ಪುತ್ತೂರು: ಅಖಿಲಭಾರತ ದೈವಾರಾಧಕರ ಒಕ್ಕೂಟ ಉಡುಪಿ ಸಮಿತಿ ಇದರ ವತಿಯಿಂದ ದೈವಾರಾಧಕರ ಹಲವು ಬೇಡಿಕೆಗಳನ್ನು ಈಡೇರಿಕೆಗೆ ಆಗ್ರಹಿಸಿ ಸಮಿತಿಯ ಪ್ರಮುಖರು ಶಾಸಕ ಅಶೋಕ್ ರೈ ಅವರಿಗೆ ಮನವಿ ಸಲ್ಲಿಸಿದರು. 16 ವಿವಿಧ ವರ್ಗಗಳ ದೈವಾರಾಧಕರ ಬೇಡಿಕೆಗಳನ್ನು ಈಡೇರಿಕೆಗೆ ನಾವು ಮನವಿ ಮಾಡುತ್ತಿದ್ದೇವೆ ಎಂದು ಒಕ್ಕೂಟದ ಕೇಂದ್ರೀಯ ಉಪಾಧ್ಯಕ್ಷ ನವೀನ್ ಪಾತ್ರಿ ತಿಳಿಸಿದರು.
ದೈವಾರಾಧಕರಾಗಿ ಸೇವೆ ಸಲ್ಲಿಸಿ ನಿವೃತ್ತಿಹೊಂದಿದವರಿಗೆ ಯಾವುದೇ ಸೌಲಭ್ಯವನ್ನು ನೀಡಲಾಗುತ್ತಿಲ್ಲ, ಅವರಿಗೂ ಸರಕಾರಿ ಸೌಲಭ್ಯ ಸಿಗುರವಂತಾಗಬೇಕು ಈ ವಿಚಾರದ ಬಗ್ಗೆ ಸರಕಾರದ ಗಮನ ಸೆಳೆಯಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದ್ದೇವೆ.
ಸಂಸ್ಥಾಪ ಅಧ್ಯಕ್ಷ ವಿನೋದ್ ಶೆಟ್ಟಿ ಮಾತನಾಡಿ ಉಡುಪಿ ಮತ್ತು ದ ಕ ಜಿಲ್ಲೆಗಳಲ್ಲಿ 16 ವಿವಿಧ ವರ್ಗಗಳ ದೈವಾರಾಧಕರುಗಳು ತಮ್ಮ ಧಾರ್ಮಿಕ ವೃತತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಸರಕಾರದ ಸೌಲಭ್ಯಕ್ಕಾಗಿ ನಾವು ಹಲವು ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ ಆದರೆ ಯಾರೂ ನಮಗೆ ಬೆಂಬಲವನ್ನು ನೀಡಿಲ್ಲ, ನಮ್ಮ ಮನವಿಯನ್ನು ಸರಕಾರಕ್ಕೆ ತಪುಪಿಸುವಲ್ಲಿ ನಮ್ಮ ಭಾಗದ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ಇದೀಗ ಪುತ್ತೂರು ಶಾಸಕರು ಈ ಬಗ್ಗೆ ವಿಧಾನಸಭಾ ಅಧಿವೇಶನದಲ್ಲಿ ಮಾತನಾಡುತ್ತಾರೆ ಎಂಬ ನಂಬಿಕೆ ಇದೆ. ಉಡುಪಿ ಮ್ತತು ದ ಕ ಜಿಲ್ಲೆಯಲ್ಲಿ ತುಳುನಾಡಿನ ಸಂಸ್ಕಾರ, ಸಂಸ್ಕೃತಿಯ ಬಗ್ಗೆ ಮಾತನಾಡುವ ಏಕೈಕ ಶಾಸಕ ಅಶೋಕ್ ರೈ ಅವರಾಗಿದ್ದಾರೆ.ಅಶೋಕ್ ರೈ ಮೂಲಕ ಕೆಲಸವಾಗುತ್ತದೆ ಎಂಬ ವಿಶ್ವಾಸ ಜಿಲ್ಲೆಯ ಎಲ್ಲಾ ಜನರಲ್ಲಿದೆ ಅದಕ್ಕಾಗಿಯೇ ನಾವು ಉಡುಪಿಯಿಂದ ಪುತ್ತೂರಿಗೆ ಬಂದು ಶಾಸಕರನ್ನು ಭೇಟಿಯಾಗಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ದಿನೇಶ್ ಪೂಜಾರಿ, ನವೀನ್ ಪಾತ್ರಿ, ವಾಸು ಶೇರಿಗಾರ,, ಘಟಕದ ಅಧ್ಯಕ್ಷರಾದ ಸುಂದರ ಪೂಜಾರಿ, ನಗರ ಘಟಕದ ಅಧ್ಯಕ್ಷ ಪ್ರಭಾಕರ್, ಕೋಶಾಧಿಕಾ ಸಮಿತ ಶೆಟ್ಟಿ, ಸಂಘಟನೆ ಕಾರ್ಯದರ್ಶಿ ಬಾಲಚಂದ್ರ ಪೂಜಾರಿ, ಕೃಷ್ಣಪೂಜಾರಿ ಅಂಜಾರು, ರಾಮ ಉಪಸ್ಥಿತರಿದ್ದರು.
























