• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
ಮನೆ ಕಟ್ಟುವವರಿಗೆ ಕೆಂಪು ಕಲ್ಲು ಸಮಸ್ಯೆ, ರಾಜಸ್ವ ಕಡಿತಗೊಂಡರೂ ಇಳಿಕೆಯಾಗದ ದರ

ಮನೆ ಕಟ್ಟುವವರಿಗೆ ಕೆಂಪು ಕಲ್ಲು ಸಮಸ್ಯೆ, ರಾಜಸ್ವ ಕಡಿತಗೊಂಡರೂ ಇಳಿಕೆಯಾಗದ ದರ

October 17, 2025
ಬೆಳ್ತಂಗಡಿ: ಹತ್ಯಡ್ಕದಲ್ಲಿ ಮತ್ತೆ ಕಾಡಾನೆ ದಾಳಿ ಕೃಷಿ ಹಾನಿ

ಬೆಳ್ತಂಗಡಿ: ಹತ್ಯಡ್ಕದಲ್ಲಿ ಮತ್ತೆ ಕಾಡಾನೆ ದಾಳಿ ಕೃಷಿ ಹಾನಿ

August 5, 2026
ಮದರಸಾದಲ್ಲಿ ಶಿಕ್ಷಣ ಪಡೆದವರು ಭಾರತ್‌ ಮಾತಾ ಕಿ ಜೈ ಎಂಬ ಘೋಷಣೆ ಕೂಗಲ್ಲ – ಕೇಶವ್ ಪ್ರಸಾದ್ ಮೌರ್ಯ ವಿವಾದಾತ್ಮಕ ಹೇಳಿಕೆ

ಮದರಸಾದಲ್ಲಿ ಶಿಕ್ಷಣ ಪಡೆದವರು ಭಾರತ್‌ ಮಾತಾ ಕಿ ಜೈ ಎಂಬ ಘೋಷಣೆ ಕೂಗಲ್ಲ – ಕೇಶವ್ ಪ್ರಸಾದ್ ಮೌರ್ಯ ವಿವಾದಾತ್ಮಕ ಹೇಳಿಕೆ

August 5, 2026
ಕಸ್ತೂರಿ ರಂಗನ್ ವರದಿ: ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ಪ್ರದೇಶ ಕರಡು ಅಧಿಸೂಚನೆಗೆ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಿ- ರಾಜ್ಯ ಸರ್ಕಾರ ಜನರ ಪರವಾಗಿ ದೃಢ ನಿಲುವು ತಾಳಬೇಕು-:ಶಾಸಕ ಹರೀಶ್ ಪೂಂಜ

ಕಸ್ತೂರಿ ರಂಗನ್ ವರದಿ: ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ಪ್ರದೇಶ ಕರಡು ಅಧಿಸೂಚನೆಗೆ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಿ- ರಾಜ್ಯ ಸರ್ಕಾರ ಜನರ ಪರವಾಗಿ ದೃಢ ನಿಲುವು ತಾಳಬೇಕು-:ಶಾಸಕ ಹರೀಶ್ ಪೂಂಜ

August 5, 2026
ಬೆಳ್ತಂಗಡಿ ಭಾರತೀಯ ಜನತಾ ಪಾರ್ಟಿ ಮಂಡಲದ ಸಂಘಟನಾ ಸಭೆ

ಬೆಳ್ತಂಗಡಿ ಭಾರತೀಯ ಜನತಾ ಪಾರ್ಟಿ ಮಂಡಲದ ಸಂಘಟನಾ ಸಭೆ

August 5, 2026
ಪ್ರಚೋದನಾಕಾರಿ ಭಾಷಣ ಪ್ರಕರಣ: “ನೀ ತಾಂಟ್ರೆ ಬಾ ತಾಂಟ್” SDPI ಮುಖಂಡ ರಿಯಾಜ್ ಫರಂಗಿಪೇಟೆಗೆ 6 ತಿಂಗಳ ಜೈಲು,10 ಸಾವಿರ ದಂಡ

