ಪುತ್ತೂರು: ಶಾಸಕ ಅಶೋಕ್ ರೈ ಅವರ ವಿರುದ್ಧ ಹಕೀಂ ಕೂರ್ನಡ್ಕ ಅವರು ಪತ್ರಿಕಾಗೋಷ್ಟಿಗೆಂದು ಸೆ.1ರಂದು ಮಧ್ಯಾಹ್ನ ಗಂಟೆಗೆ 3ಕ್ಕೆ ಆಗಮಿಸಿ ಪತ್ರಿಕಾಗೋಷ್ಡಿ ನಡೆಸಲು ಸಿದ್ದಪಡಿಸುತ್ತಿದ್ದಾಗ ಶಾಸಕರ ತೇಜೋವಧೆ ಮಾಡುತ್ತಿರುವುದಾಗಿ ಆರೋಪಿಸಿ ಶಾಸಕರ ಬೆಂಬಲಿಗರು ಪತ್ರಿಕಾಭವನದ ಮುಂದೆ ಜಮಾಯಿಸಿ ಹಕೀಂ ಅವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಈ ಸಂದರ್ಭ ಶಾಸಕರು ಕೂಡಾ ಸ್ಥಳಕ್ಕೆ ಬಂದು ಕಾಂಗ್ರೆಸ್ ಕಾರ್ಯಕರ್ತರನ್ನು ಸಮಾಧಾನ ಪಡಿಸಿದರು. ಈ ನಡುವೆ ಹಕೀಂ ಕೂರ್ನಡ್ಕ ಅವರು ಪತ್ರಿಕಾಗೋಷ್ಡಿ ನಡೆಸಿದರು. ಪತ್ರಿಕಾಗೋಷ್ಟಿ ಮುಗಿಯುವ ವೇಳೆ ನೂರಾರು ಮಂದಿ ಕಾರ್ಯಕರ್ತರು ಜಮಾಯಿಸಿದ್ದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಕೀಂ ಕೂರ್ನಡ್ಕ ಅವರನ್ನು ಭದ್ರತೆಯ ಮೂಲಕ ಪೊಲೀಸ್ ಜೀಪಿನಲ್ಲೇ ಕರೆದೊಯ್ದರು.
ಘಟನೆಯ ಕುರಿತು ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈ ಕಾರ್ಯಕರ್ತರು ಹಾಗೂ ಕೆಲವರು ಊಟಕ್ಕೆ ಇಂದಿರಾ ಕ್ಯಾಂಟೀನ್ ಗೆ ತೆರಳುತ್ತಿದ್ದ ವೇಳೆ ಹಕೀಂ ಕೂರ್ನಡ್ಕ ಎಂಬವರು ಅವರನ್ನು ಹೀಯಾಳಿಸಿ ಮಾತನಾಡಿ, ನಿಮ್ಮ ಜಾತಕವನ್ನೆಲ್ಲ ಇವತ್ತು ಪ್ರೆಸ್ ನಲ್ಲಿ ಜಾಹೀರಾತು ಮಾಡ್ತೇನೆ ನನ್ನನ್ನು ಪಕ್ಷದಿಂದ ಉಚ್ಚಾಟನೆ ಮಾಡುವವರು ಯಾರಿದ್ದಾರೆ.? ನನ್ನ ಬಗ್ಗೆ ಪ್ರಕಟಣೆ ಕೊಟ್ಟಿದ್ದಾರೆ ಅವರಿಗೆ ಬುದ್ಧಿ ಕಳಿಸ್ತೇನೆ ಎಂದೆಲ್ಲಾ ಪ್ರಚೋದನಾಕಾರಿಯಾಗಿ ಮಾತನಾಡಿ, ಅವರ ತಂದೆ,ತಾಯಿ ಹೆಂಡತಿ ಬಗ್ಗೆ ಅವಹೇಳನವಾಗಿ ಮಾತನಾಡಿದ್ದಾರೆ ಎಂದು ಕಾರ್ಯಕರ್ತರು ಹೇಳಿದ್ದಾರೆ.
ಮಹಿಳೆಯರಿಗೆ ಕೀಳುಮಟ್ಟದ ಮೆಸೇಜ್ ಕಳುಹಿಸುವುದು, ಅವರ ಬಗ್ಗೆ ಬಗ್ಗೆ ಕೀಳಾಗಿ ಮಾತನಾಡುವುದು ನಿಮ್ಮನ್ನು ನೋಡ್ಕೊಳ್ತೇನೆ ನನಗೆ ದೊಡ್ಡ ದೊಡ್ಡ ಅಧಿಕಾರಿಗಳ ಪರಿಚಯ ಇದೆ. ನನ್ನನ್ನು ಮುಟ್ಟಲು ಯಾರಿಂದಲೂ ಸಾಧ್ಯವಿಲ್ಲ ಹೀಗೆಲ್ಲಾ ಕಾರ್ಯಕರ್ತರ ಎದುರು ಮಾತನಾಡಿದಾಗ ಅದನ್ನು ಕೇಳುವ ಸಲುವಾಗಿ ಕೆಲವರು ಆಗಮಿಸಿದ್ದು, ಈ ವೇಳೆ ಕೆಲ ಚರ್ಚೆಗಳು ನಡೆದಿದೆ. ನಾನು ಆಸ್ಪತ್ರೆಗೆ ಹಣ್ಣು-ಹಂಪಲು ನೀಡಲು ಬರುತ್ತಿದ್ದು, ಕಾರು ನಿಲ್ಲಿಸಿ ಅವರನ್ನೆಲ್ಲಾ ವಾಪಸ್ಸು ಕಳುಹಿಸುವ ಕಾರ್ಯ ನಿರ್ವಹಿಸಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಅವರನ್ನು ಹಿಂತಿರುಗಿ ಕಳುಹಿಸುವ ಕೆಲಸವನ್ನು ಮಾಡಿದ್ದೇನೆ.
ಒಬ್ಬರನ್ನು ಹೀಯಾಳಿಸಿ ಏನೂ ಆಗುವಂತದ್ದು ಇಲ್ಲ. ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂಬುದು ನಮ್ಮ ಉದ್ದೇಶ. ಈ ಕುರಿತು ಇಲಾಖೆ ಸರಿಯಾದ ಕ್ರಮ ಕೈಗೊಳ್ಳಬೇಕು. ಅವರಿಗೆ ಸರಿಯಾದ ಬುದ್ಧಿ ಹೇಳ್ಬೇಕು. ಯಾವುದೇ ಅಹಿತಕರ ಘಟನೆಗಳು ನಡೆಯಬಾರದು ಎಂದು ಶಾಸಕರು ಹೇಳಿದರು.

























