• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
ನಡಿಗೆ ತಿಳಿಯಲು ಜನರ ಬಳಿಗೆ ನಡೆದ “ಶಾಸಕ ಅಶೋಕ್ ರೈ” ಉದ್ಯಮಿಗಳು, ಕೃಷಿಕರ ಭೇಟಿ- ಪುತ್ತೂರು ಅಭಿವೃದ್ದಿಯ ಬಗ್ಗೆಯೂ ಚರ್ಚೆ

ನಡಿಗೆ ತಿಳಿಯಲು ಜನರ ಬಳಿಗೆ ನಡೆದ “ಶಾಸಕ ಅಶೋಕ್ ರೈ” ಉದ್ಯಮಿಗಳು, ಕೃಷಿಕರ ಭೇಟಿ- ಪುತ್ತೂರು ಅಭಿವೃದ್ದಿಯ ಬಗ್ಗೆಯೂ ಚರ್ಚೆ

May 16, 2024
ನರೇಂದ್ರ ಮೋದಿ ಅವರು ತಮ್ಮ ಅಧಿಕಾರವನ್ನು ತ್ಯಾಗ ಮಾಡಿದರೆ ಜನರಿಗೆ ಸುಖ ಸಿಗುತ್ತದೆ: ಬಿ. ರಮಾನಾಥ ರೈ ವ್ಯಂಗ್ಯ

ನರೇಂದ್ರ ಮೋದಿ ಅವರು ತಮ್ಮ ಅಧಿಕಾರವನ್ನು ತ್ಯಾಗ ಮಾಡಿದರೆ ಜನರಿಗೆ ಸುಖ ಸಿಗುತ್ತದೆ: ಬಿ. ರಮಾನಾಥ ರೈ ವ್ಯಂಗ್ಯ

May 14, 2026
ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮದ ವಿರುದ್ಧ ನೀಡಿರುವ ಪ್ರಚೋದನಾತ್ಮಕ ಹೇಳಿಕೆ: ವಿಶ್ವ ಹಿಂದೂ ಪರಿಷದ್ ಖಂಡನೆ

ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮದ ವಿರುದ್ಧ ನೀಡಿರುವ ಪ್ರಚೋದನಾತ್ಮಕ ಹೇಳಿಕೆ: ವಿಶ್ವ ಹಿಂದೂ ಪರಿಷದ್ ಖಂಡನೆ

May 14, 2026
ಹಿಜಾಬ್: ಕಾಂಗ್ರೆಸ್ ಸರ್ಕಾರದ ಮತ್ತೊಮ್ಮೆ ತನ್ನ ಮುಸ್ಲಿಂ ಓಲೈಕೆ ನೀತಿ ಬಹಿರಂಗ- ಸುನಿಲ್ ಕುಮಾರ್

ಹಿಜಾಬ್: ಕಾಂಗ್ರೆಸ್ ಸರ್ಕಾರದ ಮತ್ತೊಮ್ಮೆ ತನ್ನ ಮುಸ್ಲಿಂ ಓಲೈಕೆ ನೀತಿ ಬಹಿರಂಗ- ಸುನಿಲ್ ಕುಮಾರ್

May 14, 2026
ದಶಕದ ಬಳಿಕ 250 ರೂ. ಗಡಿ ದಾಟಿದ ರಬ್ಬರ್ ಧಾರಣೆ- ಏರಿದರೂ ಲಾಭ ಸಿಗುತ್ತಿಲ್ಲ ಎಂದ ರೈತರು

ದಶಕದ ಬಳಿಕ 250 ರೂ. ಗಡಿ ದಾಟಿದ ರಬ್ಬರ್ ಧಾರಣೆ- ಏರಿದರೂ ಲಾಭ ಸಿಗುತ್ತಿಲ್ಲ ಎಂದ ರೈತರು

May 14, 2026
ಕೇರಳದ ನೂತನ ಮುಖ್ಯಮಂತ್ರಿ ಆಗಿ ವಿ.ಡಿ.ಸತೀಶನ್ ಆಯ್ಕೆ

ಕೇರಳದ ನೂತನ ಮುಖ್ಯಮಂತ್ರಿ ಆಗಿ ವಿ.ಡಿ.ಸತೀಶನ್ ಆಯ್ಕೆ

May 14, 2026
ಕನ್ನಡ ಚಿತ್ರರಂಗದ ಜನಪ್ರಿಯ ನಟ  ದಿಲೀಪ್ ರಾಜ್ ಹೃದಯಾಘಾತದಿಂದ ನಿಧನ

ಕನ್ನಡ ಚಿತ್ರರಂಗದ ಜನಪ್ರಿಯ ನಟ ದಿಲೀಪ್ ರಾಜ್ ಹೃದಯಾಘಾತದಿಂದ ನಿಧನ

May 13, 2026
ಹೈಡ್ರೋವಿಡ್ ಗಾಂಜಾ ಅಕ್ರಮ ಮಾರಾಟ – ವಿದ್ಯಾರ್ಥಿನಿ ಬಂಧನ

ಹೈಡ್ರೋವಿಡ್ ಗಾಂಜಾ ಅಕ್ರಮ ಮಾರಾಟ – ವಿದ್ಯಾರ್ಥಿನಿ ಬಂಧನ

May 13, 2026
ಬೆಳಾಲು ಗ್ರಾಮದ ಮೂಕುತ್ತಿ ಮಜಲು ಹಾಗೂ ನಾಗಕಲ್ಲು ಪ್ರದೇಶದಲ್ಲಿ ಸೇತುವೆ ನಿರ್ಮಾಣಕ್ಕೆ ರೂ.5 ಕೋಟಿ ಅನುದಾನ  – ಶಾಸಕ ಹರೀಶ್ ಪೂಂಜ

