ಕೋರಂ ಕೊರತೆ ಹಿನ್ನೆಲೆ- ಕೋಡಿಂಬಾಡಿ ಗ್ರಾ.ಪಂಚಾಯತ್ ಸಾಮಾನ್ಯ ಸಭೆ – ರದ್ದು
ಪುತ್ತೂರು: ಕೋಡಿಂಬಾಡಿ ಗ್ರಾ.ಪಂಚಾಯತ್ ನಲ್ಲಿ ಡಿ.04 ರಂದು ನಡೆಯಬೇಕಿದ್ದ ಸಾಮಾನ್ಯ ಸಭೆಯು ಸದಸ್ಯರ ಕೋರಂ ಕೊರತೆಯ ಹಿನ್ನೆಲೆಯಲ್ಲಿ ರದ್ದುಗೊಂಡಿದೆ.
ಪಂಚಾಯತ್ ನ ಒಟ್ಟು11 ಮಂದಿ ಸದಸ್ಯರ ಪೈಕಿ ಅಧ್ಯಕ್ಷೆ ಮಲ್ಲಿಕಾ ಅಶೋಕ್ ಪೂಜಾರಿ, ಸದಸ್ಯರಾದ ಉಷಾ ಲಕ್ಷ್ಮಣ ಪೂಜಾರಿ, ಪುಷ್ಪಾ ಮಾತ್ರ ಸಭೆಗೆ ಹಾಜರಾಗಿದ್ದರು. ಉಳಿದಂತೆ ಜಗನ್ನಾಥ ಶೆಟ್ಟಿ ನಡುಮನೆ, ಗೀತಾ ಬಾಬು ಮೊಗೇರ, ಪೂರ್ಣಿಮಾ.ಯಸ್.ಶೆಟ್ಟಿ, ರಾಮಣ್ಣ ಗೌಡ ಗುಂಡೋಳೆ, ರಾಮಚಂದ್ರ ಪೂಜಾರಿ ಶಾಂತಿನಗರ, ವಿಶ್ವನಾಥ ಕೃಷ್ಣಗಿರಿ ಹಾಗೂ ಮೋಹಿನಿಯವರು ಸಭೆಗೆ ಗೈರಾಗಿದ್ದರು. ಹೀಗಾಗಿ ಸಭೆಯು ರದ್ದುಗೊಂಡಿರುವುದಾಗಿ ತಿಳಿದುಬಂದಿದೆ.