• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
ಪುತ್ತೂರು: ಹೊಂದಾಣಿಕೆಯೆಂಬ ಪವಿತ್ರ ನಂಟು‌.  ಬರಹ.. ರಾಧಾಕೃಷ್ಣ ಎರುಂಬು

ಪುತ್ತೂರು: ಹೊಂದಾಣಿಕೆಯೆಂಬ ಪವಿತ್ರ ನಂಟು‌. ಬರಹ.. ರಾಧಾಕೃಷ್ಣ ಎರುಂಬು

July 11, 2024
ಬೆಳ್ತಂಗಡಿ : ಶಾಲಾ ಶಿಕ್ಷಣ ಇಲಾಖೆ ವತಿಯಿಂದ ನಡೆಯುವ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿಭಾಗದ ಕ್ರೀಡಾಕೂಟದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟದಲ್ಲಿ ಪ್ರತಿನಿಧಿಸುವ ಕ್ರೀಡಾ ಪ್ರತಿಭೆಗಳಿಗೆ  ಶಾಸಕರಾದ ಹರೀಶ್ ಪೂಂಜಾರವರಿಂದ ಕ್ರೀಡಾ ಸಮವಸ್ತ್ರ ಕೊಡುಗೆ

ಬೆಳ್ತಂಗಡಿ : ಶಾಲಾ ಶಿಕ್ಷಣ ಇಲಾಖೆ ವತಿಯಿಂದ ನಡೆಯುವ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿಭಾಗದ ಕ್ರೀಡಾಕೂಟದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟದಲ್ಲಿ ಪ್ರತಿನಿಧಿಸುವ ಕ್ರೀಡಾ ಪ್ರತಿಭೆಗಳಿಗೆ  ಶಾಸಕರಾದ ಹರೀಶ್ ಪೂಂಜಾರವರಿಂದ ಕ್ರೀಡಾ ಸಮವಸ್ತ್ರ ಕೊಡುಗೆ

November 11, 2025
ಕೆಂಪು ಕೋಟೆ ಬಳಿ ಕಾರಿನಲ್ಲಿ ಸ್ಫೋಟ; 9 ಮಂದಿ ಸಾವು, ಹಲವರಿಗೆ ಗಾಯ

ಕೆಂಪು ಕೋಟೆ ಬಳಿ ಕಾರಿನಲ್ಲಿ ಸ್ಫೋಟ; 9 ಮಂದಿ ಸಾವು, ಹಲವರಿಗೆ ಗಾಯ

November 10, 2025
ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಸಾಮೂಹಿಕ ವಿವಾಹ: ನವ ಜೋಡಿಗಳಿಗೆ ತಾಂಬೂಲ ಶಾಸ್ತ್ರ ಹಾಗೂ ಮಂಗಳವಸ್ತು ವಿತರಣಾ ಕಾರ್ಯಕ್ರಮ

ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಸಾಮೂಹಿಕ ವಿವಾಹ: ನವ ಜೋಡಿಗಳಿಗೆ ತಾಂಬೂಲ ಶಾಸ್ತ್ರ ಹಾಗೂ ಮಂಗಳವಸ್ತು ವಿತರಣಾ ಕಾರ್ಯಕ್ರಮ

November 10, 2025
ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಕಾರ್ಯಾಧ್ಯಕ್ಷರಾಗಿ ವಿಕ್ರಂ ಶೆಟ್ಟಿ ಅಂತರ

ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಕಾರ್ಯಾಧ್ಯಕ್ಷರಾಗಿ ವಿಕ್ರಂ ಶೆಟ್ಟಿ ಅಂತರ

November 10, 2025
ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರಿಗೆ ಪ್ರತಿ ತಿಂಗಳು ಶುದ್ಧ ಎಳ್ಳೆಣ್ಣೆ ಅಭಿಷೇಕ

ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರಿಗೆ ಪ್ರತಿ ತಿಂಗಳು ಶುದ್ಧ ಎಳ್ಳೆಣ್ಣೆ ಅಭಿಷೇಕ