ಬೆಳಾಲು ಗ್ರಾಮದ ಮೂಕುತ್ತಿ ಮಜಲು ಹಾಗೂ ನಾಗಕಲ್ಲು ಪ್ರದೇಶದಲ್ಲಿ ಸೇತುವೆ ನಿರ್ಮಾಣಕ್ಕೆ ರೂ.5 ಕೋಟಿ ಅನುದಾನ – ಶಾಸಕ ಹರೀಶ್ ಪೂಂಜ

May 12, 2026
ಪ್ರಶ್ನೆ ಪತ್ರಿಕೆ ಸೋರಿಕೆ: ಮೇ 3 ರಂದು ನಡೆಸಲಾದ ನೀಟ್‌ ಯುಜಿ ಪರೀಕ್ಷೆ ರದ್ದು

ಪ್ರಶ್ನೆ ಪತ್ರಿಕೆ ಸೋರಿಕೆ: ಮೇ 3 ರಂದು ನಡೆಸಲಾದ ನೀಟ್‌ ಯುಜಿ ಪರೀಕ್ಷೆ ರದ್ದು

May 12, 2026
ರಾಜ್ಯದ ಅತೀ ಶ್ರೀಮಂತ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ  ವಾರ್ಷಿಕ ಆದಾಯ 167 ಕೋಟಿ

ರಾಜ್ಯದ ಅತೀ ಶ್ರೀಮಂತ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಆದಾಯ 167 ಕೋಟಿ

May 12, 2026
ಪುತ್ತೂರು ಪರಿಸರದಲ್ಲಿ ಹೆಚ್ಚುತ್ತಿರುವ ಅಪಘಾತ ಪ್ರಕರಣಗಳ ಹಿನ್ನೆಲೆಯಲ್ಲಿ ಪರಿಹಾರಕ್ಕಾಗಿ ಹಾಗೂ ಲೋಕಕಲ್ಯಾಣಕ್ಕಾಗಿ ಮೃತ್ಯುಂಜಯ ಸೂಕ್ತ ಜಪ

ಪುತ್ತೂರು ಪರಿಸರದಲ್ಲಿ ಹೆಚ್ಚುತ್ತಿರುವ ಅಪಘಾತ ಪ್ರಕರಣಗಳ ಹಿನ್ನೆಲೆಯಲ್ಲಿ ಪರಿಹಾರಕ್ಕಾಗಿ ಹಾಗೂ ಲೋಕಕಲ್ಯಾಣಕ್ಕಾಗಿ ಮೃತ್ಯುಂಜಯ ಸೂಕ್ತ ಜಪ

May 12, 2026
ರಾಜ್ಯಾದ್ಯಂತ ಮದ್ಯದಂಗಡಿ ಮುಚ್ಚಲು ತಮಿಳುನಾಡಿನ ನೂತನ CM ವಿಜಯ್‌ ಆದೇಶ!

ರಾಜ್ಯಾದ್ಯಂತ ಮದ್ಯದಂಗಡಿ ಮುಚ್ಚಲು ತಮಿಳುನಾಡಿನ ನೂತನ CM ವಿಜಯ್‌ ಆದೇಶ!

May 12, 2026
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Saturday, May 16, 2026
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    ನರೇಂದ್ರ ಮೋದಿ ಅವರು ತಮ್ಮ ಅಧಿಕಾರವನ್ನು ತ್ಯಾಗ ಮಾಡಿದರೆ ಜನರಿಗೆ ಸುಖ ಸಿಗುತ್ತದೆ: ಬಿ. ರಮಾನಾಥ ರೈ ವ್ಯಂಗ್ಯ

    ನರೇಂದ್ರ ಮೋದಿ ಅವರು ತಮ್ಮ ಅಧಿಕಾರವನ್ನು ತ್ಯಾಗ ಮಾಡಿದರೆ ಜನರಿಗೆ ಸುಖ ಸಿಗುತ್ತದೆ: ಬಿ. ರಮಾನಾಥ ರೈ ವ್ಯಂಗ್ಯ

    ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮದ ವಿರುದ್ಧ ನೀಡಿರುವ ಪ್ರಚೋದನಾತ್ಮಕ ಹೇಳಿಕೆ: ವಿಶ್ವ ಹಿಂದೂ ಪರಿಷದ್ ಖಂಡನೆ

    ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮದ ವಿರುದ್ಧ ನೀಡಿರುವ ಪ್ರಚೋದನಾತ್ಮಕ ಹೇಳಿಕೆ: ವಿಶ್ವ ಹಿಂದೂ ಪರಿಷದ್ ಖಂಡನೆ

