• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
ಪುತ್ತೂರಿನ ಬಿರುಮಲೆ ಬೆಟ್ಟ ಝಗಮಗಿಸಲಿದೆ: 2 ಕೋಟಿ ವೆಚ್ಚದಲ್ಲಿ 4 ಡಿಜಿಟಲ್ ಲೈಟ್ ಟ್ರೀ ನಿರ್ಮಾಣ ಪ್ರವಾಸೋದ್ಯಮಕ್ಕೆ ಹೊಸ ಆಕರ್ಷಣೆ

ಪುತ್ತೂರಿನ ಬಿರುಮಲೆ ಬೆಟ್ಟ ಝಗಮಗಿಸಲಿದೆ: 2 ಕೋಟಿ ವೆಚ್ಚದಲ್ಲಿ 4 ಡಿಜಿಟಲ್ ಲೈಟ್ ಟ್ರೀ ನಿರ್ಮಾಣ ಪ್ರವಾಸೋದ್ಯಮಕ್ಕೆ ಹೊಸ ಆಕರ್ಷಣೆ

October 9, 2025
ಕೆಂಪು ಕೋಟೆ ಬಳಿ ಕಾರಿನಲ್ಲಿ ಸ್ಫೋಟ; 9 ಮಂದಿ ಸಾವು, ಹಲವರಿಗೆ ಗಾಯ

ಕೆಂಪು ಕೋಟೆ ಬಳಿ ಕಾರಿನಲ್ಲಿ ಸ್ಫೋಟ; 9 ಮಂದಿ ಸಾವು, ಹಲವರಿಗೆ ಗಾಯ

November 10, 2025
ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಸಾಮೂಹಿಕ ವಿವಾಹ: ನವ ಜೋಡಿಗಳಿಗೆ ತಾಂಬೂಲ ಶಾಸ್ತ್ರ ಹಾಗೂ ಮಂಗಳವಸ್ತು ವಿತರಣಾ ಕಾರ್ಯಕ್ರಮ

ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಸಾಮೂಹಿಕ ವಿವಾಹ: ನವ ಜೋಡಿಗಳಿಗೆ ತಾಂಬೂಲ ಶಾಸ್ತ್ರ ಹಾಗೂ ಮಂಗಳವಸ್ತು ವಿತರಣಾ ಕಾರ್ಯಕ್ರಮ

November 10, 2025
ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಕಾರ್ಯಾಧ್ಯಕ್ಷರಾಗಿ ವಿಕ್ರಂ ಶೆಟ್ಟಿ ಅಂತರ

ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಕಾರ್ಯಾಧ್ಯಕ್ಷರಾಗಿ ವಿಕ್ರಂ ಶೆಟ್ಟಿ ಅಂತರ

November 10, 2025
ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರಿಗೆ ಪ್ರತಿ ತಿಂಗಳು ಶುದ್ಧ ಎಳ್ಳೆಣ್ಣೆ ಅಭಿಷೇಕ

ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರಿಗೆ ಪ್ರತಿ ತಿಂಗಳು ಶುದ್ಧ ಎಳ್ಳೆಣ್ಣೆ ಅಭಿಷೇಕ

November 10, 2025
ಕಣಿಯೂರು ಮಲೆಂಗಲ್ಲು ಶ್ರೀ ಉಮಾಮಹೇಶ್ವರ ಬ್ರಹ್ಮ ಕಲಶೋತ್ಸವದ ಸಮಿತಿ ಪುನರ್ ರಚನೆ

ಕಣಿಯೂರು ಮಲೆಂಗಲ್ಲು ಶ್ರೀ ಉಮಾಮಹೇಶ್ವರ ಬ್ರಹ್ಮ ಕಲಶೋತ್ಸವದ ಸಮಿತಿ ಪುನರ್ ರಚನೆ

November 10, 2025
ಲಾಯಿಲ: (ನ.09) 32 ವರ್ಷಗಳ ಇತಿಹಾಸವಿರುವ ಲಾಯಿಲ ಗ್ರಾಮ ಕನ್ನಾಜೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ ಮುಂದಿನ 2 ವರ್ಷದ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ

ಲಾಯಿಲ: (ನ.09) 32 ವರ್ಷಗಳ ಇತಿಹಾಸವಿರುವ ಲಾಯಿಲ ಗ್ರಾಮ ಕನ್ನಾಜೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ ಮುಂದಿನ 2 ವರ್ಷದ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ

November 10, 2025
ಆರ್‌ಸಿಬಿ ಖರೀದಿಗೆ ಆಸಕ್ತಿ ತೋರಿಸಿದ ಇಬ್ಬರು ಬಿಲಿಯನೇರ್‌ ಕನ್ನಡಿಗ ಉದ್ಯಮಿಗಳು

ಆರ್‌ಸಿಬಿ ಖರೀದಿಗೆ ಆಸಕ್ತಿ ತೋರಿಸಿದ ಇಬ್ಬರು ಬಿಲಿಯನೇರ್‌ ಕನ್ನಡಿಗ ಉದ್ಯಮಿಗಳು

November 10, 2025
ಕೆಂಪುಕಲ್ಲು ರಾಜಾಧನ ಶೇ. 58.82ರಷ್ಟು ಇಳಿಕೆ; ಗಣಿ ಉದ್ಯಮಿಗಳಿಂದ ಮುಂದುವರಿದ ಸುಲಿಗೆ

ಕೆಂಪುಕಲ್ಲು ರಾಜಾಧನ ಶೇ. 58.82ರಷ್ಟು ಇಳಿಕೆ; ಗಣಿ ಉದ್ಯಮಿಗಳಿಂದ ಮುಂದುವರಿದ ಸುಲಿಗೆ

November 10, 2025
ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮುಸ್ಲಿಮರು ಸಾಮೂಹಿಕ ನಮಾಜ್; ಸಾರ್ವಜನಿಕರ ಆಕ್ರೋಶ

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮುಸ್ಲಿಮರು ಸಾಮೂಹಿಕ ನಮಾಜ್; ಸಾರ್ವಜನಿಕರ ಆಕ್ರೋಶ

November 10, 2025
ದ.ಕ ಜಿಲ್ಲಾ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಪುಷ್ಪರಾಜ್ ಬಿ.ಎನ್ ಆಯ್ಕೆ

ದ.ಕ ಜಿಲ್ಲಾ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಪುಷ್ಪರಾಜ್ ಬಿ.ಎನ್ ಆಯ್ಕೆ

November 10, 2025
ಬೆಂಗಳೂರು-ಮಂಗಳೂರು ಹೈಸ್ಪೀಡ್‌ ಕಾರಿಡಾರ್‌  ಶಿರಾಡಿ ಘಾಟಿಯಲ್ಲಿ ರೈಲು-ಹೆದ್ದಾರಿ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ತಜ್ಞರ ಜಂಟಿ ಸಮಿತಿ ರಚನೆ: ಕ್ಯಾ.ಚೌಟ

ಬೆಂಗಳೂರು-ಮಂಗಳೂರು ಹೈಸ್ಪೀಡ್‌ ಕಾರಿಡಾರ್‌ ಶಿರಾಡಿ ಘಾಟಿಯಲ್ಲಿ ರೈಲು-ಹೆದ್ದಾರಿ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ತಜ್ಞರ ಜಂಟಿ ಸಮಿತಿ ರಚನೆ: ಕ್ಯಾ.ಚೌಟ

November 8, 2025
ಕುಖ್ಯಾತಿ ಸೀರಿಯಲ್ ರೇಪಿಸ್ಟ್, ಕೊಲೆಗಡುಕ ಉಮೇಶ್ ರೆಡ್ಡಿಗೆ ಜೈಲು ಸ್ವರ್ಗ :ಇದೇ ಜೈಲಲ್ಲಿ ಇರೋ ನಟ ದರ್ಶನ್ ಮಾತ್ರ ಒಂದು ದಿಂಬು, ಹಾಸಿಗೆಗೂ ಪರದಾಡುತ್ತಿದ್ದಾರಂತೆ ಇದೇನಿದು ವಿಚಿತ್ರ?