November 10, 2025
ಕಣಿಯೂರು ಮಲೆಂಗಲ್ಲು ಶ್ರೀ ಉಮಾಮಹೇಶ್ವರ ಬ್ರಹ್ಮ ಕಲಶೋತ್ಸವದ ಸಮಿತಿ ಪುನರ್ ರಚನೆ

ಕಣಿಯೂರು ಮಲೆಂಗಲ್ಲು ಶ್ರೀ ಉಮಾಮಹೇಶ್ವರ ಬ್ರಹ್ಮ ಕಲಶೋತ್ಸವದ ಸಮಿತಿ ಪುನರ್ ರಚನೆ

November 10, 2025
ಲಾಯಿಲ: (ನ.09) 32 ವರ್ಷಗಳ ಇತಿಹಾಸವಿರುವ ಲಾಯಿಲ ಗ್ರಾಮ ಕನ್ನಾಜೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ ಮುಂದಿನ 2 ವರ್ಷದ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ

ಲಾಯಿಲ: (ನ.09) 32 ವರ್ಷಗಳ ಇತಿಹಾಸವಿರುವ ಲಾಯಿಲ ಗ್ರಾಮ ಕನ್ನಾಜೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ ಮುಂದಿನ 2 ವರ್ಷದ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ

November 10, 2025
ಆರ್‌ಸಿಬಿ ಖರೀದಿಗೆ ಆಸಕ್ತಿ ತೋರಿಸಿದ ಇಬ್ಬರು ಬಿಲಿಯನೇರ್‌ ಕನ್ನಡಿಗ ಉದ್ಯಮಿಗಳು

ಆರ್‌ಸಿಬಿ ಖರೀದಿಗೆ ಆಸಕ್ತಿ ತೋರಿಸಿದ ಇಬ್ಬರು ಬಿಲಿಯನೇರ್‌ ಕನ್ನಡಿಗ ಉದ್ಯಮಿಗಳು

November 10, 2025
ಕೆಂಪುಕಲ್ಲು ರಾಜಾಧನ ಶೇ. 58.82ರಷ್ಟು ಇಳಿಕೆ; ಗಣಿ ಉದ್ಯಮಿಗಳಿಂದ ಮುಂದುವರಿದ ಸುಲಿಗೆ

ಕೆಂಪುಕಲ್ಲು ರಾಜಾಧನ ಶೇ. 58.82ರಷ್ಟು ಇಳಿಕೆ; ಗಣಿ ಉದ್ಯಮಿಗಳಿಂದ ಮುಂದುವರಿದ ಸುಲಿಗೆ

November 10, 2025
ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮುಸ್ಲಿಮರು ಸಾಮೂಹಿಕ ನಮಾಜ್; ಸಾರ್ವಜನಿಕರ ಆಕ್ರೋಶ

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮುಸ್ಲಿಮರು ಸಾಮೂಹಿಕ ನಮಾಜ್; ಸಾರ್ವಜನಿಕರ ಆಕ್ರೋಶ

November 10, 2025
ದ.ಕ ಜಿಲ್ಲಾ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಪುಷ್ಪರಾಜ್ ಬಿ.ಎನ್ ಆಯ್ಕೆ

ದ.ಕ ಜಿಲ್ಲಾ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಪುಷ್ಪರಾಜ್ ಬಿ.ಎನ್ ಆಯ್ಕೆ

November 10, 2025
ಬೆಂಗಳೂರು-ಮಂಗಳೂರು ಹೈಸ್ಪೀಡ್‌ ಕಾರಿಡಾರ್‌  ಶಿರಾಡಿ ಘಾಟಿಯಲ್ಲಿ ರೈಲು-ಹೆದ್ದಾರಿ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ತಜ್ಞರ ಜಂಟಿ ಸಮಿತಿ ರಚನೆ: ಕ್ಯಾ.ಚೌಟ

ಬೆಂಗಳೂರು-ಮಂಗಳೂರು ಹೈಸ್ಪೀಡ್‌ ಕಾರಿಡಾರ್‌ ಶಿರಾಡಿ ಘಾಟಿಯಲ್ಲಿ ರೈಲು-ಹೆದ್ದಾರಿ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ತಜ್ಞರ ಜಂಟಿ ಸಮಿತಿ ರಚನೆ: ಕ್ಯಾ.ಚೌಟ