    ದಶಕದ ಬಳಿಕ 250 ರೂ. ಗಡಿ ದಾಟಿದ ರಬ್ಬರ್ ಧಾರಣೆ- ಏರಿದರೂ ಲಾಭ ಸಿಗುತ್ತಿಲ್ಲ ಎಂದ ರೈತರು

    ದಶಕದ ಬಳಿಕ 250 ರೂ. ಗಡಿ ದಾಟಿದ ರಬ್ಬರ್ ಧಾರಣೆ- ಏರಿದರೂ ಲಾಭ ಸಿಗುತ್ತಿಲ್ಲ ಎಂದ ರೈತರು

    ಬೆಳಾಲು ಗ್ರಾಮದ ಮೂಕುತ್ತಿ ಮಜಲು ಹಾಗೂ ನಾಗಕಲ್ಲು ಪ್ರದೇಶದಲ್ಲಿ ಸೇತುವೆ ನಿರ್ಮಾಣಕ್ಕೆ ರೂ.5 ಕೋಟಿ ಅನುದಾನ  – ಶಾಸಕ ಹರೀಶ್ ಪೂಂಜ

    ಬೆಳಾಲು ಗ್ರಾಮದ ಮೂಕುತ್ತಿ ಮಜಲು ಹಾಗೂ ನಾಗಕಲ್ಲು ಪ್ರದೇಶದಲ್ಲಿ ಸೇತುವೆ ನಿರ್ಮಾಣಕ್ಕೆ ರೂ.5 ಕೋಟಿ ಅನುದಾನ – ಶಾಸಕ ಹರೀಶ್ ಪೂಂಜ

    ರಾಜ್ಯದ ಅತೀ ಶ್ರೀಮಂತ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ  ವಾರ್ಷಿಕ ಆದಾಯ 167 ಕೋಟಿ

    ರಾಜ್ಯದ ಅತೀ ಶ್ರೀಮಂತ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಆದಾಯ 167 ಕೋಟಿ

    ಪುತ್ತೂರು ಪರಿಸರದಲ್ಲಿ ಹೆಚ್ಚುತ್ತಿರುವ ಅಪಘಾತ ಪ್ರಕರಣಗಳ ಹಿನ್ನೆಲೆಯಲ್ಲಿ ಪರಿಹಾರಕ್ಕಾಗಿ ಹಾಗೂ ಲೋಕಕಲ್ಯಾಣಕ್ಕಾಗಿ ಮೃತ್ಯುಂಜಯ ಸೂಕ್ತ ಜಪ

    ಪುತ್ತೂರು ಪರಿಸರದಲ್ಲಿ ಹೆಚ್ಚುತ್ತಿರುವ ಅಪಘಾತ ಪ್ರಕರಣಗಳ ಹಿನ್ನೆಲೆಯಲ್ಲಿ ಪರಿಹಾರಕ್ಕಾಗಿ ಹಾಗೂ ಲೋಕಕಲ್ಯಾಣಕ್ಕಾಗಿ ಮೃತ್ಯುಂಜಯ ಸೂಕ್ತ ಜಪ

    ಪುತ್ತೂರು ಮೆಡಿಕಲ್ ಕಾಲೇಜಿಗೆ (ಡಿ.ಪಿ.ಆರ್) ಯೋಜನಾ ವರದಿ ತಯಾರಿಸಲು ಅನುಮತಿ ನೀಡಲು ಶಾಸಕ ಅಶೋಕ್ ರೈ ಮನವಿ

    ಪುತ್ತೂರು ಮೆಡಿಕಲ್ ಕಾಲೇಜಿಗೆ (ಡಿ.ಪಿ.ಆರ್) ಯೋಜನಾ ವರದಿ ತಯಾರಿಸಲು ಅನುಮತಿ ನೀಡಲು ಶಾಸಕ ಅಶೋಕ್ ರೈ ಮನವಿ

    ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ರಿ ಪುತ್ತೂರು ಹಾಗೂ ಅರುಣ ಸಾರಥಿ ಸಂಘಟನೆ ವತಿಯಿಂದ ಧನಸಹಾಯ

    ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ರಿ ಪುತ್ತೂರು ಹಾಗೂ ಅರುಣ ಸಾರಥಿ ಸಂಘಟನೆ ವತಿಯಿಂದ ಧನಸಹಾಯ

    ಮಾತೃಭೂಮಿ ಯುವ ವೇದಿಕೆ (ರಿ.) ಮಾಣಿಲ ಸಂಘದ ವತಿಯಿಂದ 5ನೇ ವರ್ಷದ ಉಚಿತ ಪುಸ್ತಕ ವಿತರಣೆ ಮತ್ತು ಸನ್ಮಾನ ಸಮಾರಂಭ

    ಮಾತೃಭೂಮಿ ಯುವ ವೇದಿಕೆ (ರಿ.) ಮಾಣಿಲ ಸಂಘದ ವತಿಯಿಂದ 5ನೇ ವರ್ಷದ ಉಚಿತ ಪುಸ್ತಕ ವಿತರಣೆ ಮತ್ತು ಸನ್ಮಾನ ಸಮಾರಂಭ

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ಪ್ರಾದೇಶಿಕ ಕಡಬ

ನಡಿಗೆ ತಿಳಿಯಲು ಜನರ ಬಳಿಗೆ ನಡೆದ “ಶಾಸಕ ಅಶೋಕ್ ರೈ” ಉದ್ಯಮಿಗಳು, ಕೃಷಿಕರ ಭೇಟಿ- ಪುತ್ತೂರು ಅಭಿವೃದ್ದಿಯ ಬಗ್ಗೆಯೂ ಚರ್ಚೆ

by ಪ್ರಜಾಧ್ವನಿ ನ್ಯೂಸ್
May 16, 2024
in ಕಡಬ, ಪುತ್ತೂರು, ಪ್ರಾದೇಶಿಕ, ಬಂಟ್ವಾಳ, ಬೆಳ್ತಂಗಡಿ, ಮಂಗಳೂರು, ಮೂಡಬಿದಿರೆ, ರಾಜ್ಯ, ರಾಷ್ಟ್ರೀಯ, ಸುಳ್ಯ
0
ನಡಿಗೆ ತಿಳಿಯಲು ಜನರ ಬಳಿಗೆ ನಡೆದ “ಶಾಸಕ ಅಶೋಕ್ ರೈ” ಉದ್ಯಮಿಗಳು, ಕೃಷಿಕರ ಭೇಟಿ- ಪುತ್ತೂರು ಅಭಿವೃದ್ದಿಯ ಬಗ್ಗೆಯೂ ಚರ್ಚೆ
23
SHARES
66
VIEWS
ShareShareShare