ಕುಖ್ಯಾತಿ ಸೀರಿಯಲ್ ರೇಪಿಸ್ಟ್, ಕೊಲೆಗಡುಕ ಉಮೇಶ್ ರೆಡ್ಡಿಗೆ ಜೈಲು ಸ್ವರ್ಗ :ಇದೇ ಜೈಲಲ್ಲಿ ಇರೋ ನಟ ದರ್ಶನ್ ಮಾತ್ರ ಒಂದು ದಿಂಬು, ಹಾಸಿಗೆಗೂ ಪರದಾಡುತ್ತಿದ್ದಾರಂತೆ ಇದೇನಿದು ವಿಚಿತ್ರ?

November 8, 2025
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Tuesday, November 11, 2025
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಸಾಮೂಹಿಕ ವಿವಾಹ: ನವ ಜೋಡಿಗಳಿಗೆ ತಾಂಬೂಲ ಶಾಸ್ತ್ರ ಹಾಗೂ ಮಂಗಳವಸ್ತು ವಿತರಣಾ ಕಾರ್ಯಕ್ರಮ

    ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಸಾಮೂಹಿಕ ವಿವಾಹ: ನವ ಜೋಡಿಗಳಿಗೆ ತಾಂಬೂಲ ಶಾಸ್ತ್ರ ಹಾಗೂ ಮಂಗಳವಸ್ತು ವಿತರಣಾ ಕಾರ್ಯಕ್ರಮ

    ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಕಾರ್ಯಾಧ್ಯಕ್ಷರಾಗಿ ವಿಕ್ರಂ ಶೆಟ್ಟಿ ಅಂತರ

    ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಕಾರ್ಯಾಧ್ಯಕ್ಷರಾಗಿ ವಿಕ್ರಂ ಶೆಟ್ಟಿ ಅಂತರ

    ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರಿಗೆ ಪ್ರತಿ ತಿಂಗಳು ಶುದ್ಧ ಎಳ್ಳೆಣ್ಣೆ ಅಭಿಷೇಕ

    ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರಿಗೆ ಪ್ರತಿ ತಿಂಗಳು ಶುದ್ಧ ಎಳ್ಳೆಣ್ಣೆ ಅಭಿಷೇಕ

    ಕಣಿಯೂರು ಮಲೆಂಗಲ್ಲು ಶ್ರೀ ಉಮಾಮಹೇಶ್ವರ ಬ್ರಹ್ಮ ಕಲಶೋತ್ಸವದ ಸಮಿತಿ ಪುನರ್ ರಚನೆ

    ಕಣಿಯೂರು ಮಲೆಂಗಲ್ಲು ಶ್ರೀ ಉಮಾಮಹೇಶ್ವರ ಬ್ರಹ್ಮ ಕಲಶೋತ್ಸವದ ಸಮಿತಿ ಪುನರ್ ರಚನೆ

    ಲಾಯಿಲ: (ನ.09) 32 ವರ್ಷಗಳ ಇತಿಹಾಸವಿರುವ ಲಾಯಿಲ ಗ್ರಾಮ ಕನ್ನಾಜೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ ಮುಂದಿನ 2 ವರ್ಷದ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ

    ಲಾಯಿಲ: (ನ.09) 32 ವರ್ಷಗಳ ಇತಿಹಾಸವಿರುವ ಲಾಯಿಲ ಗ್ರಾಮ ಕನ್ನಾಜೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ ಮುಂದಿನ 2 ವರ್ಷದ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ

    ಕೆಂಪುಕಲ್ಲು ರಾಜಾಧನ ಶೇ. 58.82ರಷ್ಟು ಇಳಿಕೆ; ಗಣಿ ಉದ್ಯಮಿಗಳಿಂದ ಮುಂದುವರಿದ ಸುಲಿಗೆ

    ಕೆಂಪುಕಲ್ಲು ರಾಜಾಧನ ಶೇ. 58.82ರಷ್ಟು ಇಳಿಕೆ; ಗಣಿ ಉದ್ಯಮಿಗಳಿಂದ ಮುಂದುವರಿದ ಸುಲಿಗೆ

    ದ.ಕ ಜಿಲ್ಲಾ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಪುಷ್ಪರಾಜ್ ಬಿ.ಎನ್ ಆಯ್ಕೆ

    ದ.ಕ ಜಿಲ್ಲಾ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಪುಷ್ಪರಾಜ್ ಬಿ.ಎನ್ ಆಯ್ಕೆ

    ಬೆಂಗಳೂರು-ಮಂಗಳೂರು ಹೈಸ್ಪೀಡ್‌ ಕಾರಿಡಾರ್‌  ಶಿರಾಡಿ ಘಾಟಿಯಲ್ಲಿ ರೈಲು-ಹೆದ್ದಾರಿ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ತಜ್ಞರ ಜಂಟಿ ಸಮಿತಿ ರಚನೆ: ಕ್ಯಾ.ಚೌಟ

    ಬೆಂಗಳೂರು-ಮಂಗಳೂರು ಹೈಸ್ಪೀಡ್‌ ಕಾರಿಡಾರ್‌ ಶಿರಾಡಿ ಘಾಟಿಯಲ್ಲಿ ರೈಲು-ಹೆದ್ದಾರಿ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ತಜ್ಞರ ಜಂಟಿ ಸಮಿತಿ ರಚನೆ: ಕ್ಯಾ.ಚೌಟ

    ಕುಕ್ಕೆಯ ಸುಬ್ರಹ್ಮಣ್ಯ ಪೂಜೆಯ ವರ ಪ್ರಸಾದ: ಮುದ್ದಾದ ಗಂಡು ಮಗುವಿಗೆ ಜನ್ಮವಿತ ಕತ್ರಿನಾ ಕೈಫ್​​

    ಕುಕ್ಕೆಯ ಸುಬ್ರಹ್ಮಣ್ಯ ಪೂಜೆಯ ವರ ಪ್ರಸಾದ: ಮುದ್ದಾದ ಗಂಡು ಮಗುವಿಗೆ ಜನ್ಮವಿತ ಕತ್ರಿನಾ ಕೈಫ್​​

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ದಕ್ಷಿಣ ಕನ್ನಡ

ಪುತ್ತೂರಿನ ಬಿರುಮಲೆ ಬೆಟ್ಟ ಝಗಮಗಿಸಲಿದೆ: 2 ಕೋಟಿ ವೆಚ್ಚದಲ್ಲಿ 4 ಡಿಜಿಟಲ್ ಲೈಟ್ ಟ್ರೀ ನಿರ್ಮಾಣ ಪ್ರವಾಸೋದ್ಯಮಕ್ಕೆ ಹೊಸ ಆಕರ್ಷಣೆ

ಪುತ್ತೂರಿನ ಬಿರುಮಲೆ ಬೆಟ್ಟದಲ್ಲಿ ಪ್ರವಾಸೋದ್ಯಮಕ್ಕೆ ಹೊಸ ಆಕರ್ಷಣೆ.

by ಪ್ರಜಾಧ್ವನಿ ನ್ಯೂಸ್
October 9, 2025
in ದಕ್ಷಿಣ ಕನ್ನಡ, ಪುತ್ತೂರು, ಪ್ರಾದೇಶಿಕ, ಮನೋರಂಜನೆ, ಲೈಫ್ ಸ್ಟೈಲ್, ಸಾಂಸ್ಕೃತಿಕ
0
ಪುತ್ತೂರಿನ ಬಿರುಮಲೆ ಬೆಟ್ಟ ಝಗಮಗಿಸಲಿದೆ: 2 ಕೋಟಿ ವೆಚ್ಚದಲ್ಲಿ 4 ಡಿಜಿಟಲ್ ಲೈಟ್ ಟ್ರೀ ನಿರ್ಮಾಣ ಪ್ರವಾಸೋದ್ಯಮಕ್ಕೆ ಹೊಸ ಆಕರ್ಷಣೆ
15
SHARES
43
VIEWS
ShareShareShare