ಪ್ರಚೋದನಾಕಾರಿ ಭಾಷಣ ಪ್ರಕರಣ: “ನೀ ತಾಂಟ್ರೆ ಬಾ ತಾಂಟ್” SDPI ಮುಖಂಡ ರಿಯಾಜ್ ಫರಂಗಿಪೇಟೆಗೆ 6 ತಿಂಗಳ ಜೈಲು,10 ಸಾವಿರ ದಂಡ

August 5, 2026
ಪುತ್ತೂರು: ಮೆಡಿಕಲ್ ಕಾಲೇಜು ದಕ್ಷಿಣ ಕನ್ನಡ ಜಿಲ್ಲೆಯ ಜನತೆಗೆ ಅತ್ಯಂತ ಸಂತಸದ ಮತ್ತು ಐತಿಹಾಸಿಕ ಬೆಳವಣಿಗೆ ಹಾಗೂ ಪುತ್ತೂರಿನ ಸರ್ವತೋಮುಖ ಅಭಿವೃದ್ಧಿಗೆ – ಹೇಮನಾಥ ಶೆಟ್ಟಿ ಕಾವು

ಪುತ್ತೂರು: ಮೆಡಿಕಲ್ ಕಾಲೇಜು ದಕ್ಷಿಣ ಕನ್ನಡ ಜಿಲ್ಲೆಯ ಜನತೆಗೆ ಅತ್ಯಂತ ಸಂತಸದ ಮತ್ತು ಐತಿಹಾಸಿಕ ಬೆಳವಣಿಗೆ ಹಾಗೂ ಪುತ್ತೂರಿನ ಸರ್ವತೋಮುಖ ಅಭಿವೃದ್ಧಿಗೆ – ಹೇಮನಾಥ ಶೆಟ್ಟಿ ಕಾವು

August 4, 2026
ಕೆದಂಬಾಡಿ ಆಟೋ ರಿಕ್ಷಾ ಚಾಲಕ ನಾಪತ್ತೆ

ಕೆದಂಬಾಡಿ ಆಟೋ ರಿಕ್ಷಾ ಚಾಲಕ ನಾಪತ್ತೆ

August 4, 2026
ಕಾಡಾನೆ ದಾಳಿಯಲ್ಲಿ ಮೃತಪಟ್ಟ ಬಾಲಕೃಷ್ಣ ಗೌಡರ ಕುಟುಂಬಕ್ಕೆ ಶಾಸಕ ಹರೀಶ್ ಪೂಂಜ ಸಾಂತ್ವನ – ರೂ.20 ಲಕ್ಷ ಪರಿಹಾರಕ್ಕೆ ಕ್ರಮ

ಕಾಡಾನೆ ದಾಳಿಯಲ್ಲಿ ಮೃತಪಟ್ಟ ಬಾಲಕೃಷ್ಣ ಗೌಡರ ಕುಟುಂಬಕ್ಕೆ ಶಾಸಕ ಹರೀಶ್ ಪೂಂಜ ಸಾಂತ್ವನ – ರೂ.20 ಲಕ್ಷ ಪರಿಹಾರಕ್ಕೆ ಕ್ರಮ

August 4, 2026
ಬಡಾವು ವೆಂಕಮ್ಮ ನಿಧನ

ಬಡಾವು ವೆಂಕಮ್ಮ ನಿಧನ

August 3, 2026
ಬೆಳ್ಳಿಪ್ಪಾಡಿ ದೇವಸ್ಯ ಅಪ್ಪಿ ನಿಧನ

ಬೆಳ್ಳಿಪ್ಪಾಡಿ ದೇವಸ್ಯ ಅಪ್ಪಿ ನಿಧನ

August 3, 2026
ಕೋಡಿಂಬಾಡಿ: 43ನೇ ವರ್ಸದ ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಕೋಡಿಂಬಾಡಿ: 43ನೇ ವರ್ಸದ ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

August 3, 2026
ಸ್ವಕ್ಷೇತ್ರದಲ್ಲಿ ಮುಖಭಂಗ ಅನುಭವಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ – ಗೆದ್ದ ಪ್ರಶಾಂತ್ ಕಿಶೋರ್