ಪುತ್ತೂರು: ನಿಮ್ಮೆಲ್ಲರ ಆಶೀರ್ವಾದದಿಂದ ನಾನು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕನಾಗಿ ಒಂದು ವರ್ಷ ಪೂರೈಸಿದ್ದೇನೆ. ನಾನು ಶಾಸಕನಾದ ಬಳಿಕ ನನ್ನ ನಡಿಗೆ ಹೇಗಿದೆ, ಜನರೊಂದಿಗೆ ಬೆರೆಯುವ ರೀತಿ, ನನ್ನಲ್ಲಿ ಏನಾದರೂ ತಪ್ಪಾಗಿದೆಯೇ? ತಿದ್ದಿಕೊಳ್ಳುವಂತ ವಿಚಾರ ಏನಾದರೂ ಇದೆಯೇ? ಪುತ್ತೂರು ಅಭಿವೃದ್ದಿಯಾಗಬೇಕಾದರೆ ನಾನು ಏನು ಮಾಡಬೇಕು? ಪುತ್ತೂರು ಕ್ಷೇತ್ರದಲ್ಲಿರುವ ಮುಖ್ಯ ಸಮಸ್ಯೆಯಾದರೂ ಏನು? ಚುನಾವಣೆಗೆ ಮೊದಲು ನಾನು ನಿಮ್ಮಲ್ಲಿ ಹೇಳಿದ ವಿಚಾರವನ್ನು ಪಾಲನೆ ಮಾಡಿದ್ದೇನೆಯೇ? ಮೊದಲಾದ ವಿಚಾರಗಳನ್ನುಮುಂದಿಟ್ಟು ಸ್ವತ ಶಾಸಕರೇ ತನ್ನ ನಡಿಗೆಯ ಬಗ್ಗೆ ತಿಳಿಯಲು ಒಂದಷ್ಟು ಉದ್ಯಮಿಗಳು, ಕೃಷಿಕರ ಬಳಿ ತೆರಳಿ ಮಾತುಕತೆ ನಡೆಸಿದ್ದಾರೆ. ಈ ಮಾತುಕತೆಯ ವಿವರ ಹೀಗಿದೆ

 

ಎಲ್ಲಾ ಜಾತಿ, ಧರ್ಮದವರನ್ನು ಒಂದೇ ರೀತಿಯಾಗಿ ಕಾಣುವ ನಿಮ್ಮ ಶೈಲಿ ಅತ್ಯುತ್ತಮವಾಗಿದೆ.ಬಡವರ ಬಲ್ಲಿದನೆಂಬ ಭೇದವಿಲ್ಲದೆ ಎಲ್ಲರನ್ನೂ ಗೌರವಿಸುವ ನಿಮ್ಮ ಪೃವೃತ್ತಿ ಎಲ್ಲರೂ ಮೆಚ್ಚುವಂತದ್ದಾಗಿದೆ, ನಿಮ್ಮ ಬಳಿಗೆ ಸಹಾಯ ಕೇಳಿ ಬರುವ ಬಡವರಿಗೆ ಸ್ಥಳದಲ್ಲೇ ಸ್ಪಂದನೆ ನೀಡುವುದನ್ನು ಮುಂದುವರೆಸಿ, ನಿಮ್ಮಲ್ಲಿ ನಾಯಕತ್ವ ಗುಣವಿದ್ದ ಕಾರಣಕ್ಕೆ ನೀವು ಕಡಿಮೆ ಅವಧಿಯಲ್ಲಿ ಹೆಚ್ಚು ಜನರನ್ನು ತಲುಪುವುದಕ್ಕೆ ಸಾಧ್ಯವಾಗಿದೆ. ಈಗಿನ ನಿಮ್ಮ ಶೈಲಿ ಅತ್ಯುತ್ತಮವಾಗಿದ್ದು ಅದನ್ನೇ ಮುಂದುವರೆಸಿ.

