ಪುತ್ತೂರು: ಯುವ ಉದ್ಯಮಿ ಸಹಜ್ ರೈ ಬಳೆಜ್ಜ ಅವರ ನೇತೃತ್ವದಲ್ಲಿ ವಿಜಯ ಸಾಮ್ರಾಟ್ ಪುತ್ತೂರು ಇದರ ಆಶ್ರಯದಲ್ಲಿ ಅ.17 ಮತ್ತು 18ರಂದು ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದ ದೇವರ ಮಾರು ಗದ್ದೆಯಲ್ಲಿ ನಡೆಯಲಿರುವ ‘ಪುತ್ತೂರುದ ಪಿಲಿಗೊಬ್ಬು ಸೀಸನ್-4’ರ ಆಮಂತ್ರಣ ಪತ್ರಿಕೆಯು ಸೆ.6ರಂದು ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬಿಡುಗಡೆಗೊಂಡಿತು.
ಪ್ರಾರಂಭದಲ್ಲಿ ದೇವರಿಗೆ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದ ಬಳಿಕ ಮಧ್ಯಸ್ಥ ಶಶಾಂಕ್ ನೆಲ್ಲಿತ್ತಾಯ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು, ಯುವ ಉದ್ಯಮಿ ಸಹಜ್ ರೈ ಅವರ ನೇತೃತ್ವದಲ್ಲಿ ವಿಜಯ ಸಾಮ್ರಾಟ್ ವತಿಯಿಂದ ಕಳೆದ ಮೂರು ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಿದೆ. ಯುವಕರ ಬೃಹತ್ ಸಂಘಟನೆಯ ಮೂಲಕ ಅದ್ಧೂರಿಯಾಗಿ ನಡೆಯುತ್ತಿದೆ. ಪುತ್ತೂರಿನ ಹೆಮ್ಮೆಯ ಕಾರ್ಯಕ್ರಮವಾಗಿದ್ದು ಯೋಜನೆಗಿಂತಲೂ ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು.
ವಿಜಯ ಸಾಮ್ರಾಟ್ನ ಸ್ಥಾಪಕಾಧ್ಯಕ್ಷರು, ಪಿಲಿಗೊಬ್ಬು ಸಮಿತಿ ಗೌರವಾಧ್ಯಕ್ಷರಾಗಿರುವ ಸಹಜ್ ರೈ ಬಳೆಜ್ಜ ಮಾತನಾಡಿ, ಹುಲಿ ಕುಣಿತ ದೈವಿಕ ಹಿನ್ನೆಲೆಯಿರುವ ಕಲೆ. ತುಳುವರು ಆರಾಧಿಸುವ ಕಲೆ. ವಿಜಯ ಸಾಮ್ರಾಟ್ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸುವ ಜೊತೆಗೆ ಸಾಂಸ್ಕೃತಿವಾಗಿಯೂ ಉತ್ತಮ ವೇದಿಕೆ ಒದಗಿಸುವ ಉದ್ದೇಶದಲ್ಲಿ ಪುತ್ತೂರುದ ಪಿಲಿಗೊಬ್ಬು ಅನ್ನು ಕಳೆದ 3 ವರ್ಷಗಳಿಂದ ಆಯೋಜಿಸಲಾಗುತ್ತಿದೆ. ಇದರ ಜೊತೆಗೆ ಫುಡ್ಫೆಸ್ಟ್ ಮೂಲಕ ವಿವಿಧ ಖಾದ್ಯಗಳನ್ನು ಪರಿಚಯಿಸುವ ಕೆಲಸವಾಗುತ್ತಿದೆ. ಪುತ್ತೂರುದ ಪಿಲಿಗೊಬ್ಬು ಸೀಸನ್ 3ರ ತನಕ ಮಹಾಲಿಂಗೇಶ್ವರ ದೇವರ ದಯೆ, ಪುತ್ತೂರಿನ ಮಹಾಜನತೆಯ ಸಹಕಾರದಲ್ಲಿ ಅದ್ಬುತವಾಗಿ ನಡೆದಿದೆ. ಈ ವರ್ಷ ಸೀಸನ್-4 ಅ.17 ಹಾಗೂ 18ರಂದು ನಡೆಯಲಿದೆ. ಈ ವರ್ಷದ ಕಾರ್ಯಕ್ರಮಗಳಿಗೂ ಪುತ್ತೂರಿನ ಜನತೆ ಸಹಕರಿಸುವಂತೆ ವಿನಂತಿಸಿದರು.