November 8, 2025
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Tuesday, November 11, 2025
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    ಬೆಳ್ತಂಗಡಿ : ಶಾಲಾ ಶಿಕ್ಷಣ ಇಲಾಖೆ ವತಿಯಿಂದ ನಡೆಯುವ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿಭಾಗದ ಕ್ರೀಡಾಕೂಟದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟದಲ್ಲಿ ಪ್ರತಿನಿಧಿಸುವ ಕ್ರೀಡಾ ಪ್ರತಿಭೆಗಳಿಗೆ  ಶಾಸಕರಾದ ಹರೀಶ್ ಪೂಂಜಾರವರಿಂದ ಕ್ರೀಡಾ ಸಮವಸ್ತ್ರ ಕೊಡುಗೆ

    ಬೆಳ್ತಂಗಡಿ : ಶಾಲಾ ಶಿಕ್ಷಣ ಇಲಾಖೆ ವತಿಯಿಂದ ನಡೆಯುವ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿಭಾಗದ ಕ್ರೀಡಾಕೂಟದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟದಲ್ಲಿ ಪ್ರತಿನಿಧಿಸುವ ಕ್ರೀಡಾ ಪ್ರತಿಭೆಗಳಿಗೆ  ಶಾಸಕರಾದ ಹರೀಶ್ ಪೂಂಜಾರವರಿಂದ ಕ್ರೀಡಾ ಸಮವಸ್ತ್ರ ಕೊಡುಗೆ

    ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಸಾಮೂಹಿಕ ವಿವಾಹ: ನವ ಜೋಡಿಗಳಿಗೆ ತಾಂಬೂಲ ಶಾಸ್ತ್ರ ಹಾಗೂ ಮಂಗಳವಸ್ತು ವಿತರಣಾ ಕಾರ್ಯಕ್ರಮ

    ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಸಾಮೂಹಿಕ ವಿವಾಹ: ನವ ಜೋಡಿಗಳಿಗೆ ತಾಂಬೂಲ ಶಾಸ್ತ್ರ ಹಾಗೂ ಮಂಗಳವಸ್ತು ವಿತರಣಾ ಕಾರ್ಯಕ್ರಮ

    ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಕಾರ್ಯಾಧ್ಯಕ್ಷರಾಗಿ ವಿಕ್ರಂ ಶೆಟ್ಟಿ ಅಂತರ

    ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಕಾರ್ಯಾಧ್ಯಕ್ಷರಾಗಿ ವಿಕ್ರಂ ಶೆಟ್ಟಿ ಅಂತರ

    ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರಿಗೆ ಪ್ರತಿ ತಿಂಗಳು ಶುದ್ಧ ಎಳ್ಳೆಣ್ಣೆ ಅಭಿಷೇಕ

    ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರಿಗೆ ಪ್ರತಿ ತಿಂಗಳು ಶುದ್ಧ ಎಳ್ಳೆಣ್ಣೆ ಅಭಿಷೇಕ

    ಕಣಿಯೂರು ಮಲೆಂಗಲ್ಲು ಶ್ರೀ ಉಮಾಮಹೇಶ್ವರ ಬ್ರಹ್ಮ ಕಲಶೋತ್ಸವದ ಸಮಿತಿ ಪುನರ್ ರಚನೆ

    ಕಣಿಯೂರು ಮಲೆಂಗಲ್ಲು ಶ್ರೀ ಉಮಾಮಹೇಶ್ವರ ಬ್ರಹ್ಮ ಕಲಶೋತ್ಸವದ ಸಮಿತಿ ಪುನರ್ ರಚನೆ

    ಲಾಯಿಲ: (ನ.09) 32 ವರ್ಷಗಳ ಇತಿಹಾಸವಿರುವ ಲಾಯಿಲ ಗ್ರಾಮ ಕನ್ನಾಜೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ ಮುಂದಿನ 2 ವರ್ಷದ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ

    ಲಾಯಿಲ: (ನ.09) 32 ವರ್ಷಗಳ ಇತಿಹಾಸವಿರುವ ಲಾಯಿಲ ಗ್ರಾಮ ಕನ್ನಾಜೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ ಮುಂದಿನ 2 ವರ್ಷದ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ

    ಕೆಂಪುಕಲ್ಲು ರಾಜಾಧನ ಶೇ. 58.82ರಷ್ಟು ಇಳಿಕೆ; ಗಣಿ ಉದ್ಯಮಿಗಳಿಂದ ಮುಂದುವರಿದ ಸುಲಿಗೆ

    ಕೆಂಪುಕಲ್ಲು ರಾಜಾಧನ ಶೇ. 58.82ರಷ್ಟು ಇಳಿಕೆ; ಗಣಿ ಉದ್ಯಮಿಗಳಿಂದ ಮುಂದುವರಿದ ಸುಲಿಗೆ

    ದ.ಕ ಜಿಲ್ಲಾ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಪುಷ್ಪರಾಜ್ ಬಿ.ಎನ್ ಆಯ್ಕೆ

    ದ.ಕ ಜಿಲ್ಲಾ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಪುಷ್ಪರಾಜ್ ಬಿ.ಎನ್ ಆಯ್ಕೆ

    ಬೆಂಗಳೂರು-ಮಂಗಳೂರು ಹೈಸ್ಪೀಡ್‌ ಕಾರಿಡಾರ್‌  ಶಿರಾಡಿ ಘಾಟಿಯಲ್ಲಿ ರೈಲು-ಹೆದ್ದಾರಿ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ತಜ್ಞರ ಜಂಟಿ ಸಮಿತಿ ರಚನೆ: ಕ್ಯಾ.ಚೌಟ

    ಬೆಂಗಳೂರು-ಮಂಗಳೂರು ಹೈಸ್ಪೀಡ್‌ ಕಾರಿಡಾರ್‌ ಶಿರಾಡಿ ಘಾಟಿಯಲ್ಲಿ ರೈಲು-ಹೆದ್ದಾರಿ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ತಜ್ಞರ ಜಂಟಿ ಸಮಿತಿ ರಚನೆ: ಕ್ಯಾ.ಚೌಟ

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ಇತರೆ

ಪುತ್ತೂರು: ಹೊಂದಾಣಿಕೆಯೆಂಬ ಪವಿತ್ರ ನಂಟು‌. ಬರಹ.. ರಾಧಾಕೃಷ್ಣ ಎರುಂಬು

by ಪ್ರಜಾಧ್ವನಿ ನ್ಯೂಸ್
July 11, 2024
in ಇತರೆ
0
ಪುತ್ತೂರು: ಹೊಂದಾಣಿಕೆಯೆಂಬ ಪವಿತ್ರ ನಂಟು‌.  ಬರಹ.. ರಾಧಾಕೃಷ್ಣ ಎರುಂಬು
10
SHARES
28
VIEWS
ShareShareShare