ಪುತ್ತೂರಿಗೆ ಒಂದು ಹೆಲಿಪ್ಯಾಡ್‌ನ ಅಗತ್ಯವಿದೆ ಅದು ನಿಮ್ಮ ಅವಧಿಯಲ್ಲಿ ನಿರ್ಮಾಣವಾಗಬೇಕು ಮತ್ತು ನಗರದಲ್ಲಿ ಟ್ರಾಫಿಕ್ ಸಮಸ್ಯೆಗೆ ಬ್ರೇಕ್ ಹಾಕಬೇಕು. ಅಭಿವೃದ್ದಿಯ ವಿಚಾರದಲ್ಲಿ ನಿಮಗೆ ನೂರು ಮಾರ್ಕ್ ಕೊಡುತ್ತೇವೆ

ಲಾರೆನ್ಸ ಮಸ್ಕರೇನಸ್ ,ಧರ್ಮಗುರುಗಳು, ಮಾಯಿದೆದೇವುಸ್ ಚರ್ಚ್, ಪುತ್ತೂರು

Keshari Durga

ಜಾಹೀರಾತು

ನೀವು ಶಾಸಕರಾದ ಬಳಿಕ ನಿಮ್ಮ ಕೊರತೆಯನ್ನು ಯಾರೂ ಹೇಳುತ್ತಿಲ್ಲ ಮತ್ತು ಹೇಳಿದ್ದು ನನ್ನ ಗಮನಕ್ಕೆ ಬಂದಿಲ್ಲ,ಚೆನ್ನಾಗಿ ಕೆಲಸ ಮಾಡುತ್ತಿದ್ದೀರಿ, ಮನೆ ಇಲ್ಲದವರಿಗೆ ಗ್ರಾಮದಲ್ಲಿ ಜಾಗ ಗುರುತಿಸಿ ಅವರಿಗೆ ಸೂರು ಕಲ್ಪಿಸುವ ಯೋಜನೆ ಅತ್ಯುತ್ತಮವಾಗಿದೆ. ನೀವು ಎಂದೂ ಕಾರ್ಯಕರ್ತರನ್ನು ಕಡೆಗಣಿಸಬೇಡಿ, ಕಾರ್ಯಕರ್ತರನ್ನು ಕಡೆಗಣಿಸಿದರೆ ಮುಂದೆ ಬರಲು ಯಾರಿಗೂಐ ಸಾಧ್ಯವಿಲ್ಲ. ಸಭೆ ಸಮಾರಂಭಗಳಲ್ಲಿ ಹೆಚ್ಚು ಹೊತ್ತು ಕಾಲ ಕಳೆಯಬೇಡಿ, ವಾರಕ್ಕೊಂದು ಬಾರಿ ಅಥವಾ ತಿಂಗಳಿಗೊಂದು ಬಾರಿ ಒಂದೊಂದು ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ಸಮಸ್ಯೆ, ರಸ್ತೆ, ಸೇರಿದಂತೆ ಎಲ್ಲವನ್ನೂ ಅರಿತುಕೊಳ್ಳುವ ಕೆಲಸವನ್ನು ಮಾಡಿ, ಮೆಡಿಕಲ್ ಕಾಲೇಜು ನಿಮ್ಮ ಅವಧಿಯಲ್ಲಿ ಆಗಿಯೇ ಆಗ್ತದೆ ಎಂಬ ಪೂರ್ಣ ನಂಬಿಕೆ ಇದೆ. ಗ್ರಾಮದಲ್ಲಿ ನಡೆಯುವ ಕಾಮಗಾರಿಯನ್ನು ಗ್ರಾಮದವರಿಗೆ ನೀಡಬೇಕು ಮತ್ತು ಎಸ್ ಸಿ ಎಸ್ ಎಸ್ ಟಿ ಸಮುದಾಯದವರು ಜಾಗವನ್ನು ಇತರರಿಗೆ ಮಾರಾಟ ಮಾಡಬಾರದು ಎಂಬ ಕಾನೂನಿನಲ್ಲಿ ಬದಲಾವಣೆ ಮಾಡಬೇಕು ಅವರೂ ಅಭಿವೃಧ್ದಿಯಾಗಬೇಕು, ಅವರೂ ನಮ್ಮ ಹಾಗೇ ಈ ಬಗ್ಗೆ ಸರಕಾರದ ಗಮನಸೆಳೆಯುವ ಕೆಲಸವನ್ನು ಮಾಡಬೇಕು . ನಿಮ್ಮ ಬಗ್ಗೆ ಯಾರಿಗೂ ಇದುವರೆಗೂ ಕೆಟ್ಟ ಅಭಿಪ್ರಾಯವೇ ಇಲ್ಲ

ಜನಾರ್ಧನ ಭಟ್ ಸೇಡಿಯಾಪು, ಪ್ರಗತಿಪರ ಕೃಷಿಕರು

 

ನೀವು ಶಾಸಕರಾದ ಬಳಿಕ ಬಹಳಷ್ಟು ಅಭಿವೃದ್ದಿ ಕೆಲಸಗಳು ನಡೆದಿದೆ. ನೀವು ಕರ್ನಾಟಕದ ಮುಖ್ಯಮಂತ್ರಿಯಾಗಲು ಯೋಗ್ಯತೆಯನ್ನು ಹೊಂದಿದ್ದೀರಿಪುತ್ತೂರಿಗೆ ಮೆಡಿಕಲ್ ಕಾಲೇಜು ಬರಬೇಕು, ಮಾಣಿಯಿಂದ ಚತುಷ್ಪಥ ರಸ್ತೆ ನಿರ್ಮಾಣವಾಗಬೇಕು, ಪುತ್ತೂರಿನಲ್ಲಿ ಉದ್ಯಮಗಳ ಬೆಳೆಯುವಲ್ಲಿ ನೀವು ಮುತುವರ್ಜಿವಹಿಸಬೇಕು. ನಿಮ್ಮ ಬಗ್ಗೆ ಎಲ್ಲಾ ಸಮುದಾಯದವರಿಗೂ ಒಳ್ಳೆಯ ಅಭಿಪ್ರಾಯವಿದೆ. ನಿಮ್ಮ ಈಗಿನ ನಡೆ ಚೆನ್ನಾಗಿಯೇ ಇದೆ.