ಪುತ್ತೂರು‌: ಮುತ್ತಿನ ಊರು ಪುತ್ತೂರು‌  ಮಲೆಕಾಡುಗಳ ಚಪ್ಪರದಡಿಯ ಸುಂದರ ನಗರ. ತನ್ನ ಅದ್ಭುತ ಗಿರಿಸೌಷ್ಟವ್ಯದೊಂದಿಗೆ ಕಂಗೊಳಿಸೋ ದಟ್ಟ ಕಾಡುಗಳ ಮೇಲೆ ಎತ್ತರದ ಬಿಳಿಯ ಆಕೃತಿಯೊಂದು  ಕಣ್ಸೆಳೆಯುತ್ತಿದೆ.‌ ಇದು ಬೆಳಕಿನ ಮರ!‌ ಹೌದು, ನಿಜ. ಆದರೆ ಇದು ಹುಟ್ಟಿದ ಮರವಲ್ಲ, ಕಟ್ಟಿದ ಮರ! ಈ ಮರದ  ಸುತ್ತಲೂ ಈಗ ಬಿಳಿಪು ಬಿರಡೆಯ ದೀಪಗಳ ಸಂಯೋಜನೆಯಾಗಿದ್ದು ಝಗ್ಗನೇ ಝಗಮಗಿಸಿ ಬೆಟ್ಟಕ್ಕೆ  ಜೀವ ತುಂಬಲು ಈ ಬೆಳಕಿನ ಮರ ಸಜ್ಜಾಗಿದೆ!

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ನಗರ ಮಧ್ಯೆ ಇರುವಂತಹ ಬಿರುಮಲೆ ಬೆಟ್ಟದ ಅಭಿವೃದ್ಧಿ ಕಾಮಗಾರಿಗಳು ಭರದಿಂದ ಸಾಗುತ್ತಿದೆ. ಪ್ರದೇಶದ ಅಭಿವೃದ್ಧಿಗಾಗಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಸರಕಾರದಿಂದ ಸುಮಾರು 2 ಕೋಟಿ ರೂಪಾಯಿಗಳ ಅನುದಾನವನ್ನು ತಂದು ಬೆಟ್ಟದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ್ದಾರೆ‌. ಗಾಂಧಿ ಮಂಟಪ, ಅರಣ್ಯ ಇಲಾಖೆ ವತಿಯಿಂದ ನಿರ್ಮಿಸಲಾಗಿರುವ ಸಾಲುಮರದ ತಿಮ್ಮಕ್ಕ ಪಾರ್ಕ್ ಈ ಬೆಟ್ಟದಲ್ಲಿ ಈಗಾಗಲೇ ಇದ್ದು, ಇನ್ನೂ ಹಲವು ಆಕರ್ಷಣೀಯ ಕಾಮಗಾರಿಗಳನ್ನು ಹೊಸದಾಗಿ ಬಂದ 2 ಕೋಟಿ ರೂಪಾಯಿಗಳಲ್ಲಿ ಮಾಡಲಾಗುತ್ತಿದೆ.