ಹೊಂದಾಣಿಕೆಯೆಂಬ ಪವಿತ್ರ ನಂಟು

“ಜಡೆ ಉದ್ದ ಜಡೆ ಮೊಟಕು ಎನುತ ನೀ ಗೊಣಗಿದರೆ ಬೋಳುತಲೆ ಬರಿ ನೋಟ ನಿನಗೊದಗಬಹುದು. ಅಂಗಳದ ಹೂ ಕಂಡು ಸಂತಸದಿ ಮೈ ಮರೆಯೋ! ತೃಪ್ತಿ ಭಾಗ್ಯದ ಹೊನಲು- ಮುದ್ದು ರಾಮ”. ಇಲ್ಲವುಗಳೆoಬ ಮೂಕ ಗೊಣಗುವಿಕೆಗಿಂತ ಇದ್ದುದರಲ್ಲಿ ತೃಪ್ತಿ ಪಡುವುದು ಸರ್ವಕ್ಕೂ ತೃಪ್ತಿದಾಯಕವೆಂಬುದು ಸರಳ ಅರ್ಥ. “ಹೊಂದಾಣಿಕೆ” ವರ್ಷ ಐದರಿಂದಲೇ ಹೊಂದಿಸಿಕೊಳ್ಳಬೇಕಾದ ಮಾನಸಿಕ ಮಂತ್ರ. ಇದು ಮನೆಯಲ್ಲಿರುವ ಸರ್ವರಲ್ಲೂ ಅಡಕವಾಗಿದ್ದರೆ “ಸ್ವರ್ಗಸುಖ”ವನ್ನು ಭ್ರಮೆಯಲ್ಲಿ ಅರಸಬೇಕಿಲ್ಲ, ನಮ್ಮೊಡನಿರುತ್ತದೆ. ಕಲಿಕೆಗೆ ತೊಡಗುವ ಮುದ್ದು ಪುಟಾಣಿಗಳಿಂದ ತೊಂಬತ್ತರ ಹಿರಿ ತಲೆಯವರೆಗೂ ಎಲ್ಲೆಂದರಲ್ಲಿ ಮಾಡಿಕೊಳ್ಳಲು ಸಾಧ್ಯವಿದ್ದರೆ ಈ ಜೀವನದಲ್ಲಿ ಬಾಧಕಗಳಿಲ್ಲದಂತೆ ಬದುಕಬಹುದು. ವಾಸ್ತವದಲ್ಲಿ ಈ ವಿಷಯದ ಕೊರತೆಯೇ ಸರ್ವ ಸಂಘರ್ಷಗಳಿಗೆ ಕಾರಣವೆಂಬುದು ಬೆತ್ತಲೆ ಸತ್ಯ. ನಮಗೆಲ್ಲ ಗೊತ್ತಿರುವ ವಾಸ್ತವಿಕ ಸಮಸ್ಯೆಯಾಗಿದ್ದರೂ, ಹಿರಿಯ-ಕಿರಿಯ, ಮೇಲು-ಕೀಳು, ಬಡವ- ಶ್ರೀಮಂತ, ಜಾಣ – ದಡ್ಡ, ಸಾಕ್ಷರ-ಅನಕ್ಷರ ಎಂಬವುಗಳ ನಡುವೆ ಬರುವ “ಅಹಂ ಮತ್ತು ಸ್ಥಿತಿಗಳು ” ತೊಡಕುಂಟು ಮಾಡುತ್ತಿದೆ. ಮನೆಯೊಳಗೆ ಅಪ್ಪ – ಮಕ್ಕಳು, ಶಾಲೆಯಲ್ಲಿ ಗುರು – ಶಿಷ್ಯ, ಸಮಾಜದಲ್ಲಿ ಆಳುವವರು – ಆಳುಗಳು, ಬಡವರು – ಧನಿಕರು, ವಿದ್ಯಾವಂತರು-ಅವಿದ್ಯಾವಂತರು, ಸ್ತ್ರೀ – ಪುರುಷರೆಂಬ ಸ್ಥಾನ ಮಾನ, ಬೇದ-ಭಾವ ಗಳ ಜೊತೆ ಸಾಗುತಿದೆ ಹೊರತಾಗಿ ಹೊಂದಾಣಿಕೆಯಿಂದ ಮೇಳೈಸುತ್ತಿದೆಯೇ? ಕೇಳಿದರೆ ಧನಾತ್ಮಕ ಉತ್ತರ ಬೆರಳೆಣಿಕೆಯಷ್ಟೇ. ಭಿನ್ನ ಸ್ಥಾನಿಕರ ನಡುವೆ ಹೊಂದಾಣಿಕೆ ಬಂದರೆ ತಮ್ಮ ಸ್ಥಾನ-ಮಾನಕ್ಕೆ ಕುಂದು ಬರುತ್ತದೋ ಎನ್ನೋ ಭಯ ಕಾಡುತಿದೆ ಸಾಮರ್ಥ್ಯವಂತರಿಗೆ. ಇದಂತೂ ವೇದಗಳ ಯುಗದಿಂದಲೂ ಬಿಡಿಸಲಾಗದ ಬಂಧ.