ಸ್ವಕ್ಷೇತ್ರದಲ್ಲಿ ಮುಖಭಂಗ ಅನುಭವಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ – ಗೆದ್ದ ಪ್ರಶಾಂತ್ ಕಿಶೋರ್

August 3, 2026
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Wednesday, August 5, 2026
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    ಬೆಳ್ತಂಗಡಿ: ಹತ್ಯಡ್ಕದಲ್ಲಿ ಮತ್ತೆ ಕಾಡಾನೆ ದಾಳಿ ಕೃಷಿ ಹಾನಿ

    ಬೆಳ್ತಂಗಡಿ: ಹತ್ಯಡ್ಕದಲ್ಲಿ ಮತ್ತೆ ಕಾಡಾನೆ ದಾಳಿ ಕೃಷಿ ಹಾನಿ

    ಕಸ್ತೂರಿ ರಂಗನ್ ವರದಿ: ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ಪ್ರದೇಶ ಕರಡು ಅಧಿಸೂಚನೆಗೆ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಿ- ರಾಜ್ಯ ಸರ್ಕಾರ ಜನರ ಪರವಾಗಿ ದೃಢ ನಿಲುವು ತಾಳಬೇಕು-:ಶಾಸಕ ಹರೀಶ್ ಪೂಂಜ

    ಕಸ್ತೂರಿ ರಂಗನ್ ವರದಿ: ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ಪ್ರದೇಶ ಕರಡು ಅಧಿಸೂಚನೆಗೆ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಿ- ರಾಜ್ಯ ಸರ್ಕಾರ ಜನರ ಪರವಾಗಿ ದೃಢ ನಿಲುವು ತಾಳಬೇಕು-:ಶಾಸಕ ಹರೀಶ್ ಪೂಂಜ

    ಬೆಳ್ತಂಗಡಿ ಭಾರತೀಯ ಜನತಾ ಪಾರ್ಟಿ ಮಂಡಲದ ಸಂಘಟನಾ ಸಭೆ

    ಬೆಳ್ತಂಗಡಿ ಭಾರತೀಯ ಜನತಾ ಪಾರ್ಟಿ ಮಂಡಲದ ಸಂಘಟನಾ ಸಭೆ

    ಪುತ್ತೂರು: ಮೆಡಿಕಲ್ ಕಾಲೇಜು ದಕ್ಷಿಣ ಕನ್ನಡ ಜಿಲ್ಲೆಯ ಜನತೆಗೆ ಅತ್ಯಂತ ಸಂತಸದ ಮತ್ತು ಐತಿಹಾಸಿಕ ಬೆಳವಣಿಗೆ ಹಾಗೂ ಪುತ್ತೂರಿನ ಸರ್ವತೋಮುಖ ಅಭಿವೃದ್ಧಿಗೆ – ಹೇಮನಾಥ ಶೆಟ್ಟಿ ಕಾವು

    ಪುತ್ತೂರು: ಮೆಡಿಕಲ್ ಕಾಲೇಜು ದಕ್ಷಿಣ ಕನ್ನಡ ಜಿಲ್ಲೆಯ ಜನತೆಗೆ ಅತ್ಯಂತ ಸಂತಸದ ಮತ್ತು ಐತಿಹಾಸಿಕ ಬೆಳವಣಿಗೆ ಹಾಗೂ ಪುತ್ತೂರಿನ ಸರ್ವತೋಮುಖ ಅಭಿವೃದ್ಧಿಗೆ – ಹೇಮನಾಥ ಶೆಟ್ಟಿ ಕಾವು

    ಕೆದಂಬಾಡಿ ಆಟೋ ರಿಕ್ಷಾ ಚಾಲಕ ನಾಪತ್ತೆ

    ಕೆದಂಬಾಡಿ ಆಟೋ ರಿಕ್ಷಾ ಚಾಲಕ ನಾಪತ್ತೆ

    ಕಾಡಾನೆ ದಾಳಿಯಲ್ಲಿ ಮೃತಪಟ್ಟ ಬಾಲಕೃಷ್ಣ ಗೌಡರ ಕುಟುಂಬಕ್ಕೆ ಶಾಸಕ ಹರೀಶ್ ಪೂಂಜ ಸಾಂತ್ವನ – ರೂ.20 ಲಕ್ಷ ಪರಿಹಾರಕ್ಕೆ ಕ್ರಮ

