ಉಪಮುಖ್ಯಮಂತ್ರಿ ಡಿಕೆಶಿವಕುಮಾರ್ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ವಿಶೇಷ ಪೂಜೆ ಸಲ್ಲಿಸುವ ಸಲುವಾಗಿ ಆಗಮಿಸಿದ ಸಂಧರ್ಭದಲ್ಲಿ ಮಾಧ್ಯಮದ ಜೊತೆ ಮಾತಾನಾಡುತ್ತ ಹೇಳಿದರು.
ನಾವು ಹಿಂದು ಧರ್ಮದವರು, ಸಂಸ್ಕೃತಿಯ ತವರೂರು ಕರ್ನಾಟಕ ವಿಶೇಷವಾಗಿ ಧಾರ್ಮಿಕ ದತ್ತಿ ಇಲಾಖೆಯನ್ನು ಇಟ್ಟುಕೊಂಡಿದ್ದೇವೆ. ಪ್ರತಿ ಧರ್ಮದವರು ಅವರವರ ನಂಬಿಕೆ ಮೇಲೆ ಪ್ರಾರ್ಥನೆ ಮಾಡುತ್ತಾರೆ.
ಸುರೇಶ್ ಚುನಾವಣೆಯಲ್ಲಿ ಸೋತಿಲ್ಲ ಜನರ ಅವರಿಗೆ ರೆಸ್ಟ್ ನೀಡಿದ್ದಾರೆ ಪಕ್ಷಕ್ಕೆ ನಿರಂತರವಾಗಿ ಕೆಲಸ ಮಾಡುತ್ತಾರೆ ಯಾಕೆಂದರೆ ಅವರಿಗೆ ಮತ ನೀಡಿದವರಿಗೆ ಗೌರವವಿದೆ ಎಂದ ಡಿಕೆ ಚನ್ನಪಟ್ಟಣ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತಿರಿಸಿದ ಅವರು ಕುಮಾರಸ್ವಾಮಿ ಮೊದಲು ನಾನು ಚನ್ನಪಟ್ಟಣ ನೋಡಿದ್ದೇನೆ.
ಅವರಿಗೇನು ತಿಳಿದಿದೆ, ಅವರು ನಿನ್ನೆ ಮೊನ್ನೆ ರಾಜಕೀಯಕ್ಕೆ ಬಂದವರು, ಕುಮಾರಸ್ವಾಮಿಯ ರಾಜಕೀಯದ ಹತ್ತು ವರ್ಷ ಮೊದಲೇ ರಾಜಕೀಯ ಬಂದಿದ್ದೇನೆ ಎಂದ ಅವರು ರಾಜ್ಯದಲ್ಲಿ ಕಾಂಗ್ರೆಸ್ ಸರಕಾರಕ್ಕೆ ಜನ ಆಶೀರ್ವಾದ ಮಾಡಿದ್ದಾರೆ ಅದನ್ನು ಉಳಿಸಿಕೊಂಡು ಜನ ಸೇವೆ ಮಾಡುತ್ತೇವೆ ಎಂದರು ಈ ಸಂಧರ್ಭದಲ್ಲಿ ಮಾಜಿ ಸಚಿವ ರಾಮನಾಥ್ ರೈ ಉಪಸ್ಥಿತರಿದ್ದರು