ಅಲ್ಲಿ ಸಮಾಧಾನವಿತ್ತು, ಯಾಕೆಂದರೆ ಕೆಲಸ ನಿರ್ವಹಣೆಯ ಮೇಲೆ ವರ್ಣ, ಬಿಂಬಿತವಾಗಿತ್ತು. ” ಲೋಕದ ಡೊಂಕ ನೀವೇಕೆ ತಿದ್ದುವಿರಿ ” ಎಂಬುದಕ್ಕೆ ಮನ್ನಣೆಯಿತ್ತು, ಮನೆಯೊಳಗಿನ ಹೊಂದಾಣಿಕೆ ಯ ಬಗೆಗೆ ನಮ್ಮೆಲ್ಲರ ಅನುಭವಗಳ ಬಗ್ಗೆ ಯೋಚಿಸಿ. ಹೆಣ್ಣು ಅಕ್ಕನೋ, ಅಮ್ಮನೋ, ಅತ್ತೆಯೋ, ಅಜ್ಜಿಯೋ ಆಗುತ್ತಾಳೆ. ಅಂತೆಯೇ ಗಂಡು ಅಣ್ಣನೋ, ಅಪ್ಪನೋ,ಮಾವನೋ ಅಜ್ಜನೋ ಆಗುತ್ತಾನೆ. ಒಂದೇ ತಲೆಮಾರಿನಲ್ಲಿ ಸಂಬಂಧದ ವಿಭಿನ್ನ ವೇಷ ತೊಡುವ ಸ್ತ್ರೀ ಮತ್ತು ಪುರುಷ ಮನಸ್ಸುಗಳು ಸಮಾನವಾಗಿ ಇರುವುದಕ್ಕಿಲ್ಲ ಎಂಬುದು ಅವರವರ ವಯೋಮಾನಕ್ಕನುಗುಣವಾಗಿ ಅನುಭವವೇದ್ಯ. ಅಲ್ಲಿ ಮನಸ್ಸಿನ ಬದಲಾವಣೆಯಾಗಿಲ್ಲವೆಂದಾದರೆ ಅವನು ಯಾ ಅವಳು ಶ್ರೇಷ್ಠ ವ್ಯಕ್ತಿಗಳೆಂದೇ ಹೇಳಬಹುದು. ಸ್ವ- ಸಹೋದರತೆ ಅನ್ಯರಲ್ಲಿಯೂ , ಸ್ವಂತ ಮಕ್ಕಳ ಪ್ರೀತಿ ಇತರರೊಂದಿಗೂ , ಮಗಳ ಪ್ರೀತಿ ಸೊಸೆಯಲ್ಲಿ, ಮೊಮ್ಮಕ್ಕಳ ಮಮತೆ ಇತರರಲ್ಲಿ ಎಷ್ಟಾದರೂ ವಿರಳವೆ. ಮಾತಿಗೆ ಕೃತಕತೆ ಬರಬಹುದಷ್ಟೇ, ಆದರೆ ನೈಜತೆ ಅಸಾಧ್ಯ. ಆದರೂ ಪ್ರಸ್ತುತ ಅಲ್ಲೆಲ್ಲ “ಹೊಂದಾಣಿಕೆ” ಬಹಳಷ್ಟು ದೊಡ್ಡ ಪಾತ್ರ ವಹಿಸುತ್ತದೆ.ಯಾಕೆಂದರೆ ಜೀವಿಯು ಒಬ್ಬನೇ ಹುಟ್ಟಿ ಒಬ್ಬನೇ ಸಾಯುತ್ತಾನೆ. “ಉನ್ಮತ್ತ ಇವ ಸಜ್ಞೆಯೋ ನಾಸ್ತಿ ಕಶ್ಚಿದ್ದಿ ಕಸ್ಯಚಿತ್” ಎಂಬಂತೆ ಬೇರೆ ಊರಿಗೆ ಹೋಗುವವನು ಧರ್ಮಶಾಲೆಯಲ್ಲಿ ರಾತ್ರಿ ಉಳಿದುಕೊಂಡು ಮರುದಿನ ಆ ಧರ್ಮಶಾಲೆಯನ್ನು ಬಿಟ್ಟು ಹೋಗುವಂತೆಯೇ ತಂದೆ, ತಾಯಿ, ಹೆಂಡತಿ, ಮನೆ, ಸಂಪತ್ತು ಇದೆಲ್ಲ ತಂಗುದಾಣಗಳಷ್ಟೇ. ಹೇಳದೆ ಕೇಳದೆ ಕರೆ ಬಂದಾಗ ಹೋಗಬೇಕಾದವರೇ ಎಲ್ಲರೂ. ಈ ನಡುವೆ ಆಪ್ತರಾಗಿ ಬಾಳುವ ಹೊಂದಾಣಿಕೆ ಇಲ್ಲದಿದ್ದರೆ ಏನು ಫಲ. ಹೊಂದಾಣಿಕೆಯ ಕಲಿಕೆ ಅಲ್ಪ ಹಿರಿಯರಿಂದಲೂ ಉಳಿದದ್ದು ನಮ್ಮ ಮನಸ್ಸಿನಿಂದಲೇ ಆಗಬೇಕಾಗಿರುವುದು . ನಾವು ಮಾಡಿರುವುದನ್ನು