    ಕಾಡಾನೆ ದಾಳಿಯಲ್ಲಿ ಮೃತಪಟ್ಟ ಬಾಲಕೃಷ್ಣ ಗೌಡರ ಕುಟುಂಬಕ್ಕೆ ಶಾಸಕ ಹರೀಶ್ ಪೂಂಜ ಸಾಂತ್ವನ – ರೂ.20 ಲಕ್ಷ ಪರಿಹಾರಕ್ಕೆ ಕ್ರಮ

    ಬಡಾವು ವೆಂಕಮ್ಮ ನಿಧನ

    ಬಡಾವು ವೆಂಕಮ್ಮ ನಿಧನ

    ಬೆಳ್ಳಿಪ್ಪಾಡಿ ದೇವಸ್ಯ ಅಪ್ಪಿ ನಿಧನ

    ಬೆಳ್ಳಿಪ್ಪಾಡಿ ದೇವಸ್ಯ ಅಪ್ಪಿ ನಿಧನ

    ಕೋಡಿಂಬಾಡಿ: 43ನೇ ವರ್ಸದ ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

    ಕೋಡಿಂಬಾಡಿ: 43ನೇ ವರ್ಸದ ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ಪ್ರಾದೇಶಿಕ ಪುತ್ತೂರು

ಮನೆ ಕಟ್ಟುವವರಿಗೆ ಕೆಂಪು ಕಲ್ಲು ಸಮಸ್ಯೆ, ರಾಜಸ್ವ ಕಡಿತಗೊಂಡರೂ ಇಳಿಕೆಯಾಗದ ದರ

by ಪ್ರಜಾಧ್ವನಿ ನ್ಯೂಸ್
October 17, 2025
in ಪುತ್ತೂರು
0
ಮನೆ ಕಟ್ಟುವವರಿಗೆ ಕೆಂಪು ಕಲ್ಲು ಸಮಸ್ಯೆ, ರಾಜಸ್ವ ಕಡಿತಗೊಂಡರೂ ಇಳಿಕೆಯಾಗದ ದರ
23
SHARES
65
VIEWS
ShareShareShare

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮನೆ ಕಟ್ಟುವವರಿಗೆ ಕೆಂಪು ಕಲ್ಲಿನ ಬೆಲೆ ಏರಿಕೆ ಒಂದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕೆಲವು ತಿಂಗಳ ಹಿಂದೆ ದಿಢೀರ್ ಎಂದು ಕೆಂಪು ಕಲ್ಲಿನ ದರ ಪ್ರತಿ ಕಲ್ಲಿಗೆ 20 ರೂ. ಏರಿಕೆಯಾಗಿತ್ತು, ಅಷ್ಟೇ ಅಲ್ಲದೆ, ಬೇಕಾದಷ್ಟು ಕಲ್ಲು ಸಿಗುವುದೂ ಕಷ್ಟವಾಗಿತ್ತು.

ಈಗ ಸರ್ಕಾರವು ಕೆಂಪು ಕಲ್ಲಿನ ಮೇಲಿನ ರಾಜಸ್ವವನ್ನು ಇಳಿಸಿದ್ದರೂ, ಕಲ್ಲಿನ ದರ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಇಳಿದಿಲ್ಲ. ಇದು ಹೊಸದಾಗಿ ಮನೆ ಕಟ್ಟಲು ಹೊರಟವರ ಆಸೆಗೆ ತಣ್ಣೀರೆರಚಿದಂತಾಗಿದೆ.
ಈ ಸಮಸ್ಯೆ ಉದ್ಭವಿಸಿದ್ದು ಹೇಗೆ?  ಕೆಲ ತಿಂಗಳ ಹಿಂದೆ ರಾಜ್ಯ ಸರ್ಕಾರವು ಕೆಂಪು ಕಲ್ಲು ಗಣಿಗಾರಿಕೆ ಮತ್ತು ಪೂರೈಕೆ ಮಾಡುವವರಿಗೆ ಪರವಾನಗಿ ಪಡೆಯುವುದನ್ನು ಕಡ್ಡಾಯಗೊಳಿಸಿ, ಕಲ್ಲಿನ ಮೇಲಿನ ರಾಜಸ್ವವನ್ನು ಒಂದು ಟನ್‌ಗೆ 76 ರೂ.ಗಳಿಂದ 256 ರೂ.ಗಳಿಗೆ ಏರಿಸಿತ್ತು ಇದು ಕೆಂಪು ಕಲ್ಲು ಉದ್ಯಮಕ್ಕೆ ದೊಡ್ಡ ಹೊಡೆತ ನೀಡಿತು.