ಮಹಮ್ಮದ್ ಹಾಜಿ , ಪುತ್ತೂರು ಟಿಂಬರ್, ಉದ್ಯಮಿಗಳು

ಡೀವಿಯವರು ಪ್ರಥಮಬಾರಿಗೆ ಶಾಸಕರಾದಾಗ ಹೀಗೇ ಮಾಡಿದ್ರು

ಡಿ ವಿ ಸದಾನಂದ ಗೌಡರು ಪ್ರಥಮ ಬಾರಿಗೆ ಶಾಸಕರಾದಾಗ ನಿಮ್ಮ ಹಾಗೆ ಪಕ್ಷ ಬೇದವಿಲ್ಲದೆ ಎಲ್ಲರ ಮನೆಗೂ ಭೇಟಿ ನೀಡುತ್ತಿದ್ದರು. ಬಿಜೆಪಿಯವರು ಸ್ವಲ್ಪ ತಲೆ ಖರ್ಚು ಮಾಡುತ್ತಿದ್ದರೆ ನೀವು ನಮ್ಮ ಜೊತೆ ಇರುತ್ತಿದ್ರಿ ಕಾಲ ಮಿಂಚಿ ಹೋಗಿದೆ. ನೀವು ಶಾಸಕನಾಗಿದ್ದೇ ದೊಡ್ಡ ಸಾಧನೆ, ಪುತ್ತಿಲ ವೋಟಿಗೆ ನಿಂತ ಕಾರಣ ನೀವು ಗೆದ್ದಿದ್ದಲ್ಲ ನಿಮಗೆ ದೈವ ಬಲವಿದೆ. ನಿಮಗೆ ಚುನಾವಣೆಯಲ್ಲಿ ಸ್ಪರ್ದಿಸಲು ಅವಕಾಶ ಸಿಕ್ಕಿದ್ದೇ ದೊಡ್ಡ ಸಾಧನೆಯಗಿದೆ. ಬಿಜೆಪಿ ಭದ್ರಕೋಟೆಯನ್ನು ಭೇದಿಸಿದ್ದೀರಿ, ನಿಮ್ಮ ನಾಯಕತ್ವ ಚೆನ್ನಾಗಿಯೇ ನಡೆಯುತ್ತಿದೆ. ಡಿ ವಿ ಇದೇ ರೀತಿ ಮಾಡಿದ ಕಾರಣ ಎರಡನೇ ಬಾರಿಗೂ ಶಾಸಕರಾಗಿ ಆಯ್ಕೆಯಾದರು.

ಅಡಿಕೆ ಬೋರ್ಡು ಸ್ಥಾಪನೆ ಮಾಡುವಲ್ಲಿ ಮುತುವರ್ಜಿವಹಿಸಿ, ಸಬ್ಸಿಡಿ ಕೃಷಿ ಮೆಕ್ಯಾನಿಸಂ ಆರಂಭವಾಗಬೇಕು, ಸಿಪಿಸಿಆರ್‌ಐ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ ಅದನ್ನು ಹೇಗಾದರೂ ಮಾಡಿ ಕೃಷಿಕರಿಗೆ ಪ್ರಯೋಜನವಾಗುವ ರೀತಿಯಲ್ಲಿ ಮಾಡಬೇಕು. ನಿಮ್ಮ ನಡೆ ಅತ್ಯುತ್ತಮವಾಗಿದೆ. ಗುಡ್ ಲಕ್

ವಿಶ್ವೇಶ್ವರ ಭಟ್ ಬಂಗಾರಡ್ಕ, ಪ್ರಗತಿಪರ ಕೃಷಿಕರು

Sathyasayi Hospital

ಜಾಹೀರಾತು

 

ನಿಮ್ಮ ಗುರಿ ಚೆನ್ನಾಗಿಯೇ ಇದೆ ಅದನ್ನು ಮುಂದುವರೆಸಿ, ಶಾಸಕರಾಗಿ ಉತ್ತಮ ಕೆಲಸವನ್ನು ಮಾಡುತ್ತಿದ್ದೀರಿ, ಪುತ್ತೂರಿನಲ್ಲಿ ಭೃಷ್ಟಾಚಾರಕ್ಕೆ ಕಡಿವಾಣ ಹಾಕಿದ್ದೀರಿ, ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ನಿಮ್ಮ ಅವಧಿಯಲ್ಲೇ ಆಗಲಿದೆ ಎಂಬ ವಿಶ್ವಾಸ ನಮಗಿದೆ. ಒಂದುವರ್ಷದ ಶಾಸಕತ್ವದ ಅವಧಿಯಲ್ಲಿ ಚೆನ್ನಾಗಿ ಕೆಲಸ ಮಾಡಿದ್ದೀರಿ, ಎಲ್ಲರೊಂದಿಗೂ ಬೆರೆತು , ಪಕ್ಷ ಬೇಧವಿಲ್ಲದೆ ಜನರ ಸೇವೆ ಮಾಡಿದ್ದೀರಿ.