ನಮ್ಮವರು ಕಲಿಯುತ್ತಾರಷ್ಟೇ… ಈ ಬಗ್ಗೆ ಪ್ರಸ್ತುತ ತಲೆಮಾರಿನಲ್ಲಿ ಸ್ವಲ್ಪದರ ಮಟ್ಟಿಗೆ ಹಿರಿಯರೇ ಹೊಂದಾಣಿಕೆ ಮಾಡಿಕೊಳ್ಳಬೇಕಾಗಿರುವುದು. ಯಾಕೆಂದರೆ ನಮ್ಮವರು, ಹಿಂದೆ ಹಾಗಿದ್ದರು- ಹೀಗಿದ್ದರು ಎನ್ನುವ ಅಂತೆ-ಕಂತೆಗಳನ್ನು ಕೇಳುವ ವ್ಯವಧಾನ ನಮ್ಮ ಮಕ್ಕಳಿಗಿಲ್ಲ. ಅವರ ವ್ಯವಸ್ಥೆಗೆ ನಾವು ಹೊಂದಿಕೊಳ್ಳಬೇಕಷ್ಟೆ. ಹಾಗಾದಾಗ ಮಾತ್ರ ನಾವು ನಮ್ಮ ಸ್ವಂತ ಮಕ್ಕಳೊಂದಿಗೆ ಬದುಕಬಹುದು, ಇಲ್ಲವಾದರೆ ಮುದುಕರು ಆಶ್ರಮದಲ್ಲೋ ಅಥವಾ ಎಲ್ಲಾದರೊಂದುಕಡೆ “ಮಕ್ಕಳು ನಮ್ಮನ್ನು ಬಿಟ್ಟು ಬಿಟ್ಟರು” ಎಂಬ ಕಥೆಯೊಂದಿಗೆ ಇರಬೇಕಾದೀತು. ನಾನಂದಂತೆ ಆಗಬೇಕು ಎಂಬ ಹಠವೂ ಕೆಲವೊಮ್ಮೆ ಅನರ್ಥಕ್ಕೇರುತ್ತದೆ. ಇಲ್ಲೆಲ್ಲ ನಾವೆಲ್ಲರೂ ಸ್ವಲ್ಪ ವಿಷಯದ ಮತ್ತು ವ್ಯಕ್ತಿಗಳ ನಡುವೆ ಹೊಂದಾಣಿಕೆಯ ಸೇತುವಾಗಿ ವರ್ತಿಸಬೇಕಾಗುತ್ತದೆ. ಕೆಲವೊಮ್ಮೆ ಈ ಆಂಗ್ಲ ಭಾಷೆಯ “ಅಡ್ಜಸ್ಟ್ಮೆಂಟ್ ” ಏನನ್ನೂ ಸಾದಿಸುತ್ತದೆ ಹಲವು ಬಾರಿ ಬಾಧಿಸುತ್ತದೆ. ಹೊಂದಾಣಿಕೆಯಿಲ್ಲದ ಬದುಕು ಕುಟುಂಬಕ್ಕೆ, ಸಮಾಜಕ್ಕೆ, ರಾಜ್ಯ, ದೇಶಕ್ಕೆ ಮಾರಕವೆ. ದೇಹದ ರಚನೆ ಯಲ್ಲಿ ಹೊಂದಾಣಿಕೆಯ ಪಾಠವಿದೆ. ನಾಲಿಗೆ ಆಶಿಸುವುದನ್ನು ಕೈ ನೀಡದಿದ್ದರೆ, ಕಾಲು ತರಲು ಹೊರಡದಿದ್ದರೆ, ಹೊಟ್ಟೆ ಬಯಸಿದ್ದನ್ನು ಬಾಯಿ ಕೊಡದಿದ್ದರೆ ದೇಹ ತಟಸ್ಥವಾಗಿ ಮಣ್ಣು ಸೇರಬಹುದು. ಬದುಕಿನಲ್ಲೂ ಅಷ್ಟೆ ವ್ಯತ್ಯಾಸಗಳನ್ನು ನುಂಗಿ ಹೊಂದಾಣಿಕೆಯ ಬದುಕಿಗಿರುವ ಬೆಲೆ ಅಹಂ- ಸ್ವಾರ್ಥ ಬದುಕಿಗಿಲ್ಲ. ಇದ್ದರೂ ಅದಕ್ಕೆ ಬಾಳ್ವೆ ಇಲ್ಲ. ನಾನೂ ಹೊಂದಾಣಿಕೆಗೆ ಪ್ರಯತ್ನಿಸುತ್ತೇನೆಂಬ ಯೋಚನೆಯೊಂದಿಗೆ ನಿಮ್ಮನ್ನು ಸ್ವಾಗತಿಸುತ್ತೇನೆ. ಅದಕ್ಕೇ ಹೇಳುತ್ತಿದ್ದೇನೆ “ಹೊಂದಾಣಿಕೆ” ಪವಿತ್ರ ಮಂತ್ರ ಇದು ಮನದೊಳಗೆ ಮೊಳಕೆಯೊಡೆದು ವಾಸ್ತವದಲ್ಲಿ ಬೆಳೆಯಬೇಕಾದುದು ಬೆಳೆಸೋಣವೇ?