ರಾಜಸ್ವ ಹೆಚ್ಚಳದಿಂದಾಗಿ ಜಿಲ್ಲೆಯಲ್ಲಿ ಕಲ್ಲಿನ ಪೂರೈಕೆ ಸಂಪೂರ್ಣವಾಗಿ ಸ್ಥಗಿತಗೊಂಡಿತು. 6 ತಿಂಗಳಿಗೊಮ್ಮೆ ಪರವಾನಗಿ ನವೀಕರಿಸುವ ಹಳೆಯ ಪದ್ಧತಿ ಇದ್ದ ಕಾರಣ, ಹೊಸ ನಿಯಮಗಳು ಜಾರಿಗೆ ಬಂದಾಗ ಯಾರೂ ನವೀಕರಣಕ್ಕೆ ಆಸಕ್ತಿ ತೋರಲಿಲ್ಲ.
ಪ್ರತಿಭಟನೆ ಮತ್ತು ರಾಜಸ್ವ ಇಳಿಕೆ: ಹೆಚ್ಚಿದ ರಾಜಸ್ವದ ವಿರುದ್ಧ ದೊಡ್ಡ ಪ್ರಮಾಣದ ಪ್ರತಿಭಟನೆಗಳು ನಡೆದವು. ಸಾರ್ವಜನಿಕರ ಒತ್ತಡಕ್ಕೆ ಮಣಿದ ಸರ್ಕಾರವು ಹೊಸ ನೀತಿಯನ್ನು ಜಾರಿಗೊಳಿಸಿ, ರಾಜಸ್ವವನ್ನು 256 ರೂ.ಗಳಿಂದ 100 ರೂ.ಗಳಿಗೆ ಇಳಿಸಿತು.

ಇದು ಕಲ್ಲು ಉದ್ಯಮಿಗಳ ಬಹುದಿನಗಳ ಬೇಡಿಕೆಯಾಗಿತ್ತು. ಆದರೆ, ಪರವಾನಗಿ ಅವಧಿಯನ್ನು 6 ತಿಂಗಳಿಂದ 2 ವರ್ಷಕ್ಕೆ ಏರಿಸಬೇಕೆಂಬ ಬೇಡಿಕೆಗೆ ಭಾಗಶಃ ಮಾತ್ರ ಮನ್ನಣೆ ದೊರೆತು, ಅದನ್ನು 10 ತಿಂಗಳಿಗೆ ಸೀಮಿತಗೊಳಿಸಲಾಯಿತು.
ಕಾಸರಗೋಡು ಗಂಟುಬಿದ್ದ ಸಮಸ್ಯೆ: ದಕ್ಷಿಣ ಕನ್ನಡಕ್ಕೆ ಹೆಚ್ಚಾಗಿ ಕೆಂಪು ಕಲ್ಲು ಕಾಸರಗೋಡು ಜಿಲ್ಲೆಯಿಂದ ಬರುತ್ತದೆ. ಕೇರಳದಲ್ಲಿ ಕಲ್ಲಿನ ಗಣಿಗಾರಿಕೆ ನಿಯಮಗಳು ಕರ್ನಾಟಕಕ್ಕಿಂತ ಸರಳವಾಗಿವೆ. ಅಲ್ಲಿ ಒಂದು ನಿರ್ದಿಷ್ಟ ವಿಸ್ತೀರ್ಣದ ಕೋರೆಯಿಂದ ಸುಮಾರು 24,000 ಟನ್ ಕಲ್ಲು ತೆಗೆಯಲು ಅನುಮತಿಯಿದ್ದರೆ, ದಕ್ಷಿಣ ಕನ್ನಡದಲ್ಲಿ ಅಷ್ಟೇ ವಿಸ್ತೀರ್ಣದಿಂದ ಕೇವಲ 2,000 ಟನ್ ಕಲ್ಲು ತೆಗೆಯಲು ಮಾತ್ರ ಪರವಾನಗಿ ಇದೆ. ಅಂದರೆ, ಕಡಿಮೆ ರಾಜಸ್ವದಲ್ಲಿ ಕೇರಳದಲ್ಲಿ ಹೆಚ್ಚಿನ ಪ್ರಮಾಣದ ಕಲ್ಲು ತೆಗೆಯಲು ಸಾಧ್ಯವಿದೆ.