ವಿಜಯ ಸಾಮ್ರಾಟ್ನ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷರಾಗಿರುವ ಪುತ್ತೂರು ಉಮೇಶ್ ನಾಯಕ್ ಮಾತನಾಡಿ ಫುಡ್ಫೆಸ್ಟಿವಲ್ನಲ್ಲಿ ಪುತ್ತೂರಿನ ಮಹಾಜನತೆ ಭಾಗಿಯಾಗಿ ಸಂಭ್ರಮಿಸುವಂತೆ ಅವರು ಮನವಿ ಮಾಡಿದರು.
ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ನಿರ್ದೇಶಕರು, ದ.ಕ ಹಾಲು ಒಕ್ಕೂಟದ ನಿರ್ದೇಶಕರು ಆಗಿರುವ ಎಸ್ಬಿ. ಜಯರಾಮ ರೈ ಬಳೆಜ್ಜ, ವಿಜಯ ಸಾಮ್ರಾಟ್ನ ಪ್ರಧಾನ ಕಾರ್ಯದರ್ಶಿ ಶರತ್ ಆಳ್ವ ಕೂರೇಲು, ಕಾರ್ಯಾಧ್ಯಕ್ಷ ರತನ್ ಕುಂಬ್ರ, ಸಹ ಸಂಚಾಲಕ ರಾಜೇಶ್ ರೈ ಪರ್ಪುಂಜ, ಉಪಾಧ್ಯಕ್ಷರಾದ ಶಂಕರ್ ಭಟ್ ಈಶಾನ್ಯ, ಪವನ್ ಕಂಬಳತ್ತಡ್ಡ, ದಿನೇಶ್ ವಾಸುಕಿ, ಕಿರಣ್ ರೈ ಬಲ್ನಾಡು, ನಿತೇಶ್ ನೆಲಪ್ಪಾಲು, ಕಾರ್ಯದರ್ಶಿಗಳಾದ ಸುರೇಶ್ ಪಿದಪಟ್ಲ, ಧನುಷ್ ಹೊಸಮನೆ, ಆದರ್ಶ ಶೆಟ್ಟಿ ಉಪ್ಪಿನಂಗಡಿ, ಪ್ರಜ್ವಲ್ ಎಂ.ಎಸ್., ಜತೆ ಕಾರ್ಯದರ್ಶಿಗಳಾದ ಆನಂದ ಗೌಡ ತೆಂಕಿಲ, ಪ್ರೀತಮ್ ಶೆಟ್ಟಿ ಪೆರ್ನೆ, ಗೌತಮ್ ಗೌಡ, ಸಂಘಟನಾ ಕಾರ್ಯದರ್ಶಿ ಮಹೇಶ್ ಆಚಾರ್ಯ, ಕೋಶಾಧಿಕಾರಿಗಳಾದ ಅಶೋಕ್ ಅಡೂರು, ರಾಜೇಶ್ ಕೆ.ಗೌಡ, ಕಾರ್ಯಕಾರಿ ಸಮಿತಿ ಸದಸ್ಯರಾದ ಉಮೇಶ್ ಪೂಜಾರಿ ಮುರುವ, ಆದೇಶ್ ಉಪ್ಪಿನಂಗಡಿ, ಹರೀಶ್ ರೈ ಜಾರತ್ತಾರು, ಚಂದ್ರಶೇಖರ ರೈ ಸಣಂಗಲ, ಪ್ರದೀಪ್ ರೈ ಕರ್ನೂರು, ನಿತಿನ್ ಬೊಡ್ಡೋಣಿ, ಸವಿನ್ ಗೌಡ, ಪ್ರದೀಪ್ ರೈ ಮಾಡಾವು, ಸಚಿನ್ ಶೆಟ್ಟಿ ಪಟ್ಟೆ, ಹರೀಶ್ ಕುಲಾಲ್ ಬೆದ್ರಾಳ, ಜಗದೀಶ್ ಜೆ.ಆರ್ ನಾಯಕ್, , ಭರತ್ ಚನಿಲ, ಶರತ್ ಗೌಡ ಮುದಲಾಜೆ, ಉಮೇಶ್ ಹಡೀಲು, ಕಿಶನ್ ರೈ, ಚರಣ್ ರೈ ಮಠ, ಲೋಹಿತ್ ಗೌಡ ಗುತ್ತು, ಭರತೇಶ್ ಪೂಜಾರಿ, ಅನೂಪ್ ಪೆರಿಗೇರಿ, ರಂಜಿತ್ ಗೌಡ ಪಟ್ಟೆ ಹಾಗೂ ಹಲವು ಮಂದಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

