ಈ ಆಕರ್ಷಣೆಗಳಲ್ಲಿ ಡಿಜಿಟಲ್ ಲೈಟ್ ಟ್ರೀ ಕೂಡಾ ಒಂದು. ಎತ್ತರದ ಟವರ್ ರೀತಿಯ ಆಕೃತಿಯನ್ನು ನಿರ್ಮಿಸಿ ಈ ಆಕೃತಿಯ ತುಂಬಾ ಬಣ್ಣ ಬಣ್ಣದ ಲೈಟ್ ಗಳನ್ನು ಅಳವಡಿಸಿ, ಇಡೀ ಬೆಟ್ಟದ ಮೇಲೆ ಕಲರ್ ಕಲರ್ ಬಣ್ಣಗಳನ್ನು ಸೃಷ್ಟಿಸುವ ಪ್ರಯತ್ನ ಇದಾಗಿದೆ. ಬಿರುಮಲೆ ಬೆಟ್ಟದಿಂದ ಕೆಳಗೆ ವೀಕ್ಷಿಸುವ ಸಂದರ್ಭದಲ್ಲಿ ಇಡೀ ಪುತ್ತೂರು ಪೇಟೆಯೇ ಇಲ್ಲಿಗೆ ಸ್ಪಷ್ಟವಾಗಿ ಕಾಣುತ್ತದೆ. ಅದೇ ರೀತಿಯಲ್ಲಿ ಬೆಟ್ಟದ ಮೇಲೆ ಉರಿಯುವ ಈ ಡಿಜಿಟಲ್ ಲೈಟ್ ಟ್ರೀ ಇಡೀ ಪುತ್ತೂರು ನಗರ ಭಾಗಕ್ಕೂ ಕಾಣಿಸಬೇಕು ಎನ್ನುವ ಉದ್ದೇಶದಿಂದ ಈ  ಲೈಟ್ ಮರವನ್ನು ನಿರ್ಮಿಸಲಾಗಿದೆ.

ಒಟ್ಟು 4 ಡಿಜಿಟಲ್ ಲೈಟ್ ಟ್ರೀಗಳನ್ನು ಇಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ಆಕೃತಿಯ ಕಾಮಗಾರಿ ಮುಗಿದಿದ್ದು, ಲೈಟ್ ಗಳನ್ನು ಅಳವಡಿಸುವ ಮತ್ತು ಬಣ್ಣ ಬಳಿಯುವ ಕೆಲಸ ಭರದಿಂದ ಸಾಗುತ್ತಿದೆ. ಶಾಸಕ ಅಶೋಕ್ ಕುಮಾರ್ ರೈ ಫಾರಿನ್ ಟೂರ್ ಹೋಗಿದ್ದ ಸಂದರ್ಭದಲ್ಲಿ ಈ ರೀತಿಯ ಲೈಟ್ ಗಳನ್ನು ನೋಡಿದ್ದ ಹಿನ್ನಲೆಯಲ್ಲಿ ಅದೇ ಮಾದರಿಯಲ್ಲಿ ಪುತ್ತೂರಿನ ಬಿರುಮಲೆ ಬೆಟ್ಟದಲ್ಲೂ ಲೈಟ್ ಟ್ರೀ ನಿರ್ಮಿಸಬೇಕು ಎನ್ನುವ ಕಾರಣದಿಂದ ಈ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಅಲ್ಲದೆ ಬೆಟ್ಟದ ತುಂಬಾ ವಿವಿಧ ಪ್ರಕಾರದ ಲೈಟ್ ಗಳನ್ನು ಅಳವಡಿಸುವ ಮೂಲಕ ಬಿರುಮಲೆ ಬೆಟ್ಟವನ್ನು ಪ್ರಕಾಶಮಾನ ಸ್ಪಾಟ್ ಆಗಿ ಬದಲಾಯಿಸುವ ಚಿಂತನೆ ಶಾಸಕರದ್ದಾಗಿದೆ.