ಹಿಂದೆ ಕಾಸರಗೋಡಿನಿಂದ ಕಲ್ಲು ಸರಾಗವಾಗಿ ದಕ್ಷಿಣ ಕನ್ನಡಕ್ಕೆ ಬರುತ್ತಿತ್ತು. ಆದರೆ, ಈಗ ದಕ್ಷಿಣ ಕನ್ನಡದಲ್ಲಿ ಪರವಾನಗಿ ನಿಯಮಗಳು ಬಿಗಿಗೊಂಡಿರುವುದರಿಂದ ಕಾಸರಗೋಡು ಭಾಗದಿಂದ ಕಲ್ಲು ತರುವುದು ದುಬಾರಿಯಾಗಿದೆ. ಕಾಸರಗೋಡಿನ ಪರ್ಮಿಟ್ ದಾರರಿಗೆ ಪ್ರತಿ ಎರಡು ಲೋಡ್ ಕಲ್ಲಿಗೆ 6,000 ರೂ. ನೀಡಬೇಕಾಗುತ್ತದೆ. ಇದರಿಂದ ಸಾಗಾಟ ವೆಚ್ಚ ಹೆಚ್ಚಾಗಿ, ದಕ್ಷಿಣ ಕನ್ನಡದಲ್ಲಿ ಕಲ್ಲಿನ ದರ ಏರಿಕೆಯಾಗಲು ಮತ್ತೊಂದು ಕಾರಣವಾಗಿದೆ.
ದರ ಇಳಿಯದಿರುವುದಕ್ಕೆ ಕಾರಣಗಳು: ರಾಜಸ್ವ ಇಳಿಕೆಯಾದರೂ ದರ ಇಳಿಯದಿರುವುದಕ್ಕೆ ಹಲವು ಕಾರಣಗಳಿವೆ. ಮೊದಲನೆಯದಾಗಿ, ದಕ್ಷಿಣ ಕನ್ನಡದಲ್ಲಿ ಬೇಡಿಕೆಗೆ ತಕ್ಕಷ್ಟು ಕಲ್ಲು ಸಿಗುತ್ತಿಲ್ಲ. ಹಿಂದೆ 16 ಪರವಾನಗಿದಾರರಿದ್ದರೆ, ಈಗ ಕೇವಲ 7 ಮಂದಿ ಮಾತ್ರ ಪರವಾನಗಿ ಪಡೆದಿದ್ದಾರೆ. ಜಿಲ್ಲೆಯ ಒಟ್ಟು ಬೇಡಿಕೆಯ ಕೇವಲ 20% ಮಾತ್ರ ಜಿಲ್ಲೆಯಿಂದ ಪೂರೈಕೆಯಾಗುತ್ತಿದ್ದು, ಉಳಿದ 80% ಕಾಸರಗೋಡಿನಿಂದ ಬರುತ್ತಿದೆ.

