ಸುಳ್ಯ: ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡೋದು ದೇಶದ್ರೋಹ ಕೆಲಸ ಗುತ್ತಿಗಾರು ಗ್ರಾಮದ ಬಾಕಿಲ – ಫೈಕ ರಸ್ತೆಗೆ 10 ಲಕ್ಷ ರೂಪಾಯಿ ಶಾಸಕ – ಸಂಸದರ ಅನುದಾನದಲ್ಲಿ ಕಾಂಕ್ರೀಟೀಕರಣ ಜೂ.10 ರಂದು ಆರಂಭಗೊಂಡಿದ್ದು ಹಸಿ ಕಾಂಕ್ರೀಟಿನ ಮೇಲೆ ಯಾರೋ ಕಿಡಿಗೇಡಿ ರಾತ್ರಿ ಕಾರು ಚಲಾಯಿಸಿದ್ದು ರಸ್ತೆಗೆ ಮಾಸಲಾಗದ ಹಾನಿಯಾಗಿರುತ್ತದೆ.
ಸದ್ರಿ ರಸ್ತೆಗಾದ ಹಾನಿ ಬಗ್ಗೆ ಫಲಾನುಭವಿಗಳು ಹಾಗೂ ಊರವರ ಗಮನಕ್ಕೆ ಬಂದಿದ್ದು ಈ ಬಗ್ಗೆ ಹಾನಿ ಮಾಡಿದವರು ಸಂಬಂಧಪಟ್ಟ ಗುತ್ತಿಗೆದಾರರಿಗೆ ತಿಳಿಸಿ ರಸ್ತೆ ದುರಸ್ತಿ ಮಾಡಿ ಅಥವಾ ಅದರ ವೆಚ್ಚವನ್ನು ಭರಿಸದೇ ಇದ್ದಲ್ಲಿ ಸಂಬಂಧಪಟ್ಟ ರಸ್ತೆ ಫಲಾನುಭವಿಗಳು ಸತ್ಯದ ನಡೆಯಲ್ಲಿ ಪ್ರಾರ್ಥಿಸುವುದೆಂದು ತೀರ್ಮಾನಿಸಲಾಗಿದೆ. ಅಂತಹ ತಪ್ಪು ಮಾಡಿದಲ್ಲಿ ಪ್ರಾಮಾಣಿಕತೆಯಿಂದ ಕಾಮಗಾರಿ ಮಾಡುವಲ್ಲಿ ಬಂದು ಗುತ್ತಿಗೆದಾರರಿಗೆ ತಿಳಿಸಿ ಅದಕ್ಕಾಗುವ ನಷ್ಟವನ್ನು ನೀಡಬೇಕಾಗಿ ಲೋಹಿತ್ ಆಜಡ್ಕ ವಿನಂತಿಸಿದ್ದಾರೆ.

























