಾ ಪಕ್ಷ ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ದಯಾನಂದ ಉಜಿರೆಮಾರ್, ಉಪಾಧ್ಯಕ್ಷರಾದ ಹರಿಪ್ರಸಾದ್ ಯಾದವ್, ಕಾರ್ಯದರ್ಶಿಗಳಾದ ಶ್ರೀ ಕೃಷ್ಣ ವಿಟ್ಲ, ಪುನೀತ್ ಮಾಡತ್ತಾರ್, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಯಾದ ನಿತಿನ್ ಬೋಡ್ಡೋಣಿ, ಶರತ್ ಯನ್ ಎಸ್, ರಾಜೇಶ್ ಕರವೀರ, ರಾಜೀವ, ರವಿಶಂಕರ್ ವಿಟ್ಲ,ಚಂದ್ರಹಾಸ, ರಾಜೇಶ್ ಅನ್ನಮೂಲೆ, ಸತೀಶ್ ವಿಟ್ಲ, ಹರೀಶ್ ಕೇಪು ಸಹಕರಿಸಿದರು.