ಪುತ್ತೂರಿನಲ್ಲಿ ವಿದ್ಯುತ್ ಸಮಸ್ಯೆ ಸರಿಯಾಗಬೇಕಿದೆ, ನಗರಸಭೆಯಲ್ಲಿ ಉತ್ತಮ ಸೇವೆ ಸಿಗುವಂತೆ ನೋಡಿಕೊಳ್ಳಬೇಕು.ಪುತ್ತೂರಿನಲ್ಲಿ ಟೂರಿಸಂ ಸೃಷ್ಟಿಯಾಗಬೇಕು. ಟೂರಿಸಂ ಅಭಿವೃದ್ದಿಯಾದರೆ ಪುತ್ತೂರು ತನ್ನಿಂತಾನೆ ಅಭಿವೃದ್ದಿಯಾಗುತ್ತದೆ. ಹೆಚ್ಚು ಜನರನ್ನು ಆಕರ್ಷಿಸುವ ಕೇಂದ್ರವಾಗಿ ಪುತ್ತೂರು ರೂಪುಗೊಳ್ಳಬೇಕು ಇದಕ್ಕಾಗಿ ನಿಮ್ಮ ನೆರವು ಅಗತ್ಯವಿದೆ. ಪುತ್ತೂರಿನ ವಿದ್ಯಾವಂತಗರಿಗೆ ಉದ್ಯೋಗವಕಾಶವನ್ನು ಕಲ್ಪಿಸುವ ಉದ್ಯಮಗಳು ಇಲ್ಲಿ ಹೆಚ್ಚು ಬರಬೇಕಿದೆ.

ಜಿ ಎಲ್ ಬಲರಾಮ ಆಚಾರ್ಯ, ಸ್ವರ್ಣೋಧ್ಯಮಿಗಳು ಪುತ್ತೂರು

Muliya

ಜಾಹೀರಾತು

Fashion street 9902633624

ಜಾಹೀರಾತು

ನಿಮ್ಮ ಸ್ಪೀಡ್ ಸ್ವಲ್ಪ ಕಮ್ಮಿಯಾದ ಹಾಗೆ ಅನಿಸುತ್ತಿದೆ

ನೀವು ಶಸಕರಾಗಿ ಆರಂಭದಲ್ಲಿ ಇದ್ದ ಸ್ಪೀಡ್ ಈಗ ಕಮ್ಮಿಯಾಗಿದೆ ಎಂಬ ಅನಿಸಿಕೆ ನನ್ನದು. ಶಾಸಕರಾಗಿ ನಿಮ್ಮ ಬಗ್ಗೆ ಯಾರೂ ಕೆಟ್ಟ ಕಮೆಂಟ್ ಮಾಡಿಲ್ಲ ಮತ್ತು ಕೆಟ್ಟದಾಗಿ ಹೇಳಿದ್ದನ್ನು ನಾನು ಕೇಳಿಲ್ಲ. ನೀವು ಶಾಸಕರಾದ ಬಳಿಕ ಅದ್ಬುತ ನಿರೀಕ್ಷೆ ಇತ್ತು ಎಲ್ಲೋ ಎಡವಿದ ಹಾಗೆ ಕಾಣುತ್ತಿದೆ. ಪುತ್ತೂರು ನಗರಸಭೆಯಲ್ಲಿ ವ್ಯವಸ್ಥಿತ ಆಡಳಿತವಿಲ್ಲ, ನಗರಸಭಾ ವ್ಯಾಪ್ತಿಯ ಅನೇಕ ಕಾಮಗಾರಿಗಳು ಪೆಂಡಿಂಗ್ ಇದೆ. ಜಲಸಿರಿ ಯೋಜನೆಯ ಕೆಲಸಗಳು ವ್ಯವಸ್ತಿತವಾಗಿ ಆಗುತ್ತಿಲ್ಲ ಹೀಗೇ ಕೆಲವೊಂದು ವಿಚಾರದಲ್ಲಿ ಸ್ವಲ್ಪ ಹಿನ್ನಡೆಯಾದಂತಿದೆ.

ನಿಮ್ಮ ಶಾಸಕತ್ವದ ಒಂದು ವರ್ಷದ ಅವಧಿ ತೃಪ್ತಿದಾಯಕವಾಗಿದೆ. ನಿಮ್ಮ ತಾಳ್ಮೆಗೆ ನಾನು ಮೆಚ್ಚಿದ್ದೇನೆ, ಸಮಾಧಾನದಿಂದ ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುತ್ತಿದ್ದೀರಿ, ಪುತ್ತೂರಿನಲ್ಲಿ ಭೃಷ್ಟಾಚಾರಗಳು ಸ್ಥಗಿತವಾಗಿದೆ, ಅಧಿಕಾರಿಗಳಿಗೆ ಭಯವಿದೆ, ನೀವು ಭೃಷ್ಟಾಚಾರಿಯಲ್ಲ ಎಂದು ಪುತ್ತೂರಿನ ಪ್ರತೀಯೊಬ್ಬ ನಾಗರಿಕನಿಗೂ ಗೊತ್ತಿರುವ ವಿಚಾರವಾಗಿದೆ ಮತ್ತೆ ನಿಮ್ಮ ಜನಸ್ಪಂದನೆ ಸೂಪರ್ ಆಗಿದೆ.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಅಭಿವೃದ್ದಿಯಾಗುವ ನಿಮ್ಮ ಕನಸು ನನಸಾಗಲಿ, ಮೆಡಿಕಲ್ ಕಾಲೇಜು ನಿಮ್ಮ ಅವಧಿಯಲ್ಲೇ ಆಗಲಿಪುತ್ತೂರಿನಲ್ಲಿ ಒಳಚರಂಡಿ ವ್ಯವಸ್ಥೆ ಅಭಿವೃದ್ದಿಯಾಗಬೇಕು ಮತ್ತು ಪುತ್ತೂರಿನಲ್ಲಿ ಟೂರಿಸಂ ಬೆಳೆಯಬೇಕು.