ಎರಡನೆಯದಾಗಿ, ಹೊಸ ಪರ್ಮಿಟ್ ನೀತಿಯಿಂದಾಗಿ ಕಾಸರಗೋಡಿನಿಂದ ಕಲ್ಲು ತರುವುದು ಮೊದಲಿಗಿಂತ ದುಬಾರಿಯಾಗಿದೆ. ಸಾಗಾಟ ದೂರ ಹೆಚ್ಚಾದಂತೆ ಕಲ್ಲಿನ ದರವೂ ಹೆಚ್ಚುತ್ತದೆ. ಮೂರನೆಯದಾಗಿ, ಕಲ್ಲು ಕತ್ತರಿಸುವ ಖರ್ಚು, ಲೋಡ್, ಅನ್ ಲೋಡ್, ಗಾಡಿ ಬಾಡಿಗೆ ಮತ್ತು ಇತರ ನಿರ್ವಹಣಾ ವೆಚ್ಚಗಳು ಏರಿಕೆಯಾಗಿವೆ. ಇವೆಲ್ಲವೂ ಸೇರಿ, ರಾಜಸ್ವ ಇಳಿದಿದ್ದರೂ, ಕೆಂಪು ಕಲ್ಲಿನ ದರವನ್ನು ಹಿಂದಿನ ಮಟ್ಟಕ್ಕೆ ಇಳಿಸಲು ಸಾಧ್ಯವಾಗುತ್ತಿಲ್ಲ ಎಂದು ಕಲ್ಲು ಪೂರೈಕೆದಾರರು ಹೇಳುತ್ತಿದ್ದಾರೆ.
ಪುತ್ತೂರು, ಸುಳ್ಯ, ಬಂಟ್ವಾಳ ಮತ್ತು ಬೆಳ್ತಂಗಡಿ ಭಾಗಗಳಿಗೆ ಕಾಸರಗೋಡು ಜಿಲ್ಲೆಯ ಮಿಂಚಿಪದವು, ಕಾಯರ್‌ಪದವು ಭಾಗಗಳಿಂದ ಹೆಚ್ಚಿನ ಪ್ರಮಾಣದ ಕಲ್ಲು ಬರುತ್ತದೆ. ಪ್ರಸ್ತುತ, ಪುತ್ತೂರು ಭಾಗದಲ್ಲಿ ಒಂದು ಕಲ್ಲಿನ ಬೆಲೆ ಸುಮಾರು 40 ರೂ.ಗಳಿಗೆ ಬಂದು ನಿಲ್ಲುತ್ತದೆ. ಹೀಗಾಗಿ, ದಕ್ಷಿಣ ಕನ್ನಡದಲ್ಲಿ ಕೆಂಪು ಕಲ್ಲಿನ ಸಮಸ್ಯೆ ಬಗೆಹರಿಯದೆ, ಮನೆ ನಿರ್ಮಿಸಲು ಹೊರಟವರ ಜೇಬಿಗೆ ಕತ್ತರಿ ಬೀಳುತ್ತಲೇ ಇದೆ.

ashwinistudioputtur

ಜಾಹೀರಾತು

 

Muliya

ಜಾಹೀರಾತು

SendShare9Share
Previous Post

ಪಾಕಿಸ್ತಾನದ ಮಿಲಿಟರಿಯ ಸುಳ್ಳು, ಕಪಟ ಜಗತ್ತಿನ ಮುಂದೆ ಮತ್ತೊಮ್ಮೆ ಬಹಿರಂಗ

Next Post

ನಿತಿನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸರಿಗಮಪ ಖ್ಯಾತಿಯ ಸುಹಾನಾ ಸೈಯದ್

ಪ್ರಜಾಧ್ವನಿ ನ್ಯೂಸ್

ಪ್ರಜಾಧ್ವನಿ ನ್ಯೂಸ್

Next Post
ನಿತಿನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸರಿಗಮಪ ಖ್ಯಾತಿಯ ಸುಹಾನಾ ಸೈಯದ್

ನಿತಿನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸರಿಗಮಪ ಖ್ಯಾತಿಯ ಸುಹಾನಾ ಸೈಯದ್

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂದರ್ಭಿಕ ಚಿತ್ರ
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

No Result
View All Result
  • ಮುಖಪುಟ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಉದ್ಯೋಗ – ಶಿಕ್ಷಣ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಿನಿಮಾ
  • ಲೈಫ್ ಸ್ಟೈಲ್

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..