ಬಿರುಮಲೆ ಬೆಟ್ಟಕ್ಕೆ ಬರುವ ದಾರಿಯುದ್ದಕ್ಕೂ ಬೀದಿ ದೀಪಗಳ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲು ತೀರ್ಮಾನಿಸಲಾಗಿದೆ. ಮಾಣಿ-ಮೈಸೂರು ರಸ್ತೆಯ ದರ್ಬೆ ವೃತ್ತದ ಪಕ್ಕದಿಂದಲೇ ಬಿರುಮಲೆ ಬೆಟ್ಟಕ್ಕೆ ತೆರಳಲು ರಸ್ತೆ ಸಂಪರ್ಕವೂ ಇದೆ.  ಬಿರುಮಲೆ ಬೆಟ್ಟದ ಅಭಿವೃದ್ಧಿಯ ಹಿತದೃಷ್ಟಿಯಿಂದ ಬಿರುಮಲೆ ಅಭಿವೃದ್ಧಿ ಸಮಿತಿಯೂ ಅಸ್ತಿತ್ವದಲ್ಲಿದ್ದು,  ಈ ಸಮಿತಿಯ ನೇತೃತ್ವದಲ್ಲಿ ಎಲ್ಲಾ ಕಾಮಗಾರಿಗಳು ನಡೆಯುತ್ತಿವೆ. ಬಿರುಮಲೆ ಬೆಟ್ಟದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಸಿದ್ಧಗೊಳ್ಳುತ್ತಿರುವ  ಡಿಜಿಟಲ್ ಲೈಟ್ ಟ್ರೀ ದಕ್ಷಿಣ ಕನ್ನಡ ಜಿಲ್ಲೆಗೆ ಹೊಸ ಪ್ರಯತ್ನವೂ ಆಗಲಿದೆ.

HPR Institute Of Nursing And Paramedical Sciences & Friends Beke

ಜಾಹೀರಾತು

SendShare6Share
Previous Post

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗಿಯಾದ ದಕ್ಷಿಣ ಕನ್ನಡ ಸಂಸದ ವಿಶ್ವ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸಿ ದೇಶದ ನಿಲುವನ್ನು ಪ್ರಸ್ತುತಪಡಿಸಿದ ಕ್ಯಾ. ಚೌಟ

Next Post

ಹಳೆಯ ಕ್ರಿಮಿನಲ್‌ಗಳನ್ನು ಮಟ್ಟಹಾಕಲು ದಕ್ಷಿಣ ಕನ್ನಡ ಪೊಲೀಸ್ ಇಲಾಖೆ ವಿಶೇಷ ಕಾರ್ಯಾಚರಣೆ: ಆರೋಪಿಗಳಿಗೆ ಢವ ಢವ, ನಕಲಿ ಜಾಮೀನಿಗೂ ಬ್ರೇಕ್

ಪ್ರಜಾಧ್ವನಿ ನ್ಯೂಸ್

ಪ್ರಜಾಧ್ವನಿ ನ್ಯೂಸ್

Next Post
ಹಳೆಯ ಕ್ರಿಮಿನಲ್‌ಗಳನ್ನು ಮಟ್ಟಹಾಕಲು ದಕ್ಷಿಣ ಕನ್ನಡ ಪೊಲೀಸ್ ಇಲಾಖೆ ವಿಶೇಷ ಕಾರ್ಯಾಚರಣೆ: ಆರೋಪಿಗಳಿಗೆ ಢವ ಢವ, ನಕಲಿ ಜಾಮೀನಿಗೂ ಬ್ರೇಕ್

ಹಳೆಯ ಕ್ರಿಮಿನಲ್‌ಗಳನ್ನು ಮಟ್ಟಹಾಕಲು ದಕ್ಷಿಣ ಕನ್ನಡ ಪೊಲೀಸ್ ಇಲಾಖೆ ವಿಶೇಷ ಕಾರ್ಯಾಚರಣೆ: ಆರೋಪಿಗಳಿಗೆ ಢವ ಢವ, ನಕಲಿ ಜಾಮೀನಿಗೂ ಬ್ರೇಕ್

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

No Result
View All Result
  • ಮುಖಪುಟ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಉದ್ಯೋಗ – ಶಿಕ್ಷಣ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಿನಿಮಾ
  • ಲೈಫ್ ಸ್ಟೈಲ್

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..