ಗೋಪಾಲಕೃಷ್ಣ ಹೆರಳೆ, ಹೊಟೇಲ್ ಉದ್ಯಮಿಗಳು, ಪುತ್ತೂರು

ನಿಮ್ಮ ಒಂದು ವರ್ಷದ ಶಾಸಕ ಅವಧಿ ಕಳಂಕ ರಹಿತವಾಗಿದೆ.ಅಭಿವೃದ್ದಿಯೇ ಸಕ್ಸಸ್ ಗೆ ದಾರಿಯಗುತ್ತದೆ. ನಿಮ್ಮ ಬಳಿ ಸಹಾಯ ಕೇಳಿ ಬರುವ ಜನರಿಗೆ ನೀವು ಕೊಡುವ ಸ್ಪಂದನೆ ಗ್ರೇಟ್ ಅದನ್ನೇ ಮುಂದುವರೆಸಿ. ಸಹಾಯ ಕೇಳಿ ಯಾರೇ ಬಂದರೂ ಅವರನ್ನು ಸಮಾಧಾನ ಮಾಡಿ ಕಳುಹಿಸುವ ನಿಮ್ಮ ಮನಸ್ಸು ಉತ್ತಮವಾಗಿದೆ. ಯಾರನ್ನೂ ಬಯ್ಯಬಾರದು, ಬಯ್ಯುವುದು ರಾಜಕೀಯದಲ್ಲಿ ಇಒರಬಾರದು ನೀವು ಯಾವತ್ತೂ ಇದನ್ನು ಮೈಗೂಡಿಸಿಕೊಳ್ಳಬೇಡಿ, ನೀವು ಈಗ ಪಾಲಿಸಿಕೊಂಡು ಬರುತ್ತಿರುವ ನಡೆಯನ್ನೇ ಮುಂದುವರೆಸಿದರೆ ಅದುವೇ ನಿಮ್ಮ ಗೆಲುವಿಗೆ ಹಾದಿಯಾಗಲಿದೆ.

ಪುತ್ತೂರಿನಲ್ಲಿ ಉದ್ಯಮ ಬೆಳೆಯಬೇಕು, ಕೆಎಂಎಫ್ ತಂದಿರುವುದು ಉತ್ತಮ ಯೋಜನೆಯಾಗಿದೆ. ಪುತ್ತೂರಿನಲ್ಲಿ ಇಂಡಸ್ಟ್ರೀಯಲ್ ಎಸ್ಟೇಟ್ ಆರಂಭ ಮಾಡುವ ಮೂಲಕ ಒಂದಷ್ಟು ಜನರಿಗೆ ಉದ್ಯೋಗವನ್ನು ಕೊಡುವುದಕ್ಕೆ ಪ್ರಯತ್ನ ಮಾಡಿದರೆ ಉತ್ತಮ.

ಸತ್ಯಶಂಕರ್ ಕೆ, ಮೆನೆಜಿಂಗ್ ಡೈರೆಕ್ಟರ್, ಬಿಂದು ಫ್ಯಾಕ್ಟರಿ, ನರಿಮೊಗರು

SendShare9Share
Previous Post

ದೇಶದ ಭವಿಷ್ಯ ವಿದ್ಯಾರ್ಥಿಗಳ ಕೈಯಲ್ಲಿದೆ, ಸ್ಪರ್ಧಾತ್ಮಕ ಪರೀಕ್ಷೆಗೂ ಸಿದ್ದರಾಗಬೇಕು ಶಾಸಕ ಅಶೋಕ್‌ ಕುಮಾ‌ರ್ ರೈ

Next Post

ಫಲಿತಾಂಶದ ಬಳಿಕ ಕಾಂಗ್ರೆಸ್‌ ನಾಯಕ ‘ಯುವರಾಜ’ ಪ್ರವಾಸಕ್ಕೆ ಓಡಿ ಹೋಗ್ತಾನೆ: ಪ್ರಧಾನಿ ಮೋದಿ

ಪ್ರಜಾಧ್ವನಿ ನ್ಯೂಸ್

ಪ್ರಜಾಧ್ವನಿ ನ್ಯೂಸ್

Next Post
ಫಲಿತಾಂಶದ ಬಳಿಕ ಕಾಂಗ್ರೆಸ್‌ ನಾಯಕ ‘ಯುವರಾಜ’ ಪ್ರವಾಸಕ್ಕೆ ಓಡಿ ಹೋಗ್ತಾನೆ: ಪ್ರಧಾನಿ ಮೋದಿ

ಫಲಿತಾಂಶದ ಬಳಿಕ ಕಾಂಗ್ರೆಸ್‌ ನಾಯಕ ‘ಯುವರಾಜ’ ಪ್ರವಾಸಕ್ಕೆ ಓಡಿ ಹೋಗ್ತಾನೆ: ಪ್ರಧಾನಿ ಮೋದಿ

Leave a Reply Cancel reply

Your email address will not be published. Required fields are marked *

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂದರ್ಭಿಕ ಚಿತ್ರ
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

No Result
View All Result
  • ಮುಖಪುಟ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಉದ್ಯೋಗ – ಶಿಕ್ಷಣ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಿನಿಮಾ
  • ಲೈಫ್ ಸ್ಟೈಲ್

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..