HPR Institute Of Nursing And Paramedical Sciences & Friends Beke

ಜಾಹೀರಾತು

*🖊️ರಾಧಾಕೃಷ್ಣ ಎರುಂಬು

SendShare4Share
Previous Post

ಪುತ್ತೂರು: ಸರಕಾರಿ‌ಆಸ್ಪತ್ರೆಗೆ‌ ಆರೋಗ್ಯ ರಕ್ಷಾ‌ಸಮಿತಿ ಸದಸ್ಯರ ದಿಡೀರ್ ಭೇಟಿ

Next Post

ಇಂಗ್ಲೆಂಡ್​ ತಂಡದ ಹಿರಿಯ ವೇಗಿ ಜೇಮ್ಸ್​ ಆ್ಯಂಡರ್ಸನ್ ವಿದಾಯದ ಟೆಸ್ಟ್​ ಪಂದ್ಯದಲ್ಲಿ ವಿಶ್ವ ದಾಖಲೆ

ಪ್ರಜಾಧ್ವನಿ ನ್ಯೂಸ್

ಪ್ರಜಾಧ್ವನಿ ನ್ಯೂಸ್

Next Post
ಇಂಗ್ಲೆಂಡ್​ ತಂಡದ ಹಿರಿಯ ವೇಗಿ ಜೇಮ್ಸ್​ ಆ್ಯಂಡರ್ಸನ್ ವಿದಾಯದ ಟೆಸ್ಟ್​ ಪಂದ್ಯದಲ್ಲಿ ವಿಶ್ವ ದಾಖಲೆ

ಇಂಗ್ಲೆಂಡ್​ ತಂಡದ ಹಿರಿಯ ವೇಗಿ ಜೇಮ್ಸ್​ ಆ್ಯಂಡರ್ಸನ್ ವಿದಾಯದ ಟೆಸ್ಟ್​ ಪಂದ್ಯದಲ್ಲಿ ವಿಶ್ವ ದಾಖಲೆ

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

No Result
View All Result
  • ಮುಖಪುಟ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಉದ್ಯೋಗ – ಶಿಕ್ಷಣ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಿನಿಮಾ
  • ಲೈಫ್ ಸ್ಟೈಲ್

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..